ಕರೋಡೊ ಲೋಗ್ ಹಜಾರೆ ಕೆ ಸಾಥ

ಕರೋಡೊ ಲೋಗ್ ಹಜಾರೆ ಕೆ ಸಾಥ

(ಜನ)ಶಕ್ತಿ ನಿತ್ಯತೆ (ನಿ)ಯಮ

 

ಅವಶ್ಯ ವಸ್ತುಗಳ ಬೆಲೆ ಗಗನ್ಕೇರಿದಾರೂ, ತರಕಾರಿ, ಬೇಳೆಗಳ ಬೆಲೆ ಬೇಲಿ ದಾಟಿದರೂ, ದರಕಾರ ಮಾಡುವವರಿರಲಿಲ್ಲ.

ಪ್ರಣಾಣಿಕೆಯಲ್ಲಿ ಟಿವ್ಹಿ ಎಂಬ ಪ್ರಣಾಳ ಶಿಶು ಸೇರಿಸಿದರೇ, ಹೊರತು, ಈ ತಹರೆವಾರಿ ಸಮಸ್ಯೆಗಳನ್ನು ತಡವಿಕೊಳ್ಳಲಿಲ್ಲ. 

 

ಧರ್ಮದ ವಿಷಯದಲ್ಲಿ ಮಾತ್ರ ದುರ್ಗೆಯ ಆವೇಶ ಬಂದಂತಾಡುವವರು, ಜಾತ್ಯಾತೀತ ಪದದ ಅಪಭ್ರಂಶ ಜಂತುಗಳು,

ಸುದ್ದಿಯಾಗಬೇಕೆನ್ನುವವರು, ಸುದ್ದಿಯಲ್ಲಿರುವವರು, ಕಡೆಗೆ (ಕೈ) ಶುದ್ಧಿ ಇಲ್ಲದವರು, ಮತ ಹಾಕದೇ ಮಲಗಿದವರು,

ಸ್ಥಿತಪ್ರಜ್ಞರು, ಪ್ರಾಜ್ಞರು, ಎಲ್ಲರೂ ಭ್ರಷ್ಟ ಅನಾಚಾರದ ವಿರುದ್ಧ "ಅಣ್ಣಾ ಹಜಾರೆ" ಯವರೊಂದಿಗೆ ಕೈ ಜೋಡಿಸಿದ್ದು, ಜನ 

ಜಾಗೃತರಾಗಿದ್ದಾರೆ ಎಂಬುದನ್ನೂ ನಿರೂಪಿಸಿತು. 

 

ಹೋರಾಟ ಇಲ್ಲಿಗೆ ನಿಲ್ಲದೇ, ಸದಾ ಜೀವಂತ ಮತ್ತು ಜಾಗೃತವಾಗಿರಲಿ. ವಿಶೇಷವಾಗಿ ಸಂವಿಧಾನದ ನಾಲ್ಕನೇ ಅಂಗ,

ಮಾಧ್ಯಮದ ಸಹಕಾರ ಮತ್ತು ಶ್ಲಾಘನಾರ್ಹ. 

 

ಕೋಟಿ ಕೋಟಿ ಭಾರತೀಯರ ಒತ್ತಾಸೆ ಒಂದೇ : "ಲೋಗ್" ಗಳಿಂದ ಆರಿಸಿದ, ಎಲ್ಲದರಲ್ಲೂ "ಪಾಲು" ತಿನ್ನುವ ಎಲ್ಲರಿಗೂ

ಇಹಲೋಕದಲ್ಲಿಯೇ ಶಿಕ್ಷೆಯಾಗಲಿ, ದೇವರಿಗೇ ಭಾರ ಹಾಕುವುದು ಬೇಡ. 

 

ಹಿಂದಿಕ್ಕಿದ ಜೋಕು : ಭ್ರಷ್ಟ ಅನಾಚಾರದ ವಿರುದ್ಧ ಹೋರಾಟಕ್ಕೆ, ಆತ್ಮವಿಮರ್ಶೆ ಮಾಡಿ ಕೊಳ್ಳಲಾಗದ ಭ್ರಷ್ಟ ಅನಾಚಾರಿಗಳು, ಬೆಂಬಲಿಸಿದ್ದು, ಹಲವು ವರ್ಷಗಳಿಂದ ಹೋರಾಡುತ್ತಿದ್ದೇನೆ ಜನ ಬೆಂಬಲಿಸಿಲ್ಲಾ ಎಂದು ಹೇಳಿದ್ದು, ದಲಾಲಿ ಅಂಗಡಿಗಳಲ್ಲಿ ಕೂಗುವಂತೆ ಮಾಧ್ಯಮದ ಮುಂದೆ ಅರಚಿದ್ದು. ೨೦೧೨ ರಲ್ಲಿ ಪ್ರಳಯವಾಗುತ್ತದೆ ಎಂಬುದಕ್ಕಿಂತ ಹೆಚ್ಚಿನ ಜೋಕು.