ಮನಸೆಳೆದ ವೈಯೋಲಿನ್ ಕಛೇರಿ

ಮನಸೆಳೆದ ವೈಯೋಲಿನ್ ಕಛೇರಿ

 

ಕೆಲವು ದಿನಗಳ ಹಿಂದೆ ಹಾಸನದಲ್ಲಿ ಒಂದು ಅದ್ಭುತ ಸಂಗೀತ ಸಂಜೆ. ಮೂರು ಗಂಟೆಗಿಂತಲೂ ಹೆಚ್ಚು ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅಂತಹ ಮೋಡಿ ಮಾಡಿದ್ದು ಡಾ|| ದೀಪಕ್ ಎಂಬ ತರುಣ ಮತ್ತು ಅವನ ಪಕ್ಕವಾದ್ಯ ಸಂಗಡಿಗರಾದ ಬೆಂಗಳೂರಿನ ಮೃದಂಗವಿದ್ವಾನ್ ಶ್ರೀಫಣೀಂದ್ರ ಭಾಸ್ಕರ್ ಮತ್ತು ಘಟಂವಿದ್ವಾನ್ ಶ್ರೀ ರಘುನಂದನ್.ಸಂದರ್ಭ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಾಲಯದವರು ಶ್ರೀ ರಾಮೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವೈಯೋಲಿನ್ ವಾದನಕಛೇರಿ.ವೈಯೋಲಿನ್ ನುಡಿಸಿದವರು ಬೇರೆ ಯಾರೂ ಅಲ್ಲ! ಸಂಪದಿಗ ಶ್ರೀ ಕವಿ ನಾಗರಾಜರ ಸೋದರ ಕವಿ ಸುರೇಶ್ ಅವರ ಪುತ್ರ ಡಾ|| ಬಿ.ಎಸ್.ಆರ್.ದೀಪಕ್.ವೇದಸುಧೆಯ ವಾರ್ಷಿಕೋತ್ಸವದಲ್ಲಿ ದೀಪಕ್ ತಂಗಿ ಬಿ.ಎಸ್.ಆರ್ ಅಂಬಿಕಾ ಅವರು ವೈಯೋಲಿನ್ ನುಡಿಸಿ ನಮ್ಮೆಲ್ಲರ ಗಮನ ಸೆಳೆದ ನೆನಪು ಮಾಸುವದರೊಳಗಾಗಿ ದೀಪಕ್ ನಮ್ಮೆಲ್ಲರನ್ನೂ ಮೋಡಿ ಮಾಡಿ ತಮ್ಮ ಕೈ ಚಳಕ ತೋರಿಸಿಬಿಟ್ಟರು. ಆಯುರ್ವೇದ ವೈದ್ಯರಾದ ದೀಪಕ್ ನಿಜವಾಗಿ ಎಲ್ಲರ ಹೃದಯವನ್ನು ಗೆದ್ದಿದ್ದು ಅಷ್ಟೇ ಅಲ್ಲ ಮನೋ ಒತ್ತಡದ, ರಕ್ತದ ಒತ್ತಡ ಇರುವವರಿಗೆ ಅವರಿಗೆ ಗೊತ್ತಿಲ್ಲದಂತೆ ಚಿಕಿತ್ಸೆ ನೀಡಿದ್ದರು.ಕಾರ್ಯಕ್ರಮ ಮುಗಿದೊಡನೆ ಹರ್ಷಚಿತ್ತರಾಗಿ ವೇದಿಕೆಯತ್ತ ಹಲವಾರು ಹಿರಿಯರು ಧಾವಿಸಿ ತರುಣ ಸಂಗೀತ ವಿದ್ವಾಂಸರುಗಳಿಗೆ ನೂರ್ಕಾಲ ಬಾಳುವಂತೆ ಹಾರೈಸುತ್ತಿದ್ದುದನ್ನು ಗಮನಿಸಿದಾಗ ನನ್ನ ಹೃದಯ ತುಂಬಿಬಂದಿತ್ತು. ಈ ತರುಣರಿಗೆ ಧೀರ್ಘಾಯುಷ್ಯವನ್ನು ನೀಡಿ ಅವರ ಸೇವೆ ಸಮಾಜಕ್ಕೆ ಸದಾಕಾಲ ದೊರೆಯಲೆಂದು ನಿಂತಲ್ಲೇ ಆ ಭಗವಂತನಲ್ಲಿ ನಾನು ಪ್ರಾರ್ಥಿಸಿದ್ದೆ.

 

ಡಾ|| ದೀಪಕ್ ಅವರ ಪರಿಚಯ:

* Belongs to keladi kavimanetan family.

* Completed B.A.M.S. with distinction last March and presently doing housemanship in Shivamogga.

* Completed Vidwat (Proficiency) last year securing 1st Rank. .

* Student of Vid. TS Krishnamurthy and presently Dr. K Varad arangan, B'lore.

* B grade Artist of AIR.

* Has performed in more than 150 concerts so far, including those in Navarathri utsav, Shringeri, Mysore Dasara, Hampi utsav, AIR and Dooradarshan programmes. 

 

 

ಪಕ್ಕವಾದ್ಯದಲ್ಲಿ ಸಹಕಾರ ನೀಡಿದ ವಿದ್ವಾಂಸರ ವಿವರ:

1. ಮೃದಂಗ: ವಿದ್ವಾನ್ ಫಣೀಂದ್ರ ಭಾಸ್ಕರ್, ಬೆಂಗಳೂರು. ವಿದ್ವಾನ್ ಶ್ರೀ ಹೆಚ್.ಎಸ್. ಸುಧೀಂದ್ರರವರ ಶಿಷ್ಯ. ಆಕಾಶವಾಣಿಯ ಬಿ ಗ್ರೇಡ್ ಕಲಾವಿದ, ಫಿಲಿಪ್ಸ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್.

2. ಘಟಂ: ವಿದ್ವಾನ್ ರಘುನಂದನ್, ಬೆಂಗಳೂರು. ದಿ. ವಿದ್ವಾನ್ ಶ್ರೀ ಪಿ.ಜಿ.ಲಕ್ಶ್ಮಿನಾರಾಯಣ ಮತ್ತು ಈಗ ವಿದ್ವಾನ್ ಶ್ರೀ ಹೆಚ್.ಎಸ್. ಸುಧೀಂದ್ರರವರ ಶಿಷ್ಯ. 

 

 

 

 

 ಕಾರ್ಯಕ್ರಮದಲ್ಲಿ ನುಡಿಸಿದ ರಚನೆಗಳು:

1. ಕಾಂಬೋದಿ ರಾಗದ ಅಟ್ಟತಾಳವರ್ಣ - ಸರಸಿಜನಾಭ

2. ಹಂಸಧ್ವನಿ ರಾಗ - ರಘುನಾಯಕ (ಸಾಹಿತ್ಯ) ಆದಿತಾಳ

3. ಶುದ್ಧಬಂಗಾಳ ರಾಗ - ರಾಮಭಕ್ತಿಸಾಮ್ರಾಜ್ಯ - ಆದಿತಾಳ

4. ಹಂಸನಾದ ರಾಗ - ಬಂಟುರೀತಿ - ಆದಿತಾಳ

5. ರಾಗಮಾಲಿಕಾ - ಭಾವಯಾಮಿ ರಘುರಾಮಂ - ರೂಪಕತಾಳ

6.ಶುದ್ಧಧನ್ಯಾಸಿ ರಾಗ - ನಾರಾಯಣ - ಖಂಡಛಾಪುತಾಳ

7. ಖರಹರಪ್ರಿಯರಾಗ - ರಾಮನೀ ಸಮಾನಮೆವರು - ರೂಪಕತಾಳ

8. ನಾದನಾಮಕ್ರಿಯರಾಗ - ದಾಸನ ಮಾಡಿಕೋ ಎನ್ನ - ಆದಿತಾಳ

9. ಭೌಳೆ ರಾಗ - ಶ್ರೀಮನ್ನಾರಾಯಣ - ಆದಿತಾಳ

10. ದೇಶ್ ರಾಗದ ತಿಲ್ಲಾನ - ಆದಿತಾಳ

11. ಮಧ್ಯಮಾವತಿ ರಾಗ - ಭಾಗ್ಯದಾ ಲಕ್ಶ್ಮೀ ಬಾರಮ್ಮ - ಆದಿತಾಳ

12. ಕುರುಂಜಿ ರಾಗ - ಪವನಜಾ ಸ್ತುತಿ ಪಾತ್ರ - ಖಂಢಛಾಪು ತಾಳ

13. ಸೌರಾಷ್ಟ ರಾಗ - ಪವಮಾನ - ಆದಿತಾಳ. 

 

ಕೆಳಗಿನ ಕೊಂಡಿಯಲ್ಲಿ ದೀಪಕ್ ಅವರ ವಯೋಲಿನ್ ವಾದವ್ನವನ್ನು ಕೇಳಬಹುದು.

 

http://vedasudhe.blogspot.com/2011/04/blog-post_7251.html

Rating
No votes yet

Comments