ಮೂಢ ಉವಾಚ - 81

ಮೂಢ ಉವಾಚ - 81

ತಡ


ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ


ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು |


ನಿಂದೆ ಮೂದಲಿಕೆ ಸಾಲಾಗಿ ಎರಗಿರಲು


ಬದುಕಿನರ್ಥ ತಿಳಿದೇನು ಫಲ ಮೂಢ ||


 


ಬೇಟೆ


ಮದಭರಿತ ಯೌವನವ ಮುಪ್ಪು ತಿನ್ನುವುದು


ಸಾಕೆಂಬ ಭಾವವನು ಬೇಕೆಂಬುದಳಿಸುವುದು |


ಗುಣವನಸೂಯೆ ತಿನ್ನುವುದು ಒಂದನಿನ್ನೊಂದು


ನುಂಗದಿರುವುದಿದೆಯೇ ಜಗದಿ ಮೂಢ ||


********************


-ಕ.ವೆಂ.ನಾಗರಾಜ್.

Rating
No votes yet

Comments