ಮೂಢ ಉವಾಚ - 86

ಮೂಢ ಉವಾಚ - 86

ಜಗದ ಕಣ್ಣದುವೆ ಭಾಸ್ಕರನ ಬೆಳಕು


ರವಿಯ ಮಹತಿಗೆ ಕಾರಣವು ಪ್ರಭೆಯು |


ನರರು ನಮಿಪ ರವಿ ಕಿರಣದಣುವಣುವು


ದೇವನಂತಃಕರಣ ಸ್ಫುರಣ ಮೂಢ ||



 


ಮನಮುದಗೊಳಿಸುವ ಇಂದ್ರ ಆ ಚಂದ್ರ


ಸಕಲರಿಗಾಪ್ಯಾಯ ಮನಾಪಹರ ಶೀತಲ |


ಶಾಂತಿ ಪ್ರದಾತ ಚೆಲುವಿಗನ್ವರ್ಥ ಚಂದ್ರನ


ಕಾಂತಿಯ ಮೂಲನವನೇ ತಿಳಿ ಮೂಢ ||


***************


-ಕ.ವೆಂ.ನಾಗರಾಜ್.

Rating
No votes yet

Comments