ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಅಭ್ಯಾಸ ೧೨

ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಅಭ್ಯಾಸ ೧೨


ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಅಭ್ಯಾಸ ೧೨
ಶ್ರೀಯುತ ಸುರೇಶರ ಮನೆ ಸ್ವಸ್ತಿ ಶ್ರೀ ಯಲ್ಲಿ ತಾ ೧೧.೦೬.೨೦೧೧ ರಂದು

 

 


ರತ್ನಾಕರ ವರ್ಣಿಯು ಕನ್ನಡ ಸಾರಸ್ವತ ಲೋಕದ ಅಪರೂಪದ ಕವಿ. ಅವನ ಕಾವ್ಯ "ಭರತೇಶ ವೈಭವ" ಒಂದು ಅನನ್ಯ ಕಾವ್ಯ. ಗುರುಗಳಿಗೆ ಬಹಳ ಪ್ರಿಯನಾದ ಕವಿ ಈತ. ೪೦೦ ವರ್ಶಗಳ ಹಿಂದೆ ಜೀವಿಸಿದ ರತ್ನಾಕರ ವರ್ಣಿ ಭರತೇಶ ವೈಭವವೆಂಬ ಈ ಮಹತ್ ಬೃಹತ್ ಕ್ರತಿ ನಿರ್ಮಾಣ ಮಾಡಿದ. ಅತ್ಯಂತ ಪ್ರಭಾವಶಾಲೀ ಅಪರೂಪದ ಕ್ರತಿ.ಸರಳ ನೇರ ಹೃದಯ ಸ್ಪರ್ಷಿ.

ರತ್ನಾಕರ ಇದ್ದುದು ೧೫೫೭. ಇದೇ ವಿಚಾರವನ್ನು ರತ್ನಾಕರನ ತ್ರಿಲೋಕ ಶತಕದ ಕೊನೆಯ ಪದ್ಯ ದೃಡಪಡಿಸುತ್ತದೆ.
 

 
"ಮಣಿಶೈಲಂ ಗತಿಯಿಂದು ಶಾಲಿಶಕಾಲಂ ಸಂದಿರಲ್ ತೌಳವಾಂ
ಗಣದೊಳ್ ವೇಣುಪುರಾಂಕದೊಳ್ ಸೃಜಿಸಿದಂ ರತ್ನಾಕರಾಯಣ..."

ಇಲ್ಲಿ ಮಣಿ(೯) ಶಲ(೭) ಗತಿ(೪) ಇಂದು(೧) ಅಂತಾನಾಮ್ ವಾಮತೋಗತಿ ಎಂಬ ನಿಯಮದಂತೆ ಶಕವರ್ಷ ೧೪೭೯ ಆಗುತ್ತದೆ. ಇದೂ ಕ್ರಿ. ಶ ೧೫೫೭. ತ್ರಿಲೋಕ ಶತಕ ರಚಿಸಿದ ಕಾಲವಾಗುತ್ತದೆ. ಹೀಗೆ ಬಾಹ್ಯಾಂತರಿಕ ಪ್ರಮಾಣಗಳಿಂದ ರತ್ನಾಕರನ ಕಾಲ ಕ್ರಿ ಶ ೧೫೫೭ ಎಂಬುದು ಈಗ ಒಪ್ಪಿಗೆಯಾಗಿದೆ.

ಈತ ಬಾಲಕಾಲದೊಳೇ ಸರ್ವ ಶಾಸ್ತ್ರ ಸಕಲ ವಿದ್ಯಾ ಪಾರಂಗತನಾಗಿದ್ದನೆಂಬುದನ್ನು ದೇವಚಂದ್ರ ವಿವರಣೆ ಸಹಿತ  ಪ್ರತಿಪಾದಿಸಿದ್ದಾನೆ.ಅದರಂತೆ ಭರತೇಶ ವೈಭವದಲ್ಲಿ ಅಭಿವ್ಯಕ್ತಗೊಂಡ ಕಲೆ ಸಂಸ್ಕೃತಿ ಕಾವ್ಯಾಭಿವ್ಯಕ್ತಿ , ಶಾಸ್ತ್ರೀಯ ವಿಚಾರಗಳು ರತ್ನಾಕರನ ಪ್ರತಿಭೆ ಪಾಂಡಿತ್ಯಕ್ಕೆ ಸಾಣೆ ಹಿಡಿಯುತ್ತವೆ.ಅದು ಗುರು ಸಾನ್ನಿಧ್ಯದಲ್ಲಿ ಪಡೆದುದೋ ಸ್ವಾಧ್ಯಾಯ ಸಾಧನೆಯೋ ಹೇಳಲಾಗದು ಆದರೆ ಅವನೊಬ್ಬ ಆತ್ಮ ಜ್ಞಾನಿ ಸರ್ವಶಾಸ್ತ್ರಜ್ಞಾನಿ ಎನ್ನುವ ಮಾತು ಸರ್ವ ವಿದಿತ.
ಕವಿಯ ಪ್ರಾಥಮಿಕ ಶಿಕ್ಷಣ ಹುಟ್ಟೂರಾದ ಮೂಡುಬಿದರೆಯಲ್ಲೇ ಆಗಿರುವ ಸಾಧ್ಯತೆ ಹೆಚ್ಚು. ಈತನಿಗೆ ಕನ್ನಡ ಸಂಸ್ಕೃತವಲ್ಲದೇ ತೆಲುಗು ಮಲೆಯಾಳೀ ಮತ್ತು ತುಳು ಭಾಷೆಗಳ ಪರಿಜ್ಞಾನವೂ ಇದೆ. ತನ್ನ ಕಾವ್ಯವನ್ನು ಕನ್ನಡಿಗರು ಹೊಗಳುವುದಿರಲಿ, ರಯ್ಯಾ ಮಂಚಿದೆಯೆನೆ ತೆಲುಗರು, ಅಯ್ಯಯ್ಯ ಎಂಚಪೊರ್ಲಾಂಡೆಂದು ಮಯ್ಯುಬ್ಬಿ ಕೇಳಬೇಕೆಂದು ಅಪೇಕ್ಷಿಸುತ್ತಾನೆ.

 



ಭರತೇಶ ವೈಭವ:

ಆದಿಜಿನನ ಹಿರಿಯ ಮಗ ಪ್ರಥಮ ಚಕ್ರಿ ಭರತೇಶ . ಇವನೇ ಭರತೇಶ ವೈಭವದ ಕಾವ್ಯ ಕಥಾ ನಾಯಕ. ಇವನ ವ್ಯಕ್ತಿತ್ವ ಮತ್ತು ಬದುಕಿನ ಚಿತ್ರಣವೇ ಈ ಕಾವ್ಯದ ಕಥಾ ವಸ್ತು.ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ ಚರಮದೇಹಿ ಭೋಗ ತ್ಯಾಗ ಶೃಂಗಾರ’ ಆಧ್ಯಾತ್ಮ ಸಮ್ಮಿಳಿತ ಸಂಸಾರ ಯೋಗಿ.
ರತ್ನಾಕರ ವರ್ಣಿ ಭರತನ ವ್ಯಕ್ತಿತ್ವಕ್ಕೆ ಮಾರು ಹೋಗಿ ಈ ಕಾವ್ಯ ಬರೆದಂತಿದೆ. ಒಬ್ಬ ಉದಾತ್ತ ಮಾನವನ ಅನುಪಮ ಚಿತ್ರಣ ಅವನ ಕಾವ್ಯದ ಉದ್ದೇಶವಾಗಿತ್ತೆಂದು ತೋರುತ್ತದೆ. ಈ ವಸ್ತುವಿಗೆ ಧರ್ಮ ಹಿನ್ನೆಲೆಯಾಗಿದ್ದರೂ ಕಾವ್ಯ ಧರ್ಮದ ಬೆನ್ನೆಲುಬೂ ಗಟ್ಟಿಯಾಗೇ ಇದೆ.ಗಣನೆಯಿಲ್ಲದ ರಾಜ್ಯಸುಖದೊಳಾಡಿದ ಭೂಭುಜಾಗ್ರಣಿ, ಜಿನಯೋಗಿಯಾದವೈಭವವಿದೆಂದು ಭರತೇಶನ ವ್ಯಕ್ತಿತ್ವವನ್ನೇ ಇಲ್ಲಿ ಸಂಗ್ರಹಿಸಿದ್ದಾನೆ. ಭರತೇಶನ ಬದುಕಿನ ವಿರಾಟ್ ದರ್ಶನ ಮೂಡಿಬಂದಿರುವುದೊಂದು ಇದರ ವೈಷಿಷ್ಟ್ಯ.ಈ ಕಥೆಯ ಆಕರ್ತ ಜಿನಸೇನಾಚಾರ್ಯರ ಪೂರ್ವ ಪುರಾಣ . ಆದಿನಾಥನ ಕಥೆಯಲ್ಲಿ ಉಪಕಥೆಯಾಗಿ , ಭವಾವಳಿಗಳ ತೊಡಕಿನಲ್ಲಿ ಸುತ್ತಿಕೊಂಡು ಸಾಕಷ್ಟು ವಿವರವಾಗಿಯೇ ಕಾಣಿಸಿಕೊಂಡಿದೆ.ಜಿನಸೇನಾಚಾರ್ಯರದ್ದು ಧರ್ಮೋದ್ದೇಶಿತ ಪುರಾಣ. ಆದಿತೀರ್ಥಂಕರ ವೃಷಭನಾಥನನ್ನೇ ಕೇಂದ್ರಿತವಾಗಿಟ್ಟುಕೊಂಡು ಬರೆದಿದ್ದು, ಭರತ ಮಾತ್ರ ಅಲ್ಲಿ ಗೌಣ.
ಭರತ ತಂದೆಯ ಆಜ್ಞೆಯಂತೆ ರಾಜ್ಯಭಾರ ಮಾಡುತ್ತಿರುವಾಗ ಚಕ್ರರತ್ನ ಆಯುಧಾಗಾರದಲ್ಲಿ ಕಾಣಿಸಿಕೊಳ್ಳುತ್ತದೆ . ಅದರ ಬೆಂಬತ್ತಿ ಚಕ್ರವರ್ತಿಯಾಗುತ್ತಾನೆ. ಅವನ ಅದಿಪತ್ಯ ಒಪ್ಪದ ತಮ್ಮ ಬಾಹುಬಲಿಯ ಜೊತೆ ಯುದ್ಧವಾಗಿ ಭರತ ಸೋಲುತ್ತಾನೆ. ಆಗ ತಾಳ್ಮೆ ಕಳೆದುಕೊಂಡ ಭರತ ತಮ್ಮನ ಮೇಲೆ ಚಕ್ರ ರತ್ನವನ್ನು ಪ್ರಯೋಗಿಸುತ್ತಾನೆ. ಅದು ಬಾಹುಬಲಿಗೆ ಏನನ್ನೂ ಮಾಡದೇ ಅವನ ಬಲಭುಜದ ಹತ್ತಿರ ಬಂದು ನಿಲ್ಲುತ್ತದೆ. ಅಣ್ಣ ಭರತನ ಈ ಕೋಪ  ದುರಾಸೆಗೆ ಹೇಸಿ ಬಾಹುಬಲಿ ದೀಕ್ಷೆ ತೆಗೆದು ಕೊಳ್ಳುತ್ತಾನೆ. ಮುಂದೆ ಉಗ್ರೋಗ್ರ ತಪಸ್ಸಿನಿಂದ ಮುಕ್ತಿ ಪಡೆಯುತ್ತಾನೆ. ಭರತ ಚಕ್ರವರ್ತಿಯಾಗಿ ಸುಖ ಭೋಗ ಮಾಡಿ ಕೆನ್ನೆಯ ಮೇಲೆ ನೆರೆಗೂದಲು ಕಂಡು ದೀಕ್ಷೆ ಪಡೆದು ತಪವೆಸಗಿ ಮೋಕ್ಷ ಪಡೆಯುತ್ತಾನೆ.ಇದು ಆದಿಪುರಾಣೋಕ್ತ ಕಥೆ. ಇಲ್ಲಿ ಅವನ ಬದುಕಿನ ವಿಶೇಷ ವಿವರಗಳಿಲ್ಲ. ಬಾಹುಬಲಿಯ ಮುಂದೆ ಭರತನೇ ಸಣ್ಣವನಾಗಿ ಕಾಣುತ್ತಾನೆ.
ಪುರಾಣೋಕ್ತ ಈ ಉಪಕಥೆಯ ಕಥಾ ಪಂಜರವನ್ನೇ ಪ್ರಧಾನ ವಸ್ತುವಾಗಿರಿಸಿಕೊಂಡು ಸ್ವತಂತ್ರವಾದ ಬೃಹತ್ಕಾವ್ಯ ಭರತೇಶ ವೈಭವವಾಗಿಸಿದ ಕೀರ್ತಿ ರತ್ನಾಕರ ವರ್ಣಿಗೆ ಸಲ್ಲುತ್ತದೆ. ರಾಜರ್ಷಿ ಭರತೇಶನಲ್ಲಿ ಯಾರೂ ಕಾಣದ ಭವ್ಯತೆಯನ್ನು ಕಂದಿದ್ದಾನೆ. ಭರತೇಶನ ವ್ಯಕ್ತಿತ್ವದಲ್ಲಿ ಜೈನ ಧರ್ಮದ ತತ್ವ ಬೆರೆಸುವ ಸಾಹಸ ರತ್ನಾಕರ ವರ್ಣಿಯದ್ದು.ಧರ್ಮದ ಬೀಜ ಬಿತ್ತಿ ಕಾವ್ಯದ ಸಮೃದ್ಧ ಬೆಳೆ ಬೆಳೆದಿದ್ದಾನೆ.

ಗುರುಗಳು ಈ ಮಹತ್ಕಾವ್ಯದ ಉಪ್ಪರಿಗೆ ಸಂಧಿಯ ನ್ನು ಆರಿಸಿಕೊಂಡು ನಮಗೆ ವಿವರಿಸಿದರು.
 

'ಬಿನ್ನಹ ಗುರುವೇ ಧ್ಯನಕೆ ಬೇಸರಾದಾಗ ನಿನ್ನನಾದಿಯ ಮಾಡಿಕೊಂಡು ಕನ್ನಡದೊಳಗೊಂದು ಕಥೆಯ ಪೇಳುವೆ ನಾನು ನಿನ್ನಾಜ್ಞೆ ಕಂಡ್ಯಾ ನನ್ನೊಡೆಯ. "

 

ಸಾಂಗತ್ಯವೆಂದರೆ ಹಾಡಲಿಕ್ಕೆಂದೇ ಇರುವ ಕಾವ್ಯ.
ಜೈನ ಕವಿಗಳು ಚಂಪೂ ಕಾವ್ಯ, ಪಂಡಿತ ರಂಜಕ ಕಾವ್ಯ ಮಾರ್ಗ ಶೈಲಿ ಬರೆಯುವ ಪರಂಪರೆಯಲ್ಲಿಯೇ ಬಂದ ರತ್ನಾಕರ ವರ್ಣಿ ಇದ್ದಕ್ಕಿದ್ದ ಹಾಗೇ ಪರಂಪರೆಯ ಮಾರ್ಗ ಬಿಟ್ಟು ಸರಳ ದೇಶೀ ಸಾಂಗತ್ಯಕ್ಕೆ ಏಕೆ ಬರಬೇಕಾಯ್ತು... ತಿಳಿಯಲು ಗುರುಗಳ ಈ ಸಲದ ಅಭ್ಯಾಸ ವಿಡಿಯೋ ತುಣುಕುಗಳನ್ನು ದರ್ಶಿಸಿ.
ಅವರ ಸ್ವರದಲ್ಲಿಯೇ ನಿಮಗೆ ನಿಜವಾದ ರಸಾ ಸ್ವಾದ ಸಿಗುತ್ತದೆ

 



ಕನ್ನಡವನ್ನು ತುಂಬಾನೇ ಸರಳವಾಗಿ ಬಳಸುವ ಈತ ಭರತೇಶ ವೈಭವ ಎಂಬ ಮಹತ್ಕಾವ್ಯವನ್ನೂ ರತ್ನಾಕರಾಧೀಶ್ವರ ಶತಕವನ್ನೂ ಅಪರಾಧಿತ ಶತಕವನ್ನೂ ಲೋಕ ಶತಕವನ್ನೂ ಮತ್ತು ೨೦೦೦ ಕ್ಕೂ ಮಿಕ್ಕಿ ಹಾಡುಗಳನ್ನೂ ಬರೆದಿದ್ದಾನೆ. ಈತನ ಸ್ವಲ್ಪ ಕಾಲದ ಹಿಂದೆ ಕುಮಾರ ವ್ಯಾಸ ಷಟ್ಪದಿಯಲ್ಲಿ ಕಾವ್ಯ ರಚಿಸುತ್ತಾನೆ, ಆಗಲೇ ಪುರಂದರ ದಾಸರು ಹಾಡುಗಳನ್ನು ರಚಿಸಿರುತ್ತಾರೆ ವೀರಶೈವರು ಶತಕಗಳನ್ನು ರಚಿಸಿದ್ದಾರೆ, ಹೊಸ ಧರ್ಮದ ಗಾಳಿ ಬೀಸುವ ಕಾಲವದು... ಇದರ ಮುಂದಿನ  ಆಗು ಹೋಗುಗಳನ್ನೂ, ಭರತೇಶ ವೈಭವದ ವಿಶಿಷ್ಟತೆಯನ್ನೂ ಗುರುಗಳ ಮಾತಿನಲ್ಲೇ ಆನಂದಿಸಲು  ನೀವು ವಿಡಿಯೋ ತುಣುಕು (ಐ) ಪರಾಂಬರಿಸಿ.
ಇಲ್ಲಿ ಕುಮಾರಿ ಚಂದನಳ ಹಾಡುಗಾರಿಕೆಯ ಆನಂದವಿದೆ,

 

೧. ಪೀಠಿಕೆ:
೨.ಧ್ಯಾನಕ್ಕೆ ಬೇಸರವಾದಾಗ ನಿನ್ನ:
೩.ಕ್ಷಣಕ್ಕೆ ಮುಕ್ತಿಯ ಕಾಂಬ :
೪.ವಿರಕ್ತಿ ವೈರಾಗ್ಯದ ಮಧ್ಯ ಭಾವ:
೫. ಭವಾವಳಿಗೇ ಮುಕ್ತಿ
೬. ಉಪ್ಪರೈಗೆಯೋಗದ ವೈಭವ
೭.ಕುಂದಣದುಪ್ಪರಿಗೆ ಮೇಲೆ
೮ ಪಂಡಿತೆಯ ಚಮತ್ಕಾರ
೯.ಯೋಗ ಭೋಗ ಸಮನ್ವಯಿ
೧೦.ಮಂಗಳ
  www.youtube.com/watch?v=-GfkLlwNAwA
http://www.youtube.com/watch?v=Exvz30f8GLE
http://www.youtube.com/watch?v=xfOgvR6D-iY
http://www.youtube.com/watch?v=1MjrEZnFLw8
ಚಂದನಳ ಹಾಡುಗಾರಿಕೆ :http://youtu.be/UC0jQRCvv5I
http://youtu.be/o6t_jvfs50s
ಎಫ್:http://youtu.be/UC0jQRCvv5I
ಜೆ :http://youtu.be/g3PQhoOrWu4
ಎಮ್:http://youtu.be/m0u4Ns1IvJQ
ಎನ್:http://youtu.be/pbS0bZ6qxc0
ಒ:http://youtu.be/mfpDFnjJ5g0
ಕೆ:http://youtu.be/Vj5ahZm06Wo
  http://youtu.be/Exvz30f8GLE


 

Comments