ಮೂಢ ಉವಾಚ - 95

ಮೂಢ ಉವಾಚ - 95

ಆಳವಿಹ ಸಾಗರವ ಹಡಗು ದಾಟಿಸಬಹುದು


ಭವಸಾಗರವ ದಾಟೆ ಅರಿವ ಜಹಜಿರಬೇಕು |


ದಾರಿ ತೋರುವ ಗುರುಕರುಣೆಯಿರಬೇಕು


ದಾಟಬೇಕೆಂಬ ಮನ ಬೇಕು ಮೂಢ ||


 


ಭವಬಂಧನವೆ ಕಿಚ್ಚು ಮರಣವೆ ಬಿರುಗಾಳಿ


ಕಾಡ್ಗಿಚ್ಚಿನಲಿ ಸಿಲುಕಿ ಬೆಂದು ನೊಂದಿರುವ |


ಬಿರುಗಾಳಿಯಲಿ ಸಿಲುಕಿ ಭಯಗೊಂಡ ಮನವ


ಸಂತಯಿಪ ಗುರುವೆ ದೇವ ಮೂಢ ||


***************


-ಕ.ವೆಂ.ನಾಗರಾಜ್.

Rating
No votes yet

Comments