ಮೂಢ ಉವಾಚ - 103

ಮೂಢ ಉವಾಚ - 103


ತನ್ನ ತಾನರಿಯೆ ಗುರುಕೃಪೆಯು ಬೇಕು


ಅರಿತುದನು ವಿಚಾರ ಮಾಡುತಿರಬೇಕು |


ವಿಚಾರ ಮಥನದ ಫಲವೆ ನಿತ್ಯ ಸತ್ಯ


ವೇದವಿದಿತ ಸತ್ಯ ತತ್ವವಿದು ಮೂಢ ||




ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ


ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ |


ಸುಜನವಾಣಿ ಗುರುವಾಣಿ ಕೇಳುವವ ಧನ್ಯ


ಕೇಳು ಕೇಳು ಕೇಳು ನೀ ಕೇಳು ಮೂಢ ||


**************


-ಕ.ವೆಂ.ನಾಗರಾಜ್.

Rating
No votes yet

Comments