ಅದು "ಮೇಧ್ಯ"ವಲ್ಲದ್ದು!

ಅದು "ಮೇಧ್ಯ"ವಲ್ಲದ್ದು!

 ಸೆ. 16ರ ಎಲ್ಲಾ ಪತ್ರಿಕೆಗಳ ಸುದ್ದಿಪುಟದಲ್ಲಿ, ದೊಡ್ಡ ಮೌಲ್ಯದ ನೋಟಿನ ಕಂತೆ-ಕಂತೆಗಳ ಚಿತ್ರ ಪ್ರಕಟವಾಗಿದೆ. ಇದರ ಮೊತ್ತ 4 ಕೋಟಿ 95 ಲಕ್ಷಗಳು ಎಂದು ವರದಿ. ಅಬ್ಬಾ! ಎಷ್ಟೊಂದು ಹಣ! ಬಾಯಲ್ಲಿ ನೀರೂರುತ್ತದೆ ಅಲ್ಲವೇ? ಅಂದಹಾಗೆ ಇದನ್ನು ಆಂಧ್ರ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಕಳ್ಳ ಖಜಾನೆ ಹೊತ್ತ ಲಾರಿ, ಗಣಿ ಹಗರಣ ಕುಖ್ಯಾತಿಯ ಬಳ್ಳಾರಿಯಿಂದ ಹೊರಟಿದ್ದು! ಇನ್ನೂ ಯಾವ ದೊಡ್ಡ ಮಹಾ ಪಾತಕಕ್ಕೆ ಹೋಗುತ್ತಿತ್ತೋ, ಏನೋ, ಪಾಪ?! ಪಾಪದ ಹಣ ಪಾಪಕ್ಕಲ್ಲದೆ ಇನ್ಯಾತಕ್ಕೆ ತಾನೇ ಪ್ರಯೋಜನವಾದೀತು? ಹೋಗಲಿ. ಈ ಗಟ್ಟಿ ಪೇಪರ್ ತುಂಡಿನ ಕಟ್ಟುಗಳನ್ನು - ಕರೆನ್ಸಿ - ಅಂದರೆ ಹಣ ಎಂದು, ನಾವು, ಅನಾಡಿ ಹುಂಬರು ನಂಬುತ್ತೇವೆ. ವಾಸ್ತವವಾಗಿ ಇದಕ್ಕೆ ಆರ್ಥಿಕ ಮೌಲ್ಯ ಇರುವುದೇ ಇಲ್ಲ!

  ಹಣ ಎನ್ನುವುದು ಮೌಲ್ಯದ ಅಳತೆಯಂತೆ. ನೈತಿಕ ಮೌಲ್ಯ ಹಾಳಾಗಿಹೋಗಲಿ, ಆರ್ಥಿಕ ಅರ್ಥದಲ್ಲೂ ಇದಕ್ಕೆ ಆ ಪ್ರಯೋಜನ ಇಲ್ಲ! ಯಾವುದಾದರೂ ಉತ್ಪಾದನೆ, ವ್ಯಾಪಾರ ಮತ್ತು ಉತ್ಪದತೆಯ ವ್ಯವಹಾರದಿಂದ ಇದು ಬಂದಿದ್ದಾಗಿರಲಿಲ್ಲ; ಮತ್ತು ಅಂತಹ ಉತ್ಪಾದಕತೆ, ಉದ್ಯೋಗಸೃಷ್ಟಿಯ ಪ್ರಕ್ರಿಯೆಗೂ ಇದು ಹೂಡಿಕೆಯಾಗುತ್ತಿರಲಿಲ್ಲ!

  ಇದನ್ನೇ "ಭ್ರಷ್ಟಾಚಾರ" ಎನ್ನಬೇಕಾದ್ದು. ಭ್ರಷ್ಟಾಚಾರವೆಂದರೆ, ಬಿಳಿಯದನ್ನೆಲ್ಲಾ ಕಪ್ಪಾಗಿಸುವ, ಬೆಳ್ಳಂಬೆಳಕನ್ನು ಕಗ್ಗತ್ತಲಾಗಿಸುವ ಪ್ರಕ್ರಿಯೆ!
 

Rating
No votes yet

Comments