ಚಲೋಮಲ್ಲೇಶ್ವರ 14 ಮತ್ತು 15 ರ ನಡುವೆ ನಡೆದದ್ದು

ಚಲೋಮಲ್ಲೇಶ್ವರ 14 ಮತ್ತು 15 ರ ನಡುವೆ ನಡೆದದ್ದು

ಆ ಪೋಲೀಸ್ನೋರು ಹೇಳಿದ್ದು ಕೇಳಿ ನೀವೆಲ್ಲ ಚಲ್ಲಾಪಿಲ್ಲಿಯಾಗಿ ಓಡಿಹೋಗಿಬಿಟ್ಟಿರಿ  ಯಾಕೆ ಎಲ್ಲ ಓಡಿಹೋದರು ಅಂತ ಗೊತ್ತಾಗ್ದಲೆ ನಾನು ಗಾಬರಿಯಾಗಿ ನೋಡ್ತಾಇದ್ದೆ “ ನೀವು ಅದೇ ಗ್ಯಾಂಗ್ ನೋರೇನ್ರಿ “ ಅಂತ ಕೇಳಿದ ಪೋಲೀಸ್ ಪಿ ಸಿ ಇನ್ನು ನನ್ನನ್ನೆ ಎಳ್ಕೊಂಡು ಹೋದರೆ ಏನು ಮಾಡದು ಅಂತ ಹೇಳಿ “ ಇಲ್ಲ ಸಾರ್ ನಾನು ತುಮಕೂರಿನಿಂದ ಬಂದಿದಿನಿ ಯಾವುದೋ ಒಂದು ಫಂಕ್ಷನ್ ಇತ್ತು ಅಲ್ಲಿ ಕೂತು ಕೂತು ಬೇಜರಾಯಿತು ತಿರುಗಾಡ್ಕಂಡು ಹೋಗೋಣ ಅಂತ ಬಂದಿದ್ದೆ ಇವರೆಲ್ಲ ತಮಾಷೆ ಮಾಡ್ಕೊಂಡು ಮಾತಾಡ್ತ ಇದ್ದರೂ ಟೈಂ ಪಾಸ್ ಆಗುತ್ತೆ ಅಂತ ಹೇಳಿ ಕೂತ್ಕಂಡೆ ಅಷ್ಟೆ ಸಾರ್ “   “ ಟೈಂ ಪಾಸ್ ಮಾಡೋಕೆ ಬಟಾಣಿನೋ, ಕಡ್ಲೆ ಬೀಜನೋ ತಿನ್ನೋದು ಬಿಟ್ಟು ಇವರ ಜೊತೆ ಯಾಕ್ರಿ ಕೂತಿದೀರಿ ಸರಿ ಅವರು ಏನು ಮಾತಾಡ್ತಾ ಇದ್ದರು ಅಂತ ಹೇಳಿ ಅಂದ ಪಿ ಸಿ

ಆ ಗ್ಯಾಂಗ್ ನಲ್ಲಿ ಗಣೇಶ್ ಅನ್ನೋರು ಹೇಳ್ತಾ ಇದ್ದರು ನಾನು ದಭಾಂಗ್ 5 ಸರ್ತಿ, ಸಿಂಗಂ 3 ಸರ್ತಿ ನೋಡಿದೀನಿ ನೀವೆಲ್ಲ ಏನು ಹೆದರಬೇಡಿ ಆ ಭಾರಿಮುತ್ತು ಗೆ ಒಂದು ಗತಿ ಕಾಣಿಸ್ತಿನಿ ಮಂಜಣ್ಣ ನವರು ನಮ್ಮ ಕಡೆ ಇರೋದ್ರಿಂದ ಮೀಸೆ ಓಂಕಾರಪ್ಪನು ಏನು ಮಾಡಲ್ಲ ಅಂತಿದ್ರು ಸಾರ್ ಆಮೇಲೆ ಇನ್ನಿಬ್ರು ದುರ್ಬೀನ್ , ಕ್ಯಾಮರ ಅಂತ ಮಾತಾಡ್ತಾ ಇದ್ದರು, ರಾಮಮೋಹನ ಅನ್ನೋರು ಒಬ್ಬರು ನೀವೆಲ್ಲ ಏನು ಯೋಚನೆ ಮಾಡಬೇಡಿ ನನ್ನ ಕಾರು ಮೇಲೆ ಹಾರೋದ್ರಿಂದ ಅದರೊಳಗೆ ಇಲ್ಲಂದ ಎಸ್ಕೇಪ್ ಆಗಿಬಿಡಣ ಅಂತೆಲ್ಲ ಮಾತಾಡ್ತಾ ಇದ್ದರು ಪದೆ ಪದೆ ನಾವು ಸಂಪದ ಗ್ಯಾಂಗ್ ಯಾವಗಲು ಒಂದಾಗಿರ ಬೇಕು ಅಂತ ಇದ್ದರು ಸಾರ್ ಆದರೆ ನಿಮ್ಮನ್ನ ನೋಡಿದ ತಕ್ಷಣ ಒಬ್ಬಬ್ಬರು ಒಂದೊಂದು ಕಡೆ ಓಡಿಹೋಗಿ ಬಿಟ್ಟರಲ್ಲ ಯಾಕೆ ಸಾರ್ ಅಂದೆ ಏನು ಗೊತ್ತಿಲ್ಲದೆ ಇರೋನ್ ತರ

“ ಕೈ ಗೆ ಸಿಕ್ಕಿದ್ದರೆ ಎಲ್ಲರ್ ಕೈನಲ್ಲು ಪದ ಹೇಳಿಸ್ಬಿಡ್ತಿದ್ರು ಈ ಸಂಪದ ಗ್ಯಾಂಗ್ ಗೆ ನಮ್ಮ ಸಾಹೇಬ್ರು ಆ ಗಣೇಶ್ ಪಾರ್ಥಸಾರಥಿ ಅನ್ನೋರುನ್ನ ಹಿಡ್ಕೊಂಡು ಬರೋವರೆಗೆ ಸ್ಟೇಷನ್ ಬಿಟ್ಟು ಹೋಗಲ್ಲ ಅಂತ ಭಾರಿಮುತ್ತು ಸ್ಟೇಷನ್ ನಲ್ಲಿ ಕೂತು ಬಿಟ್ವಳೆ ನಮ್ಮ ಸಾಹೇಬ್ರು ಯೆಡ್ಡಿಂಗ್ ಆನಿವರ್ಸರಿ ಅಂತ ಅವರ ಹೆಂಡ್ತಿ ಸಂಜೆ 5 ಗಂಟೆಗೆ ಬನ್ನಿ ಪಿಕ್ಚರ್ಗೆ ಹೋಗೋಣ ಇಲ್ಲ ಅಂದರೆ ನಾನೆ ಸ್ಟೇಷನ್ ಗೆ ಬರ್ತಿನಿ ಅಂದವರಂತೆ ಇನ್ನು ಅವರ ಹೆಂಡ್ತಿ ಸ್ಟೇಷನ್ ಗೆ ಬಂದರೆ ಅನಾಹುತ ಆಗುತ್ತೆ ಅಂತ ಫುಲ್ ಟೆನ್ಸನ್ ಮಾಡ್ಕೊಂಡು ಸಾಹೇಬ್ರು ಆ ಇಬ್ರನ್ನ ಹಿಡ್ಕೊಂಡು ಬರಕ್ಕೆ ಅಂತ ನಮ್ಮನ್ನ ಕಳ್ಸಿದಾರೆ ಇಲ್ಲಿ ನೋಡಿದರೆ  ಒಬ್ಬರು ಕೈಗೆ ಸಿಗದಂಗೆ ಓಡೋದ್ರು ಅವರು ಯಾವಕಡೆ ಹೋದ್ರು ಅಂತ ಗೊತ್ತೇನ್ರಿ ನಿಮಗೆ “   “ಅದೇನೊ ಸರ್ಕಲ್ …. ಮಾರಮ್ಮ …. ಅಂತ ಮಾತಾಡ್ಕೋಂತಿದ್ರು ಸಾರ್ “ ಅಂದೆ

ಸರಿ ಸರಿ ನಮ್ಮ ಕೈಗೆ ಸಿಗದೆ ಎಲ್ಲಿ ಹೋಗ್ತಾರೆ ಅನ್ಕೊಂಡು ಬಾರ್ಲ ಈ ವಿಷ್ಯನ ಸಾಹೇಬ್ರುಗೆ ಹೇಳಣ ಅಂತ ಹೊರಟರು ನಾನು “ ಸಾರ್ ನಾನು ನಿಮ್ಮ ಜೊತೆ ಬರ್ಲ ನಾನು ನಿಜ ಜೀವನದಲ್ಲಿ ಒಬ್ಬ ರೌಡಿ ನು ನೋಡಿಲ್ಲ ಬರಿ ಸಿನಿಮಾದಲ್ಲಿ ಮಾತ್ರ ನೋಡಿದಿನಿ ಹೇಗೂ ಭಾರಿಮುತ್ತು ನಿಮ್ಮ ಸ್ಟೇಷನ್ ನಲ್ಲಿ ಇದಾಳಲ್ಲ ಅವಳನ್ನ ನೋಡಬೇಕು ಅಂತ ಆಸೆ ಆಗ್ತಾ ಇದೆ “ ಅಂದೆ ಪಿ ಸಿ ಗಳು ನನ್ನೆ ವಿಚಿತ್ರವಾಗಿ ನೋಡಿ ಸರಿ ಬನ್ರಿ ಅಂತ ನನ್ನೂ ಜೊತೆಯಲ್ಲಿ   ಕರ್ ಕೊಂಡು ಹೊರಟ್ರು

ನಾವು ಸ್ಟೇಷನ್ ಹತ್ರ ಹೋದಾಗ ಬಾರಿಮುತ್ತು ನೋಡೋಕೆ ಸಿಕ್ಕಾಪಟ್ಟೆ ಜನಸೇರಿದ್ರು ಪಿಸಿ ಗಳ ಜೊತೆ ಒಳಗೆ ಹೋದಾಗ ಒಬ್ಬರು ದಪ್ಪ ಮೀಸೆ ಬಿಟ್ಕಂಡು ಇನ್ಸ್ಪೆಕ್ಟರ್  ಕೂತಿದ್ರು ಅವರೇ ಓಂಕಾರಪ್ಪ ಅನ್ಕೊಂಡೆ ಅವರದ್ರುಗೆ ಇನ್ನೋಬ್ಬರು ಮಾತಾಡಿಕೊಂಡು ಕೂತಿದ್ರು ಅವರ ಪಕ್ಕ ಇನ್ನೊಬ್ರು ನಿಂತಿದ್ರು ಅವರು ಬಗ್ಗಿ “ ಮಂಜಣ್ಣೋರೆ ನಮ್ದು ಮನೇಗೆ ಹೋಗಿ ಬಿರಿಯಾನಿಗೆ  ತಿನ್ನಬೇಕು ಇಲ್ಲ ಅಂದರೆ ಆಮೇಲೆ ಟೇಸ್ಟ್ ಗೆ ಇರಕ್ಕಿಲ್ಲ “  ಅಂತ ಕೂತಿದ್ದೋರ ಕಿವಿಲಿ ಹೇಳ್ತಾ ಇದ್ದರು    ಅವಾಗ ನನಗೆ ಗೊತ್ತಾಯಿತು ಅವರೇ ಮಂಜಣ್ಣ ಅಂತ ಆಮೇಲೆ ಮಾತಾಡ್ಸಣ ಮೊದಲು ಭಾರಿಮುತ್ತು ನ ನೋಡಿಬಿಡೋಣ ಅಂತ ಸುಮ್ಮನೆ ನಿಂತುಕೊಂಡೆ “ ಏನ್ರಯ್ಯ ಆ ಇಬ್ಬರು ಸಿಕ್ಕಿದ್ರ ಇವನ್ಯಾರು ಇವನು ಅದೇ ಗ್ಯಾಂಗ್ ನೋನ “ ಅಂದರು ಮೀಸೆ ಓಂಕಾರಯ್ಯ ನವರು “ ಇಲ್ಲ ಸಾರ್ ಇವಯ್ಯ ಆ ಗ್ಯಾಂಗ್ ಜೊತೆ ಸುಮ್ಮನೆ ಕೂತ್ಕೊಂಡಿದ್ದ ಅವರೆಲ್ಲ ಓಡಿಹೋದರು , ಈವಯ್ಯ ಅದೇನು ಬಾರಿಮುತ್ತು ನ ನೋಡಬೇಕಂತೆ ನೋಡ್ಕಂಡು ಹೋಗಲಿ ಅಂತ ಕರ್ ಕೊಂಡು ಬಂದ್ವಿ “ ಅಂದ ಪಿ ಸಿ ಮೀಸೆ ಓಂಕಾರಯ್ಯನವರು ಫುಲ್ ರಾಂಗ್ ಆಗಿ ಬಿಟ್ರು “ ಏ ಆಯಮ್ಮ ಏನು ವಸ್ತು ಪ್ರದರ್ಶನನ ನೋಡೋಕೆ ಆಯಮ್ಮನ್ನ ಇಲ್ಲಿಂದ ಹೆಂಗೆ ಆಚಿಗೆ ಕಳುಸೋದು ಅಂತ ಟೆನ್ಸನ್ ಆಗಿದೆ ಇದು ಬೇರೆ ಇವನ್ನೆ ಹಿಡಿದು ಒಳಗಾಕ್ರಯ್ಯ” ಅಂದರು ನನಗೆ ಕೈಕಾಲೆಲ್ಲ ನಡುಕ ಶುರುವಾಯಿತು   ಪಿ ಸಿ ಇದ್ದೋನು   “ ಹೋಗ್ಲಿ ಬಿಡಿ ಸಾರ್ ರೌಡಿಗಳನ್ನೇ ನೋಡಿಲ್ಲವಂತೆ  ನೋಡ್ಕೋಡು ಹೋಗಲಿ ಅತ್ಲಗೆ “ ಅಂದ    “ ಸರಿ ಸರಿ ಅಲ್ಲಿ ಕುತ್ಕೋಂಡವಳೆ ನೋಡ್ಕಂಡು ಜಾಗ ಖಾಲಿ    ಮಾಡು “ ಅಂದರು ಮೀಸೆ ಓಂಕಾರಯ್ಯ ಇದನ್ನೆಲ್ಲಾ ನೋಡ್ಕೊಂಡು ಮಂಜಣ್ಣ ನಗ್ತಾ ಇದ್ದರು, ನಾನು ಬಾರಿಮುತ್ತು ಹತ್ರ ಹೋದೆ   ಗಣೇಶ್, ಪಾರ್ಥಸಾರಥಿ ಇಬ್ಬರು ಸಿಕ್ಕಿಲಿಲ್ಲ ಅನ್ನೋ ಕೋಪದಲ್ಲಿ ಶಿಷ್ಯರ ಮೇಲೆಲ್ಲ ಕೂಗಾಡ್ತಿದ್ಲು   “ ನಡು ರೋಡಿನಲ್ಲಿ ನನ್ನ ಕೈಹಿಡಿದು ಏಳೆದಾಡಿ ಅವಮಾಡವ್ನೆ ಅವನ್ನ ಬಿಡಾಕ್ಕಿಲ್ಲ ಹೋಗ್ರು ಎತ್ತಾಕ್ಕಂಡ್ ಬನ್ರಿ ಈ ಪೋಲೀಸ್ನೋರು ಕೈಲಿ ಈ ಕೆಲ್ಸ ಆಗಲ್ಲ”  ಅದೆ ಟೈಂ ಗೆ ನಾನು ಹೋಗಿದ್ದು ನೋಡಿ “ಯಾರ್ಲ ನೀನು ಅಂದಳು “ ನಾನು ಹೀಗೆ …. ನಿಮ್ಮನ್ನ ….  ನೋಡಕೆ ಬಂದಿದೀನಿ “ “ ನನ್ಯಾಕಲ ನೋಡಬೇಕು ಏನಾರ್ ಡೀಲ್ ಇದೀಯ “ “ ಅಂತದೇನಿಲ್ಲ ನಾನು ರೌಡಿಗುಳನೆ ನೋಡಿಲ್ಲ ಅದಕ್ಕೆ …………ನೋಡಣ ಅಂತ …….” ನಾನು ಹೇಳಿದ್ದು ಕೇಳಿ ಭಾರಿಮುತ್ತು ಫುಲ್ ಖುಷಿಯಾಗಿ “ ಏ ಇವನ್ಗೆ ನಮ್ಮ ಕಾರ್ಡ್ ಕೊಡ್ಲ” ಅಂದಳು  ಅವಳ್ ಶಿಷ್ಯ ಜೇಬಿಂದ ಒಂದು ಕಾರ್ಡ್ ತೆಕ್ಕೊಟ್ಟ ಅದರೊಳಗೆ “ ಬಾರಿಮುತ್ತು , ಶಿವಾಜಿನಗರ ಏರಿಯಾ ಮೊಬೈಲ್ ನಂ……………….. 

ಕೊಲೆ – 1 ಲಕ್ಷ, ಅರ್ಧ ಕೊಲೆ- 50 ಸಾವಿರ , ಕೈ ಕಾಲು ತೆಗೆಯಲು – 25 ಸಾವಿರ ಹೆದರಿಸಲು -10 ಸಾವಿರ” ಅಂತ ಪ್ರೀಂಟ್ ಆಗಿತ್ತು ಇನ್ನು ಇಲ್ಲಿದ್ದ್ರರೆ ಕಷ್ಟ ಅಂತ ಆಚೆ ಬಂದೆ  ಮಂಜಣ್ಣನವರು ಸಿಗರೇಟ್ ಸೇದ್ಕೊಂಡು ನಿಂತಿದ್ದರು ಅವರ ಹತ್ರ ಹೋಗಿ “ನಮಸ್ಕಾರ ನೀವು ಮಂಜಣ್ಣ ಅವರು ಅಲ್ಲವ “ “ ಹೌದ್ರಿ ನೀವ್ಯಾರು “ “ ನಾನು ಸತೀಶ್ ಅಂತ ಹೊಸದಾಗಿ ಸಂಪದಕ್ಕೆ ಸೇರಿದೀನಿ “ “ ಹೋ…. ನೀವೇನ್ರಿ ಅದೇನು ಮಾಯೆ ಗೀಯೆ ಅಂತ ಏನೇನೋ ಪದಗಳು ಬರೀತಿರಲ್ಲ ಇಲ್ಲಿಗ್ಯಾಕ್ರಿ ಬಂದ್ರಿ ಈಗತಾನೆ ಗೌಡಪ್ಪನ ಗ್ಯಾಂಗ್ ನ ಬಿಡಿಸಿದಿನಿ ನೀವ್ ಸಿಕ್ಕೊಂಡ್ರೆ ತಿರಗ ಕಷ್ಟ ಇಲ್ಲಿಂದ ಹೋಗಿ ಬಿಡ್ರಿ “ ಅಂದ್ರು ಆಯ್ತು ಅಂತ ಹೇಳಿ ಹೊರಟೆ ಆದರೂ ಕೂತುಹಲ ಮುಂದೇನಾಗುತ್ತೆ ನೋಡೋಣ ಅಂತ ಜನಗಳ ಗುಂಪಿನಲ್ಲಿ ನಿಂತ್ ಕೊಂಡೆ ಅಷ್ಟೊತ್ತಿಗೆ ಒಂದು ಕಾರು ಬಂತು ರಿಯಾಜ್ ಬಂದ ರಿಯಾಜ್ ಬಂದ ಅಂತ ಯಾರೋ ಕೂಗಿದರೂ ನಾನು ಒಬ್ಬ ರೌಡಿನ ನೋಡೋಣ ಅಂತ ಬಂದ್ರೆ ಇಬ್ಬರನ್ನ ನೋಡಿದೆನಲ್ಲ ಅಂತ ಖುಷಿಯಾಯಿತು, ರಿಯಾಜ್ ಸ್ಟೇಷನ್ ಒಳಗೆ ಹೋಗಿ ಐದು ನಿಮಿಷಕ್ಕೆ ಬಾರಿಮುತ್ತು ತನ್ನ ಪಟಾಲಂ ಜೊತೆ ಆಚೆ ಬಂದು “ ರೀ ಓಂಕಾರಯ್ಯ ಆ ಇಬ್ಬರು ಸಿಕ್ಕಿದ್ರೆ ಹೇಳಿಕಳ್ಸಿ ಬಂದು ಒಂದು ಕೈ ನೋಡ್ಕೋತೀನಿ “ ಅಂತ ಹೇಳಿ ಕಾರ್ ಹತ್ಕೊಂಡು ಹೋದಳು,  ಗುಂಪಿನಲ್ಲಿ ಒಬ್ಬರು ದುರ್ಬೀನ್ ನಲ್ಲಿ ಇದನ್ನೆಲ್ಲ ನೋಡ್ತಾ ಇದ್ದರು  ಹತ್ತಿರ ಹೋಗಿ ನೋಡಿದರೆ ಚೇತನ್ (ಚಿಕ್ಕು) ರವರು “ನೀವೇನ್ ಇಲ್ಲಿ” ಅಂದೆ “ ಅದೇ ನಿಮ್ಮನ್ನ ಪೋಲೀಸ್ ನೋರು ಕರ್ ಕೊಂಡು ಬಂದ್ರಲ್ಲ ಏನು ಆಗುತ್ತೊ ನೋಡಣ ಅಂತ ನಾನು ಹಿಂದೆ ಬಂದೆ ಒಳಿಗೆ ಬರಕ್ಕೆ ಭಯ ಆಗಿ ಇಲ್ಲೆ ನಿಂತಿದಿನಿ “ ಅಂದರು “ ಅದ್ ಸರಿ ದುರ್ಬೀನ್ ನಲ್ಲಿ ಏನ್ ನೋಡ್ತಾ ಇದೀರಿ “          “ ಭಾರಿಮುತ್ತು ದುರ್ಬೀನ್ ನಲ್ಲಿ ಹೆಂಗ್ ಕಾಣಸ್ತಳೆ ಅಂತ ನೋಡ್ತಾ ಇದೀನಿ ಸತೀಶ್ ರವರೇ “ ಅಷ್ಟೋತ್ತಿಗೆ ನನ್ನ ಮೊಬೈಲ್ ರಿಂಗ್ ಆಯಿತು ನೋಡಿದರೆ ನನ್ನ ಹೆಂಡತಿ “ ರೀ ಎಲ್ಲಿದೀರ ಆಗ್ಲೆ ಕಡೇ ಪಂಕ್ತಿ ಊಟ ಆಗ್ತಿದೆ ಬೇಗ ಬನ್ರಿ ಊಟ ಮಾಡ್ಕೊಂಡು ಊರು ಸೇರ್ಕೋಳೋಣ “ “ ಈ ಗಲಾಟೆಲಿ ಫಂಕ್ಷನ್ ಗೆ ಬಂದಿದ್ದೆ ಮರೆತು ಹೋಗಿತ್ತು ಬರ್ತೀನಿ ಚೇತನ್ ರವರೇ “ ಅಂತ ಹೊರಟೆ,   ಚೇತನ್ ರವರು ನಾನು ಸರ್ಕಲ್ ಮಾರಮ್ಮನ ದೇವಸ್ಥಾನದ ಹತ್ರ ಹೋಗ್ತಿನಿ ಅಲ್ಲಿ ಏನಾಗುತ್ತೋ ನೋಡೋಣ ಅಂತ ಹೊರಟರು.

 
Rating
No votes yet

Comments