ಸಮಸ್ಯೆಯ ಸುಳಿಯಲ್ಲಿ
ನಮ್ಮ ದೇಶ ಭಾರತ ಸ್ವತಂತ್ರ ಭಾರತ. ನಿವಾಗಿಯು ನಾವು ಸ್ವತಂತ್ರರೇ ಎಂಬ ಪ್ರಶ್ನೆ ನನ್ನನ್ನು ದಿನನಿತ್ಯ ಕಾಡುತ್ತಿರುವ ಸಮಸ್ಯೆ ಮತ್ತೊಂದೆಡೆ ನಾಮಗೆ ನಾವೇ ದಿನನಿತ್ಯ ಒಂದೋಂದು ರೀತಿಯಲ್ಲಿ ಎಲ್ಲರೂ ಸಮಸ್ಯೆಯಿಂದ ಸಮಸ್ಯೆಯ ಕಾಯಿಲೆ ಬಳಲುತ್ತಿದ್ದೇವೆ. ಈ ಸಮಸ್ಯೆ ಎಂಬ ಕಾಯಿಲೆ ನಿನ್ನೆ ಮೊನ್ನೆಯದಲ್ಲ ತೆಲೆತೆಲಾಂತರವಾಗಿ ಬಂದಿದ್ದು ಆದರೆ ಇಂದು ಉಲ್ಬಣಗೊಂಡಿದೆ. ಈ ಉಲ್ಬಣಕ್ಕೆ ಬಹುಮುಖ್ಯವಾಗಿ ರಾಜಕೀಯ ಕಾರಣ, ಆರ್ಥೀಕ ಕಾರಣ, ಕೌಟಂಬಿಕ ಕಾರಣ ಈ ಮೂರು ಬಹು ಮುಖ್ಯ ಕಾರಣವಾಗಿ ಇಂದು ನಮ್ಮ ದೇಶ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಆ ಸುಳಿಯಿಂದ ಹೊರಬರಲಾರದೆ ಒದ್ದಾಡುತ್ತಿದೆ. ರಾಜಕಾರಣಿಗಳು ಇಂದು ಅಧಿಕಾರದ ದಾಹಕಾಗಿ ತಮ್ಮ ಸ್ವಾರ್ತ ಲಾಭಕ್ಕಾಗಿ ಇಂದು ಸಮಸ್ಯೆಗಳನ್ನು ಉದ್ಭವಿಸಿ ಜಗತ್ತನ್ನೆ ಬುಡಮೇಲು ಮಾಡಲು ಹೊರಟ್ಟಿದ್ದಾರೆ. ಮತ್ತೊಂದೆಡೆ ಆರ್ಥಿಕವಾಗಿ ಮುಂದೆ ಬರಲು ಕಾನೂನು ಕಟ್ಟುಪಾಡುಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಹಣ ಮಾಡಲು ತೋಡಗಿದ್ದಾರೆ. ಈ ರೀತಿ ಅಕ್ರಮ ಮಾಡಲು ಅನೇಕ ರೀತಿಯ ಸಮಸ್ಯೆಗಳು ತಾವೇ ಸೃಷ್ಙಿಸಿ ಅದರ ಒಳಗೆ ತಾವೆ ಅಂದರೆ ಜೇಡರ ಹುಳುವಿನಂತೆ ಸಿಲುಕಿ ಸಮಸ್ಯೆಯನ್ನು ತಂದುಕೊಂಡು ಸಾವನ್ನು ತಂದುಕೊಳ್ಳುತ್ತಿದ್ದಾರೆ. ಮತ್ತೂಂದು ಬಹು ಮುಖ್ಯವಾದ ಸಮಸ್ಯೆ ಎಂದರೆ ಜಗತ್ತಿನ ಯಾವುದೆ ಸಮಸ್ಯೆಯನ್ನಾದರೂ ಬಗೆಹರಿಸಬಹುದು ಆದರೆ ಕೌಟಂಬಿಕ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟಸಾಧ್ಯವಾದ ಮಾತಾಗಿದೆ. ಏಕೆಂದರೆ ಇಂದು ಒಂದೇ ಕುಟುಂಬಗಳಲ್ಲಿ ಅಣ್ಣ ತಂಮ್ಮಂದಿರು ಅಕ್ಕ ತಂದಿಯರು ನಾದಿನಿಯರು ಮಕ್ಕಳು ಮೊಮ್ಮೊಕ್ಕಳು ವಾಸಿಸುತ್ತಿರುವ ಕುಟುಂಬಗಳು ತೀರಾ ಕಡಿಮೆ ಆಗುತ್ತಿವೆ. ಇದಕ್ಕೆಲ್ಲ ಕಾರಣವೆಂದರೆ ಕುಟುಂಬಗಳಲ್ಲಿ ಅಂತಕಲಹ. ಒಬ್ಬರೊಬ್ಬರನ್ನು ಅರಿತು ತಾಳ್ಮೆಯಿಂದ ಜೀವನ ನೆಡಸುವಲ್ಲಿ ವಿಫಲವಾದ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮನುಷ್ಯ ಇಂದು ಮನುಷ್ಯನ ಸಂಬಂಧಗಳನ್ನು ಕ್ಷಣ ಕ್ಷಣಕ್ಕೂ ಕಳೆದು ಕೊಳ್ಳುತ್ತಾ ಹೋಗುತ್ತಿದ್ದಾನೆ. ಮಾನವೀಯತೆ ಗುಣಗಳು ಮಾಯವಾಗುತ್ತಿವೆ. ನಮ್ಮ ಜನರಲ್ಲಿ ಸ್ವಾರ್ತ ಮನೋಭಾವನೆಯಿಂದ ದ್ವೇಷ, ಅಸುಯೆ, ಮದ, ಮತ್ಸರಗಳನ್ನು ತಮ್ಮ ಜೀವನದಲ್ಲಿ ಚಾಚೂ ತಪ್ಪದೇ ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಬಳುವಳಿಯಾಗಿ ಹುಟ್ಟುವಾಗಲೇ ಕಲಿಸುತ್ತಾರೆ. ಈ ಒಂದು ನಿಟ್ಟಿನಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಠಿಯಾಗುತ್ತಿದೆ. ಕುಟುಂಬಗಳ ಸಮಸ್ಯೆಗಳಿಂದ ಹೊರಬರಲಾರದೆ ಮತ್ತು ದೇಶದ ಏಳ್ಗೆಗೆ ಶ್ರಮಿಸುವಲ್ಲಿ ವಿಫಲರಾಗಿದ್ದಾರೆ. ಕಣ್ಣು ತೆರೆದು ನೋಡಿದರು ಬರಿ ಸಮಸ್ಯೆಗಳೇ ತುಂಬಿ ಕೊಂಡಿವೆ ಎತ್ತಾ ನೋಡಿದರು ಸಮಸ್ಯೆಯ ಅಲೆಯೆ.
"ಸಮಸ್ಯೆಯ ಸುಳಿಯಲ್ಲಿ ನಾವು ನಾವಿರದೆ
ಸಮಸ್ಯೆಯ ಆಚೆಯಿಂದ ಹೊರ ಬನ್ನಿ ಮನದಾಳದಿಂದ
ನಿಶ್ ಕಲ್ಮಶವಾದ ಮನದಿಂದ ನಿಶ್ ಸ್ವಾರ್ಥದಿಂದ
ನಮ್ಮ ,ನಮ್ಮ ದೇಶದ ಏಳ್ಗೆಗಾಗಿ ಶ್ರಮಿಸ ಬನ್ನಿ ಓ ಮನುಜರೇ"
ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.