ಕನ್ನಡ ಶಾಲೆಯ ಉಪ್ಪಿಟ್ಟು

ಕನ್ನಡ ಶಾಲೆಯ ಉಪ್ಪಿಟ್ಟು

ಕವನ

          ಎಸ್.ಎಮ್. ಕೃಷ್ಣರ ಸರ್ಕಾರ ಬಂದ ಮೇಲೆ ಅನ್ನದಾಸೋಹ ಅನ್ನೋ ಬಿಸಿ ಊಟದ ಕಾರ್ಯಕ್ರಮ ಬಂತು. ಅದನ್ನು ಈಗ ಎಷ್ಟೋ ಕಡೆ ISKCONನವರು ನಿರ್ವಹಿಸುತ್ತಿದ್ದಾರೆ ಅದರ ಬಗ್ಗೆಯೂ ಸಾಕಷ್ಟು ಬಿಸಿ-ಬಿಸಿ ಚರ್ಚೆಗಳಾಗಿವೆ. ಈ ಸರ್ಕಾರಿ ಊಟ ಅದೆಷ್ಟು ರುಚಿಯಾಗಿರುತ್ತದೋ ಆ ಕೃಷ್ಣ ಪರಮಾತ್ಮನೇ ಬಲ್ಲ!ಅದೇನೆ ಇರಲಿ ನಾವು ಚಿಕ್ಕವರಾಗಿದ್ದಾಗ ೭೦-೮೦ರ ದಶಕದಲ್ಲಿ ಶಾಲೆಗಳಲ್ಲಿ ಸಾಯಂಕಾಲ ಶಾಲೆ ಬಿಡುವ ಹೊತ್ತಿಗೆ ಬಿಸಿ-ಬಿಸಿ ಉಪ್ಪಿಟ್ಟು ಮಾಡಿ ಹಾಕುತ್ತಿದ್ದರು. ಅದು ಬಹಳಷ್ಟು ಜನ ಹುಡುಗರಿಗೆ ಪ್ರಿಯವಾಗಿತ್ತು ಆದರೆ ಕೊಡುತ್ತಿದ್ದುದು ಮಾತ್ರ ಬಹಳ ಸ್ವಲ್ಪ ಮತ್ತು ಟೀಚರುಗಳೇ ಅಧಿಕ ಭಾಗ ತಿನ್ನುತ್ತಾರೆಂದು ಹುಡುಗರಲ್ಲಿದ್ದ ನಂಬಿಕೆ, ಹಾಗಾಗಿ ಆ ಜಮಾನಾದಲ್ಲಿ ಒಂದು ಹಾಡು ಚಾಲ್ತಿಯಲ್ಲಿತ್ತು. ಅದು ಹೀಗಿದೆ:

ಅಮ್ಮ ನೋಡೆ ಕಣ್ಬಿಟ್ಟು,
ಕನ್ನಡ ಶಾಲೆಯ ಉಪ್ಪಿಟ್ಟು,
ಮಾಷ್ಟರು ತಿನ್ನುವರ್ ಅಷ್ಟಟ್ಟು,
ನಮಗೇ ಕೊಡುವರು ಇಷ್ಟಿಟ್ಟು.

Comments