"ಮಹಾಭಾರತದಲ್ಲೊಬ್ಬ"-ಶಕುನಿಯ ತಂತ್ರ

"ಮಹಾಭಾರತದಲ್ಲೊಬ್ಬ"-ಶಕುನಿಯ ತಂತ್ರ

                       ಗಾಂಧಾರಿಯ ಪಿತನಾದ ಸುಬಲ ಹಸ್ತಿನಾವತಿಗೆ ಹೊರಟಿದ್ದ. ದಾರಿಯಲ್ಲಿ ಅವನೊಂದು ಗರಿಕೆಯನ್ನು  ಎಡವಿ ಸಿಟ್ಟಿನಿಂದ ಅದನ್ನು ಬೇರು ಸಹಿತ ಕಿತ್ತು ಹಾಕಿದ.  ಇದನ್ನು  ನೋಡಿದ ಕೌರವ ಗರಿಕೆಯ ಬೇರನ್ನು ಬಿಡದ ಇವನು ಮನುಷ್ಯನನ್ನು ಬಿಟ್ಟಾನೆಯೇ ?  ಎಂದು ಬಗೆದು ಸುಬಲ ರಾಜನ ಮಕ್ಕಳಾದ ನೂರು ಮಂದಿ ಸೌಬಲರನ್ನು   ಸೆರೆಮನೆಗೆ ತಳ್ಳಿ  ಒಬ್ಬನಿಗೆ ಮಾತ್ರ ಸಾಕಾಗುವಷ್ಟು  ಅನ್ನವನ್ನು ಸೆರೆಮನೆಗೆ ಕಳುಹಿಸ ತೊಡಗಿದ. ಆಗ ಸೌಬಲರೆಲ್ಲ ಒಟ್ಟು ಗೂಡಿ " ಈ ಅನ್ನವನ್ನು ಕೌರವ ವಂಶ ನಾಶ ಮಾಡಬಲ್ಲ  ಒಬ್ಬ ತಿಂದು ಬದುಕಲಿ. ಯಾರು  ಸೂಜಿಯಿಲ್ಲದೇ ಒಂದು ಮೂಳೆಗೆ ತೂತು ಕೊರೆದು ದಾರ ಪೋಣಿಸುತ್ತಾರೋ  ಅವರಿಗೆ ಅಂಥ  ಸಾಮರ್ಥ್ಯವುಂಟು ಎಂದರು.

                          ಸೌಬಲರಲ್ಲಿ ಒಬ್ಬನಾದ ಶಕುನಿಯು,  ವಾಸನೆ ಹೊಡೆಯುತ್ತಿದ್ದ ಒಂದು ಮೂಳೆಗೆ ಅನ್ನದ  ಅಗುಳನ್ನು ಅಂಟಿಸಿ ಒಂದು ಇರುವೆಯ ಕಾಲಿಗೆ ಸಣ್ಣ ದಾರವೊಂದನ್ನು ಕಟ್ಟಿ  ಅನ್ನದ ಅಗುಳಿನ ಬಳಿ ಬಿಟ್ಟ. ಆ ಅಗುಳಿಗೆ ಆಸೆಪಟ್ಟ ಇರುವೆ ಮೂಳೆಯನ್ನು ಕೊರೆದು ತೂತು ಮಾಡಿ ತನ್ನ ಕಾಲಿಗೆ ಕಟ್ಟಿದ ದಾರವನ್ನೂ ಆಚೆ ಎಳೆದು ಕೊಂಡು ಹೋಯಿತು. ಶಕುನಿಯೇ  ಈ ಕಾರ್ಯಕ್ಕೆ ಸಮರ್ಥ  ಎಂದರಿತ  ಉಳಿದ ಸಹೋದರರು ಶಕುನಿಗೆ ಈ  ಆಹಾರವನ್ನು ನೀಡುತ್ತಾ ತಮ್ಮ ಪ್ರಾಣ ತ್ಯಜಿಸಿದರು.  ತನ್ನ ಸಹೋದರರ ಎಲುಬುಗಳಿಂದ ಪಗಡೆಯ ದಾಳವನ್ನು ಪಗಡೆಕಾಯಿಗಳನ್ನು ಮಾಡಿಕೊಂಡ ಶಕುನಿ  ಕೌರವ ವಂಶದ ನಿರ್ನಾಮಕ್ಕೆ ನಿರ್ಧರಿಸಿದ.  ಒಂಟಿಯಾಗಿ ಸೆರೆಮನೆಯಲ್ಲಿರುವ ಶಕುನಿಯಿಂದ ತನಗೆ ಅಷ್ಟೇನೂ ಅಪಾಯವಿಲ್ಲೆಂದು ಭಾವಿಸಿದ ಧುರ್ಯೋಧನ  ತನ್ನ ಅರಮನೆಯಲ್ಲಿ ಶಕುನಿಯನ್ನು ತಂದು ಇರಿಸಿಕೊಂಡ.

                              ಶಕುನಿ ಇದೇ ಪಗಡೆಕಾಯಿಗಳನ್ನು ಬಳಸಿ ಪಗಡೆಯಾಟದಲ್ಲಿ ಪಾಂಡವರನ್ನು ಸೋಲಿಸಿ ಪಾಂಡವರ ವನವಾಸಕ್ಕೂ ಕೌರವ ಪಾಂಡವರ ಯುದ್ದಕ್ಕೂ ಕಾರಣನಾಗಿ  ಕೌರವ ವಂಶ ನಿರ್ನಾಮ ಮಾಡಿದ .

 

  ಚಿತ್ರಕೃಪೆ : ಅಂತರ್ಜಾಲ

Rating
No votes yet

Comments