ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ '
ನವಂಬರ ೯ ಏನಿದರ ವಿಶೇಷ ಎಂಬ ವಿಚಾರ ಬಂತು, ಥಟ್ಟನೆ ಒಳೆದದ್ದು ಕನ್ನಡ ರಾಜ್ಯೋತ್ಸವ ತಿಂಗಳ ೯ ನೆ ದಿನ, ಮತ್ತೆ ಯೋಚಿಸಿದೆ ತಕ್ಷಣ ನೆನಪಿಗೆ ಬಂದದ್ದು ಚಿತ್ರ ನಟ ಶಂಕರ ನಾಗ ಜನ್ಮದಿನವೆಂದು. ಶಂಕರ ನಾಗ ಗತಿಸಿ ದಶಕವೆ ಸಂದು ಹೋಗಿದೆ, ಆದರೂ ಆತ ನಮ್ಮೆಲ್ಲರ ನೆನಪಿನಲ್ಲಿದ್ದಾನೆ. ಆತ ಬದುಕಿದ್ದ ಕಾಲದಲ್ಲಿ ಆತನೊಬ್ಬ ಜನಪ್ರಿಯ ನಟನಾಗಿದ್ದ. ಆತನಿಗೆ ಬಾಕ್ಸ್ ಆಫೀಸ್ ಚರಿಷ್ಮಾ ಇತ್ತು. ಕೆಲವೆ ಕೆಲವು ಚಿತ್ರಗಳನ್ನು ಬಿಟ್ಟರೆ ಉಳಿದವೆಲ್ಲ ಬಾಕ್ಸ್ ಆಫೀಸ್ ಮಸಾಲೆ ಫಾರ್ಮುಲಾ ಗಳ ಚಿತ್ರಗಳೆ. ನನಗೆ ನಟನಾಗಿ ಶಂಕರ ನಾಗಗಿಂತ ಅನಂತನಾಗ ಇಷ್ಟ. ಆದರೂ ಶಂಕರನಿಗಿರುವ ಜನಪ್ರಿಯತೆ ನನ್ನನ್ನು ಆತನನ್ನು ಕುರಿತು ಚಿಂತಿಸುವಂತೆ ಮಾಡಿತು, ಅದರ ಫಲವೆ ಈ ಲೇಖನ.
ಶಂಕರ ನಾಗ ಗಿರೀಶ ಕಾರ್ನಾಡರ ' ಒಂದಾನೊಂದು ಕಾಲದಲ್ಲಿ ' ಚಿತ್ರದ ಮೂಲಕ ಕನ್ನಡ ಚಲನ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟ. ಆ ಚಿತ್ರದ ಅಭಿನಯಕ್ಕೆ ರಾಷ್ಟ್ರಮಟ್ಟದ ಅತ್ಯತ್ತಮ ನಟ ಪ್ರಶಸ್ತಿ ಪಡೆದ.ಕನ್ನಡಕ್ಕೆ ಸಮರ್ಥ ನಟನೊಬ್ಬನ ಆಗಮನವಾಗಿತ್ತು. ಆನ ಜನಸಾಮಾನ್ಯರ ನಟನಾಗಿದ್ದ. ಆತನ ಅಭಿನಯದ ಯಾವ ಚಿತ್ರಗಳೂ ನಿರ್ಮಾಪಕನ ಕೈಕಚ್ಚಲಿಲ್ಲ ಇದು ಆತನ ಚಿತ್ರಗಳ ವಿಶೇಷವಾಗಿತ್ತು, ಆತನನ್ನು ಒಬ್ಬ ಯಶಸ್ವಿ ಕಮರ್ಸಿಯಲ್ ನಟನೆನ್ನಬಹುದು. ತಕ್ಷಣ ನೆನಪಿಗೆ ಬರಬಹುದಾದ ಆತನ ಚಿತ್ರಗಳೆಂದರೆ ಒಂದಾನೊಂದು ಕಾಲದಲ್ಲಿ, ಮಿಂಚಿನ ಓಟ, ಎಕ್ಸಿಡೆಂಟ್, ಆಟೋರಾಜ, ಸಾಂಗ್ಲಿಯಾನಾ, ಸೀತಾರಾಮ ಮುಂತಾದವನ್ನು ಹೆಸರಿಸಬಹುದು. ನಟನಾಗಿ ತನ್ನ ಪ್ರಥಮ ಚಿತ್ರವನ್ನು ಬಿಟ್ಟರೆ ಅದ್ಭುತವಾದ ಬೇರೆ ಚಿತ್ರಗಳು ಬರಲಿಲ್ಲ ಎನ್ನುವುದು ಅಷ್ಟೆ ಸತ್ಯ.
ಸುಮ್ಮನೆ ಶಂಕರನಾಗ ಬದುಕನ್ನು ಅವಲೋಕಿಸುತ್ತ ಹೋದರೆ ನಮಗೆ ಆತನ ಬಹುಮುಖ ವ್ಯಕ್ತಿತ್ವದ ಪರಿಚಯ ನಮಗಾಗುತ್ತದೆ. ನಟನಾಗಿ ಆತ ಉಳಿದ ರಂಗಗಳಲ್ಲಿ ಆತ ಮಾಡಿದ ಸಾಧನೆ ಅತ್ಯದ್ಭುತ. ನಿರ್ಧೇಶಕನಾಗಿ ಅತ್ಯತ್ತಮ ಚಿತ್ರಗಳನ್ನು ನೀಡಿದ. ಶಶಿ ಕಪೂರ ನಿರ್ಮಾಣದ ಕಾರ್ನಾಡ ನಿರ್ದೇಶನ' ಉತ್ಸವ ' ಚತ್ರದಲ್ಲಿ ರೇಖಾ ಮತ್ತು ನೀನಾಗುಪ್ತ ಜೊತೆ ಅಭಿನಯಿಸಿದ. ನಟ ಶಂಕರ ನಾಗಗಿಂತ ನನಗೆ ನಿರ್ದೇಶಕ ಶಂಕರನಾಗ ಬಹಳ ಇಷ್ಟವಾಗುತ್ತಾನೆ. ಆತನ ನಿರ್ದೇಶನದ ಚಿತ್ರಗಳು ಇತ್ತ ಕಮರ್ಸಿಯಲ್ಲೂ ಅಲ್ಲದ ಅತ್ತ ಕಲಾತ್ಮಕ ಪ್ರಾಕಾರದ ಚಿತ್ರಗಳೂ ಅಲ್ಲದ ಆಫ್ ಬೀಟ್ ಚಿತ್ರಗಳು. ಅವು ಉತ್ತಮ ವಿಮರ್ಶಯಲ್ಲದೆ ಹಣಗಳಿಕೆಯಲ್ಲಿ ನಿರ್ಮಾಪಕರ ಕೈಕಚ್ಚಲಿಲ್ಲ. ಇವು ಯಾವುವೂಬೇಡ, ಆರ್ ಕೆ ನಾರಾಯಣ ರವರ ಕೃತಿಗಳನ್ನಾಧರಿಸಿ ಎಂ.ನರಸಿಂಹನ್ ನಿರ್ಮಾಣದ ' ಮಾಲ್ಗುಡಿ ಡೇಸ್ ' ಧಾರಾವಾಹಿಯನ್ನು ನಿರ್ದೇಶಿಸಿದವರು ಶಂಕರನಾಗ. ಇದೊಂದು ದೇಶಾದ್ಯಂತ ಮೆಚ್ಚುಗೆ ಪಡೆದ ಧಾರಾವಾಹಿ. ಶತಮಾನಗಳು ಸಂದರೂ ಇದೊಂದು ಧಾರಾವಾಹಿಗಳಲ್ಲಿ ಶ್ರೇಷ್ಟವಾದ ಸಾರ್ವಕಾಲಿಕ ಧಾರಾವಾಹಿಗಳ ಪೈಕಿ ಇದೂ ಸಹ ಒಂದು ಎಂದು ದಾಖಲಾಗಿದೆ.
ಅಲ್ಲದೆ ಶಂಕರನಾಗ ಜನತಾದಳದೊಂದಿಗೆ ಗುರುತಿಸಿಕೊಂಡು ಅನಂತನಾಗ ಜೊತೆ ರಾಮಕೃಷ್ಣ ಹೆಗಡೆ, ದೇವೆಗೌಡ, ಜೆ.ಹೆಚ್.ಪಟೇಲ್, ಎಂ.ಪಿ.ಪ್ರಕಾಶ ಜೊತೆ ರಾಜ್ಯವ್ಯಾಪಿಯಾಗಿ ಸಂಚರಿಸಿ ಆ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ. ಶಂಕರ ಕಂಟ್ರಿಕ್ಲಬ್ ಸ್ಥಾಪಿಸುತ್ತಾರೆ. ಕನ್ನಡ ಚಲನಚಿತ್ರಕ್ಕೆ ಅನುಕೂಲ ಮಾಡಿಕೊಡಲು ' ಸಂಕೇತ ಸ್ಟುಡಿಯೋ ' ಸ್ಥಾಪಿಸಿ ಡಬ್ಬಿಂಗ್ ರೆ ರೆಕಾರ್ಡಿಂಗ್ ಗಳಿಗೆ ಅನುಕೂಲ ಕಲ್ಪಿಸಿ ಕೊಡುತ್ತಾರೆ, ನಮ್ಮ ದುರ್ದೈವವೆಂದರೆ ನಮ್ಮವರು ಅವುಗಳ ಸದುಪಯೋಗ ಪಡೆಯಲಿಲ್ಲ.
ಆತ ಕಟ್ಟಿದ ಕಂಟ್ರಿಕ್ಲಬ್ ನಿರ್ಮಿಸಿದ ನಿರ್ದೇಶಿಸಿದ ಚಲನ ಚಿತ್ರಗಳು ಮಾಲ್ಗುಡಿ ಡೇಸ್ ಧಾರಾವಾಹಿ ಆತ ಕನಸಿದ ಮಾಡಿದ ಎಲ್ಲ ಹೊಸ ಹೊಸ ಪ್ರಯೋಗಗಳು ಆತನ ಪಾದರಸದಂತಹ ಚಟುವಟಿಕೆಯ ಉದಾಹರಣೆಗಳು. ಆತ ರಾಜ ಕುಮಾರ ಅಭಿನಯದ ' ಒಂದು ಮುತ್ತಿನ ಕಥೆ ' ಚಿತ್ರವನ್ನು ನಿರ್ದೇಶಿಸಿದ. ಇವೆಲ್ಲವುಗಳು ಆತನ ಸಾಧನೆಯ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ. ಗಿರೀಶ ಕಾರ್ನಾಡರ ಕೃತಿ ' ನಾಗ ಮಂಡಲ ' ವನ್ನು ಚಲನಚಿತ್ರವಾಗಿ ನಿರ್ಮಿಸಿ ನಿರ್ದೇಶಿಸ ಬೇಕೆಂದಿದ್ದ. ಅದಕ್ಕಾಗಿ ಮುಹೂರ್ತ ನಡೆಸಲು ಬಿಜಾಪುರ ಜಿಲ್ಲೆಯ ಸ್ಥಳವೊಂದಕ್ಕೆ ತೆರಳುತ್ತಿರುವಾಗ ಡಾವಣಗೆರೆ ಬಳಿ ಆತ ಹೋಗುತ್ತಿದ್ದ ಕಾರಿಗೆ ಲಾರಿ ಯೊಂದು ಅಪ್ಪಳಿಸಿ ಸ್ಥಳದಲ್ಲೆ ಅಸು ನೀಗಿದ. ಈ ರೀತಿಯಾಗಿ ನಟನೊಬ್ಬನ ಬದುಕು ಅಂತ್ಯ ಕಂಡಿದ್ದು ಒಂದು ವಿಧಿಯ ವಿಪರ್ಯಾಸ. ಕ್ರಿಯಾಶೀಲ ಮನಸುಗಳಿಗೆ ಶಂಕರನಾಗ ಒಬ್ಬ ರೋಲ್ ಮಾಡಲ್ಎಂದು ನಿಸ್ಸಂಶಯವಾಗಿ ಹೇಳಬಹುದು.
Comments
ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ '
In reply to ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ ' by swara kamath
ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ '
ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ '
In reply to ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ ' by sathishnasa
ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ '
In reply to ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ ' by H A Patil
ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ '
In reply to ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ ' by rohit kamath
ಉ: ಪಾದರಸ ವ್ಯಕ್ತಿತ್ವದ ' ಶಂಕರ ನಾಗ್ '