ದೇವರುಗಳ ಹೊಸ ಪ್ರತಿಮೆಗಳ ಅಗತ್ಯ-ಎಚ್ಚೆಸ್ವಿ
ನಮ್ಮ ಹೊಸ ಯುಗ ಹೊಸ ದೇವತೆಗಳನ್ನ ಅಪೇಕ್ಷೆಪಡತಾ ಇದೆ. ಹೊಸ ಪ್ರತಿಮೆಗಳನ್ನ ಅದು ನಿರೀಕ್ಷೆ ಮಾಡತಾ ಇದೆ. ಹೊಸ ಇಮೇಜಸ್ ಬೇಕಾಗಿದೆ ನಮಗೆ. ಹಳೆಯ ಪ್ರತಿಮೆಗಳನ್ನ ನೀವು ಏನು ಮಾಡಿದರೂ ಅದನ್ನ ಹೊಂದಾಣಿಕೆ ಮಾಡೋದು ಕಷ್ಟ ಆಗುತ್ತೆ, ಕಿತ್ತು ಹಾಕಲೇಬೇಕು. ಚಕ್ರಗಳನ್ನ ಗದೆಗಳನ್ನ, ಮಾರಕಾಸ್ತ್ರಗಳನ್ನ ನಮ್ಮ ದೇವತೆಗಳ ಹಸ್ತಗಳಿಂದ ಕಿತ್ಹಾಕಲೇಬೇಕು. ಯಾವ ದೇವರು ಬರಿಗೈಲಿ ಇರತಾರೋ ಅವರೇ ನಮಗೆ ಪ್ರಿಯರಾದವರು. ಪಾಪ, ಕೈಕೊಟ್ಟು ನಿಂತ್ಕೊಂಡು ಮೊಳೆ ಹೊಡಿಸ್ಕೊಂಡಿದಾನಲ್ಲ- ಏಸುಕ್ರಿಸ್ತ, ಎಲ್ಲವನ್ನೂ ಬಿಟ್ಟು ನಿಂತ್ಕೊಂಡಿದಾನಲ್ಲ-ಗೊಮಟೇಶ್ವರ, ಅಥವಾ ಕಡೆಗೋಲು ಹಿಡಕೊಂಡು ನಿಂತಿದಾನಲ್ಲ-ಕೃಷ್ಣ, ಗದೆಯಲ್ಲ-ಕಡೆಗೋಲನ್ನು. ಇದು ಕ್ರಿಯಾಶೀಲತೆ. ದೇವತೆಗಳಲ್ಲಿ ಈ ತರಹ ಪರಿವರ್ತನೆ ಆದರೆ ನಿಮ್ಮ ಮನಸ್ಸಿನಲ್ಲಿ ಪರಿವರ್ತನೆ ಬರುತ್ತದೆ ಅದು. ನೀವು ಹೆಂಡತಿ ಜತೆ ಮಲಗಬೇಕಾದರೂ ಕೂಡ ಬಿಲ್ಲುಬಾಣ ಹಿಡಕೊಂಡು ಮಲಗ್ತೀನಿ ಅಂತಂದ್ರೆ ಅವನೆಂಥಾ ದೇವರು ಅಂತ. ಕರುಣಾಕರ ನೀನೆಂಬುವದೇತಕೋ ಭರವಸೆ ಇಲ್ಲೆನಗೆ. ಬಾಣಬಿಲ್ಲು ನೀನು ಹಿಡಕೊಂಡರೆ ಎಂಥಾ ಕರುಣಾಕರ ನೀನು? ಅಂದರೆ, ಪ್ರತಿಮೆಯನ್ನ ಒಡೀಬೇಕಾಗತ್ತೆ. ಅದು ಇವತ್ತಿನ ಅಗತ್ಯ. ಈ ಕಾಲಕ್ಕೆ ಬೇಕಾದ ಪ್ರತಿಮೆಗಳನ್ನ ನಾವು ನಿರ್ಮಿಸಿಕೊಳ್ಳಲೇಬೇಕು.
[ಸಂಪದದಲ್ಲಿ ಕವಿ ಡಾ||ಎಚ್. ಎಸ್. ವೆಂಕಟೇಶಮೂರ್ತಿಯವರ ಸಂದರ್ಶನ-ಪಾಡ್ಕ್ಯಾಸ್ಟ್ ನಿಂದ ಆಯ್ದ ಭಾಗ- ನಿಮ್ಮ ಚಿಂತನೆಗಾಗಿ ]