ವಿದ್ಯುನ್ಮಾನ ಮಾದ್ಯಮಗಳ ನಿಯಂತ್ರಣ
ವಿದ್ಯುನ್ಮಾನ ಮಾದ್ಯಮಗಳನ್ನು ನಿಯಂತ್ರಿಸುವ ಕುರಿತಾದ ಚರ್ಚೆಗಳು ಈಗ ದೇಶದಾದ್ಯಂತ ನಡೆಯುತ್ತಿವೆ. ಮುಖ್ಯವಾಗಿ ಖಾಸಗಿ ಟಿ.ವಿ.ವಾಹಿನಿಗಳು ಪ್ರಸಾರ ಮಾಡುತ್ತಿರುವ ಕೆಲವು ಕಾರ್ಯಕ್ರಮಗಳು ಜನಸಾಮಾನ್ಯರಲ್ಲಿ ಮುಜುಗರವನ್ನು ಉಂಟು ಮಾಡುತ್ತಿವೆ. ಸುದ್ದಿವಾಹಿನಿಗಳು ಮುಖ್ಯವಲ್ಲದ ಹಾಗೂ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರುವಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ. ಇಂತಹ ಕಾರ್ಯಕ್ರಮಗಳು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವ ಕಾರ್ಯಕ್ರಮಗಳ ಪ್ರಸಾರ ಕೇವಲ ಕನ್ನಡದ ಸುದ್ದಿ ವಾಹಿನಿಗಳಿಗಷ್ಟೆ ಮೀಸಲಾಗಿಲ್ಲ,ಬದಲಾಗಿ ಹಿಂದಿ ಸೇರಿದಂತೆ ಎಲ್ಲಾ ಭಾಷಾ ವಾಹಿನಿಗಳು ಮತ್ತು ಇಂಗ್ಲೀಷ್ ವಾಹಿನಿಗಳಲ್ಲೂ ಸಾಮಾನ್ಯವಾಗಿದೆ.
ಭಾರತದಲ್ಲಿ ರೇಡಿಯೋ ಹಾಗೂ ದೂರದರ್ಶನವನ್ನು ಅಭಿವ್ರುದ್ದಿಯನ್ನು ಉತ್ತೇಜಿಸುವ ಸಲುವಾಗಿ ಪರಿಚಯಿಸಲಾಯಿತು. ತಂತ್ರಜ್ನಾನದಲ್ಲಾದ್ ಪ್ರಗತಿಯ ಫಲವಾಗಿ ಉಪಗ್ರಹ ವಾಹಿನಿಗಳ ಆಗಮನ ಭಾರತದ ಮಾದ್ಯಮ ರಂಗವನ್ನು ಪ್ರವೇಶಿಸಿದವು.ನಿಮಗೆ ಆಶ್ಚರ್ಯವಾಗಬಹುದು ಭಾರತದಲ್ಲಿ ಇಂದು ಸುಮಾರು ೬೦೦ಕ್ಕೂ ಹೆಚ್ಚು ಉಪಗ್ರಹ ವಾಹಿನಿಗಳು ಪ್ರಸರಣದಲ್ಲಿ ತೊಡಗಿವೆ. ಆದರೆ ಇವುಗಳು ಎಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ ಎಂಬುದು ಇಂದಿಗೂ ಚರ್ಚಾಸ್ಪದ ವಿಷಯವಾಗಿಯೇ ಉಳಿದಿವೆ.
ಅಭಿವ್ರುದ್ದಿಗೆ ಪೂರಕವಾದ ಹಾಗೂ ಮಾಹಿತಿಯಾದರಿತ ಕಾರ್ಯಕ್ರಮಗಳಿಗೆ ಬದಲಾಗಿ ಮನರಂಜನೆ,ಅಪರಾದ,ರಿಯಾಲಿಟಿ ಷೋಗಳ ಹೆಸರಿನಲ್ಲಿ ಮಾನಸಿಕ ಹಿಂಸೆಯನ್ನು ಉತ್ತೇಜಿಸುವ ಹಾಗೂ ಅತೀರಂಜನೀಯವಾದ್ ಕಾರ್ಯಕ್ರಮಗಳಿಗೆ ಟಿ.ವಿ.ವಾಹಿನಿಗಳು ಹೆಚ್ಚು ಒತ್ತು ನೀಡುತ್ತಿವೆ.
ಇಂತಹ ಕಾರ್ಯಕ್ರಮಗಳಿಂದ ಬೇಸತ್ತ ಸಾರ್ವಜನಿಕರು, ಮಾದ್ಯಮರಂಗದ ಚಿಂತಕರು, ಹಾಗೂ ಬುದ್ದಿಜೀವಿಗಳು ವಿದ್ಯುನ್ಮಾನ ಮಾದ್ಯಮಗಳಿಗೆ ಅವುಗಳು ಪ್ರಸಾರ ಮಾಡುವ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಸಲುವಾಗಿ ನಿಯಂತ್ರಣ ವ್ಯವಸ್ತೆಯೊಂದನ್ನು ಜಾರಿಗೆ ತರಬೇಕೆಂದು ಈ ದಶಕದ ಆರಂಭದಿಂದಲೂ ಒತ್ತಾಯಿಸುತ್ತಲೆ ಬಂದಿದ್ದಾರೆ.
ಈ ವಿವಾದಕ್ಕೆ ಈಗ ಭಾರತೀಯ ಪತ್ರಿಕಾ ಮಂಡಳಿಯ ಮುಖ್ಯಸ್ತರಾದ ನ್ಯಾ.ಮಾರ್ಕಂಡೇಯ ಖಟ್ಜು "ಭಾರತದ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರ ಜೀವನ ಇಂದು ನರಕ ಸದ್ರುಶವಾಗಿದೆ. ಆರೋಗ್ಯ. ನ್ಯೆರ್ಮಲ್ಯ, ಶಿಕ್ಷಣ ಮುಂತಾದ ಸಾಮಾಜಿಕ ಮತ್ತು ಆರ್ಥಿಕ ಸವಲತ್ತುಗಳಿಂದ ಈ ಜನರು ಇನ್ನೂ ದೂರವೇ ಉಳಿದಿದ್ದಾರೆ, ಆದರೆ ಇವರನ್ನು ಪ್ರತಿನಿದಿಸಬೇಕಿದ್ದ ಮಾದ್ಯಮಗಳು ಚಲನಚಿತ್ರನಟರು ಮತ್ತು ಅವರ ಜೀವನಶ್ಯೈಲಿ, ಫ್ಯಾಷನ್ ಷೋ ಗಳು,ಭವಿಷ್ಯ ಹಾಗೂ ರಿಯಾಲಿಟಿ ಶೋಗಳ ಪ್ರಸರಣದಲ್ಲಿ ನಿರತವಾಗಿವೆ. ಟಿ.ವಿ ವಾಹಿನಿಗಳು ಪ್ರಸಾರ ಮಾಡುವ ಇಂತಹ ಕಾರ್ಯಕ್ರಮಗಳಿಗೆ ನಿಯಂತ್ರಣ ಏರುವ ಸಲುವಾಗಿ ಈಗಿರುವ ಪತ್ರಿಕಾ ಮಂಡಳಿಯನ್ನು ವಿಶಾಲಗೊಳಿಸಿ ಮಾದ್ಯಮ ಮಂಡಳಿಯನ್ನು ರಚಿಸಬೇಕೆಂಬ ಸಲಹೆ ಮಾಡಿದ್ದಾರೆ. ನ್ಯಾ.ಖಟ್ಜುರವರ ಕೆಲವು ಅಭಿಪ್ರಾಯಗಳು ಚರ್ಚೆಗೆ ಅರ್ಹವೆನಿಸಿದರೂ ಅವರು ಪತ್ರಕರ್ತರ ಗುಣಮಟ್ಟದ ಕುರಿತು ಆಡಿರುವ ಮಾತುಗಳನ್ನು ಯಾರು ಒಪ್ಪಲು ಸಾದ್ಯವಿಲ್ಲ.ಪತ್ರಿಕಾ ಮಂಡಳಿಯ ಮುಖ್ಯಸ್ತರಾದವರಿಗೆ ಈ ರೀತಿಯ ಮಾತುಗಳು ಶೋಬೆ ತರುವುದಿಲ್ಲ.
ಇದಕ್ಕೆ ಪ್ರತಿಕ್ರಿಯಿಸಿರುವ ಟಿ.ವಿ.ವಾಹಿನಿಗಳು ಮತ್ತು ಪ್ರಸಾರಕರು ಯಾವುದೇ ನಿಯಂತ್ರಣ ಏರುವುದನ್ನು ವಿರೋದಿಸಿದ್ದು ತಾವೇ ಸ್ವಯಂ ನಿಯಂತ್ರಣಾ ವ್ಯವಸ್ತೆಯೊಂದನ್ನು ಮಾಡಿಕೊಳ್ಳುವುದಾಗಿ ಹೇಳಿರುವ ಜೊತೆಗೆ ಇಂತಹ ಮಂಡಳಿಯೊಂದರ ಅಗತ್ಯವೇ ಇಲ್ಲ. ಭಾರತೀಯ ಪತ್ರಿಕಾ ಮಂಡಳಿಯು ಕೂಡ ಅಪ್ರಯೋಜಕವಾಗಿದ್ದು ಅದನ್ನು ಕೂಡ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಮದ್ಯೆ ಮಾಹಿತಿ ಹಾಗೂ ಪ್ರಸಾರ ಸಚಿವೆ ಅಂಬಿಕಾ ಸೋನಿ ಮಾದ್ಯಮ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಸರ್ಕಾರ ಉದ್ದೇಶಿಸಿಲ್ಲ, ಎಂದು ಸರ್ಕಾರ ಅಬಿಪ್ರಾಯವನ್ನು ಹೇಳಿದ್ದಾರೆ. ಸರ್ಕಾರದ ಈ ನಿರ್ದಾರ ಪ್ರಜಾಪ್ರಭುತ್ವ ದೇಶವೊಂದರಲ್ಲಿ ಅದರಲ್ಲೂ ಮುಖ್ಯವಾಗಿ ಮಾದ್ಯಮ ಸ್ವಾತಂತ್ರ್ಯವಿರುವ ಭಾರತದ ಮಟ್ಟಿಗೆ ಸರಿಯಾದ ಕ್ರಮವಾಗಿದೆ.
ಈಗ ನೋಡುಗರ ಮುಂದಿರುವ ಸಮಸ್ಯೆಯೆಂದರೆ ಟಿ.ವಿ ವಾಹಿನಿಗಳು ಪ್ರಸಾರ ಮಾಡುವ ಅತೀರಂಜನೀಯವಾದ್ ಹಾಗೂ ಅಭಿವ್ರುದ್ದಿಗೆ ಪೂರಕವಲ್ಲದ ಹಾಗೂ ಮೂಡನಂಬಿಕೆಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳಿಂದ ನಮ್ಮನ್ನು ಕಾಪಾಡುವವರು ಯಾರು ? ಎಂಬುದು.
ಮಾದ್ಯಮಗಳು ಮನರಂಜನೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು ಎಂದು ಯಾರು ಹೇಳುತ್ತಿಲ್ಲ, ಬದಲಾಗಿ ಶೇ.೯೫ರಷ್ಟು ಮನರಂಜನೆ ಮತ್ತು ಅಪರಾದಕ್ಕೆ ಸಂಬಂದಿಸಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಶೇ.೫ಕ್ಕಿಂತ್ ಕಡಿಮೆ ಪ್ರಮಾಣದಲ್ಲಿ ಅಭಿವ್ರುದ್ದಿ ಹಾಗೂ ಮಾಹಿತಿಯಾದರಿತ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ. ಈ ಪ್ರಶ್ನೆಗೆ ಸ್ವ-ನಿಯಂತ್ರಣ ಹೇರಿಕೊಳ್ಳುತ್ತೇವೆ ಎಂದು ಹೇಳುತ್ತಿರುವ ಪ್ರಸರಕರಾಗಲಿ ಅವರನ್ನು ಪ್ರತಿನಿದಿಸುತ್ತಿರುವ ಸಂಘವಾಗಲಿ, ಭಾರತೀಯ್ ಪ್ರಸರಕರ ಫೆಡರೇಷನ್ ಆಗಲಿ ಇದುವರೆಗೂ ಉತ್ತರ ನೀಡುವ ಗೋಜಿಗೆ ಹೋಗಿಲ್ಲ.
ಭಾರತದಲ್ಲಿ ಹಾಸುಹೊಕ್ಕಾಗಿದ್ದ ಮೂಡನಂಬಿಕೆಗಳನ್ನು ಓಡಿಸಲಿಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯ ಭಾಷಾ ಪತ್ರಿಕೋದ್ಯಮದ ಪಿತಾಮಹ ಎನಿಸಿಕೊಂಡ ರಾಜಾರಾಂ ಮೋಹನ್ ರಾಯ್ ಸೇರಿದಂತೆ ಅನೇಕ ಪತ್ರಕರ್ತರು ಶ್ರಮಿಸಿದರು. ಆದರೆ ಇಂದಿನ ಟಿ.ವಿ ವಾಹಿನಿಗಳು ಮೂಡನಂಬಿಕೆಗಳನ್ನು ಜನಸಮುದಾಯದಲ್ಲಿ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.
ಸುದ್ದಿ ವಾಹಿನಿಗಳು ಯಾವ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು ಎಂಬ ನಿರ್ಭಂದವನ್ನು ಸುದ್ದಿ ಪ್ರಸರಕ ಸಂಘ ಹೊಂದಿದ್ದರೂ ಕೂಡ ಅದು ಇದುವರೆಗೂ ಕಾರ್ಯಗತವಾಗಿಲ್ಲ. ತಾವು ಹಾಕಿಕೊಂಡಿರುವ ನಿರ್ಭಂದಗಳ ಪ್ರಕಾರ ಟಿ.ವಿ ವಾಹಿನಿಗಳು ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಜಿ ಮತ್ತು ಆರ್ ಎಂದು ಎರಡು ವರ್ಗಗಳನ್ನಾಗಿ ವಿಂಗಡಿಸಿಕೊಂಡಿವೆ. ಜಿ ವರ್ಗದಲ್ಲಿ ಕುಟುಂಬದ ಎಲ್ಲರೂ ಕುಳಿತು ನೋಡಬಹುದಾದ ಕಾರ್ಯಕ್ರಮಗಳು ಒಳಗೊಂಡಿದ್ದು ಇಂತಹ ಕಾರ್ಯಕ್ರಮಗಳನ್ನು ದಿನದ ಯಾವ ಸಮಯದಲ್ಲಾದರೂ ಪ್ರಸಾರ ಮಾಡಬಹುದು. ಆರ್ ಪ್ರವರ್ಗದಲ್ಲಿ ಲ್ಯೆಂಗಿಕ್,ಅಪರಾದ ಮುಂತಾದ ಮಹಿಳೆಯರು, ಯುವಜನಾಂಗ ಮತ್ತು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀರಬಹುದಾದ ಕಾರ್ಯಕ್ರಮಗಳನ್ನು ರಾತ್ರಿ ೧೧ ಗಂಟೆಯಿಂದ ಬೆಳಗ್ಗೆ ೫ ಗಂಟೆಯವರೆಗೂ ಮಾತ್ರ ಪ್ರಸಾರ ಮಾಡಬೇಕೆಂಬ ನಿಬಂಧನೆಯನ್ನು ಹಾಕಿಕೊಂಡಿವೆ.ಆದರೆ ಇದನ್ನು ಎಷ್ಟು ಟಿ.ವಿ.ವಾಹಿನಿಗಳು ಪಾಲಿಸುತ್ತಿವೆ? ಎಂಬ ಪ್ರಶ್ನೆಗೆ ಇವುಗಳನ್ನು ಪ್ರತಿನಿಧಿಸುತ್ತಿರುವ ಸಂಸ್ಥೆಗಳು ಉತ್ತರಿಸಬೇಕಿದೆ. ಇಂತಹ ಅನೇಕ ನಿಬಂಧನೆಗಳು ಕೇವಲ ತಮ್ಮ ಸಂಸ್ಥೆಗಳ ಅಂತರ್ ಜಾಲದಲ್ಲಿ ಉಳಿದಿವೆ.
ಸುದ್ದಿ ಪ್ರಸರಕರ ಸಂಘ ನೋಡುಗರಿಗೆ ನೆರವಾಗುವ ಸಲುವಾಗಿ ನ್ಯಾ.ಷಾ ನೇತ್ರುತ್ವದಲ್ಲಿ ಪ್ರಸರಣ ವಿಷಯ ದೂರು ಸಮಿತಿಯನ್ನು ನೇಮಿಸಿದ್ದು ಇದು ಟಿ.ವಿ ವಾಹಿನಿಗಳು ಪ್ರಸಾರ ಮಾಡುವ ಕಾರ್ಯಕ್ರಮಗಳ ಕುರಿತು ನೋಡುಗರು ನೀಡುವ ದೂರುಗಳನ್ನು ಪರಿಶೀಲಿಸುತ್ತದೆ. ಆದರೆ ಇಷ್ಟು ಮಾಡಿದ ಮಾತ್ರಕ್ಕೆ ಅದರ ಕರ್ತವ್ಯ ಮುಗಿಯುವುದಿಲ್ಲ. ಬದಲಾಗಿ ಅಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ತಡೆಯಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡರೆ ಒಳಿತು.
ಟಿ.ವಿ.ವಾಹಿನಿಗಳು ಮತ್ತು ಪ್ರಸರಕರು ತಾವು ಹೊಂದಿರುವ ಸ್ವ-ನಿಯಂತ್ರಣವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕಾಗಿರುವ ಜೊತೆಗೆ ಟಿ.ವಿ.ವಾಹಿನಿಗಳು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮಗಳ ಗುಣಮಟ್ಟವನ್ನು ತಾನೆ ಖುದ್ದು ವಿಮರ್ಶಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ.ಅಭಿವ್ರುದ್ದಿ ಮತ್ತು ಮಾಹಿತಿಯಾದಾರಿತ ಕಾರ್ಯಕ್ರಮಗಳನ್ನು ಒಟ್ಟು ಕಾರ್ಯಕ್ರಮದ ಕನಿಷ್ಟ ಶೇ.೩೦ರಷ್ಟಾದರೂ ಪ್ರಸಾರ ಮಾಡಲೇಬೇಕೆಂಬ ನಿಯಮವೊಂದನ್ನು ರೂಪಿಸಿಕೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ.
ಹಾಗೆ ನೋಡಿದರೆ ಭಾರತದಲ್ಲಿ ಮುದ್ರಣ ಮಾದ್ಯಮ ಪತ್ರಿಕಾ ದರ್ಮವನ್ನು ಪಾಲಿಸುತ್ತಲೆ ಬಂದಿವೆ. ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ಪತ್ರಿಕೆಗಳನ್ನು ನಿಯಂತ್ರಿಸಲು ಅನೇಕ ಪ್ರಸ್ತಾವನೆಗಳು ಸಾಮಾನ್ಯವಾಗಿವೆ. ಪತ್ರಿಕೆಗಳು ಅನೇಕ ಕಷ್ಟಗಳನ್ನು ಎದುರಿಸುತ್ತಲೆ ಬಂದಿವೆ, ಆದರೂ ಪತ್ರಿಕೆಗಳು ಪತ್ರಿಕಾ ನೀತಿ ಸಂಹಿತೆಯನ್ನು ಕಾಪಾಡಿಕೊಂಡೆ ಬರುತ್ತಿವೆ.ಎಂತಹ ಕ್ಲಿಷ್ಟ ಪರಿಸ್ಥಿತಿ ಬಂದಾಗಲೂ ನೀತಿ ಸಂಹಿತೆಯ ಅಚ್ಚುಕಟ್ಟಿನಲ್ಲೆ ಕಾರ್ಯನಿರ್ವಹಿಸುತ್ತಿವೆ.
ಮಾದ್ಯಮ ಸ್ವಾತಂತ್ರ್ಯ ಪ್ರಜಾಪ್ರಭುತ್ವ ದೇಶವೊಂದರಲ್ಲಿ ಅತಿ ಮುಖ್ಯವಾದ ಪಾತ್ರವನ್ನು ಹೊಂದಿದೆ.ಕೆಲವು ಘಟನೆಗಳನ್ನು ಹೊರತುಪಡಿಸಿದರೆ ಭಾರತದಲ್ಲಿ ಮಾದ್ಯಮಗಳು ಉತ್ತಮವಾದ ಸ್ವಾತಂತ್ರ್ಯವನ್ನು ಹೊಂದಿವೆ.ಮಾದ್ಯಮಗಳಿಗೆ ಸ್ವಾತಂತ್ರ್ಯ ಬೇಕು ಅಂದ ಮಾತ್ರಕ್ಕೆ ಸ್ವಾತಂತ್ರ್ಯದ ಹೆಸರಿನಲ್ಲಿ ಟಿ.ವಿ.ವಾಹಿನಿಗಳ ಪ್ರಸಾರಕರು ಏನು ಬೇಕಾದರೂ ಪ್ರಸಾರ ಮಾಡಬಹುದು ಎಂದುಕೊಳ್ಳಬಾರದು.
ಇಲ್ಲಿ ಎಲ್ಲರೂ ಗಮನಿಸಬೇಕಾದ ಬಹುಮುಖ್ಯವಾದ ಅಂಶವೆಂದರೆ ಸ್ವಾತಂತ್ರ್ಯಪೂರ್ವದಲ್ಲಿ ಪತ್ರಿಕಾರಂಗ ಸೇವಾ ಮನೋಬಾವನೆಯನ್ನು ಹೊಂದಿತ್ತು.ಆದರೆ ಸ್ವಾತಂತ್ರ್ಯಾನಂತರ ಪತ್ರಿಕೆಗಳು ಸೇರಿದಂತೆ ಮಾದ್ಯಮಗಳು ಸೇವಾ ಮನೋಬಾವನೆಗಿಂತ ವ್ಯಾಪಾರಿ ಪ್ರವ್ರುತ್ತಿಗೆ ಹೆಚ್ಚು ಒತ್ತು ನೀಡಲು ಮುಂದಾದವು. ಕಾಸಿಗಾಗಿ ಸುದ್ದಿ ಎಂಬ ಕೆಟ್ಟ ಪರಂಪರೆಗೆ ಕೆಲವು ಪತ್ರಕರ್ತರು ನಾಂದಿ ಹಾಡಿದರು.
ಅತಿರಂಜನೀಯವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ವಾಹಿನಿಗಳಿಗೆ ಜನರ ಪರಿಸರದ ಸಮಸ್ಯೆಗಳನ್ನು ಆಲಿಸುವ ಹಾಗೂ ಅದಕ್ಕೆ ಪರಿಹಾರಗಳನ್ನು ಒದಗಿಸುವ ಆ ಮೂಲಕ ಜೀವನಮಟ್ಟ ಹಾಗೂ ಹಕ್ಕುಗಳನ್ನು ಕಾಪಾಡಬೇಕಾದ ಜವಾಬ್ದಾರಿ ಕೂಡ ಇದೆ.
Comments
ಉ: ವಿದ್ಯುನ್ಮಾನ ಮಾದ್ಯಮಗಳ ನಿಯಂತ್ರಣ
In reply to ಉ: ವಿದ್ಯುನ್ಮಾನ ಮಾದ್ಯಮಗಳ ನಿಯಂತ್ರಣ by anand33
ಉ: ವಿದ್ಯುನ್ಮಾನ ಮಾದ್ಯಮಗಳ ನಿಯಂತ್ರಣ