ನಿರ್ವಿಕಲ್ಪಂ
ಕವನ
ನಿರ್ವಿಕಲ್ಪಂ
ಬೆಳಕಿನಿಂ ನೆರಳಿರ್ಪುದು ಕರ್ಗತ್ತಿನಲಲ್ಲ.
ಪಸಿರಿನಿಂ ಉಸಿರಿರ್ಪುದು ಬರಿತಿರೆಯೊಳಗಲ್ಲ.
ಕಡಲಿನಿಂ ಕಾರ್ಮೋಡವು ಬರಿಬಾನೊಳಗಲ್ಲ.
ರವಿಯುಂ ಜೆವಕೋಟಿಯು ಅವನಿಲ್ಲದೇನಿಲ್ಲ.
ಪ್ರಜ್ಙೆಯಿಂ ಚಿಂತನೆಯು ಜಡನಿದ್ರೆಯೊಳಗಲ್ಲ.
ಅರಿವಿನಿಂ ಜ್ಙಾನೋದಯ ಅಜ್ಙಾನದೊಳಗಲ್ಲ.
ಸುಜ್ಙಾನದಿ ಗುರಿ ಪ್ರಭವಂ ಜಡಬುದ್ಧಿಯೊಳಲ್ಲ.
ಗುರಿಸಾಧನೆ ಚಿಚ್ಛಕ್ತಿಯಿಂ ನಿರ್ವೀರ್ಯದೊಳಲ್ಲ.
ಈ ಶಕ್ತಿಯನಾಪೋಶಿಸೆ ಎನ್ನಾತ್ಮದ ಬಲವು.
ಎನ್ನಾತ್ಮವನೆಂದೂ ಸಲಹೆ ವಿಶ್ವಾತ್ಮದ ಒಲವು.
ಧೀಯಾತ್ಮದೊಳರಳಲಿ ಅಂತರಂಗ ಪುಷ್ಪಂ.
ಅಂತರಂಗವೇರಲಿ ಚಿನ್ಮಯ ನಿರ್ವಿಕಲ್ಪಂ.
ಆತ್ಮಜ್ಯೋತಿ ಸೇರಲಿ ವಿಶ್ವಜ್ಯೋತಿಯಂ.
ಎನ್ನ ಬಾಳ್ವೆ ಬೆಳಗಲಿ ಚಿರಮಂಗಳದೀಪ್ತಿಯಿಂ.
- ಚಂದ್ರಹಾಸ ( ೧೯ - ೧೧ -೨೦೧೧)