ಅ ಕಪ್ ಓಫ್ ಕಾಫಿ ... ಸಿಪ್- ೧೦
ಸಿಪ್ - ೧೦
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಮೊದಲ ದಿನ, ಇನ್ನು ಸಿಸ್ಟಮ್ ಅಲೋಕೆಟ್ ಆಗಿರಲಿಲ್ಲ. ಹನ್ನೊಂದರ ಗುಂಪನ್ನು ಸೆಂಟರ್ ಹೆಡ್ ನ ರೂಂ ನಲ್ಲಿ ಕುಳ್ಳಿರಿಸಿದ್ದರು. ಹನ್ನೊಂದುವರೆ ಆಗುತ್ತಿದ್ದಂತೆ, ಅಡ್ಮಿನ್ ಡಿಪಾರ್ಟ್ಮೆಂಟ್ ನ ಆಫೀಸ್ ಬಾಯ್ ರಮೇಶ್ ಬಂದು ನಮಗೆ ಸಿಸ್ಟಮ್ ಅಲೋಕೆಟ್ ಆಗಿದೆ ಅಲ್ಲಿಹೋಗುವಂತೆ ಸಲಹೆ ನೀಡಿದನು, ಎಲ್ಲರು ತಮಗೆ ನೀಡಿದ ಮಶೀನ್ನಲ್ಲಿ ವಾಲ್ ಪೇಪರ್ ಸೆಟ್ ಮಾಡಿಕೊಳ್ಳುವಲ್ಲಿ ಬ್ಯುಸಿ ಆದರು.
ಎಲ್ಲರೂ ಮುಂದಿನವಾರ ಇದ್ದ ಜಾವ ಪೋಸ್ಟ್ ELTP ಅಸ್ಸೇಸ್ಸ್ಮೆಂಟ್ ಗೆ ತಯಾರಿ ನಡೆಸುತಿದ್ದೆವು. ಅಷ್ಟರಲ್ಲಿ ಪುಣೆಯಲ್ಲಿನ ಎಲ್ಲ ಕಾಲಿಗ್ಸ್ ಗೆ ಕಳುಹಿಸಿದ "ಸ್ವೀಟ್ ಅಟ್ ಮೈ ಡೆಸ್ಕ್" ಎಂಬ ಮೇಲ್ ನನ್ನನ್ನು ಅತ್ತ ಸೆಳೆಯಿತು.ಐ ಟಿ ಲೈಫ್ ನ ಹೊಸ ದಿನಚರಿ ಸಿಹಿ ಯೊಂದಿಗೆ ಪ್ರಾರಂಬವಾಯಿತು. ಆ ಮೇಲ್ jeevan_jagan @ dreamtech. in ಇಂದ ಬಂದಿತ್ತು.
ಜೀವನ್ ಜಗನ್!!! ಹಳೆ ಗೆಳೆಯ ಆಗಲೇ ಆರು ವರುಷದ ಮೇಲೆ ಆಗಿತ್ತು ಅವನನ್ನು ನೋಡಿ, ಎಂಟರವರೆಗೆ ನಮ್ಮ ಊರಲ್ಲಿ ಇದ್ದ ಹುಡುಗ. ಮುಂದೆ ತಂದೆ ಜಗನ್ ರಾವ್ ಅವರಿಗೆ ಭಡ್ತಿ ಯೊಂದಿಗೆ ಉತ್ತರ ಪ್ರದೇಶದ ಯಾವುದೇ ಊರಿಗೆ ವರ್ಗವಾದಾಗ ಊರು ಬಿಟ್ಟಿದ್ದ. ನಂತರದ ದಿನಗಳಲ್ಲಿ ರಜೆಯ ಸಮಯದಲ್ಲಿ ಅಜ್ಜ-ಅಜ್ಜಿಯನ್ನು ನೋಡಲು ಊರಿಗೆ ಬಂದಾಗ ಸಿಗುತಿದ್ದ. ಊರಲ್ಲಿರುವ ಆ ಹಳೆ ಜೀವಗಳಿಗೆ ಈ ಹುಡುಗ ಒಂದು ಷೋ ಪೀಸ್ ಆಗಿದ್ದ, ಇಲ್ಲಿರುವ ಒಂದು ವಾರ ಎಲ್ಲರಲ್ಲೂ ಅವನದ್ದೇ ಹೊಗಳಿಕೆ ಮಾಡುವುದು. ವಯಸ್ಸಿನ್ನೊಂದಿಗೆ ಅವನ ಗುಣವೂ ಬದಲಾಗುತ್ತ ಹೋಗಿತ್ತು. ಹನ್ನೆರಡನೆ ತರಗತಿಯನ್ನು CBSE ಬೋರ್ಡ್ ನ ಪರೀಕ್ಷೆಯಲ್ಲಿ distinction ಪಡೆದ ಹುಡುಗ IIT ಗೆ ತಯಾರಿ ನಡೆಸಿದ್ದ. ಆದರೆ ಅವನಂದು ಕ್ಕೊಂಡ ಕಾಲೇಜ್ ನಲ್ಲಿ ಸೀಟ್ ಸಿಗದಿದ್ದದ್ದು ಜೀವನ್ ನನ್ನು ಮಾನಸಿಕವಾಗಿ ಘಾಸಿ ಯಾಗುವಂತೆ ಮಾಡಿತ್ತು.
ಅದೇ ಸಮಯದಲ್ಲಿ ತಂದೆ ಜಗನ್ ನ ಮರಣ ಇವನನ್ನು ಇನ್ನೂ ಘಾಸಿಯಾಗುವಂತೆ ಮಾಡಿತು. ನಗರ ಜೀವನದಿಂದ ಬೇಸತ್ತು ರಮಾ ಅತ್ತೆ, ಮಕ್ಕಳೊಂದಿಗೆ ತನ್ನ ಅತ್ತೆ ಮಾವನ ಮನೆಗೆ ಬಂದರು. ಒಂದು ವರುಷ ಮನೆಯಲ್ಲೇ ಕೂತು ಜೀವನ್ ಮುಂದಿನ ವರ್ಷದ IIT ಗೆ ತಯಾರಿ ಮಾಡುತಿದ್ದ.ನಾನು SSLC ಯ ಕೆಲವ್ವೊಂದು ಸಂಶಯಗಳನ್ನು ಅವನಲ್ಲಿ ಕೇಳಲು ಹೋದಾಗ ಅವನು ಹೇಳಿ ಕೊಟ್ಟದುಂಟು. ಹಿಂದಿನಂತೆ ಎಲ್ಲರಲ್ಲಿ ಬೆರೆಯುವುದನ್ನು ಅವನು ಕಡಿಮೆ ಮಾಡಿಕ್ಕೊಂಡಿದ್ದ. ರಮಾ ಅತ್ತೆ ಗಂಡನ ಮರಣ ನಂತರ ತನಗೆ ಒಲಿದಿದ್ದ ಗಂಡನ ಕೆಲಸವನ್ನು ಊರಲ್ಲೇ ಮಾಡಿ ಮಗನಿಗೆ ಆಸರೆಯ ನೆರಳಾಗಿ ನಿಂತಿದ್ದರು.
ಜೀವನ್ ಅಂದುಕ್ಕೊಂಡಂತೆ IIT-BOMBAY ಯಲ್ಲಿ ಸೀಟ್ ಗಿಟ್ಟಿಸಿಕ್ಕೊಂಡ. ಇಲ್ಲಿ ನನ್ನ ಮನೆಯಲ್ಲಿ ಅವನನ್ನು ಮಾದರಿಯಾಗಿ ಇಟ್ಟು ನನ್ನ ಶೈಕ್ಷಣಿಕ ಜೀವನದ ಕನಸು ಕಾಣಲು ನನ್ನ ಹೆತ್ತವರು ಶುರು ಮಾಡಿಕ್ಕೊಂಡರು. ಮನೆಯಲ್ಲಿ ಒಂದೇ ಒತ್ತಾಯ ನಗರದ ಕಾಲೇಜ್ ನಲ್ಲಿ PU ಮಾಡು, ಕೋಚಿಂಗ್ ಕ್ಲಾಸ್ ಗಳಿಗೆ ಜೋಯಿನ್ ಆಗು, ನೀನು ಐಐಟಿ, ಐಐಎಂ ನಲ್ಲಿ ಕಲಿ. ಮನೆಯವರಿಗೆ ತಾವು ಜಗನ್ ನ ಎದುರಿಗೆ ಸೋಲ್ಲೋಪ್ಪ ಬಾರದು ಎಂಬ ಹಠ. ಪರಿಣಾಮವಾಗಿ ಮಂಗಳೂರಿನ ಪ್ರತಿಷ್ಟಿತ ಕಾಲೇಜ್ ಒಂದರಲ್ಲಿ ಅಡ್ಮಿಶನ್ ಮಾಡಿ ಪೇಯಿಂಗ್ ಗೆಸ್ಟ್ ಎಂಬ ಸಣ್ಣ ಜೈಲಿಗೆ ನನ್ನ ನೂಕಿದರು. ಅಲ್ಲಿ ಜೀವನ್ ಐ ಐ ಟಿ ಹೇಳಿ ಬಾಂಬೆ ಸೇರಿದ. ಹಿತ್ತಲಿನ ನಮ್ಮ ಮನೆಯಲ್ಲಿ ನಡುವಯಸ್ಸಿನ ದಂಪತಿಗಳು ಒಂದು ಮನೆಯಲ್ಲಿ, ಮುದಿ ಅತ್ತೆ ಮಾವಂದಿರ ಸೇವೆ ಮಾಡುತ್ತಾ ಖಾಲಿ ಹಣೆ ಒರೆಸುತ್ತಿರುವ ವಿಧವೆ ಇನ್ನೊಂದು ಮನೆಯಲ್ಲಿ.
ಬಾಂಬೆ ಸೇರಿದ ಬಳಿಕ ಜೀವನ್ ಸಂಪೂರ್ಣವಾಗಿ ಬದಲಾಗಿದ್ದ, ನಡುವಲ್ಲಿ ಒಂದೆರಡು ಬಾರಿ ಸಿಕ್ಕಿದ್ದ, ಆಗ ಮಾತನಾಡಲು ಹಿಂದೆ ಮುಂದೆ ನೋಡುವ ವ್ಯಕ್ತಿ ಆಗಿದ್ದ, ಎಲ್ಲಿ ಮಾತನಾಡಲು ಹೋದರೆ ಅವನ ಅಂತಸ್ತು ಕಮ್ಮಿ ಆಗುತ್ತದೋ ಎಂಬ ವ್ಯಕ್ತಿತ್ವ ರೂಡಿಸಿ ಕೊಂಡಿದ್ದ. ನನ್ನ ತಂದೆ ತಾಯಿ ಮಗು ಹುಟ್ಟುವ ಮುಂಚೆ ಈ ಜೀವನ್ ನನ್ನೇ ತಮ್ಮ ಮಗನಂತೆ ನೋಡಿಕ್ಕೊಂಡಿದ್ದರು. ಆದರೆ ಬರಬರುತ್ತಾ ಅವನಲ್ಲಾದ ಬದಲಾವಣೆ ಅವನಲ್ಲಿ ವೈರಾಗ್ಯ ಮೂಡುವಂತೆ ಮಾಡಿತು. ನಡುವಲ್ಲಿ ಅಜ್ಜಿ ಅಜ್ಜ ಇಹದ ವ್ಯವಹಾರ ಮುಗಿಸಿ ಶಾಶ್ವತವಾಗಿ ದೂರವಾದರು. ಜೀವನ್ ನ ಅಕ್ಕ ಜಯಾ ಳಿಗೆ ಅದುವೇ ಆಗಿ ಮುಂಬೈ ಸೇರಿದ್ದಳು. ಊರಲ್ಲಿ ಬದುಕಲು ಕಾರಣ ವಿಲ್ಲದೇ ಜಯಾಅಕ್ಕ ರಮಾ ಅತ್ತೆಯನ್ನು ಇವನ ಫೈನಲ್ ಇಯರ್ ಇಂಜಿನಿಯರಿಂಗ್ ಇರುವಾಗ ಮುಂಬೈಗೆ ಕರೆಯಿಸಿಕೊಂಡಳು. ಅದಾದ ಬಳಿಕ ಅವನ ಸುದ್ದಿ ಇರಲಿಲ್ಲ.
*************
"ಹಲ್ಲೋ ಜೀವನ್ !!!!"
"ಹೇ , ವೈಭೂ .... ಏನೋ ಎಲ್ಲಿದ್ದಿಯಾ...? ಐ ಎಂ ಸೊ ಸರ್ಪ್ರೈಸ್ಡ್ !!!"
"ಹೌದಲ್ಲ, ಭೂಮಿ ಗುಂಡಗಿದೆ!!! ಮತ್ತೆ ಒಟ್ಟಾಗಿದ್ದೇವೆ !!!"
"ಅದು ಬಿಡೋ ... ಹೇಗೆ Dream -Tech ನಲ್ಲಿ ?"
"ನನ್ನ ಮನೆಯವರ ಕೃಪೆ !!! ಊರು ಬಿಡಲು ಮನಸಿಲ್ಲದ ಹುಡುಗನಿಗೆ ನಿನ್ನ ಮಾದರಿ ಇಟ್ಟು ಇಂಜಿನಿಯರಿಂಗ್ ಸೇರಿಸಿದರು, ಅಲ್ಲಿ ಕ್ಯಾಂಪಸ್ ನಲ್ಲಿ Dream -Tech ಸೆಲೆಕ್ಟ್ ಆದೆ !!!ಈಗ ನೋಡು ಇಬ್ಬರು ಒಟ್ಟಿಗಿದ್ದೇವೆ"
"ಹೂ ಹಾಗಾ ಸಮಾಚಾರ ...??ಬಾ ಕಾಫಿ ಹೀರ್ಥ ಮಾತನಾಡುವ..." ಎನ್ನುತ್ತಾ ಜೀವನ್ ಕೆಫೆಟೆರಿಯ ಎಂಬ ಆ ಕಿಷ್ಕಿಂದ ಕೋಣೆಗೆ ಕೊಂಡೊಯ್ದ. ಎರಡು ಕಪ್ ಕಾಫಿ ಹಿಡಿದು ಟೇಬಲ್ ನ ಎದುರುಬದುರಾಗಿ ಕುಳಿತು ಇಬ್ಬರೂ ಹರಟೆ ಮುಂದುವರಿಸಿದೆವು.
ಜೀವನ್ "ಮತ್ತೆ ಊರಲ್ಲಿ ಎಲ್ಲ ಹೇಗಿದ್ದಾರೆ ...?"
"ಎರಡೂವರೆ ತಿಂಗಳಾಯಿತು, ಊರು ಬಿಟ್ಟು. ಅರಾಮಿದ್ದಾರೆ ಅವರು ಅಲ್ಲಿ"
"ಅಂದ್ರೆ ನೀನು ಕೆಲಸಕ್ಕೆ ಸೇರಿ ಎರಡೂವರೆ ತಿಂಗಳಾಯಿತು ಅನ್ನು..."
"ಹೌದು .. ಚೆನ್ನೈ ನಲ್ಲಿ ಟ್ರೇನಿಂಗ ನಲ್ಲಿ ಇದ್ದೆವು, ಇವತ್ತಿನಿಂದ ಪುಣೆ !!!"
"ನಿಮ್ಮನ್ನೂ ಪುಣೆಗೆ ಎಳೆದ್ರಾ ...??"
"ನಿಮ್ಮನ್ನೂ ಅಂದ್ರೆ ..??"
"ನಾನೂ ಚೆನ್ನೈ ನಲ್ಲಿದ್ನೋ ... ಕಳೆದ ಫೆಬ್ರವರಿ ಯಲ್ಲಿ ಇಲ್ಲಿ ಈ ಬ್ರಾಂಚ್ ಶುರು ಮಾಡಿದಾಗಿಂದ ಇಲ್ಲಿ ನಮಗೆ ಟ್ರಾನ್ಸ್ಫರ್ ಮಾಡಿ ಬಿಟ್ರು"
"ಮತ್ತೆ, ರಮಾ ಅತ್ತೆ ಎಲ್ಲಿದ್ದಾರೆ ಈಗ ?"
"ಅಮ್ಮ, ಅಕ್ಕನ ಮನೆಯಲ್ಲಿದ್ದಾರೆ, ನಾನು ಮುಂಬೈಗೆ ಇದು ಹತ್ತಿರ ಆಗುತ್ತದೆ ಎಂದು ಪುಣೆ ಗೆ ಒಪ್ಪಿಕ್ಕೊಂಡೆ, ನೀನೇಕೆ ಪುಣೆ ..??"
"ಏನೂ ಕಾರಣ ಇಲ್ಲ ಕಣಪ್ಪಾ, ನಮ್ಮನ್ನು ಅಲ್ಲಿಂದ ಇಲ್ಲಿ ಅಟ್ಟಿದರು, ಇಲ್ಲಂತಾದ್ರೆ ಚೆನ್ನೈ ನಲ್ಲೆ ಗಮ್ಮತ್ ಮಾಡ್ತಾ ಇರ್ತಿದ್ವಿ."
"ಹೋ, ಹುಡುಗ ಬೆಳೆದು ಬಿಟ್ಟಿದ್ದಾನೆ.. !!! ಏನು ಅಲ್ಲಿ ಸೆಟ್ಟಿಂಗ್ ಗಿಟ್ಟಿಂಗ್ ಏನಾದ್ರೂ ಇತ್ತಾ ...?"
"ಇಲ್ಲಪ್ಪಾ .. ಹಂಗೆ ಏನು ಇಲ್ಲ, ಈ ಆಫೀಸ್ ಗಿಂತ ಅದು ಚೆನ್ನಾಗಿತ್ತು ಅನ್ಸುತ್ತೆ ಅದಕ್ಕೆ ಹೇಳಿದೆ ಅಷ್ಟೇ..."
"ಅದೂ ಹೌದು, ಏನೆಂದರು ಅದು ಹೆಡ್ ಆಫೀಸ್ ಆಲ್ವಾ ... ಮತ್ತೆ ಹೇಳು ಹೇಗಿದ್ದಾಳೆ ಶಾಮಲ ...??"
"ಶಾಮಲಾ ...? ನಿನಗೂ ಗೊತ್ತಾ ..!!!"
"ಏನಪ್ಪಾ ನಾನೂ ಅಲ್ಲಿ ೬ ತಿಂಗಳಿದ್ದೆ, ಅವಳು ನಮ್ಮ ಬಾಚ್ ನವಳು, ಟ್ರೈನಿಂಗ್ ನಲ್ಲಿ ಅವಳ ಪೆರ್ಫಾರ್ಮನ್ಸ್ ಅಷ್ಟೇನೂ ಒಳ್ಳೆದಿರಲಿಲ್ಲ, ನೋಡಲು ಚೆನ್ನಾಗಿದ್ದಾಳೆ ಎಂದು ಹೇಳಿ ಅವಳನ್ನು ರಿಸೋರ್ಸ್ ಮನೆಜ್ಮೆಂಟ್ ಟೀಂ ಗೆ ಹಾಕಿದ್ದಾರೆ."
"ಅವಳೊಬ್ಬಳೆ ಆ ಆಫೀಸ್ ನಲ್ಲಿ ನೋಡ ಬಹುದಾದ ವಸ್ತು ಉಳಿದಂತೆ ಎಲ್ಲ ಅದೇ ಎಣ್ಣೆ ಮುಖಗಳು..."
"ಯಾಕಪ್ಪಾ ...? ನಿಮ್ಮ ಬಾಚ್ ನಲ್ಲಿ ಆಕೃತಿ ಹೇಳಿ ಒಬ್ಬಲಿದ್ದಾಳಂತೆ ಅವಳಿಗೆನಾಯ್ತು...?"
"ಆಕೃತಿ ಬಗ್ಗೆ ನಿಂಗೆ ಹೇಗೋ ಗೊತ್ತು ...?"
"ನಾನು ಚೆನ್ನೈ ಬಿಟ್ಟಿರ್ಬಹುದಪ್ಪಾ... ಅಲ್ಲಿ ಇನ್ನೂ ನಾನ್ನ ದೊಡ್ಡ ವೃಂದ ವೊಂದಿದೆ, ಅವರಿಂದ ಆ ಸೆಂಟರ್ ನ ಎಲ್ಲ ಅಪ್ಡೇಟ್ ಸಿಗ್ತಾ ಇರುತ್ತೆ, ಅಲ್ಲಿ ಯಾವ ಹೊಸ ಹುಡುಗಿ ಬರ್ತಾಳೆ ಯಾವ್ ಹಳೆ ಸುಂದರಿಗೆ ಮದುವೆ ಆಯ್ತು ಎಕ್ಸೆಟ್ರ ಎಕ್ಸೆಟ್ರ... ಏನು ಆಕೃತಿ ಹೇಳ್ತಿದ್ದಂತೆ ನಿಂಗೆ ಸಂಶಯದ ನಗೆ ಮೂಡಿದ್ದು..? ಏನ್ ಯಜಮಾನ್ರೆ ...?"
"ಇಲ್ಲ ಹಂಗೆ ಏನು ಇಲ್ಲ.ಅವಳೂ ಪುಣೆಗೆ ಬಂದಿದ್ದಾಳೆ..."
"ಇದಪ್ಪಾ ಮಾತಂದ್ರೆ... ನೀನೆ ಅಂದಿಯಲ್ಲ ಭೂಮಿ ಗುಂಡಗಿದೆ ಅಂತ, ನೋಡು ಇನ್ನೊಂದು ಉದಾಹರಣೆ !!!"
ಹಿಂದಿನ ವಿಚಾರಗಳು ಮಾತಾಡುತಿದ್ದಂತೆ ಕೈಯಲ್ಲಿರುವ ಕಾಫಿ ಕಪ್ ಖಾಲಿ ಯಾಗುತ್ತ ಬಂತು, ಜೀವನ್ ನನ್ನಲ್ಲಿ "ಸರಿ, ಈಗ ಕ್ಲೈಂಟ್ ಕಾಲ್ ಇದೆ, ಊಟದ ಹೊತ್ತಿಗೆ ಸಿಗುವಾ.. ಆ ಆಕೃತಿಯನ್ನು ನನಗೆ ಇಂಟ್ರೋಡ್ಯುಸ್ ಮಾಡುವಿಯಂತೆ, ತುಂಬಾ ಕೇಳಿದ್ದೇನೆ ಚೆನ್ನೈ ಹುಡುಗರಿಂದ ಅವಳ ಬಗ್ಗೆ..." ಎನ್ನುತ್ತಾ ಚೇರ್ ನಿಂದ ಮೇಲೆದ್ದ, ನಾನು ಕಪ್ ಕೈಗೆತ್ತಿಕ್ಕೊಂಡೆ, ಅಷ್ಟರಲ್ಲಿ ತನ್ನ ನೀರಿನ ಬೋಟಲ್ಗೆ ನೀರು ತುಂಬಲು ಆಕೃತಿ ಶ್ರವಂತಿ ಯೊಂದಿಗೆ ಕೆಫೆಟೆರಿಯ ಬಾಗಿಲು ತೆರೆದಳು, ನನ್ನನ್ನು ನೋಡಿ ಮುಗುಳ ನಕ್ಕಳು. ಅವಳ ಆ ನಗು ಬಾಗಿಲಿಗೆ ಬೆನ್ನು ಹಾಕಿ ಕುಳಿತಿದ್ದ ಜೀವನ ನ ಕಣ್ಣಿಗೆ ಬೀಳದ್ದು ನನ್ನ ಪುಣ್ಯ ಅಂದುಕ್ಕೊಂಡೆ.
ಇಬ್ಬರು ತಮ್ಮ ತಮ್ಮ ಕಪ್ ಅನ್ನು ಟ್ರೇನಲ್ಲಿ ಇಟ್ಟು ಹೊರ ಬಂದಾಗ ಜೀವನ ನನ್ನಲ್ಲಿ "ಆಕೃತಿ ಸುಪರೋ !!!" ಅಂದ. ಒಳಗೆ ನೀರು ತುಂಬಿಸುತಿದ್ದ ಆಕೃತಿಗೆ ಈ ಮಾತು ಕೇಳಿದಂತಿತ್ತು. ಒಳಗಿನ ಕಾಫಿ ತೇಗು ಅವನ ಮಾತಿಗೆ ಮತ್ತೆ ಒಳ ಸೇರಿತು.
Comments
ಉ: ಅ ಕಪ್ ಓಫ್ ಕಾಫಿ ... ಸಿಪ್- ೧೦
In reply to ಉ: ಅ ಕಪ್ ಓಫ್ ಕಾಫಿ ... ಸಿಪ್- ೧೦ by prashanth kanichar
ಉ: ಅ ಕಪ್ ಓಫ್ ಕಾಫಿ ... ಸಿಪ್- ೧೦