ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ

ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ , ಕನ್ನಡ ಪದರಚನೆ , ಕನ್ನಡ ವಾಕ್ಯರಚನೆ ಈ ಪುಸ್ತಕಗಳನ್ನು ಹಿಂದೊಮ್ಮೆ ಓದಿದ್ದೆ . ( ಈ ಪುಸ್ತಕಗಳನ್ನು ನನ್ನ ಕಯ್ಯಲ್ಲಿ ನೋಡಿದವರು 'ಸರ್ , ನೀವು ಪ್ರೊಫೆಸರ್ರಾ?' ಅಂತ ಕೇಳಿದರು! ' ಅಲ್ಲ ' ಅಂದಾಗ ' ಪಿ ಎಚ್ ಡಿ ಮಾಡ್ತಿದ್ದೀರಾ ? ' ಅಂದ್ರು . ಅದಕ್ಕೂ ಅಲ್ಲ ಎಂದಾಗ ಸುಮ್ಮನಾದರು ! ಏನು ಯೋಚಿಸಿದರೋ ಗೊತ್ತಿಲ್ಲ !)

ಇರಲಿ.'ಕನ್ನಡ ಬರಹವನ್ನು ಸರಿಪಡಿಸೋಣ ' ಈ ಪುಸ್ತಕ ಕೊಂಡು ಓದಿದೆ.
ಅವರು ಹೇಳುವದು ಸರಿ ಎನ್ನಿಸುತ್ತದೆ.
೧. ಸಂಸ್ಕೃತದ ವ್ಯಾಕರಣ ಕನ್ನಡಕ್ಕೆ ಬೇಡ
೨. ಐ , ಔ , ಋ ಮುಂತಾದವನ್ನು ಕೈಬಿಡಬೇಕು .ಶ , ಷ ಉಚ್ಚಾರ ಒಂದೇ ಇರುವದರಿಂದ ಷ ಕೈಬಿಡಬೇಕು .
೩. ಮಹಾಪ್ರಾಣ ಅಕ್ಷರಗಳು ಬೇಡ .
೩. ಉಚ್ಚರಣೆಯಂತೆ ಶಬ್ದಗಳನ್ನು ಬರೆಯಬೇಕು.
೪. ಸಂಸ್ಕೃತದ ಸ್ಪೆಲ್ಲಿಂಗ್ ಬಳಸಿ ( ಸಂಸ್ಕೃತ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ಸಂಸ್ಕೃತದಲ್ಲಿಯಂತೆ ಬರೆಯಬೇಕು ಎಂಬ ಒತ್ತಾಯದಿಂದ) ಜನರನ್ನು ಕನ್ನಡ ಕಲಿಕೆಯಿಂದ ದೂರ ಮಾಡುತ್ತಿದ್ದೇವೆ.
೫. ಹೊಸ ಕನ್ನಡ ಶಬ್ದ ರಚಿಸುವಾಗ ಸಂಸ್ಕೃತದ ಮೊರೆ ಹೋಗುವ ಬದಲು ಹಳಗನ್ನಡದತ್ತ ನೋಡಬೇಕು.

ಅವರು ಹೇಳುವದು ಸರಿ ಎನ್ನಿಸುತ್ತದೆ.

Rating
No votes yet

Comments