ಇಲ್ಲಿ ಹೀಗೆ, ನಮ್ಮಲ್ಲಿ ಹಾಗೆ, ಯಾಕೆ ಹೀಗೆ?

ಇಲ್ಲಿ ಹೀಗೆ, ನಮ್ಮಲ್ಲಿ ಹಾಗೆ, ಯಾಕೆ ಹೀಗೆ?

ವಿಜಯ್ ಮಲ್ಯರ ಕಿಂಗ್ ಫಿಶರ್ ವಿಮಾನ ಕಂಪೆನಿ ಆರ್ಥಿಕ ಸಂಕಟ ಕಾರಣ ತನ್ನ ರೆಕ್ಕೆಗಳನ್ನು ಮುದುಡಿ ಕೊಳ್ಳುವ ಸ್ಥಿತಿಯಲ್ಲಿದೆ. “ಕಿಂಗ್ ಆಫ್ ಗುಡ್ ಟೈಮ್ಸ್” ಮಲ್ಯ ಈಗ bad times ನಿಂದ ಹೊರಬರಲು ಸರಕಾರದ ಕಡೆ ನೋಟ ನೆಟ್ಟಿದ್ದಾರೆ. ಪ್ರಧಾನಿಗಳೂ ಮಲ್ಯರ ಸಂಕಷ್ಟವನ್ನು ಗಮನಿಸಿದ್ದಾರೆ. ಏನಾದರೂ ಮಾಡುವ ಭರವಸೆ ನೀಡಿದ್ದಾರೆ. ವಿಜಯ್ ಮಲ್ಯ ಚಾಣಾಕ್ಷ ಉದ್ಯಮಿಯಾದರೂ ತಮ್ಮ ಏರ್ ಲೈನ್ಸ್ ಅನ್ನು ನಷ್ಟದ ಮೋಡಗಳಿಂದ ಆಚೆ ತರಲು ಹೆಣಗುತ್ತಿರುವುದು ಖೇದಕರ.
 
ಇಂದು ನಮ್ಮ ಕಂಪೆನಿಯ ಜನರಲ್ ಮ್ಯಾನೇಜರ್ ರಿಯಾಧ್ ನಗರಕ್ಕೆ ಪ್ರಯಾಣಿಸಲು ವಿಮಾನದ ಟಿಕೆಟ್ ಗೆ ಹೋದಾಗ ಟಿಕೆಟ್ ಫ್ರೀ. ಫ್ರೀ...........? ಹೌದ್ರೀ, ಫ್ರೀ. ಉಚಿತ. ಪುಕ್ಕಟೆ. ಆದರೆ ತೆರಿಗೆ ಮಾತ್ರ ಪಾವತಿಸಬೇಕು. ಜೆಡ್ಡಾ ದಿಂದ ೧೨೦೦ ಕಿಲೋ ಮೀಟರ್ ದೂರ ರಾಜಧಾನಿ ರಿಯಾದ್. ಸಾಮಾನ್ಯವಾಗಿ ಟಿಕೆಟ್ ದರ ೬,೦೦೦ ರೂಪಾಯಿ. ತೆರಿಗೆ ಸೇರಿ. ಈಗ ತೆರಿಗೆ ಮಾತ್ರ ಪಾವತಿಸಿದರೆ ಸಾಕು, ರೆಕ್ಕೆಗಳು ಅರಳಿಕೊಳ್ಳುತ್ತವೆ. ತೆರಿಗೆ ೨,೦೦೦ ರೂಪಾಯಿ ಮಾತ್ರ. ಈ ಉಚಿತವಾಗಿ ಹಾರು ಎನ್ನುವ ಆಫರ್ ಕೊಡುತ್ತಿರುವ ಕಂಪೆನಿ “ನಾಸ್ ಏರ್”. ಇದು low cost airline. ಇವರು ಸೌದಿ ಅರೇಬಿಯಾದ ಒಳಗೆ ಮಾತ್ರವಲ್ಲ ಮಧ್ಯ ಪ್ರಾಚ್ಯದ ಹಲವು ದೇಶಗಳಿಗೂ ತಮ್ಮ ಹಾರಾಟದ ಧಂಧೆ ಇಟ್ಟು ಕೊಂಡಿದ್ದಾರೆ. ಜೆಡ್ಡಾ ದಿಂದ ೧೬೦೦ ಕಿಲೋ ಮೀಟರು ಇರುವ ದಮ್ಮಾಂ ನಗರಕ್ಕೆ ಕೇವಲ ೧೨೦೦ ರೂಪಾಯಿ ಚಾರ್ಜ್ ಮಾಡುತ್ತಾರೆ ಆಫರ್ ಸಮಯದಲ್ಲಿ. ಇಲ್ಲಿ ಹೀಗೆ, ನಮ್ಮಲ್ಲಿ ಹಾಗೆ, ಯಾಕೆ ಹೀಗೆ?  
 
ಮೈಸೂರು ಹುಲಿ, ಟಿಪ್ಪೂ ಸುಲ್ತಾನರ ಖಡ್ಗ ವನ್ನು ಹಣ ಕೊಟ್ಟು ಬ್ರಿಟಿಶ್ ಸಂಗ್ರಹಾಲಯದಿಂದ ಭಾರತಕ್ಕೆ ಮರಳಿ ತಂದು ಹೆಸರು ಮಾಡಿದ ಶ್ರೀಯುತ ವಿಜಯ್ ಮಲ್ಯ ಆರ್ಥಿಕ ಸಂಕಷ್ಟದಿಂದ ಹೊರ ಬಂದು ತಮ್ಮ ಕಿಂಗ್ ಫಿಶರ್ ಮತ್ತೊಮ್ಮೆ ಆಗಸವನ್ನು ಆಳುವಂತೆ ಮಾಡಲಿ ಎಂದು ಹಾರೈಸೋಣ. 


 

Rating
No votes yet

Comments