ಮಾನಸಿ
ಇದೇನಿದು ನನ್ನ ಹೆಸರಲ್ಲಿ ಲೇಖನ ಅಂತ ಭಾವಿಸದಿರಿ :). ಯಾವಾಗಲು ಪುಸ್ತಕ ಕೊಳ್ಳುವಾಗ ಏನಾದರು ಒಂದು ಆಕರ್ಷಣೆ ಇರುತ್ತೆ( ಶೀರ್ಷಿಕೆಯಾಗಲಿ, ಲೇಖಕರಾಗಲಿ ). ನವೆಂಬರ್ ೧ ಕನ್ನಡ ಪುಸ್ತಕ ಕೊಳ್ಳೋಣ ಎಂದು ಪುಸ್ತಕ ಭಂಡಾರದಲ್ಲಿ ಕಣ್ಣಾಯಿಸಿದಾಗ ಕಂಡಿದ್ದು "ಮಾನಸಿ", ಅರೆ ನನ್ನ ಹೆಸರು :) ಅಂಥ ನನ್ನ ಆಕರ್ಷಿಸಿತು ಟಾಗೋರ್ ರವರ ೧೫೦ ಜಯಂತಿಯಾ ನೆನಪಿಕೋಸ್ಕರ ಪುಸ್ತಕ ಕೊಂಡೆ. ಈ ಪುಸ್ತಕದಲ್ಲಿ ರವೀಂದ್ರ ಟಾಗೋರ್ ಗೀತೆಗಳನ್ನು ಪಂಚಾಕ್ಷರಿ ಹಿರೇಮಠರವರು ಅನುವಾದಿಸಿದ್ದಾರೆ. ೯೦ ಪುಟಗಳಲ್ಲಿ ಟಾಗೋರ್ ರ "ಗೀತಾಂಜಲಿ, ನ್ಯೆವೇದ್ಯ , ಗೀತವಿತಾನ, ರವೀಂದ್ರ ರಚನಾವಲಿ" ಮುಂತಾದ ಸಂಗ್ರಹಗಳಿಂದ ಆಯ್ದ ನಲವತ್ತ್ಯೆದು ಗೀತೆಗಳಿವೆ. ಎಲ್ಲ ಗೀತೆಗಳು ಸೊಗಸಾಗಿತ್ತು, ಕೆಲವನ್ನು ಈ ಲೇಖನದ ಮೂಲಕ ಹಂಚಿಕೊಳುತ್ತಿದ್ದೇನೆ :
೧. ಕವಿಗೆ -
ಏಳು, ಬಾ ಓ! ಕವಿಯೆ,
ಇದೆಯೆ ಪ್ರಾಣಾದಿ ಚೇತನ
ಅಂತರಗದಿ ಚಿಂತನ?
ಬಗೆಯೋಳಿರ್ದೋಡೆ ಸ್ಪಂದನ,
ಅದನಿಂದು ಮತ್ಯರ್ದಲಿ ಒಡಮೊಡಿಸು!
ಈ ನೆಲದೊಳದನಿಂದು ಅಮರಗೊಳಿಸು!
೨. ನಾನು ಪೃಥಿವಿಯ ಶುಭಕವಿ
ಈ ಧರಿತ್ರಿಯ ಮೂಲೆ ಮೂಲೆಗೆ
ಸ್ನೇಹ ಮೈತ್ರಿಯ ಎಲ್ಲ ನಿಲುವಿಗೆ
ಯಾವ ಧ್ವನಿಯೇ ಹೊಮ್ಮಲಿ
ಯಾವ ಸ್ವರವೇ ಚಿಮ್ಮುಲಿ;
ಆ ಕ್ಷಣವೇ ಮೂಡುವುದು
ಪಡಿದನಿಯು ಸ್ಫುರಿಸುವುದು !
ಈ ಅನಂತದ ಕೊಳಲಲಿ
ನನ್ನ ಕೊರಳಿನ ಗಾನದಿ
ನಾನು ಪೃಥಿವಿಯ ಶುಭಕವಿ
೩. ಬೆಳಗಿನ ಚಂದಿರ
ಬೆಳಗಿನಲಿ ಉದಯಿಸಿ ಬರುವ
ಸೂರ್ಯನಿಂದ ತನ್ನ ಪ್ರಕಾಶ
ಮಾಯವಾಗುವುದೆಂಬುದನು ಅರಿತೂ
ಬೆಳಗಿನ ಜಾವದ ಚಂದಿರ
ಶಾಂತ, ಭೃತ್ಯನಾಗಿ ಹೀಗೆ ಹೇಳಿದ -
"ಅಸ್ತ - ಸಿಂಧುವಿನ ತಟದಲಿ
ನಿಂತು ಅದೆಷ್ಟೋ ಕಾಲದಿಂದ
ನಿನ್ನ ಪ್ರತಿಕ್ಷೆಯಲ್ಲಿದ್ದೇನೆ
ಓ! ಸೂರ್ಯದೇವ;
ನೀನು ಉದಯಿಸಿ ಬಂದ ತಕ್ಷಣ
ನಿನಗೆ ಪ್ರಣಾಮ ಸಲ್ಲಿಸುತ್ತ
ಇಲ್ಲಿಂದ ನಿರ್ಗಮಿಸಬೇಕೆಂದಿರುವೆ,
ಓ! ಸೂರ್ಯದೇವ!
೪. ಹಾಡಾಗಲಿಲ್ಲ
ಓ ! ಪ್ರಿಯತಮ ;
ಯಾವ ಹಾಡನ್ನು
ಹಾಡಲೆಂದು
ನಿನ್ನ ಈ ಸಭೆಯಲ್ಲಿ
ಬಂದಿದ್ದೆನೋ
ಆ ಹಾಡನ್ನು ಇಂದಿನವರೆಗೂ
ಹಾಡಾಗಲಿಲ್ಲ !
ಈ ಸಮಸ್ತ ಜೀವನ
ಕೇವಲ ವೀಣೆಯ
ತಂತಿಗಳ
ಸ್ವರ ಸಾಧನೆಯಲ್ಲಿಯೇ
ಕಳೆದು ಹೋಯಿತು !
೫. ಆಶೆ
ನಿನ್ನಲಿ ನಾನು ಪೂರ್ಣರೂಪದಲಿ
ಸಾಮರಸ್ಯ ಹೊಂದುವ ಆಶೆ!
ನಿನ್ನನು ಸಕಲ ದಿಕ್ಕುಗಳಲಿ
ಕಂಡು ಸುಖಿಸುವ ಆಶೆ!
ಹಗಲು -ಇರುಳು ಪ್ರತಿಯೊಂದು ಕ್ಷಣದಲ್ಲೂ
ನನ್ನ ಪ್ರೇಮವನು ನಿನಗರ್ಪಿಸುವ ಆಶೆ!
ನಿನ್ನ ಲೀಲೆಯೇ ನನ್ನ ಸಂಪೂರ್ಣ
ಜೀವನದಲಿ ಸಂಚರಿಸಲೆಂಬ ಆಶೆ!
ನಿನ್ನ , ಕೇವಲ ನಿನ್ನ ಪ್ರೇಮಪಾಶದಲಿ
ಸದಾ ಬಂಧಿತನಾಗಿರುವ ಆಶೆ!
ನನ್ನ ಜೀವನದಲಿ ನಿನ್ನ ಇಚ್ಛೆಗಳೇ
ಪುರ್ಣಗೊಳ್ಳುತಿರಲೆಂಬ ಆಶೆ!
೬. ಮಹಿಮೆ
ಎಲ್ಲಿ ವಿಪುಲ
ವಿರತಿಯಿದೆಯೋ;
ಅಲ್ಲಿ ಅಪಾರ
ಶಾಂತಿ ಇದೆ.
ಅಲ್ಲಿ,
ಧೀರ ಗಂಭೀರ
ಮೌನ ಮಹಿಮೆ
ಇದೆ.
Rating
Comments
ಉ: ಮಾನಸಿ
ಉ: ಮಾನಸಿ :ಸೂರ್ಯ-ಚಂದಿರ.......