ವಿಸ್ಮಯ ಚಿಂತನ ಮಿಲನ - 7: ಸಂವಾದ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ವಿಸ್ಮಯ ಚಿಂತನ ಮಿಲನ - 7: ಸಂವಾದ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

 ಕರ್ನಾಟಕದ ಸಕ್ರಿಯ ಪ್ರಕಾಶಕ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನ 2012ರ ಮೊದಲನೇ ದಿನದಂದು ಅಂದರೆ, 1ನೇ ಜನವರಿಯಂದು "ಸಂವಾದ ಮತ್ತು ಪುಸ್ತಕ ಲೋಕಾರ್ಪಣೆ" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಳೆದ 7 ತಿಂಗಳುಗಳಿಂದ ಈ ರೀತಿಯ ಕಾರ್ಯಕ್ರಮವನ್ನು ಸತತವಾಗಿ ನಡೆಸಿಕೊಂಡು ಬಂದಿದೆ. ಈ ಬಾರಿಯ ಕಾರ್ಯಕ್ರಮದ ವಿಶೇಶವೆಂದರೆ, ಒಂದೇ ದಿನ 3 ಪುಸ್ತಕಗಳು, ಅದೂ ಒಂದೇ ವಿಶಯ ಕುರಿತ ಪುಸ್ತಕಗಳು ಲೋಕಾರ್ಪಣೆಯಾಗುತ್ತಿರುವುದು. ಇದರ ಜೊತೆಗೆ, ಕನ್ನಡದ ಹೆಸರಾಂತ ವಿಜ್ಢಾನ ಬರೆಹಗಾರರು ಹಾಗೂ ಮನೋವೈದ್ಯರೂ ಆಗಿರುವ ಡಾ.ಸಿ.ಆರ್.ಚಂದ್ರಶೇಖರ್ "ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಹೇಗೆ" ಎಂಬ ವಿಶಯದ ಕುರಿತು ಮಾತನಾಡಲಿದ್ದಾರೆ.

ಹೆಚ್ಚಿನ ವಿವರಗಳನ್ನು ಈ ಬರೆಹದೊಂದಿಗೆ ಲಗತ್ತಿಸಿರುವ ಕರೆಯೋಲೆಯಲ್ಲಿ ಕಾಣಬಹುದು. ಸಹೃದಯಿ ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಿ  ಕಾರ್ಯಕ್ರಮವನ್ನು  ಯಶಸ್ವಿಗೊಳಿಸಬೇಕಾಗಿ ವಿನಂತಿ.