”ಧ್ರುವಜಲ” (ಸಂಸ್ಕ್ರತಿ-ಚಿಂತನ ಪ್ರಬಂಧಗಳು): ಪುಸ್ತಕ ಲೋಕಾರ್ಪಣೆ

”ಧ್ರುವಜಲ” (ಸಂಸ್ಕ್ರತಿ-ಚಿಂತನ ಪ್ರಬಂಧಗಳು): ಪುಸ್ತಕ ಲೋಕಾರ್ಪಣೆ

ಶ್ರೀಯುತ ವಿಘ್ನೇಶ್ ಅವರು ಕಳಿಸಿದ ಮೈಲ್ ನಿಂದಃ
 
ಆತ್ಮೀಯರೆ,
’ರಾಷ್ಟ್ರೋತ್ಥಾನ ಸಾಹಿತ್ಯ’ದ ಪ್ರಧಾನ ಸಂಪಾದಕರಾದ ಎಸ್. ಆರ್. ರಾಮಸ್ವಾಮಿಯವರು ಬರೆದಿರುವ ”ಧ್ರುವಜಲ” (ಸಂಸ್ಕ್ರತಿ-ಚಿಂತನ ಪ್ರಬಂಧಗಳು) ಎಂಬ ಪುಸ್ತಕವನ್ನು ಮಾನ್ಯ ಡಾ|| ಎಸ್. ಎಲ್. ಭೈರಪ್ಪ ನವರು ಲೋಕಾರ್ಪಣಗೊಳಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಡಾ|| ಪ್ರಧಾನ್ ಗುರುದತ್ತ ಆಗಮಿಸುವರು, ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥಶರ್ಮರು ಉಪಸ್ಥಿತರಿರುವರು.
 
ದಿನಾಂಕಃ ೩೧-೧೨-೨೦೧೧, ಶನಿವಾರ
ಸಂಜೆಃ  ೬.೩೦ಕ್ಕೆ
ಸ್ಥಳಃ ಬೆಂಗಳೂರು ಗಾಯನ ಸಮಾಜದ ಸಭಾಂಗಣದಲ್ಲಿ

                                                    
                                                             ಕಾರ್ಯಕ್ರಮಕ್ಕೆ ಬನ್ನಿ,  ನಿಮ್ಮ ಸ್ನೇಹಿತರನ್ನೂ ಮನೆಯವರನ್ನೂ ಕರೆದುಕೊಂಡು ಬನ್ನಿ...
 
                                                                        ತಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ......