'ಶತಾವಧಾನಿ' ಗಣೇಶ ಅವರ ಮರೆವು!

'ಶತಾವಧಾನಿ' ಗಣೇಶ ಅವರ ಮರೆವು!

Comments

ಬರಹ

'ಕನ್ನಡ' ಸಾಹಿತ್ಯದ ಮಟ್ಟಿಗೆ ವ್ಯಾಸರ ನಂತರದ ಸ್ಥಾನದಲ್ಲಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಭೈರಪ್ಪ ಅವರು ನಿಲ್ಲುತ್ತಾರೆ' ಎಂದು ಶತಾವಧಾನಿ ಗಣೇಶ್ ಹೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ.


ಕನ್ನಡದ ಮಟ್ಟಿಗೆ ವ್ಯಾಸರ ನಂತರ ಎಂದು ಹೇಳಿರುವುದರಿಂದ - ವ್ಯಾಸರ ಕನ್ನಡ ಕೃತಿ ಯಾವುದೆಂಬ ಅನುಮಾನ ಬಾರದಿರದು. ಅದಿರಲಿ.


ಈಗ್ಗೆ ಒಂದು ವರ್ಷಗಳ ಹಿಂದೆ ಸುರಾನಾ ಕಾಲೇಜಿನಲ್ಲಿ ಕುವೆಂಪು ರಾಮಾಯಣ ದರ್ಶನಂ ಅನುವಾದಗಳ ಬಗ್ಗೆ ಒಂದು ವಿಚಾರ ಸಂಕಿರಣ ನಡೆದಿತ್ತು. ಆಗ ಭಾಗವಹಿಸಿದ್ದ, ಶತಾವಧಾನಿಗಳು, 'ಮೂಲರಾಮಾಯಣ'ದ ಕೆಲವು ಸನ್ನಿವೇಶಗಳನ್ನು (ಉದಾಹರಣೆಗೆ ಉದಾತ್ತ ರಾವಣನ ಚಿತ್ರಣ, ಸೀತೆಯೊಂದಿಗೆ ರಾಮನೂ ಅಗ್ನಿಪ್ರವೇಶ ಮಾಡುವುದು) ಕವಿ ಬದಲಾಯಿಸಿರುವುದು ಅಪರಾಧ ಎನ್ನುವಂತೆ ಮಾತನಾಡಿದ್ದರು.  ಅದಕ್ಕೆ ಹೆಚ್ಚಿನ ವಿವರಣೆ ಬಯಸಿ ಪ್ರಶ್ನೆ ಕೇಳಿದವರೊಂದಿಗೆ ಮುನಿಸಿಕೊಂಡು ಮೌನವಾಂತು ಕುಳಿತುಬಿಟ್ಟಿದ್ದರು.


ಈ ಹಿನ್ನೆಲಯುಲ್ಲಿ, ಈ ಸಂದರ್ಭದಲ್ಲಿ ನನ್ನನ್ನು ಕಾಡುತ್ತಿರುವ ಸಮಸ್ಯೆ ಇದು.


ಮೂಲರಾಮಾಯಣದಲ್ಲಿ ಇಲ್ಲದ 'ಆಂಜನೇಯ ಲಂಕೆಗೆ ಸಮುದ್ರವನ್ನು ಈಜಿಕೊಂಡು ಹೋಗುವ ಸನ್ನಿವೇಶ'ವನ್ನು ತಮ್ಮ ರಾಮಾಯಣದಲ್ಲಿ ಬರೆದಿರುವ ಮಾಸ್ತಿಯವರನ್ನು, ಹಾಗೂ ಆಧುನಿಕ ಪರಿಕಲ್ಪನೆಗಳೊಂದಿಗೆ, ಹಲವಾರು ಬದಲಾವಣೆಗಳೊಂದಿಗೆ ಮೂಲಮಹಾಭಾರತವನ್ನು 'ಪರ್ವ' ಕಾದಂಬರಿಯಲ್ಲಿ ಪುನರ್ರಚಿಸಿರುವ ಭೈರಪ್ಪನವರನ್ನು ವ್ಯಾಸರ ನಂತರದ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿಬಿಟ್ಟಿದ್ದಾರೆ.


ಈ ಇಬ್ಬಂದಿತನ ಏಕೆ?


ಇದು ಗಣೇಶ್ ಅವರ ಸ್ವತಂತ್ರ ಎಂದು ಸುಮ್ಮನಾಗುವುದೇ? ಅಥವಾ


ಕವಿಕಲ್ಪನೆ, ಕವಿಸ್ವತಂತ್ರ ಇವುಗಳನ್ನು ತಮಗೆ ಬೇಕಾದಾಗ ಸ್ವೀಕರಿಸುವ ಹಾಗೂ ತಿರಸ್ಕರಿಸುವ ಇಂತಹ ಮನೋಭಾವ ಶತಾವಧಾನಿಗಳಿಗೆ ಶೋಬಿಸುವುದೇ? ಅಥವಾ ಬಹುಭಾಷಾ ಬಹುಶೃತರಾದ ಶತಾವಧಾನಿಗಳಿಗೂ (ಜಾಣ) ಮರೆವು ಇದೆಯೇ? ಎಂದು ತಿಳಿದುಕೊಳ್ಳುವುದೇ?


ಇದು ಯಾವುದೇ ಕವಿಯ ಸ್ಥಾನ ನಿರ್ದೇಶನದ ಪ್ರಶ್ನೆಯಲ್ಲ. ಶತಾವಧಾನಿಗಳ ಮರೆವಿನ ಪ್ರಶ್ನೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet