ಅ ಕಪ್ ಓಫ್ ಕಾಫಿ ... ಸಿಪ್ - ೪೦

ಅ ಕಪ್ ಓಫ್ ಕಾಫಿ ... ಸಿಪ್ - ೪೦

ಸಿಪ್ - ೪೦

 

 

 

ಹಿಂದಿನ ಸಿಪ್ 



ರೆಬೆಲ್ ಆದ ಮೇಲೆ ಆಫೀಸ್ ನಲ್ಲಿ ನನ್ನನ್ನು ಗುರುತಿಸುವ ರೀತಿ ಬದಲಾಗಿತ್ತು. ಆಫೀಸ್ ಯಾವುದೇ ಇವೆಂಟ್ ಇರಲಿ ನಾನು ಅಲ್ಲಿರುತ್ತಿರಲಿಲ್ಲ. ಆರ್ಕುಟ್ ನಲ್ಲಿ ಫ್ರೆಂಡ್ ಆಗಿ ಜೋಡಿಯಾಗಿದ್ದ ತಿವಾರಿಯನ್ನು ಫ್ರೈಂಡ್ ಲಿಸ್ಟ್ ನಿಂದಲೂ ಮೊಬೈಲ್ ಕಾಂಟಾಕ್ಟ್ ಲಿಸ್ಟ್ ನಿಂದಲೂ ಅಳಿಸಿ ಹಾಕಿದ್ದೆ. ಒಂಬತ್ತರಿಂದ ಆರರ ಫಿಕ್ಸ್ ಟೈಮ್ ಗೆ ಆಫೀಸ್ ನಲ್ಲಿ ಇರುತಿದ್ದೆ. ಒಮ್ಮೆ ಮಾನ ಹೋದ ಮೇಲೆ ತಿವಾರಿಗೆ ವೀಕೆಂಡ್ ನಲ್ಲಿ ನನ್ನನ್ನು ಕರೆಯಲು ಬಾಯಿ ಬರಲಿಲ್ಲ. ಯಾವ ಮುಖ ಇಟ್ಟಾದರು ನನ್ನಲ್ಲಿ ಕೆಳಿಯಾನು. ಆಫಿಸ್ ನಲ್ಲಿ ನನಗೆ ಎಷ್ಟು ಅಗತ್ಯ ಇದೆಯೋ ಅದಕ್ಕೆ ಅನುಗುಣವಾಗಿ ಕೆಲಸ ಮಾಡುತಿದ್ದೆ. ಅವಿನಾಶ್ ಏನು ಹೇಳುತ್ತಿರಲಿಲ್ಲ.

ಮೊದಲಿಗೆ ಜೀವನ್ ನನ್ನಲ್ಲಿ ಮಾತನಾಡುತಿರಲಿಲ್ಲ, ನಂತರ ನಾನಾಗಿಯೇ ಮಾತು ಶುರು ಮಾಡಿದೆ. ಏನಾದರು ಹೆಚ್ಚು ಕೆಲಸ ಕೊಟ್ಟರೆ ಮಾಡಲು ಮನಸ್ಸು ಬರುತ್ತಿರಲಿಲ್ಲ, "ಮತ್ತೆ ನೋಡಿದರಾಯ್ತು, ಈಗ ಪೇಪರ್ ಓದ್ತಾ ಇದ್ದೇನೆ, ಉಟಕ್ಕೆ ಹೊತ್ತಾಯ್ತು"ಎನ್ನುತ್ತಾ ಅವನ ಕೆಲಸವನ್ನು ನಾನು ಏಳಕೊಳ್ಳುತ್ತಿರಲಿಲ್ಲ.
ಕೆಲವೊಮ್ಮೆ ಅವನು ಸಿಟ್ಟಾಗಿ "ನೀನು ಮುಂಚಿನಂತೆ ಇಲ್ಲ, ಬದಲಾಗಿದ್ದಿ" ಎನ್ನಲು ಶುರು ಮಾಡಿದೆ.
ಹೇಳ ಬೇಕು ಎಂದು ಹರಡಿಸಿದ ಡೈಲಾಗ್ ಅನ್ನು ನನ್ನಲ್ಲೇ ಇಟ್ಟಿರುತಿದ್ದೆ.

ವೀಕೆಂಡ್ ನಲ್ಲಿ  ಜೀವನ್ ಗೆ ಬೆಂಗಳೂರು ಎಳೆಯುತ್ತಿತ್ತು, ಒಂದು ವೀಕೆಂಡ್ ಅವನು ಅಲ್ಲಿ ಹೋಗುವುದು, ಇನ್ನೊಂದು ವೀಕೆಂಡ್ ಅವಳು ಇಲ್ಲಿ ಬರುವುದು ಶುರುವಾಗಿತ್ತು. ಪ್ರತಿ ಶುಕ್ರವಾರ ಬೆಳಗ್ಗಿನಿಂದ ಸಂಜೆ ವರೆಗೆ ನಮ್ಮಿಬ್ಬರ ಮೇಲೆ ಸಿಡಿಮಿಡಿ ಗೊಳ್ಳುತ್ತಾ ಇರುತಿದ್ದ. ಅವನ ವರ್ತನೆ ಮೊದಲಿಗೆ ನಮ್ಮಿಬ್ಬರಿಗೆ ಕೋಪ ಹುಟ್ಟಿಸಿದರೂ ವಾರ ಕಳೆದಂತೆ ಅದು ಮಾಮೂಲಾಗಿ ಕಾಣಲು ಶುರುವಾಯಿತು.

ಹೀಗಿರಲು ಒಂದು ದಿನ ನಾನು ಊರಿಗೆ ಹೊರಟಿದ್ದೆ, ವೀಕೆಂಡ್ ಪ್ರೀತಿ ಇಲ್ಲಿ ಬರುವ ಮಾತಾಗಿತ್ತು, ನಾನು ಅದನ್ನು ನೋಡಿ ನನ್ನ ಟ್ರಿಪ್ ಸೆಟ್ ಮಾಡಿಕೊಂಡಿದ್ದೆ.
ಅವನಲ್ಲಿ "ಜೀವನ್ ಕೆಲಸ ಮುಗಿದಿದೆ, ಒಂದು ಬಾರಿ ಇದನ್ನು ಟೆಸ್ಟ್ ಮಾಡಿ ಫಾರ್ವರ್ಡ್ ಮಾಡು, ಬಸ್ ಗೆ ಲೆಟ್ ಆಯ್ತು" ಎಂದು ಸಿಸ್ಟಮ್ ಅನ್ನು ಆರಿಸಿದೆ.
ಅವನು "ನಂಗೆ ನಿನ್ನ ಕೆಲಸ ಮಾಡಿದಕ್ಕೆ ಸಂಬಳ ಸಿಕ್ಕಲ್ಲಾ, ನಿನ್ಕೆಲ್ಸ ಮುಗ್ಸಿ ಹೋಗು" ಎಂದ ಖಡಕ್ಕಾಗಿ.
ಪ್ರತಿವಾರ ಅವನು ಹೇಳಿದಕ್ಕೆ ಮೊದಲು ಆಲಸ್ಯ ತೋರಿಸಿದರೂ ಮನೆಗೆ ಹೋಗುವ ಮೊದಲು ಮುಗಿಸಿ ಹೋಗುತಿದ್ದೆ, ಅದನ್ನು ಬಿಟ್ಟು ರೀತಿ ಎದುರು ಮಾತಾಡುತ್ತಿರಲಿಲ್ಲ. ಅವನ ನುಡಿಗಳು ನನ್ನನ್ನು ಕೆರಳಿತು.
ನಾನು "ಹೌದು ಸಂಬಳ ಕೊಡಲ್ಲ, ಬರಿ ನನ್ನ ಪ್ರೊಮೋಷನ್ ಕೊಡ್ತದೆ" ಎಂದೇ ತುಸು ಕೋಪದಲ್ಲೇ.
ಅದಕ್ಕವನು ಎಂದಿನಂತೆ "ವೈಭು ನೀನು ಬದಲಾಗಿದ್ದಿ, ಮೊದಲ ದಿನ ಭೇಟಿಯಾದ ಬೈಭುಗೂ ಇವತ್ತು ಇಲ್ಲಿ ಮಾತಾಡುವ ವೈಭುಗೂ ಅಜಗಜಾಂತರ ವ್ಯತ್ಯಾಸ ಇದೆ. ಬಾಲ್ಯದಲ್ಲಿ ನೋಡಿದ ವೈಭು ನೇ ಆದಿನ ನನ್ನ ಎದುರು ನಿಂತಿದ್ದ, ಯಾವುದೇ ಕಶ್ಮಲ ವಿಲ್ಲದ ಮುಗ್ದ ನೋಟ , ಮುಗ್ದ ಮನಸ್ಸಿನ ಹುಡುಗ, ಆದರೆ ಈಗ ಬೆಳದು ಬಿಟ್ಟಿ"
"
ಹೌದು ಬೆಳಿಬೇಕಲ್ಲಾ, ಇಲ್ಲನ್ತಂದ್ರೆ ನಿಮ್ಮಂತವರಿಗೆ ಗೊತ್ತಾಗುವುದು ಬೇಡವೇ"
"
ನೀನು ತುಂಬಾ ಬದಲಾದಿ ವೈಭು,ನಿನ್ನಿಂದ ಇಂತ ಮಾತು ನಾನು ಎಕ್ಸ್ಪೆಕ್ಟ್ ಮಾಡಿರಲಿಲ್ಲ"
"
ಹೌದು ಬದಲಾದೆ, ಏನು ಮಾಡುವುದು ಗ್ರೇಡ್ ಬದಲಿಸಬೇಕು ಅಂದುಕೊಂಡಿದ್ದೆ, ಸಾಧ್ಯವಾಗಲಿಲ್ಲ, ಅದಕ್ಕೆ ನನ್ನ ಇಮೇಜನ್ನೇ ಬದಲಿಸಿದೆ, ತಪ್ಪೇನು....?
ಮತ್ತೆ ನಾನು ನಿನ್ನಿಂದ ಮೋಸ ಎಕ್ಸ್ಪೆಕ್ಟ್ ಮಾಡಿದ್ದಿ ಅಂದುಕೊಂಡಿದ್ದಿಯಾ, ಯಾರು ನಿನ್ ಬಗ್ಗೆ ಏನಂದ್ರೂ ನನಗೆ ನಿನ್ನಲ್ಲಿ 'ನನ್ನ ಜೀವನ್ ನನಗೆ ರೀತಿ ಮಾಡಲಾರನು' ಎಂಬ ನಂಬಿಕೆ ಇತ್ತು, ನಂಬಿಕೆ ದ್ರೋಹಕ್ಕೆ ನಾನು ಬದಲಾದೆ, ತಪ್ಪೇನು...?"
ಅವನು ಸುಮ್ಮನಾದ "ಓಕೆ , ನೀನು ಹೋಗು ನಿನ್ ಕೆಲಸ ನಾನು ನೋಡ್ತೇನೆ ಮನಸ್ಸು ನೋಯಿಸಿದ್ರೆ ಸೋರಿ ವೈಭು"ಎಂದು ಹತ್ತಿರವಾಗಲು ಪ್ರಯತ್ನಿಸಿದ.
"
ಬೇಕಾಗಿಲ್ಲ, ನಾನೇ ಮಾಡಿ ಹೋಗ್ತೇನೆ..." ಎನ್ನುತ್ತಾ ಸಿಸ್ಟಂ ಆನ್ ಮಾಡಿದೆ.

ಅವನ ಮನಸ್ಸು ಗೊಂದಲದ ಗೂಡಾಗಿತ್ತು. ಅವನು ಸಿಸ್ಟಮ್ ನಿಂದ ಎದ್ದು ಹೊರ ಹೋದ.
ಡ್ರೀಮ್ ಟೆಕ್ ಚಾರಿಟಿ ಫೌಂಡೆಶನ್ ಮೇಲ್ ಪೋಪ್ ಅಪ್ ನಲ್ಲಿ ಕಾಣಲಾರಂಬಿಸಿತು.
"
ಇವರಿಗೆ ಕೊಡುವುದನ್ನು ನಾನು ಆಗಲೇ ಕೊಟ್ಟಾಗಿದೆ" ಎಂದೇ ಕೋಪದಲ್ಲಿ.
ಅವಿನಾಶ್ "ಇದು ಇವತ್ತೇ ಬಂದದ್ದು ಮಕ್ಕಳ ವಿದ್ಯಾಬ್ಯಾಸ ವನ್ನು ದತ್ತಿಗೆ ತೆಗೆದು ಕೊಳ್ಳುವ ಕಾರ್ಯ, ನೀನು ಡೊನೆಟ್  ಮಾಡಿದ್ದು ಓಲ್ಡ್ ಏಜ್ ಹೋಂ ಗೆ ಅಲ್ಲ ..?" ಎಂದ.
"
ಹೌದು ಓಲ್ಡ್ ಏಜ್ ಹೋಂ ಗೆ ತಿಂಗಳಿಗೆ ೫೦೦ ಪ್ರಕಾರ ೬೦೦೦ಸಾವೀರ ಜೋಯಿನ್ ಆದ ಮೊದಲ ವರ್ಷದಲ್ಲಿ ಕಟ್ಟಿದ್ದೆ, ಇದಕ್ಕೆ ನಾನು ಅರವತ್ತು ಸಾವಿರ ಡೊನೆಶನ್ ಕೊಟ್ಟಿದ್ದೇನೆ, ಇನ್ಯಾವಗಳು ಡೊನೇಶನ್ ಸುಳಿಗೆ ಬೀಳಲ್ಲ, ಮುಗೀತು ಕೊಟ್ಟು ಕೊಟ್ಟು" ಅಂದೇ ಹತಾಶನಾಗಿ.
"
ಅರವತ್ತು ಸಾವಿರ ಕೊಟ್ಟಿಯಾ...?" ಅಂದ ಆಶ್ಚರ್ಯದಲ್ಲಿ.
"
ಹಮ್ ಮತ್ತೆ , ಲಾಸ್ಟ್ ಯೀರ್ ನನ್ನ ಬ್ಯಾಂಡ್ ಅವರಿಗೆ ಧಾನ ಮಾಡಿ ಆಗಿದೆ, ಅವರು ಅದನ್ನು ಯಾವುದಕ್ಕೆ ಬೇಕಾದ್ರೂ ಹಾಕೋ ಬಹುದು" ಅಂದೆ.
"
ಸಹಿ ಹೇ ಬಾಯ್ !!" ಎನ್ನುತ್ತಾ ನಕ್ಕ.

ಟೆಸ್ಟ್ ಮಾಡಲಿಲ್ಲ ಬಸ್ ಗೆ ಲೇಟ ಆಯ್ತು ಹೇಳಿ ಅದನ್ನು ಹಾಗೆ ಫಾರ್ವರ್ಡ್ ಮಾಡಿ ಮೇಲೆದ್ದು ಹೊರಟೆ,

ಅವಿನಾಶ್ನಲ್ಲಿ ನಾನು ನನನ್ನು ಬಸ್ ಸ್ಟ್ಯಾಂಡ್ ವರೆಗೆ ಬಿಡಲು ಹೇಳಿದೆ. ಇಲ್ಲಿವರೆಗೆ ಜೀವನನ್ನು ಆಶ್ರಯಿಸಿ ಇರುತಿದ್ದೆ, ಇವತ್ತು ಅಚಾನಕ್ಕಾಗಿ ಅವಿನಾಶ್ ಗೆ ಆಶ್ರಯಿಸಿದ್ದು ನೋಡಿ ಜೀವನ್ ನಲ್ಲಿ ಚೂರು ಇರುಸು ಮುರಿಸು ಮೂಡಿಸಿತು.

ಅವನು ಬಂದ ಚಾರಿಟಿ ಮೇಲ್ ಗೆ ರೆಸ್ಪೊಂಡ್ ಮಾಡುತಿದ್ದ.
ಅವಿನಾಶ್ ಹಿಂದಿನಂತೆ ಗಮನ ಬೇರೆಡೆ ಎಳೆಯಲು "ಕುಚ್ ದೇ ರಹೇ ಹೋ ಕ್ಯಾ ನಹಿನ್ ಉನ್ಹೇ ...? ಲಡ್ಕೆ ಕೋ ದೇಖ್ ಕೆ ಸೀಕ್ಲೋ..." ಎನ್ನುತ್ತಾ ಗೇಲಿ ಮಾಡಿದ.
ಅವನು ಇದನ್ನು ಚೂರು ಸೇರಿಯಸ್ ಆಗೇ ತೆಕೊಂಡು "ಬಾಯ್ ೧೦ ಬಚ್ಚೊಂಕೋ ಏಕ ಸಾಲ್ ತಕ್ ಆಡೋಪ್ಟ್ ಕರ್ಲಿಯ ಭಾಯ್ " ಅಂದ.
"
೫೦,೦೦೦ !! ಗ್ರೇಟ್ ಬಾಯ್ " ಎಂದ
ನಾನು ಪ್ರತಿಸ್ಪಂದಿಸಲಿಲ್ಲ, ಕ್ಯುಬಿಕಲ್ ಬಿಟ್ಟೆ, ಅವಿನಾಶ್ ನನ್ನ ಹಿಂದೆ ಬಂದ.

ಲಿಫ್ಟ್ ನಲ್ಲಿ "ನಿನ್ನ ಭಿಕ್ಷೆಯನ್ನು ಅವನು ಧಾನ ಮಾಡಿದ, ನಿನಗೆ ದಯೆ ಸಿಕ್ತು, ಅವನಿಗೆ ಅದನ್ನು ಧಾನ ಮಾಡಿ ಪುಣ್ಯ !!!" ಎಂದ. ಜೀವನ್ ಮೇಲೆ ನನ್ನ ಮಾತಿನ ಪರಿಣಾಮ ಬಿದದ್ದು ಅವನ ನಡೆಯಿಂದ ಅಲ್ಪಸಲ್ಪವಾಗಿ ಗೋಚರಿಸಿತು.

 

ಪಿತ್ರಾರರ್ಜಿತ ಆಸ್ತಿ ವ್ಯವಹಾರ ಬಗೆ ಹರಿಸಲು ನಾನು ಊರಿಗೆ ಹೋಗಿದ್ದೆ. ಎಲ್ಲರು ನಮಗೆ ಬೇಕಾದವರೇ ಸರಿ ಇರುವ ವರೆಗೆ, ಅದೇ ಕಾಲ ಕೆಟ್ಟರೆ ಎಲ್ಲರು ನಮ್ಮ ಮೇಲೆ ಹೋಗೆ ಉಗುಳುವವರೇ, ಇದನ್ನು ಮನಗೊಂಡು ತಂದೆಯವರು ತನ್ನ ತಮ್ಮ ತಂಗಿಯರಿಗೆ ಅಜ್ಜನ ಪಾಲಿನ ಆಸ್ತಿಯನ್ನು ಹಂಚಲು ಮುಂದಾಗಿದ್ದರು. ಅವರಿಗೂ ಅರವತ್ತು ದಾಟಿತ್ತು, ವ್ಯವಹಾರ ನನ್ನ ಗಮನದಲ್ಲಿರಲಿ ಎಂದು ಪುಣೆಯಿಂದ ನನ್ನನ್ನು ಕರೆದಿದ್ದರು.

ಒಟ್ಟು ಮೂರು ಜನ ಅಣ್ಣ ತಮ್ಮಂದಿರು ತಂದೆಗೆ, ಇಬ್ಬರು ಸೋದರಿಯರು. ಎಲ್ಲರು ಆರ್ಥಿಕವಾಗಿ ಸಫಲರೆ, ಆದರೆ ತಂದೆಯ ಆಸ್ತಿ ಪಾಲಾಗುತ್ತಿದೆ ಎಂದು ಗೊತ್ತಾದಾಗ ಎಲ್ಲರು ಅಲ್ಲಿ ನೆರೆದಿದ್ದರು.ಚಿಕ್ಕಪ್ಪ ರಾಮ ಇದ್ದವರಲ್ಲಿ ಸಲ್ಪ ಅಸಫಲ ಅವರು ಪ್ರೈಮರಿ ಸ್ಕೂಲ್ ಟೀಚರ್ ಆಗಿ ಸೇವೆಯಲ್ಲಿದ್ದರು ಬರುವ ವರ್ಷ ಅವರು ನಿವೃತ್ತಿ ಹೊಂದುತಿದ್ದರು, ಅವರ ಒಬ್ಬನೇ ಮಗ ಓದುವುದರಲ್ಲಿ ದಡ್ಡ, ಪಿಯು ಗೆ ಓದು ನಿಲ್ಲಿಸಿ ನನ್ನ ತಂದೆಯ ವ್ಯವಹಾರದಲ್ಲಿ ಜೊತೆಯಾಗಿದ್ದ. ಅವನಿಗೆ ಸಣ್ಣವ ಮಧು, ಅವನಿಗೆ ಇಬ್ಬರು ಹೆಣ್ಣು. ಒಬ್ಬಳು ಇಂಜಿನಿಯರಿಂಗ್ ಮತ್ತು ಇನ್ನೊಬ್ಬಳು ಈಗ ಪಿಯು ನಲ್ಲಿ ಓದುತಿದ್ದಳು, ಅವರೂ ತಂದೆಯವರೊಡನೆ ವ್ಯಾಪಾರದಲ್ಲಿ ಸಹಭಾಗಿಯಾಗಿದ್ದರು.

ವಿಭಾ, ಮತ್ತು ಪ್ರಭಾ ಅತ್ತೆ ಯವರು ಬಂದಿದ್ದರು; ಮನೆತುಂಬಾ ಮಕ್ಕಳು ಪಾಲಿನ ಹಕ್ಕು ಕೇಳಲು ಸಾಲಲ್ಲಿ ನಿಂತಿದ್ದರು. ವರ್ಷಳೂ ಜೋತೆಯಲ್ಲಿದ್ದಳು.

ಎಲ್ಲರಿಗೆ ದೊಡ್ಡವನಾದ ನನ್ನ ತಂದೆ "ನನ್ನ ಜವಾಬ್ಧಾರಿ ಮುಗಿತು, ಮಗಳಿಗೆ ಮದುವೆ ಆಯಿತು, ದೇವರ ದಯೆಯಲ್ಲಿ ಅವಳಿಗೆ ಒಳ್ಳೆ ಸಂಭಂದನೆ ಸಿಕ್ಕಿತು, ಮಗನಿಗೆ ಒಳ್ಳೆಯ ಕೆಲಸ ಆಯಿತು, ಇನ್ನು ನಾನು ನಿಮ್ಮ ಅತ್ತಿಗೆ ಅವನೆಲ್ಲಿ ಇರ್ತಾನೆ ಅಲ್ಲಿ ಹೋಗಿ ನಿಲ್ತೇವೆ, ಆದಕಾರಣ ಮನೆಯ ಮೇಲೆ ನಮಗೆ ಯಾವುದೇ ಆಶೆ ಇಲ್ಲ. ಮೂವರು ಅಣ್ಣ ತಮ್ಮಂದಿರಿಗೆ ಇರುವುದು ಇಬ್ಬರೇ ಹುಡುಗರು, ವೈಭು ಇಲ್ಲಿ ಊರಲ್ಲಿ ಇರಲ್ಲ, ಇನ್ನು ಉಳಿದದ್ದು ಗೌರವ್ ಅವನಿಗೆ ಮನೆಯ ಅಧಿಕಾರ"
ಯಾರದಾದರೂ ಒಬ್ಜೆಕ್ಷನ್ ಇದ್ದರೆ ತಿಳಿಸ ಬಹುದು."
ಅವರ ಮಾತು ಎಲ್ಲರಿಗೆ ಒಪ್ಪಿಗೆ ಇತ್ತು. ಅವರೂ ಮುಂದುವರಿಸಿದರು "ಮನೆಯ ಅಧಿಕಾರ ಸದ್ಯಕ್ಕೆ ಸಂಪೂರ್ಣ ಅವನದಲ್ಲ, ಈಗ ಇಬ್ಬರು ತಮ್ಮನ್ದಿರಿಗೂ ಅಧಿಕಾರವಿದೆ ಅವರ ನಂತರ ಇದರ ಎಲ್ಲ ಅಧಿಕಾರ ಅವನದ್ದು."
ಮಾತಿನಿಂದ ಕಿರಿಯ ಚಿಕಪ್ಪ ಮತ್ತು ಚಿಕಮ್ಮನ ಮುಕ ಒಮ್ಮೆಗೆ ಅರಳಿತು.
ತಂದೆ ಮುಂದುವರಿಸಿದರು "ಅಂಗಡಿಯ ವಿಚಾರಕ್ಕೆ ಬರುವುದಾದರೆ, ಇನ್ನು ಮುಂದೆ ನಾನು ಅಂಗಡಿಯ ವಿಚಾರಕ್ಕೆ ತಲೆ ಹಾಕಲ್ಲ, ಗೌರವ್ ಈಗ ಬೆಳೆದಿದ್ದಾನೆ ಅವನು ತನ್ನ ಚಿಕ್ಕಪ್ಪನಿಗೆ ಜೋಡಿಯಾಗಿ ನಿಲ್ಲಬಲ್ಲ, ಆರು ತಿಂಗಳಲ್ಲಿ ಮೊದಲನೆಯವನು ರಿಟಯರ್ ಆಗುವುದರಿಂದ ಅವನು ನಿಮ್ಮಿಬ್ಬರಿಗೆ ಸಹಾಯಕ ನಾಗಿ ನಿಲ್ಲುವನು."
ಇಬ್ಬರು ಚಿಕ್ಕಪ್ಪಂದಿರು ಅವರ ಮಾತಿಗೆ ಒಪ್ಪಿಗೆ ಇಟ್ಟರು.
"
ಮತ್ತೆ , ಲಾಭಾನಷ್ಟ ಕ್ಕೆ ಬರುವುದಾದರೆ ಕೊನೆಯ ತಮ್ಮ ಮಧುವಿಗೆ ೬೦ಗೌರವ್ ಮತ್ತು ರಾಮನಿಗೆ ಸೇರಿ ೪೦ %, ಯಾಕೆಂದರೆ ಸಣ್ಣವನಿಗೆ ಎರಡು ಹೆಣ್ಣು ಹುಡುಗಿಯರ ಶಿಕ್ಷಣ/ಮದುವೆಯ ಕೆಲಸ ಮಾಡುವುದಿದೆ"
ಇದೂ  ಇಬ್ಬರಿಗೂ ಒಪ್ಪಿಗೆ ಯಾಯಿತು.
"
ಇನ್ನು ತಂದೆಯ ಹೆಸರಲ್ಲಿ ಇರುವ ಜಮೀನಿನ ವಿಷಯಕ್ಕೆ ಬಂದರೆ, ೧೫ ಎಕರೆಯ ಜಮೀನನ್ನು ಮಕ್ಕಳ ನಡುವೆ ಸಮವಾಗಿ ಹಂಚುವುದು. ಒಬ್ಬೊಬ್ಬರಿಗೆ ಐದು ಐದು ಎಕರೆಯ ಪ್ರಕಾರ, ಒಂದುವೇಳೆ ಅವರಿಗೆ ಜಮೀನು ಬೇಡ ವೆಂದರೆ ಅದನ್ನು  ಸೋದರರಿಗೆ ಮಾರ್ಕೆಟ್ ಬೆಲೆಗೆ ಮಾರಿ ಅವನಿಂದ ಹಣ ವಸೂಲಿ ಮಾಡಿಕೊಳ್ಳಬಹುದು"
ತಂಗಿಯಂದಿರು ಇದಕ್ಕೆ ಸಮ್ಮತಿಸಿದರು.
"
ಕೊನೆಯದಾಗಿ ನಾನು ನನ್ನ ಹೆಂಡತಿ ಮನೆ ಬಿಟ್ಟು ಹೋಗುವ ಸಮಯಕ್ಕೆ, ನಾನು ನನ್ನ ಜೀವನಾಂಶವಾಗಿ ಅಗಡಿಯ ಬಳಿ ಇರುವ ಒಂದು ರೂಮಿನ ಬಾಡಿಗೆಯನ್ನು ನನ್ನ ಪಾಲಿಗೆ ತೆಗೆದುಕೊಳ್ಳುತ್ತೇನೆ, ಉಳಿದಂತೆ ಉಳಿದ ಮೂರು ಅಂಗಡಿ ಕೋಣೆಗಳ ಅಧಿಕಾರವು ಎರಡು ತಮ್ಮ ಮತ್ತು ಗೌರವನ ಹಕ್ಕಾಗಿರುತ್ತದೆ." ಎಂದರು.
ಎಲ್ಲರಿಗೆ ತಂದೆಯ ನಿರ್ಣಯದ ಸ್ವಾಗತ ವಿತ್ತು.
ನಡೆದ ಚರ್ಚೆ ವಿಷಯಗಳನ್ನು ನಮ್ಮ ಅಡ್ವಕೇಟ್  ರಾಜೇಶ್ ಬಾಂಡ್ ಪೆಪೆರ್ನಲ್ಲಿ ಬರೆದು ಅಲ್ಲಿ ಇದ್ದವರ ಕೈಯಲ್ಲಿ ಸಹಿ ತೆಗೆದುಕೊಂಡು ಅದನ್ನು ರಿಜಿಸ್ತ್ರಿ ಮಾಡಿಸುವುದಾಗಿ ತಿಳಿಸಿದ.

ಯಾರಲ್ಲೂ ಅಸಮಧಾನ ವಿರಲಿಲ್ಲ, ಎಲ್ಲ ಸುಸೂತ್ರವಾಗಿ ನಡೆದಿತ್ತು. ಮನೆಯಲ್ಲಿ ಹೆಂಗಸರು ಒಟ್ಟಾದರು ಎಂದರೆ ಹಿಡಿ ಹೊತ್ತು ಗೊಜೋ ಗೊಜೋ ನಡೆದೇ ಇತ್ತು.
ಪ್ರಭಾ ಅತ್ತೆ ಅಮ್ಮನಲ್ಲಿ "ವೈಭು ಗೆ ಯಾವಾಗ ಮದುವೆ ಮಾಡ್ತೀರಿ ಅತ್ತಿಗೆ...?"
"
ನಮಗೇನೋ ಅವನ ಮದುವೆ ಮುಂದಿನ ಬೇಸಗೆಯಲ್ಲಿ ಮಾಡಿಸುವ ಆಸೆ, ಆದರೆ ಅವನು ಏನೋ ಸೆಟ್ಟಲ್ ಆಗಬೇಕು ಅಂತಾನೆ" ಅಂದರು.
ಪ್ರಭಾ ಅತ್ತೆ ನನ್ನನ್ನು ಕರೆದು "ಏನೋ , ಅದು ನಿನ್ನ ಸೆಟ್ಟಲ್ ಆಗುವುದು ...?"
"
ಮತ್ತೆ ಮದುವೆ ಆದ್ರೆ ಆಯ್ತಾ ಹೆಂಡ್ತಿ ಹೊಟ್ಟೆ ತುಂಬಿಸೋದು ಬೇಡ್ವಾ...?" ಅಂದೆ ನಾನು.
"
ನಮ್ಮ ಕೈಕಾಲು ಆಡುವಾಗ್ಲೆ ಮದುವೆ ಮಾಡ್ಕೋ ಮಗಾ, ಶುಗರ್ ಬಿ.ಪಿ ಬರುವ ಮೊದಲೇ, ನಂತರ ಉಪ್ಪು ಖಾರ ತಿನ್ನ ಬಾರದು ಅಂತ ಡಾಕ್ಟರ್ ಹೇಳಿದ ಮೇಲೆ ಮದುವೆ ಊಟ ಹಾಕಿಸ್ಬೇಡ, ತಿಳೀತ..." ಅಂದರು ಪ್ರಭಾ ಅತ್ತೆ.

"
ಹೆಂಗಸರಿಗೆ ಮದುವೆ ಅಂದ್ರೆ ಬರೀ ಸೀರೆ ಸುತ್ತಿ ಹರಟೆ ಹೊಡೆಯುತ್ತ ಆಭರಣವನ್ನು ಪ್ರದರ್ಶನಕ್ಕೆ ಇಡುವ ಸಮಾರಂಭ, ಒಂದು ಮದುವೆ ಊಟ ಮುಗಿಸಿದಾಗ, ಇನ್ನು ಯಾರನ್ನು ಹಳ್ಳಕ್ಕೆ ಬೀಳಿಸುವುದು ಎಂದು ಕಾಯ್ತಾ ಇರ್ತಾರೆ, ಗಂಡಸರ ಕಷ್ಟ ಇವರಿಗೇನು ಗೊತ್ತು"
"
ಗಂಡಸೇ ಏನಪ್ಪಾ ನಿನ್ನ ಕಷ್ಟ, ಒಳ್ಳೆ ಕೆಲಸ ಇದೆ,ಸಂಬಳ ಇದೆ, ಮದುವೆ ಮಾಡ್ಕೊಳ್ಳೋಕೆ ಏನಪ್ಪಾ ನಿನಗೆ ದಾಡಿ,,,?"
"
ಏನೂ ಇಲ್ಲ, ಯಾರಿಗೆ ಬೇಕು ರಗಳೆ, ಹೆಂಡತಿ ಮಕ್ಕಳು ಎನ್ನುವ ಕಿರಿಕಿರಿ ...?"
"
ಹೆಂಡತಿ ಬರಲಿ ಅವಳ ಎದುರಿಗೆ ಹೀಗೆ ಮಾತಾಡು, ಆಗ ನಾವು ನೋಡ್ತೇವೆ, ಹೆಂಡತಿ ಬಂದ ಮೇಲೆ ಅವಳ ಕುಂಡೆ ಹಿಂದೆ ಸುತ್ತುವವರೇ ಎಲ್ಲಾ, ಈಗ ದೊಡ್ಡ ಮಾತಾಡ್ತಾರೆ.."
"
ನಾನೇನು ಅವಳ ಹಿಂದೆ ಸುತ್ತಲ್ಲ, ಅವಳೇ ನನಗೆ ಕೈ ಮುಗೀಬೇಕು" ಅಂದೆ ನಾನು.
ವರ್ಷ ನಡುವಲ್ಲಿ ಬಂದು "ಹೌದು, ವೈಭುವನ್ನು ಪಡೆಯಲು, ಅವಳು ಪುಣ್ಯ ಮಾಡಿರಬೇಕು... ಎಲ್ಲ ಗೊತ್ತು ಹುಡುಗನಿಗೆ, ಗುಣದಲ್ಲಿ ಬಂಗಾರ, ರೂಪದಲ್ಲಿ ರಾಜ." ಎಂದಳು ನನ್ನನ್ನು ನೋಡುತ್ತಾ.
ಬಲಗೈ ಯಲ್ಲಿ ಅವಳಿಗೆ ಸಲ್ಪ ಸುಮ್ನೆ ಇರ್ತೀಯ ಹೇಳಿ ಸಜ್ನೆ ಮಾಡಿದೆ.
ಅವಳು ಸುಮ್ಮನಾದಳು.
ಪ್ರಭಾ ಅತ್ತೆ ನಮ್ಮ ಕೆಮೆಸ್ಟ್ರಿ ನೋಡುತ್ತಾ "ಅತ್ತಿಗೆ ನಿಮಗೆ ಏನನ್ಸುತ್ತೆ ವರ್ಷಾ ನೂ ವೈಭು ನೋಡಿದ್ರೆ...?"
"
ಅನ್ಸುದೇನು ಬಂತು, ಸಣ್ಣವರಿಂದ ಒಟ್ಟಿಗೆ ಬೆಳೆದವರು, ಒಳ್ಳೆಯ ಹೊಂದಾಣಿಕೆ ಇದೆ.ಇಬ್ಬರಿಗೆ ಒಪ್ಪಿಗೆ ಇದ್ರೆ ನಮಗೂ ಒಪ್ಪಿಗೇನೆ..." ಎಂದರು ಅಮ್ಮ.
ಇಲ್ಲಿ ವರೆಗೆ ನನ್ನನ್ನು ಅಟ್ಟಕ್ಕೆ ಏರಿಸಿದ ವರ್ಷಾ "ಯೆಬ್ಬೆ ಇವನು ನನ್ನ ಗಂಡನಾ , ಯ್ಯಾಕ್ ..." ಎಂದು ಅಸಮ್ಮತಿ ತೋರಿಸುವಂತೆ ನಾಟಕ ಆಡಿದಳು.

ಅವಳ ಅಭಿನಯ ನನಗೆ ಗೊತ್ತಿತ್ತು. ಕಾರಣ ಅವಳಿಗೆ ನನ್ನ ಪ್ರತಿ ಪ್ರೇಮ ಕಥೆಯ ಅರಿವಿತ್ತು, ಸದ್ಯಕ್ಕೆ ಆಕೃತಿಯೊಂದಿಗೆ ಇರುವ ಜಬರ್ದಸ್ತ್ ಫೀಲಿಂಗ್ಸ್ ಆಳನೂ ತಿಳಿದಿತ್ತು.
ವಿಭಾ ಅತ್ತೆ, ಮಗಳಲ್ಲಿ "ಈಗ ನೀನೆ ಅಂದಿಯಲ್ಲ ರಾಜ, ಇವನನಿಂದ ಕಟ್ಟಿಸಿ ಕೊಳ್ಳುವವಳು ಪುಣ್ಯ ಮಾಡಬೇಕು ಹೇಳಿ, ಈಗ ನೀನೆ ಯಾಕ್ ಅನ್ತಿದ್ದಿಯಾ...? ವಿಚಿತ್ರ ಹುಡ್ಗಿನಪ್ಪ...!! ನಿನ್ನನ್ನು ಯಾರು ಕಟ್ಕೊಳ್ತ್ತಾರೆ ನೋಡ್ಬೇಕು ನನಗೆ" ಎಂದರು.
ಅವಳು "ಯಾರು ಕಟ್ಕೊಳ್ಬೇಕಂತಿಲ್ಲ .. ಹೀಗೆ ಇರ್ತೇನೆ ಸಿಂಗಲ್ ಆಗಿ" ಎಂದಳು ವರ್ಷ.
ಪ್ರಭಾ ಅತ್ತೆ ಮತ್ತೆ ಶುರುಮಾಡಿದರು "ಈಗಿನ ಹುಡುಗ ಹುಡುಗೀರನ್ನ ಅರ್ಥ ಮಾಡುವುದೇ ಕಷ್ಟ ದೇವ್ರೇ ಕಾಪಾಡಬೇಕು ಇವರನ್ನ"
"
ದೇವರಿಗೂ ಉಳಿವಿಲ್ಲ ಅತ್ತೆ, ನಮ್ಮನ್ನು ಕಾಪಾಡ್ಲಿಕ್ಕೆ ಬಂದ್ರೆ" ಎನ್ನುತ್ತಾ ನಾನು ನನ್ನ ರೂಮಿಗೆ ಬಂದೆ.

ವರ್ಷ ನನ್ನ ಹಿಂದೆಯೇ ಬಂದಳು "ಹೇಗಿತ್ತು ನಂ ಡೈಲಾಗ್ ...?"
"
ಮುಂದೆ ಕಥೆ ಬರೆದಾಗ ನೆನಪಿತ್ಕೊಂಡು ಅದರಲ್ಲಿ ಹಾಕ್ತೇನೆಎಂದು ನಕ್ಕೆ.
"
ನೀನು ಕಥೆ ಬರ್ದ್ರೆ ನೀನೆ ಓದಬೇಕು, ಬೇರೆ ಯಾರು ಓದಲ್ಲ, ತಿಳೀತಾ...?"
"
ಓದದಿದ್ರೆ ಪರವಾಗಿಲ್ಲ, ನಾನು ಓದಿ ಹೇಳ್ತೇನೆ.."
"
ಕೇಳುವವರು ಇರಬೇಕಲ್ಲ...?"
"
ಇಲ್ದೆ ಮತ್ತೆ...?  ನಿಂಗೆ ಗೊತಿಲ್ವಾ...?"
"
ಮಲಯಾಳಿ ಹುಡುಗೀನೆ ಕೇಳಬೇಕು ನಿನ್ನ ಪಿಟೀಲನ್ನ, ಬೇರೆಯಾರು ಕೇಳಲಿಕ್ಕೆ ಇಲ್ಲ"
"
ಓಯ್ ಅವಳು ಮಲಯಾಳಿಯಲ್ಲ, ತಮಿಳ್ ಹುಡುಗಿ, ಎಷ್ಟು ಸರ್ತಿ ನಿಂಗೆ ಹೇಳ್ಬೇಕು" ಅಂದೆ ನಾನು
"
ಅವಳಿಗೆ ಮಲಯಾಳಿ ಹೇಳಿದರೆ ಏರುವುದು ನೋಡು ಮಗನಿಗೆ... ಮತ್ತೆ ನಿನ್ನ ಮಂಗಳೂರಿನ ಸೆಟಪ್ ಏನಾದಳು...?" ಅಂದಳು ವರ್ಷ.
"
ಎನಾದ್ಲಾ ಗೊತ್ತಿಲ್ಲ,ಈಗ ಸದ್ಯಕ್ಕೆ ಇನ್ನೊಬ್ಬನನ್ನು ಡೀಪ್ ಆಗಿ ಪ್ರೀತಿಸ್ತಾ ಇದ್ದಾಳೆ"
"
ಏನವಳು ಚಿಟ್ಟೆನ ಒಂದು ಹೂವಿಂದ ಇನ್ನೊಂದು ಹೂವಿಗೆ ಹಾರ್ತಾ ಇದ್ದಾಳೆ...?"
"
ಹುಡುಗರೆನ್ನುವ ಹೂ ಇರುವ ವರೆಗೆ ಚಿಟ್ಟೆ ಹಾರ್ತಾ ಇರುತ್ತೆ." ಅಂದೆ.
"
ಮತ್ತೆ ಹೇಗಿದೆ ತಮಿಳ್ ನಾಡು... ನೀರೆಲ್ಲ ಸರಿ ಬಿಡ್ತಾ ಇದ್ದರಲ್ಲ ನಮ್ಮ ಜನ... ಏನು ತೊಂದರೆ ಇಲ್ಲ ಅಲ್ಲ ಅಲ್ಲಿ"
"
ಓಯ್ ನಿಂಗೆ ಬಿಟ್ರೆ ನಂ ಬುಡಕ್ಕೆ ಬಂದು ಬಿಡ್ತೀಯಾ...ನಿನ್ನಾ..." ಎನ್ನುತ್ತಾ ಅವಳನ್ನು ಅಟ್ಟಿಸಿಕೊಂಡು ಹೋದೆ. ಬೆಳೆದು ದೊಡ್ಡವರಾದರೂ ನಮ್ಮಿಬ್ಬರ ಮದ್ಯ ಅದೇ ಬಾಲ್ಯ ಇತ್ತು.

ಹೆಜ್ಜೆಗಳು ಸೋತು ಕುಸಿದಳು, ಕೈಕೊಟ್ಟು ಮೇಲೆತ್ತಿದೆ. "ಥ್ಯಾಂಕ್ಸ್ ವೈಭು" ಎಂದಳು
ಜಗಲಿಯ ಮೇಲಿದ್ದ ಪ್ರಭಾ ಅತ್ತೆ ಸೋದರಿ ವಿಭಾ ಮತ್ತು ಅಮ್ಮನಲ್ಲಿ "ಮುಂದಿನ ಬೇಸಿಗೆಗೆ ಹೇಗೋ ಅವಳದು ಮೆಡಿಕಲ್ ಮುಗಿಯುತ್ತೆ, ಊದಿಸಿಬಿಡಿ ವಾಲಗ, ಎಂಜಿನೀರ್ ಡಾಕ್ಟರ್ ಜೋಡಿ ಚೆನ್ನಾಗಿರುತ್ತೆ"
ಜಗಲಿ ಮೇಲೆ ಬರಲು ಮೂವರು ಕೈ ಕೈ ಹಿಡಿದ ನಮ್ಮಿಬ್ಬರನ್ನು ಉಂಗುಸ್ಟದಿಂದ ತಲೆವರೆಗೆ ನೋಡಲು ಶುರುಮಾಡಿದರು.

ನಾನು ವರ್ಷ ಜೊತೆಯಾಗಿ "ಏನು ಫಿಟ್ಟಿನ್ಗಾ... ?"

 

 

ಮುಂದಿನ ಸಿಪ್

Rating
No votes yet