ಅಭ್ಯಾಸ - ೧೯ : ಅಂಬಿಕಾತನಯದತ್ತ
ಅಭ್ಯಾಸ - ೧೯ : ಅಂಬಿಕಾತನಯದತ್ತ
ಸ್ನೇಹಿತರೆ,
ಜನವರಿ ತಿಂಗಳಿನಲ್ಲಿ ತಮಗೀಗಾಗಲೇ ತಿಳಿದಿರುವಂತೆ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯದ ಅಭ್ಯಾಸ ಮುಂದುವರಿಯಲಿದೆ.
ಈ ಅಭ್ಯಾಸವು ಜನವರಿ ೨೨ ಭಾನುವಾರದಂದು ಬೆಳಗ್ಗೆ ೧೦.೪೫ಕ್ಕೆ ಪ್ರಾರಂಭವಾಗುತ್ತದೆ. ಮೊದಲಿಗೆ ಬೇಂದ್ರೆಯವರ ಕಾವ್ಯದ ಬಗ್ಗೆ ಶ್ರೀ ಎಸ್ ಆರ್ ವಿಜಯಶಂಕರ ಅವರು ನಮಗೆ ವ್ಯಾಖ್ಯಾನ ಮಾಡಲಿದ್ದಾರೆ. ಈ ವ್ಯಾಖ್ಯಾನದ ವಿಷಯ ’ಬೇಂದ್ರೆಯವರ ಕಾವ್ಯದಲ್ಲಿ ಸೂರ್ಯ’.
ನಂತರ ಮಧ್ಯಾಹ್ನ ೧೨.೧೫ಕ್ಕೆ ಶ್ರೀಮತಿ ಗಾರ್ಗಿ ಪಂಚಾಂಗಂ ಅವರು ತಮ್ಮ ಸುಮಧುರ ಕಂಠದಿಂದ ಬೇಂದ್ರೆಯವರ ಆಯ್ದ ಕವಿತೆಗಳನ್ನು ಹಾಡಲಿದ್ದಾರೆ.
ನಾವೆಲ್ಲರೂ ಕೂಡಿ ೧೨.೪೫ಕ್ಕೆ ಲಘು ಭೋಜನ ಮಾಡಲಿದ್ದೇವೆ.
ನಂತರ ಮಧ್ಯಾಹ್ನ ೧.೩೦ಕ್ಕೆ ಅಭ್ಯಾಸದಲ್ಲಿ ಮೊಟ್ಟಮೊದಲಿಗೆ ಶ್ರೀ ಒ ಎಲ್ ನಾಗಭೂಷಣಸ್ವಾಮಿ ಅವರು ನಮಗಾಗಿ ಮೈಸೂರಿನಿಂದ ಬಂದು ಬೇಂದ್ರೆಯವರ ಕಾವ್ಯದ ಬಗ್ಗೆ ತಮ್ಮ ವಿಚಾರಗಳನ್ನು ತಿಳಿಸಲಿದ್ದಾರೆ. ಈ ಉಪನ್ಯಾಸದ ವಿಷಯ ’ಬೇಂದ್ರೆಯವರ ಕಾವ್ಯದಲ್ಲಿ ಚಂದ್ರ’.
ಈ ಅಭ್ಯಾಸವು ನಮ್ಮ ಗುರುಗಳಾದ ಎಚ್ಚೆಸ್ಸ್ವಿಯವರ ಉಪಸ್ಥಿತಿಯಲ್ಲಿ ನಡೆಯುತ್ತದೆ.
ತಮಗೀಗಾಗಲೇ ಶ್ರೀ ಒ ಎಲ್ ಎನ್ ಅವರು ಆಯ್ದ ಕವಿತೆಗಳನ್ನು ಕಳುಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಶ್ರೀ ಎಸ್ ಆರ್ ವಿ ಅವರು ಆಯ್ದ ಕವಿತೆಗಳನ್ನು ಕಳುಹಿಸಲಾಗುವುದು.
ಅಂದ ಹಾಗೆ, ಇದೇ ಜನವರಿ ತಿಂಗಳ ನಾಲ್ಕನೇ ಭಾನುವಾರ ದಿನಾಂಕ ೨೨-೦೧-೨೦೧೨ರಂದು ನಮ್ಮ ಸಹಾಭ್ಯಾಸಿ ಶ್ರೀಯುತ ಸ್ಕಂದನ್ ಅವರ ಕನಕಪುರ ರಸ್ತೆಯಲ್ಲಿನ ’ಗೋಪಾಲನ್ ಜುವೆಲ್ಸ್’ ಅಪಾರ್ಟ್ಮೆಂಟ್ ನಲ್ಲಿ ನಡೆಯಲಿದೆ. ತಮಗೆ ನೆನಪಿರಬಹುದು - ಅವರ ಮನೆಯಲ್ಲಿ ನಾವು ಕುಮಾರವ್ಯಾಸ ಭಾರತದ ಬಗ್ಗೆ ಶ್ರೀಯುತ ಎಸ್ ಆರ್ ವಿಜಯಶಂಕರರಿಂದ ತಿಳಿದಿದ್ದೆವು.
ವಿಳಾಸ: ನಂ. ಸಿ ೧೦೧, "ಗೋಪಾಲನ್ ಜುವೆಲ್ಸ್", ಕೋಣನಕುಂಟೆ ಸಿಗ್ನಲ್ ಹತ್ತಿರ, ಕನಕಪುರ ರಸ್ತೆ, ಬೆಂಗಳೂರು ೫೬೦೦೬೨. "ಗೋಪಾಲನ್ ಜುವೆಲ್ಸ್" ತಲುಪಲು ಮಾರ್ಗನಕ್ಷೆಯನ್ನು ಲಗತ್ತಿಸಲಾಗಿದೆ - ತೊಂದರೆಯಾದಲ್ಲಿ ಸಂಪರ್ಕಿಸಿ: ೯೩೪೨೫-೦೩೧೭೪ / ೨೬೯೬೪೯೪೯ (ಸ್ಕಂದನ್); ೯೯೪೫೫-೧೨೨೭೨ (ರಾಜಶೇಖರ).
ದಯವಿಟ್ಟು ಗಮನಿಸಿ: ಈ ಅಭ್ಯಾಸ ಬೆಳಗ್ಗೆ ೧೦.೪೫ಕ್ಕೆ ಪ್ರಾರಂಭ... ತಾವು ಉಪಹಾರ ಮುಗಿಸಿ ಸಮಯಕ್ಕೆ ಸರಿಯಾಗಿ ಆಗಮಿಸುವುದು!
ಇಂತಿ ತಮ್ಮವ,
ಮಾಳೂರು ರಾಜಶೇಖರ