'ವಕೀಲ'ರೆಲ್ಲಾ 'ನ್ಯಾಯವಾದಿ'ಗಳೇ?!

'ವಕೀಲ'ರೆಲ್ಲಾ 'ನ್ಯಾಯವಾದಿ'ಗಳೇ?!

Comments

ಬರಹ

 ಪೊಲೀಸರೆಂದರೆ ಜನ ಇನ್ನೂ ಹೆದರುವುದು ವಾಡಿಕೆ. ಎಷ್ಟೇ ಸುಧಾರಣೆಯಾಗಿದ್ದರೂ ಪೊಲೀಸರಂತೂ ಈಗಾಲೂ ದೌರ್ಜನ್ಯಕ್ಕೆ ಹೆಸರುವಾಸಿ. ಅದನ್ನು ಮೀರಿಸಿತಲ್ಲಾ ಲಾಯರ್ ಗಣ! ಏಳು ಗಂಟೆಗಳ ಅಸ್ತವ್ಯಸ್ಥೆ! Congrats!
  ’ಲಾಯರ್’ ಎಂದರೆ ಕಾನೂನು ತಿಳಿದವರು; ಮಧ್ಯಸ್ಥಿಕೆ ವಹಿಸಿ ’ನ್ಯಾಯ’ಕೊಡಿಸುವವರು ಎಂಬುದು ಸಾಮಾನ್ಯ ತಿಳುವಳಿಕೆ. ಈ ಭಯೋತ್ಪಾದಕ ದುಸ್ಸಾಹಸೀ ಧೀರರನ್ನು ’ನ್ಯಾಯವಾದಿ’ಗಳೆಂದು ಸಂಬೋಧಿಸುವುದು ಉಚಿತವಾದೀತೇ?
  ಭಯೋತ್ಪಾದಕರು ಎಂದೂ ಗುಂಪಿನಲ್ಲಿ ಬಂದು ಹಲ್ಲೆ ನಡೆಸುವುದಿಲ್ಲ; ಕೊಲೆ ಮತ್ತು ಅಡಚಣೆಗಳನ್ನು ಅವರು ಸಾಂಕೇತವಾಗಿ ಮಾತ್ರಾ ಬಳಸುತ್ತಾರೆ. ಈ ಶೂರರಾದರೊ, ಗುಂಡಾಗಿರಿ-ದಾದಾಗಿರಿಗಳ ರುಚಿಯನ್ನು ಜನರಿಗೆ ಪ್ರಾಯೋಗಿಸಿಯೇ ತೋರಿಸಿಬಿಟ್ಟರು! ತಮಾಷೆಯೆಂದರೆ, ಯಾರ ವಿರುದ್ಧ ಲಾಯರುಗಳ ಆಕ್ರೋಶವಿತ್ತೋ ಆ ಪೊಲೀಸ್ ಇಲಾಖೆಯೇ ಈ ಸಂದರ್ಭದಲ್ಲಿ ಸಂಯಮದಿಂದ ವರ್ತಿಸಿ ಮೆಚ್ಚುಗೆಗೆ ಪಾತ್ರವಾಯಿತು!  
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet