-ನ್ಯಾಯದಿಂದ ಅನ್ಯಾಯ -

-ನ್ಯಾಯದಿಂದ ಅನ್ಯಾಯ -

ಕವನ


 ನ್ಯಾಯ ನೀಡುವರೆ

ಅನ್ಯಾಯ ಎಸೆದಾಗ

ನ್ಯಾಯಕ್ಕೇನು ಬೆಲೆ ?

ವಕೀಲರಿಗಿದೆಯೇ ತಲೆ ?

ಚಿಕ್ಕ ತಪ್ಪು ನಡೆದರೂ

ದೊಡ್ಡ ಬೆಟ್ಟ ತೋರಿಸಿದಾಗ

ಎಲ್ಲಿರುವುದು ಕ್ಷಮೆ?

ಸಾರ್ವಜನಿಕರಲ್ಲೇಕೆ ತಾಳ್ಮೆ ?

ದಿನವಿಡಿ ನಡೆಸಿದ ರಸ್ತೆತಡೆ

ಜನರಿಗೆ  ಶಿಕ್ಷೆ  ಬಿರುಬಿಸಿಲನೆಡೆ

ಕಳೆದು ಹೋಗಿತ್ತಾ ನ್ಯಾಯ ಬುದ್ಧಿ ?

ಸಾರ್ವಜನಿಕರೆ ಇವರ ಅಹಂಕಾರವ ಗುದ್ದಿ / ಒದ್ದಿ

ಶಿಕ್ಷೆ ಪಡೆದ ನಾಗರಿಕರೆ

ಏಳಿ ಎದ್ದೇಳಿ..

ಅನ್ಯಾಯ ಎಸೆದಾಗ

ನ್ಯಾಯವೆಲ್ಲಿದೆ ಎಂಬ ಪ್ರಶ್ನೆ ಕೂಗಿ ಕೂಗಿ ಕೇಳಿ

ಸಿಗದಿ ನಿಮಗೆ ಉತ್ತರ 

ಕಾರಣ ಅಧಿಕಾರದ ಒತ್ತಡ

ಮನೆ ಮಾಡಿದೆ ಧೈರ್ಯವಿಲ್ಲದ ಹೆದರಿಕೆ

ಭೃಷ್ಟಾಚಾರ್ಯಕ್ಕಿಲ್ಲ ನಿಮ್ಮಗಳ ಬೆದರಿಕೆ

ಬಣ್ಣಿ ಹೋರಾಡೋಣ..

ನ್ಯಾಯದ ಬಾಗಿಲು ತೆರೆಯೋಣ..

ಅನ್ಯಾಯವ ಸುಟ್ಟು ಹಾಕೋಣ


ನನ್ನ ಕೂಗು ರಸ್ತೆಯಲಿ ನಿಂತು ಕಾದವರಿಗಾಗಿ

ರೋಗಿಗಳು ಅನುಭವಿಸಿದ ನೋವಿಗಾಗಿ

ವಿದ್ಯಾರ್ಥಿಗಳು ಕಲಿಯದ ಅಭ್ಯಾಸಕ್ಕಾಗಿ

ನೌಕರರು ಪಡೆಯದ ಒಂದು ದಿನದ ಸಂಬಳಕ್ಕಾಗಿ

ಪ್ರಯಾಣಿಕರು ಪಡೆದ ನಷ್ಟ ಟಿಕೆಟ್ಟು ಖರ್ಚಿಗಾಗಿ

ಒಟ್ಟಿನಲ್ಲಿ ನಾಗರಿಕರಿಗೆ ನ್ಯಾಯ ದೊರೆಯಲಿಲ್ಲೆಂಬುದಕ್ಕಾಗಿ ಗೆಳೆಯ/ಗೆಳತಿಯರೆ ನನ್ನಿ ಕವನ..

Comments