ಫೇಸ್ಬುಕ್: ಒಂದು ಅಧುನಿಕ ನೀತಿ ಕತೆ
ಒಂದು ಊರಲ್ಲಿ ಒಬ್ಬ ರಾಜನಿದ್ದ ಅವನು ಆಡಳಿತ ಮರೆತು ಫೇಸ್ಬುಕ್ನಲ್ಲಿ ತನ್ನ ಸೋಶಿಯಲ್ ನೆಟ್ವರ್ಕಿಂಗ್ನಲ್ಲಿ ಮುಳಗಿಹೊಗಿದ್ದ. ದೇಶದ ಅಭಿವೃದ್ಧಿ ಕಾಣದ ಜನ ಬೇಸತ್ತು ದಂಗೆ ಏಳಲು ಸಂಚು ಹಾಕಿದರು. ಪ್ರಜೆಗಳೆಲ್ಲ ಸೇರಿ, ಅವರೊಂದೊಂದು ಫೆಸ್ಬುಕ್ನಲ್ಲಿ ಒಂದು ಗುಂಪು ಶುರುಮಾಡಿ, ಕ್ರಾಂತಿಯ ಹೊಂಚು ಹಾಕಿದರು. ಅದರ ಸುಳಿವು ಸಿಕ್ಕ ಬುದ್ಧಿವಂತ ರಾಜ, ತನ್ನ ಘನ ಸರ್ಕಾರ ಫ...ೇಸ್ಬುಕ್ ಬ್ಯಾನ್ ಮಾಡುವುದಾಗಿ ಸುದ್ದಿಯ ತೇಲಿಬಿಟ್ಟ. ಇಷ್ಟು ದಿನ ಗಳಿಸಿದ ಫ್ರೆಂಡ್ಸ್ ನೆಟ್ವರ್ಕ್ ಎಲ್ಲಾ ಹಾಳಾಗುವುದು, ಇನ್ನು ಮುಂದೆ ತಮ್ಮ ಸ್ಟೇಟಸ್ ಹೇಗೆ ಹಂಚಿ ಕೊಳ್ಳುವುದು? ಗೆಳೆಯ/ಗೆಳತಿಯ ಒಡನಾಟ ಹೇಗೆ? ಸ್ವಾತಂತ್ರ ಹರಣ... ಎಂದೆಲ್ಲಾ ಜನ ಗಾಬರಿಯಾಗಿ ಟ್ವಿಟರ್ನಲ್ಲಿ ಗೋಳಾಡತೊಡಗಿದರು .
ಕೊನೆಗೆ ರಾಜ ಫೆಸ್ಬುಕ್ ಬ್ಯಾನ್ ಮಾಡುವುದೆಲ್ಲಾ ಗಾಳಿಸುದ್ದಿ ಎಂದು ಟಿ.ವಿ.ಯಲ್ಲಿ ಹೇಳಿಕೆ ಕೊಟ್ಟ. ಅಲ್ಲಿಗೆ ಜನ ಕ್ರಾಂತಿ ಗೀಳನ್ನು ಮರೆತು, ಖುಷಿಯಾಗಿ ತಮ್ಮ ಬದುಕಿಗೆ ಮರಳಿದರು. ಪ್ರಜೆಗಳೆಲ್ಲಾ ಸೇರಿ ರಾಜನಿಗೆ ಪ್ರಜಾರಂಜಕ, ಪ್ರಜಾಪ್ರಭುತ್ವ ಪರಿಪಾಲಕ, ಅಧುನಿಕ ದೃಷ್ಟಿ ಕೋನದ ಆಡಳಿತಗಾರ... ಇತ್ಯಾದಿ ಇತ್ಯಾದಿ ಬಿರುದು ಬಾವಲಿಯನ್ನು ನೀಡಿ ಫೇಸ್ಬುಕ್ನಲ್ಲಿ ಮತ್ತು ಟ್ವಿಟರ್ನಲ್ಲಿ ಕೊಂಡಾಡಿದರು.
ಹೀಗೆ ರಾಜ ಒಂದು ಕ್ರಾಂತಿಯನ್ನು ಯಶಸ್ವಿಯಾಗಿ ತುಳಿದು ಹಾಕಿದ ಎಂಬಲ್ಲಿಗೆ ಕತೆ ಮುಕ್ತಾಯವಾಯಿತು.
ಈ ಕತೆಯನ್ನು ಫೇಸ್ಬುಕ್ನಲ್ಲಿ ಹಂಚಿ ಕೊಂಡವರಿಗೆ ಸೋಶಿಯಲ್ ನೆಟ್ವರ್ಕಿಂಗ್ ಪರಮಾತ್ಮನು ಮಂಗಳವನ್ನು ಮಾಡುವನು.
-ವಿದ್ಯಾಶಂಕರ್ ಹರಪನಹಳ್ಳಿ