ಶೀತಲವಾಗಿದೆಯೇ ಯುವಕರ ನೆತ್ತರು

ಶೀತಲವಾಗಿದೆಯೇ ಯುವಕರ ನೆತ್ತರು

ಕವನ

ಶೀತಲವಾಗಿದೆಯೇ ಯುವಕರ ನೆತ್ತರು

ದೇಶಕ್ಕಾಗಿ ಬಲಿದಾನಗೈದ ವೀರರ ನಾಡಿನ

ಯುವಕರ ನೆತ್ತರು ಶೀತಲವಾಗಿದೆಯೇ...

 

ಉಗ್ರವಾದಿಗಳು ಅಟ್ಟಹಾಸವ ಮೆರೆದರೂ

ಪುಡಾರಿಗಳು ಹೊಲಸು ರಾಜಕೀಯ ಆಟವ ಆಡಿದರೂ

ಕುದಿಯಲಿಲ್ಲವೇ ನಿಮ್ಮಯ ನೆತ್ತರು ಕುದಿಯಲಿಲ್ಲವೇ

 

ಬರಿಯ ಓದನು ಓದಿ ಹಣವನು ಗಳಿಸಿ

ಐಶಾರಮಿ ಜೀವನ ಸಾಗಿಸಿ ಸಾಧಿಸಿದ್ದೇನು

ತಾಯ್ನಾಡಿಗಾಗಿ ಏನ ಕೊಟ್ಟಿರಿ ನೀವು...

 

ಇನ್ನಾದರೂ ಏಳಿ ಕೈಗಳ ಜೋಡಿಸಿ

ಸ್ವಾರ್ಥವ ಬದಿಗೊತ್ತಿ ನಿಸ್ವಾರ್ಥ ಸೇವೆಗೆ

ಸಿದ್ಧರಾಗಿ ಮಾಡಿರಿ ದೇಶದ ಸೇವೆಯ....

 

ಹೊಡೆದೋಡಿಸೋಣ ಉಗ್ರವಾದವೆಂಬ ಪೆಡoಭೂತವ

ಮಟ್ಟ ಹಾಕೋಣ ಕುತಂತ್ರ ರಾಜಕಾರಣ

ಸಂಪನ್ನಗೊಳಿಸೋಣ ಈ ನಮ್ಮ ನಲ್ಮೆಯ ದೇಶವ

 

Comments