ಆಯೋಗದ ಅತೀ-ಅತಿ

ಆಯೋಗದ ಅತೀ-ಅತಿ

Comments

ಬರಹ

 ನಿಷ್ಪಕ್ಷಪಾತ ಚುನಾವಣೆಯಯೆಂಬುದು ಚುನಾವನಾ ಆಯೋಗದ ಅಗ್ಗಳಿಕೆ. ರಾಜಕೀಯದ ಬೆಕ್ಕುಗಳ ಬಾಲಕ್ಕೆ ಅಕಸ್ಮಾತ್ ಅದರಿಂದ ಬಿಸಿ ಮುಟ್ಟಿದಂತಾದಾಗ ಅವು ಹರಿಹಾಯುತ್ತವೆ. ಆಯೋಗದ ಅತಿರೇಕವೂ, ರಾಜಕೀಯದ ಪ್ರತಿಭಟನೆಯೂ ಇತ್ತೀಚಿನ ಚುನಾವಣಾ ಸಂಪ್ರದಾಯವೇ ಆಗಿದೆ. ವಿಶಿಷ್ಟ ಸಚಿವ, ಶಾಸಕ, ಸಂಸದ ಮಹೋದಯರು ಕೆಲವರು ಇದರಿಂದಾಗಿಯೇ ಹೆಸರುವಾಸಿಯಾಗುವುದೂ ಇಲ್ಲದಿಲ್ಲ.
 ಮತದಾರರಿಗೆ ಆಮಿಷ ಒಡ್ಡುವಂತಹ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಕಟಿಸಬಾರದು; ವಿಶೇಷ ಸೌಲತ್ತುಗಳನ್ನು ಘೋಷಿಸ ಕೂಡದು ಇತ್ಯಾದಿ ದಾಸ್ತಾವೇಜುಗಳು.' ಎತ್ತು ಯೀದರೆ ಕೊಟ್ಟಿಗೆಯಲ್ಲಿ ಕಟ್ಟುವ' ಈ ಮಾದರಿಗಳು ಚುನಾವಣಾ ಅಯೋಗದ ಹದ್ದಿಕಣ್ಣೂ, ಕಾಕದೃಷ್ಟಿಯೂ ಅಗುತ್ತದೆ. ಆದರೆ ನಿಜವಾಗಿ ಸರಕಾರದ ಯಾವುದೇ ಅಭಿವೃದ್ದಿ ಯೋಜನೆಯೂ ಜಾರಿಯಾಗುವುದೂ, ನಿರ್ದಿಷ್ಟ ಗುರಿ ಮುಟ್ಟುವುದೂ ಎಲ್ಲಾದರು ಇದೆಯೇ? ಸಚಿವಶ್ರೇಷ್ಠರ ಇಂಥಾ ಯಾರಾದರೂ ಗಂಭೀರವಾಗಿ ಸ್ವೀಕರಿಸುತ್ತಾರೆಯೇ? ಇಂಥದು ಜನರಿಗೆ ಆಮಿಷ ಒಡ್ಡುತ್ತವೆ; ವಿರೋಧಿಗಳನ್ನು ನಿರುತ್ತೇಜನಗೊಳಿಸುತ್ತವೆ ಎನ್ನುವುದು ಕೇವಲ ಭ್ರಾಮಕ ಮತ್ತು ಚುನಾವಣಾ ಆಯೋಗ ಅದನ್ನು ಕಂದಾಚಾರ ಮಾಡಿಕೊಂಡಿದೆ.
 ಜನ ಶರಣಾಗುವುದು ಹಣ-ಹೆಂಡ-ತೋಳ್ಬಲದ ಜೀವಭಯಕ್ಕೆ. ದಾಖಲೆ ಪ್ರತಿಶತ ಮತದಾನಕ್ಕೂ ಇದು ಕಾರಣವಿರಬಹುದು! ಅಷ್ಟರ ಮಟ್ಟಿಗಿದು ಚುನಾವಣಾ ಆಯೋಗದ ವೈಫಲ್ಯ. ಇಷ್ಟೆಲ್ಲಾ ಕಟ್ಟುನಿಟ್ಟಿನ ನಂತರ ಮೈದಳೆಯುವುದಾದರು ಏನು? ನಿರ್ಲಜ್ಜ ನಿರಾಧಾರ ಶಾಸಕಾಂಗಗಳು! ಈ ಜವಾದ್ದಾರಿ ಯಾರ ಕೊರಳಿಗೆ?
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet