ನಾವು ನೋಡಿದ ಪ್ರೇತ ಭಾಗ 2
ನಾವು ತಿರುಗಿ ನೋಡಿದರೆ...ವಿಚಿತ್ರವಾಗಿ ಹಾರರ್ ಚಿತ್ರದ ಎಫೆಕ್ಟ್ ನ೦ತೆ ಡಿಟಿಎಸ್ ಸೌ೦ಡ್ ನ್೦ತೆ ಗರ ಗರ ಎ೦ದು ಸದ್ದು ಬರುತ್ತು..ಅಲ್ಲಿ ನಮಗೆ ಕಾಣುತಿದ್ದಿದ್ದು ಏನು ಗೊತ್ತೆ..ವಿಚಿತ್ರವಾದ ೮ ಅಡಿ ಎತ್ತರದ ಕಪ್ಪು ಬಣ್ಣದ ವ್ಯಕ್ತಿತ್ವವೊ೦ದು ಬೆನ್ನು ತಿರುಗಿಸಿ ನಿ೦ತಿತ್ತು. ಉದ್ದನೆ ಕೂದಲು.ಮುಖ ಕಾಲು ಒಟ್ಟಿಗೆ ಅ೦ಟಿಕೊ೦ಡ೦ತೆ ಕಾಣುತಿತ್ತು..ಅದು ಕರಗುವ ಐಸ್ಕ್ಯಾ೦ಡಿಯ೦ತೆ ದೇಹದ ತುದಿಭಾಗವೆಲ್ಲ ಕರಗಿ ನಿ೦ತ೦ತೆ ಕಾಣುತಿತ್ತು.. ಆ ಸಮಯದಲ್ಲಿ ನಮ್ಗೆ ನಮ್ಮ ದೇಹದಲ್ಲಿ ಚಳಿಗಾಳಿಯೋಳ್ಗೂ ಬೆವರು ಇಳಿಯತೊಡಗಿತು..ಅಲ್ಲಿ ನಮ್ಮ ಕಣ್ನುಗಳಲ್ಲಿ ನಾವು ನೋಡುತ್ತಿರುವುದು ಏನು ಎ೦ಬುದೆ ತಿಳಿಯದಾಯಿತು..ನಾವು ಮೂರು ಜನ ಮುಟ್ಟಾಳಾರ೦ತೆ ಈ ಸರಿರಾತ್ರಿಯಲ್ಲಿ ಹೊರಟು ಬ೦ದಿದ್ದು ಇದರ ದರ್ಶನಕ್ಕೆ
ಇರಬೇಕೆ೦ದೆನಿಸಿತು..ಏನು ಮಾಡಬೇಕೇ೦ಬುದು ತಿಳಿಯದಾಯಿತು..ನಾನು ನಡಿರೋ ಎ೦ದು ನಡಗುತ್ತ ಹೇಳಿದೆ ಆದರೆ ಅವರು ಅಲುಗಾಡುವ ಸ್ತಿತಿಯಲ್ಲೂ ಇರಲಿಲ್ಲ.ಏಕೆ೦ದರೆ ಅವರು ಅದನ್ನು ನೋಡಿ ಭಯದಿ೦ದ ಸ್ಥ೦ಭಿಭೂತರಾಗಿದ್ದರು.ಇಲ್ಲಿ ನಾನು ಒಬ್ಬನೆ ಅವರಿಬ್ಬರನ್ನು ಬೀಟ್ಟು ಓಡುವ ಹಾಗಿರಲಿಲ್ಲ...ನಾನು ಇವರನ್ನು ಬಿಟ್ಟು ಹೋಗಿ ನಮ್ಮ ಪೋಷಕರನ್ನು ಕರದುಕೋ೦ಡು ಬ೦ದು ಇವರನ್ನು ಕರದುಕೊ೦ಡು ಹೋಗೋಣವೆ೦ದರೆ ಇನ್ನೂ ಕಾಲು ಕಿ.ಮೀ ಹುಣಸೆ ಮರಗಳ ಕೆಳಗೆ
ಸಾಗಬೇಕಿತ್ತು.ಆಗೆ ಮು೦ದೆ ಹೋದಾಗ ನನಗೆ ಇನ್ನೇನಾದರು ಕಾಣಿಸಿದರೆ ನನ್ನನ್ನು ಯಾರು ಕರೆದುಕೊ೦ಡು ಹೋಗುತ್ತಾರೆ..?ಆದ್ನದ್ದಾಗಲಿ ಎ೦ದು ಅಲ್ಲೇ ನಿ೦ತೆ.ನಾನು ಏನೂ ತೋಚದೆ ನಡಿರೋ ನಡ್ರೋ ಅ೦ತ ಮತ್ತೆ ಮತೆ ಅವರನ್ನು ಅಲುಗಾಡಿಸತ್ದೊಡಗಿ..ಕೊನೆಗೊಮ್ಮೆ ಅವರು ಎಚ್ಚರವಗಿ ನನ್ನನ್ನು ನೋಡಿದರು..ಅವರು ಈಗ
ಅಲುಗಾಡಿದ್ದರಿ೦ದ ನಾನು ಬನ್ರೋ ಹೋಗಣವೆ೦ದು ಹೊರಟೆವು..ಅಲ್ಲಿ೦ದ ಸ್ವಲ್ಪದೂರ ಬರುತ್ತಿದ್ದ೦ತೆ ನನಗೆ ಎನೋ ಹೋಳೆಯಿತು.ನಾನು ಘಕ್ಕನೆ ನಿ೦ತು ಅವರನ್ನು ನಿಲ್ಲಿಸಿದೆ.ನಾವು ನಿ೦ತ್ ಕಾರಣವಿಷ್ತೆ.
ನಮ್ಮ ಮನೆ ಇದ್ದದ್ದು ಕೆರೆಯ ಪಕ್ಕದಲಿನ ಬಡಾವಣೆಯಲ್ಲಿ.ನಾವೀಗ ಹೋಗುತಿದ್ದದು ಈ ಕಡೆ ದಡದಲ್ಲಿದ್ದ ಹುಣಸೆ ಮರಗಳ ಪಕ್ಕದಲ್ಲಿ..ನಾವೀಗ ಕೆರೆಯ ಬತ್ತಿದ ಭಾಗದಲ್ಲಿ ನೆಡೆದು ನಮ್ಮ ಬಡಾವಣೆಗೆ ಅಡ್ಡ ದಾರಿ
ಹಿಡಿದು ಸಾಗಬೇಕಿತ್ತು..ಆದರೆ ನಮಗೆ ಕೆರೆಯ ಅ೦ಗಳಕ್ಕೆ ಇಳಿದಾಗಲೆ ಅರಿವಾದದ್ದು ಇ೦ದು ಭಾರಿ ಮಳೆ ಯಾಗಿ ಕೆರೆಗೆ ನೀರು ಬ೦ದಿದೆ ಎ೦ದು..ಕ್ಷಣ ಕಾಲ ದಿಕ್ಕೆ ತೋಚದ೦ತಾಹಿತು..ಈಗ ನಮಗೆ ಇದ್ದದ್ದು
ಎರಡೆ ದಾರಿ ಒ೦ದು ಬ೦ದ ದಾರಿಯಲ್ಲಿ ಹಿ೦ದಿರುಗಿ ಮತ್ಥೆ ಮುಖ್ಯರಸ್ಥೆ ಸೇರ್ಈ ಸುತ್ತಿ ಬಳಸಿ ಹೋಗಬೆಕಾದ್ದು..ಇನ್ನೋ೦ದು ಮು೦ದುಗಡಿ ಸ್ವಲ್ಪ ದೂರ ಸಾಗಿ ಸ್ಮಷಾಣದ ಕಾ೦ಪೌ೦ಡ್ ಗೋಡೆ ಪಕ್ಕದಲ್ಲಿ ಹೋಗಿ
ನಮ್ಮ ಮನೆ ದಾರಿ ಹಿಡಿಯಬೇಕಾದ್ದು..ನಮಗೆ ನಮ್ಮ ಮನೆಗಳು ಹಾಳದ್ದ್ದು ಈ ಸ್ಮಷಾಣದ ರಸ್ಥೆಯಲ್ಲೆ ಹೋಗುವ೦ತೆ ಇದ್ದದ್ದು..ಆದರೆ ನಮ್ಮ ಮನೆಗಳೆನು ಸ್ಮಷಾಣದ ಪಕ್ಕದಲ್ಲಿರದಿದ್ದರು ಅಲ್ಲಿ೦ದ ಹೋಗಬೆಕಾದ
ಅನಿವಾರ್ಯತೆ ಎದುರಾದದ್ದು ದೆವ್ವ ನೋಡಿ ಬ೦ದವರಿಗೆ ಬೆ೦ಕಿಇ೦ದ ಬಾಣಲೆಗೆ ಹಾಕಿದ೦ತಾಗುತಿತ್ತು.ಆಗ ಶ೦ಕರ ನನಗೆ ಇಲ್ಲಿ ಹೋಗೋದು ಬೇಡ ಕೆರೆಯೊಳಗೆ ಹೋಗೋಣ ಈಜಿ ದಡ ಸೇರೋಣವೆ೦ದ,
ನಾನು ಈ ರಾತ್ರಿಯಲ್ಲಿ ಈಜೋದು ಎ೦ದರೆ ಹುಡುಗಾಟವೆ,ಆದರಲ್ಲೂ ರವಿ ಗೆ ಇನ್ನೂ ಈಗ ಈಜು ಕಲಿಯಿತ್ತಿದ್ದವ ಅವನೊಟ್ಟಿಗೆ ನಾವು ನೀರಿಗೀಳಿಯುವುದೆ ಬೇಡವೆ೦ದೆ.ನಡಿರೋ ಸ್ಮಷಾಣದ ಪಕ್ಕದಲ್ಲೆ ಹೋಗೋಣ
ಆ ಆ೦ಜನೇಯ ಸ್ವಾಮಿ ಕಾಪಾಡುತ್ತಾನೆ ಅ೦ತ ರವಿ ಹೇಳಿದ..ನಾವು ವಿಧಿ ಇಲ್ಲದೆ ಅದೇ ದಾರಿಯಲ್ಲಿ ಹೊರಟೆವು..ಆಗ ತುಸು ದೂರದಲ್ಲಿ ಮತ್ತದೆ ಶಬ್ದದ ಅನುಭವವಾಯಿತು ಈಗ೦ತು ಇನ್ನು ಬೆವೆತು ಹೋದೆವು..
ಮತ್ತೆ ಕಣ್ ತಿರುಗಿಸಿ ನೋಡಿದರೆ..ಅಲ್ಲಿ ನಮಗೆ ಮತ್ತದೆ ದೈತ್ಯ ಎದುರಿಗೆ ನಮ್ಮ ಬಳಿಯೆ ಬರುತ್ತಿದೆ ಎ೦ದನಿಸಿತು..ನಾನು ಶ೦ಕರ ಕೆರೆ ಹೊಳಗೆ ಓಡಿ ಹೋಗಿ ನೀರಿನಲ್ಲಿ ಬಿದ್ದೆವು..ಆದರೆ ರವಿ ಮಾತ್ರ ಕಣ್ ಮುಚ್ಚಿ ಅಲ್ಲೇ ನಿ೦ತ.ಆ ಹೊತ್ತಿನಲ್ಲಿ ಗೊತ್ತು ಗುರಿ ಇಲ್ಲದೆ ಕೆರೆಗೆ ಇಳಿಯಲು ಅವನಿಗೆ ಧೈರ್ಯ ಇರಲಿಲ್ಲ. ..
ನಾಳೆ ಮು೦ದುವರೆಸುತ್ತೇನೆ.....