ಕ್ಷುದ್ರ ರಾಜಕೀಯ ಮತ್ತು ಬ್ಯುರಾಕ್ರಸಿ

ಕ್ಷುದ್ರ ರಾಜಕೀಯ ಮತ್ತು ಬ್ಯುರಾಕ್ರಸಿ

ಬರಹ

 ಆಡಿಟ್ ಅಧಿಕಾರಿ ಮಹಂತೇಶರ ಕೊಲೆ ಬರ್ಬರ. ಇದಕ್ಕೆ ನಾಗರಿಕ ಸಮಾಜದ ವಿಷಾದವಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಆದರೆ ಮಾಧ್ಯಮದ ಸುದ್ದಿ ಮತ್ತು ಬುದ್ಧಿಗಳು, ಇದನ್ನು ಅಧಿಕಾರಿ ಪ್ರಾಮಾಣಿಕತೆಗಾಗಿಯೇ ತೆತ್ತ ತಲೆದಂಡ ಎಂಬ ಆವೇಶ - ಸೆನ್ಸೇಷನ್ - ಸೃಷ್ಟಿಸುತ್ತಿವೆ. 'ಬ್ಯುರಾಕ್ರಸಿಯಲ್ಲಿ ಪ್ರಾಮಾಣಿಕರೆಂಬುವವರೇ ಇಲ್ಲ; ಅಕಸ್ಮಾತ್ ಇದ್ದರೆ ಅವರಿಗೆ ಉಳಿಗಾಲವಿಲ್ಲ' ಎಂಬ ಸಂದೇಶ ಇದರಿಂದ ರವಾನೆಯಾಗುತ್ತದೆ.
 ನೀತಿಗೆಟ್ಟ ರಾಜಕೀಯದ ಕಪ್ಪು ಛತ್ರಿಯಡಿಯಲ್ಲಿ, ಸರಕಾರದ ಅಧಿಕಾರಿ ಮತ್ತು ಸಹಾಯಕರೆಂಬ ಬಹುತೇಕ ನೌಕರ ವರ್ಗ, 'ಮೇಕ್ ದ ಹೇ, ವೆನ್ ಸನ್ ಶೈನ್ಸ್' ಎಂಬ ಬುದ್ಧಿಮತ್ತೆ ತೊರಿಸುವುದು ಸುಳ್ಳಲ್ಲ. ಇಲ್ಲದವರು ರಿಸ್ಕ್ ಯಾಕೆ? ಎಂದು ರಾಜಿ ಮಾಡಿಕೊಂಡಾರು. ಅದೂ ಅಲ್ಲದ ಕೆಲವೇ ಕೆಲ ಮಂದಿ, ರಾಜಕೀಯ ಎಂಬ ಕ್ಷುದ್ರ ಬೇಜವಾಬ್ದಾರೀ ವರ್ಗಕ್ಕೆ, ಸಿಂಹಸ್ವಪ್ನವಾಗುವುದಿಲ; ಬದಲಿಗೆ, ಹಾಸಿಗೆಯಂಚಿನ ತಿಗಣೆಯೆನಿಸುತ್ತಾರೆ. ಹೀಗಾಗಿ ಸರಕಾರದ ಯಾವೊಬ್ಬ ಅಧಿಕಾರಿ ಮತ್ತು ನೌಕರನ ಹತ್ಯೆಗೆ ಅವರ ಪ್ರಾಮಾಣಿಕತೆಯಂತೆಯೇ ಅಪ್ರಾಮಾಣಿಕತೆಯೂ ಕಾರಣವಾಗುವ ಸಾಧ್ಯತೆಯಿರುತ್ತದೆ. ಆ ಅಪ್ರಾಮಾಣಿಕತೆಯೂ ಪರೋಕ್ಷವಾಗಿ ರಾಜಕೀಯ ಪರಿಪ್ರೇರಿತ ಮತು ಪೈಪೋಟಿಯಾಗಿರಬಹುದು. ತನಿಖೆಯಿಂದ ಸತ್ಯ ಹೊರಬರುವ ವೇಳೆಗೆ ಪ್ರಕರಣ ಮರೆತುಹೋಗಿರುತ್ತದೆ. ಇಷ್ಟಕ್ಕೂ ತನಿಖೆಯ ಪ್ರಾಮಾಣಿತೆಯೂ ಪ್ರಶ್ನಾರ್ಹವಾಗಿರಬಹುದು ಅಥವಾ ಹಾಗೆಂದು ಕೂಗೆಬ್ಬಿಸಬಹುದು. ಇದಕೇನು ಮದ್ದು?
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet