ರಾಷ್ಟ್ರಪತಿ ಚುನಾವಣೆ ಮತ್ತು ರಾಜಕೀಯ ಘನತೆ

ರಾಷ್ಟ್ರಪತಿ ಚುನಾವಣೆ ಮತ್ತು ರಾಜಕೀಯ ಘನತೆ

Comments

ಬರಹ

  ರಾಷ್ಟ್ರ ರಾಜಕೀಯದ ಅತ್ಯಂತ ಗಂಭೀರ ಪ್ರಕ್ರಿಯೆಯಾದ ರಾಷ್ಟ್ರಪತಿ ಚುನಾವಣೆ ಸಂಬಂಧದಲ್ಲೇ ರಾಜಕೀಯ ರಾಡಿ ಉಂಟಾಗಿದೆ. ಅದರಲ್ಲೂ ದೊಡ್ಡ ಗಂಟಲು, ರಾಷ್ಟ್ರ ಮಟ್ಟದಲ್ಲಿ ಕ್ಷುಲ್ಲಕವೆನಿಸಬಹುದಾದ ಪ್ರಾದೇಶಿಕ ಪಕ್ಷಗಳದ್ದು! ದೊಡ್ಡ ಪಕ್ಷಗಳು ತಮ್ಮ ನಿರ್ವೀರ್ಯತೆಯಿಂದಾಗಿ ಇವುಗಳನ್ನು ಅನಿವಾರ್ಯ ಮಾಡಿಕೊಂಡಿವೆ! ನಮ್ಮ ಘನತೆವೆತ್ತ ಪ್ರಜಾಸತ್ತೆಗೆ, ಇದರಿಂದಾಗಿ, ಮುಂದೆ ವಿವಾದಿತ ರಾಷ್ಟ್ರಪತಿಯವರೊಬ್ಬರು ದೊರಕಿಕೊಂಡರೂ ಅಚ್ಚರಿಯಿಲ್ಲ!
 ರಾಜ್ಯಕ್ಕೆ ರಾಜ್ಯಪಾಲರಿದ್ದಂತೆ, ದೇಶಕ್ಕೆ ರಾಷ್ಟ್ರಪತಿ. ರಾಷ್ಟ್ರಪತಿಯಾದವರು ಒಬ್ಬ ರಾಜ್ಯಪಾಲರಂತೆಯೇ ಆತಿರೇಕಕ್ಕೆ, ಅದು ನ್ಯಾಯಸಮ್ಮತವೇ ಇರಬಹುದು, ಹೋಗುವುದಿಲ್ಲವೆಂಬ ಖಾತರಿಯಾರೂ ಏನು? ಇದು ಆಗಲಾರದ್ದು ಅಲ್ಲ ಎನ್ನುವುದಕ್ಕೆ ಕರ್ನಾಟಕವೇ ಇತ್ತೀಚಿನ ಉದಾಹರಣೆಯಾಗಿದೆ!
 ಇಂಥೊಬ್ಬ ರಾಷ್ಟ್ರಪತಿ ಸಂವಿಧಾನ ಮುಖ್ಯರಾಗಿ, ಸಂಸತ್ತಿನ ಬಗ್ಗೆಯೇ ಹಗುರವಾಗಿ ಮಾತನಾಡುವ, ಅದೂ ಸಮರ್ಥನೀಯವೇ ಇರಬಹುದು,' ಅಣ್ಣಾ ತಂಡದ' ಚಿಂತಕರಂಥವರು ಮೇಲುಗೈ ಅದಾಗ, ನಮ್ಮ ಸಂಸದೀಯ ಪ್ರಜಾತಂತ್ರದ ಅವಸ್ಥೆ ಏನಾಗಬಹುದು?
 ಹೀಗಾದಿರಲೆಂದು, ಚುನಾವಣಾ ಆಯೋಗಕ್ಕೆ, ನ್ಯಾಯಾಂಗಕ್ಕೆ, ಕಟ್ಟಕಡೆಗೆ ಆ ದೇವರಿಗೆ ಮೊರೆಯಿಡೋಣವೇ?!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet