ಹುಯ್ಯೋ ಹುಯ್ಯೋ ಮಳೆರಾಯ..

ಹುಯ್ಯೋ ಹುಯ್ಯೋ ಮಳೆರಾಯ..

ನಾನು ದಕ್ಷಿಣ ಕನ್ನಡದ ಟೂರ್‌ನಲ್ಲಿದ್ದ ೩ ದಿನವೂ ಮಳೆಯ ಆರ್ಭಟ ಜೋರಿತ್ತು. ಅಲ್ಲಿನವರ ಪ್ರಕಾರ ಈ ವರ್ಷ, ಕಳೆದ ವರ್ಷದ ಅರ್ಧದಷ್ಟೂ ಮಳೆ ಬಂದಿಲ್ಲ. ಆದ್ದರಿಂದ ಯಾರದ್ದೂ ಜಡಿ ಮಳೆ ಬಗ್ಗೆ ಕಂಪ್ಲೈಂಟೇ ಇಲ್ಲ...


ಏನೋ ಒಂಥರಾ ಖುಶಿ.. ನೀರು ತುಂಬಿ ರಸ್ತೆ ದಾಟಲಾಗದಿದ್ದರೂ ಬೇಸರವಿಲ್ಲ.


ಕ್ರಿಕೆಟ್ ಆಡಬೇಕಾದ ಗ್ರೌಂಡ್ ನೀರಲ್ಲಿ ಮುಳುಗಿ ಹೋದರೂ ಕಿರಿಕಿರಿ ಅನಿಸಲಿಲ್ಲ.


ತುಂಬುತ್ತಾ ಬಂದ ಬಾವಿಯನ್ನು ನೋಡಿ ಆನಂದವೋ ಆನಂದ..


ದೇವರೆ,


ಅನ್ಯಾಯ ಮಾಡುತ್ತಿರುವ ರಾಜಕಾರಣಿಗಳು, ಅಧಿಕಾರಿಗಳಿಗೆ ಬೇರೆ ರೀತಿಯ ಶಿಕ್ಷೆ ನೀಡು. ನ್ಯಾಯದಿಂದ ನಡೆಯುತ್ತಿರುವ ಜನರ ಮೇಲೆ ಕರುಣೆ ತೋರು. ಮಳೆ ಬರಲಿ. ಕೆರೆ ನದಿಗಳು ತುಂಬಿ ಹರಿಯಲಿ. ಕನ್ನಂಬಾಡಿ ಕಟ್ಟೆ ತುಂಬಲಿ. ಎಲ್ಲಾ ಜಲಾಶಯಗಳು ಭರ್ತಿಯಾಗಲಿ.


ದೇರ್ ಸೆ ಆಯಿ ಪರ್ ದುರುಸ್ತ್ ಆಯಿ ಅನ್ನುವಂತಾಗಲಿ.


-ಗಣೇಶ.

Rating
No votes yet

Comments