ಮಂತ್ರಾಲಯದಲ್ಲಿ ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆ

ಮಂತ್ರಾಲಯದಲ್ಲಿ ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆ

ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ವತಿಯಿಂದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರ ೭ ನೇ ಚಾತುರ್ಮಾಸ್ಯ ದೀಕ್ಷೆಯ ಅಂಗವಾಗಿ ರಾಷ್ಟ್ರಮಟ್ಟದ ಛಾಯಗ್ರಹಣದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಯ ವಿಷಯ : ಸ್ಪಿರಿಚ್ಯುಯಾಲಿಟಿ (ಆಧ್ಯಾತ್ಮ)
ಫೋಟೋ ಪ್ರದರ್ಶನದ ದಿನಾಂಕಗಳು : ೩೧ ಆಗಸ್ಟ್ ೨೦೧೨ - ೦೨ ಸೆಪ್ಟಂಬರ್ ೨೦೧೨
ಫೋಟೋ ನಮ್ಮ ಕೈ ತಲುಪಲು ಕೊನೆಯ ದಿನಾಂಕ ೨೦ ಆಗಸ್ಟ್ ೨೦೧೨

ಪ್ರಥಮ ಬಹುಮಾನ : ಪ್ರಮಾಣ ಪತ್ರ ಹಾಗು ರೂ ೧೫೦೦೦/- ನಗದು
ದ್ವಿತೀಯ ಬಹುಮಾನ :ಪ್ರಮಾಣಪತ್ರ ಹಾಗು ರೂ ೧೦೦೦/- ನಗದು
೫ ಸಮಾಧಾನಕರ ಬಹುಮಾನಗಳು : ಪ್ರಮಾಣಪತ್ರ ಹಾಗು ತಲಾ ರೂ ೨೦೦೦/- ನಗದು
೩ ಪ್ರಥಮ ಪ್ರವೇಶಗಳು : ಪ್ರಮಾಣಪತ್ರ ಹಾಗು ತಲಾ ರೂ ೧೦೦೦/- ನಗದು.

ಹೆಚ್ಚಿನ ಮಾಹಿತಿ ಹಾಗು ಪ್ರವೇಶಪತ್ರಿಕೆಯನ್ನು http://www.raghavendramutt.org/photography_contest ಇಲ್ಲಿ ಪಡೆಯಬಹುದು.