ರಾಜಕಾರಣಿಗೊಂದು ಆತ್ಮಸಾಕ್ಷಿ!

ರಾಜಕಾರಣಿಗೊಂದು ಆತ್ಮಸಾಕ್ಷಿ!

Comments

ಬರಹ

 ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಕೆಲ ಅಕ್ರಮ ನಡೆದಿದೆ ಎಂದು ಸಿಎಜಿ ವರದಿಯಲ್ಲದೆಯಂತೆ. ತನಿಖೆ ಕಾಲದಲ್ಲಿ, ಕಲ್ಲದ್ದಲು ಖಾತೆ ಪ್ರಧಾನಿ ಬಳಿ ಇತ್ತು. ಆದ್ದರಿಂದ ಲೋಪ-ದೋಷದ ’ನೈತಿಕ ಹೊಣೆ’ ಹೊತ್ತು ಪ್ರಧಾನಮಂತ್ರಿ, ಪಟ್ಟ ಬಿಡಬೇಕೆನ್ನುವುದು, ಪ್ರತಿ ಪಕ್ಷ, ಬಿಜೆಪಿಯ ಕೊಲಾಹಲ. ’ಅತ್ಮಸಾಕ್ಷಿ’ ಎನ್ನುವುದು ಒಬ್ಬ ವ್ಯಕ್ತಿಯ ಅಂತರಂಗದ ವಿಷಯ. ಅದು ಹೊಗಿನಿಂದ ತುರುಕುವುದೇ?! ಅಧಿಕಾರದಲ್ಲೇ ನಿಂತು, ಅಪಾದನೆಗಳು ಅಸತ್ಯ ಎಂದು ಸಾಬೀತು ಪಡಿಸುವುದನ್ನೇ ಅವರು, ’ಆತ್ಮಸಾಕ್ಷಿ’ ಎಂದುಕೊಳ್ಳಬಹುದು!
 ಕರ್ನಾಟಕದ ಮಾಜಿ ಮುಖ್ಯಮಂತ್ರಿಯ ಮೇಲೆ ಹೊರೆಸಿದ ಆರೋಪ-ಆಪಾದನೆಗಳ ವಿಚಾರದಲ್ಲೂ ’ಅತ್ಮ’ಸಾಕ್ಷಿ’ ಸೊಲ್ಲು ಕೇಳಿ ಬಂದಿತ್ತು. ಅವರ ’ಆತ್ಮಸಾಕ್ಷಿ’ಯೇನೋ ಆರೋಪಗಳನ್ನು ಎಡಗೈನಿಂದ ತಳ್ಳಿಹಾಕಿತು. ಆದರೂ ಬಿಜೆಪಿ, ತನ್ನದೇ ಅಂತರಿಕ ಪಳತೋಟಿಯಿಂದಾಗಿ, ಅವರನ್ನು ತಾಂತ್ರಿಕವಾಗಿ ಹೊರದಬ್ಬಿದಂತೆ ಮಾಡಿದರೂ, ಇವರ ವರ್ಚಸ್ಸಿನೆದುರು ಅದೇ ಮಂಕಾಗಿಹೋಯಿತು!
 ಪಾತಕಿಯೊಬ್ಬನ್ನು ಗಲ್ಲಿಗೆ ಹಾಕಿ; ಆತನ ಪಾತಕ ಸಾಬೀತಾದ ನಂತರ. ಅದನ್ನು ನೆಪಮಾತ್ರವಾಗಿಟ್ಟುಕೊಂಡು, ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್, ಸಂಸತ್ತು ಮತ್ತು ಶಾಸಕಾಂದ ಕಲಾಪವನ್ನೇ ಒತ್ತೆ ಹಿಡಿಯುವುದು ಅದರದರ ಬುದ್ಧಿಗೇಡಿ-ಹೊಣೆಗೇಡಿತನವನ್ನಷ್ಟೇ ತೋರಿಸುತ್ತದೆ!      
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet