ಗೊಲ್ಲ ಬಾಲನಿಗೊಂದು ನಮನ

ಗೊಲ್ಲ ಬಾಲನಿಗೊಂದು ನಮನ

 ಬಣ್ಣದಲಿ ಮುಂಗಾರ ಮುಗಿಲಹೋಲುವನ
ಗೋಪಿಯರ ಕೆಳೆಯಲ್ಲಿ ನಲಿವ ಚಿಣ್ಣನ
ಆಸರೆ ಬಯಸಿದವರ ಪಾರಿಜಾತನ 
ಮಿಂಚಂತೆ ಹೊಳೆವರಿವೆಯುಳ್ಳವನ

ದೇವವೈರಿಕುಲವ ತೊಡೆದಿಹನ 
ಸುಜನರೆಲ್ಲರ ಬಗೆಗೊಳ್ವ ಚಿತ್ತಾರನ
ಸುರಮುನಿಗಳೆಲ್ಲ ಮಣಿವಾತನ 
ನಾನು ಕೊಂಡಾಡುವೆನಾ ಗೊಲ್ಲಬಾಲನ!


ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ ೨-೧೨):

ಸಜಲ ಜಲದನೀಲಂ ವಲ್ಲವೀಕೇಳಿಲೋಲಂ
ಶ್ರಿತಸುರತರುಮೂಲಂ ವಿದ್ಯುದುಲ್ಲಾಸಿಚೇಲಮ್ |
ಸುರರಿಪುಕುಲಕಾಲಂ ಸನ್ಮನೋಬಿಂಬಲೀಲಂ
ನತಸುರಮುನಿಜಾಲಂ ನೌಮಿ ಗೋಪಾಲಬಾಲಮ್ ||

-ಹಂಸಾನಂದಿ

ಕೊ: ಸುರತರು= ದೇವಲೋಕದ ವೃಕ್ಷ, ಪಾರಿಜಾತ;ಸ್ವರ್ಗದಿಂದ ಭೂಮಿಗೆ ಸತ್ಯಭಾಮೆಗೆಂದು ಕೃಷ್ಣ ಸ್ವರ್ಗದಿಂದ ಭೂಮಿಗೆ ಪಾರಿಜಾತವನ್ನು ತಂದ ಕಥೆ ಪ್ರಸಿದ್ಧವೇ ಆಗಿದೆ.


ಚಿತ್ರ ಕೃಪೆ: http://diyala.kochiknacha.com/2011/01/somnathpur-temple-tribute-in.html - ಇಲ್ಲಿಂದ ತೆಗೆದುಕೊಂಡ ಸೋಮನಾಥಪುರದ ವೇಣುಗೋಪಾಲನ ಮೂರ್ತಿ 

Rating
No votes yet

Comments