ಕನ್ಯಾಕುಮಾರಿಯ ವಿವೇಕಾನಂದ ರಾಕ್ ಬಳಿ, ನಾನು ತೆಗೆದ ಕೆಲವು ಸುಂದರ ಚಿತ್ರಗಳು

ಕನ್ಯಾಕುಮಾರಿಯ ವಿವೇಕಾನಂದ ರಾಕ್ ಬಳಿ, ನಾನು ತೆಗೆದ ಕೆಲವು ಸುಂದರ ಚಿತ್ರಗಳು

ಚಿತ್ರ

ತಮಿಳು ನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದಾ ರಾಕ್, ರಾಷ್ಟ್ರದ, ಹಾಗು ವಿಶ್ವದ ಪರ್ಯಟಕರ ಗಮನ ಸೆಳೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಸನ್.೧೮೯೨ ರಲ್ಲಿ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರ ತಟದ ಕಲ್ಲಿನ ಮೇಲೆ ಹೋಗಿ ಅಲ್ಲಿ ಕುಳಿತು ಧ್ಯಾನಮಗ್ನರಾಗಿದ್ದರು. ನಮ್ಮ ಪುರಾತನ ಸಂಸ್ಕೃತಿಯ ಹಿರಿಮೆಯನ್ನು ದೇಶದ ಜನರ ಮನಸ್ಸಿನಲ್ಲಿ ಬಿತ್ತುವ ಹಾಗೂ ಯುವಜನರಿಗೆ ಭಾರತದ ನಿಜವಾದ ಸಂಸ್ಕೃತಿಯ ತಿರುಳನ್ನು ತಿಳಿಸುವ ಜಾಡಿನಲ್ಲಿ ಅವರು ಬಹಳವಾಗಿ ಶ್ರಮಿಸಿದರು. ಅದಕ್ಕಾಗಿ ಅವರು ಆಗತಾನೆ ಸುದ್ದಿಯಲ್ಲಿದ್ದ 'ವಿಶ್ವದ ವಿವಿಧ ಧರ್ಮಗಳ ಸಮ್ಮೇಳನ' ದಲ್ಲಿ ಪಾಲ್ಗೊಂಡು ಅಲ್ಲಿ ಭಾರತದ ಹಿರಿಮೆಯನ್ನು ಪ್ರಸ್ತುತ ಪಡಿಸುವ ತೀವ್ರವಾದ ಆಶೆಯಿತ್ತು. ಈ ಸಮ್ಮೇಳನ ಅಮೇರಿಕಾದ ಶಿಕಾಗೋ ನಗರದಲ್ಲಿ ಅಯೋಗಿಸಲಾಗಿತ್ತು. ಅಲ್ಲಿಗೆ ಹೋಗಲು ಹಣದ ಸಹಾಯ ಬೇಕಿತ್ತು. ಆಗ ಅವರ ಸಹಾಯಕ್ಕೆ ಬಮ್ದವರಲ್ಲಿ ನಮ್ಮ ಮೈಸೂರಿನ ಮಹಾರಾಜರು, ತಿರುವಾಮ್ಕುರ್ ಮಹಾರಾಜರು ಮತ್ತು ಬರೋಡದ ಮಹಾರಾಜರುಗಳು ಪ್ರಮುಖರು. 

ಹಾಗೆ ಹೊರಟ ವಿವೇಕಾನಂದರು, ಶಿಕಾಗೋ ನಗರಕ್ಕೆ ಹಡಗಿನಲ್ಲಿ ಹೋದರು. ಸುಮಾರು ೫ ತಿಂಗಳಿಗಿಂತ ಮೊದಲೇ ಅಲ್ಲಿಗೆ ಹೋದರು. ಅಲ್ಲಿ ಕೆಲವು ತಿಂಗಳು ಅವರು ಕಷ್ಟವನ್ನೂ ಅನುಭವಿಸಬೇಕಾಯಿತು. ಗುರುತು ಪರಿಚಯವಿಲ್ಲದ ದೇಶ. ಇದ್ದ ಬದ್ದ ಹಣವೂ ಖರ್ಚಾಯಿತು. ಸಮ್ಮೇಳನಕ್ಕೆ ಅವರ ಹೆಸರನ್ನು ನೋಂದಾಯಿಸಲು ಯಾರು ಇರಲಿಲ್ಲ. ಹಾಗಾಗಿ ಅವರು ಬಹಳ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂದಿದ್ದರು. ಆಸಮಯದಲ್ಲಿ ಅವರ ನೆರವಿಗೆ ಬಂದವರು ಕೆಲವು ಅಮೇರಿಕನ್ ಸಮುದಾಯದವರು. ವಿವೇಕಾನಂದರ ವ್ಯಕ್ತಿತ್ವಹಾಗೂ ಅವರ ವಿಚಾರಗಳನ್ನು ಕೇಳಿದ ಅವರು ಸಹಾಯಕ್ಕೆ ಬಂದು ತಮ್ಮ ಮನೆಯಲ್ಲಿ ಇರಲು ಆಶ್ರಯಕೊಟ್ಟರು. ಹಾಗೆಯೇ ಅವರ ಭಾಷಣಗಳು ಹಲವಾರು ಮನೆಗಳು ಸಭಾಗೃಹಗಳು ಮುಂತಾದ ಕಡೆಗಳಲ್ಲಿ ಆಯೋಜಿಸಲಾಯಿತು. ಸಮ್ಮೇಳನದ ದಿನದಂದು ಅವರ ಹೆಸರನ್ನು ಕರೆದಾಗ  ವಿವೇಕಾನಂದರು ಸ್ವಲ್ಪ ಹಿಂದೇಟು ಹಾಕುತ್ತಿದ್ದರು. ಏನೋ ಆತಂಕ ಅವರನ್ನು ಕಾಡಿತ್ತು. ಆಮೇಲೆ ಮಾತಾಡುವುದಾಗಿ ಅವರು ಹೇಳಿ ಅಲ್ಲಿಯೇ ಕುಳಿತು ಎಲ್ಲರ ಭಾಷಣ ಗಳನ್ನು ಮನಸ್ಸಿಟ್ಟು ಆಲಿಸಿದರು. ಆಗ ಅವರಿಗೆ ಹಲವಾರು ಸಂಗತಿಗಳು ಮನಸ್ಸಿನಲ್ಲಿ ಬಂದವು. ಅವನ್ನೆಲ್ಲ ಗುರುತುಹಾಕಿಕೊಂಡು ಅವುಗಳಿಗೆ ಸಮಾಧಾನಕರವಾದ ಉತ್ತರಗಳನ್ನು ಕೊಡುವ ಬಗ್ಗೆ ಯೋಚಿಸಿದರು. ಈಗ ಅವರಿಗೆ ಆತ್ಮ ವಿಶ್ವಾಸ ಬಂದಿತ್ತು. ಮತ್ತೆ ಕೊನೆಯಲ್ಲಿ ಆಯೋಜಕರು ಕರೆದಾಗ ಥಟ್ಟನೆ ನಡೆದು ವೇದಿಕೆಯಮೇಲೆ ಹತ್ತಿ ನಿಂತು ಅರಳು ಹುರಿದಂತೆ ಮಾತಾಡಲು ಆರಂಭಿಸಿದರು.

ಮೊದಲು ಅವರು ನುಡಿದ ವಾಕ್ಯಗಳು, 'ಅಮೇರಿಕಾದ ನನ್ನ ಅಣ್ಣಂದಿರೆ ಮತ್ತು ಅಕ್ಕ ತಂಗಿಯರೇ', ಎಂದು ಸಂಬೋಧಿಸಿದಾಗ ಪ್ರಚಂಡ ಕರತಾಡನ ಸಭೆಯಲ್ಲಿ ಪ್ರತಿಧ್ವನಿಸಿತು. ಅವರ ಎತ್ತರದ ನಿಲವು, ಪ್ರಜ್ವಲಿಸುವ ಮುಖಕಾಂತಿ, ದಿಟ್ಟ ನಿಲವು, ಕಾಷಾಯ ವಸ್ತ್ರ, ಅವರಿಗೆ ಹೇಳಿಮಾಡಿಸಿದಂತಿತ್ತು. ಈ ತರಹದ ಸಂಬೋಧನೆಯು ಅಮೆರಿಕನ್ನರಿಗೆ ತೀರ ಹೊಸದು !  ಹೇಗೆ ಹಲವಾರು ಧರ್ಮಗಳಿಗೆ ಮನೆಯಂತೆ ಸಲಹಿ ಕಾಪಾಡುತ್ತಿರುವ ಭಾರತದ ಜನ, ಮತ್ತು ಸಹನೆ ಧರ್ಮ ಸಹಿಷ್ಣುತೆ ಮೊದಲಾದ ಮಹಾನ್ ಗುಣಗಳು ಭಾರತೀಯರ ಸಹಜ ಗುಣಗಳು ಎನ್ನುವ ವಿಚಾರಗಳನ್ನೂ ಸ್ಪಷ್ಟವಾಗಿ ತಿಳಿಸಿ ಕೇವಲ ೧೫ ನಿಮಿಷಗಳಲ್ಲೇ ಆ ಸಭೆಯ ಎಲ್ಲ ಮತಗಳ ಪ್ರತಿನಿಧಿಗಳನ್ನೂ  ಆಕರ್ಷಿಸಿದರು. ಅಲ್ಲಿನ ಸಭಿಕರು ಅವರನ್ನು 'ಸ್ವಾಮೀಜಿ' ಎಂದು ಕರೆಯತೊಡಗಿದರು. ೧೫ ನಿಮಿಷಗಳಲ್ಲಿ ಅವರೊಬ್ಬ ಮಹಾನ್ ಸ್ವಾಮಿಗಳಾಗಿ ಅಮೇರಿಕಾದ ಜನತೆಯ ಅಪಾರ ಪ್ರಿತಿ ಗಳನ್ನೂ ಸಂಪಾದಿಸಿದರು.

ಅಂತಹ ಮಹಾನ್ ತಪಸ್ವಿಯ ತಪಸ್ಸಿನ ಸ್ಥಳ,  ಈಗ ಒಂದು ಸ್ಮರಣ ತಾಣವಾಗಿದೆ. ಅದನ್ನು 'ವಿವೇಕಾನಂದ ರಾಕ್,' ಎನ್ನುತ್ತಾರೆ.  ವಿಶ್ವದ ಎಲ್ಲ ವರ್ಗದ ಜನರು ಅಲ್ಲಿಗೆ ಬಂದು ತಮ್ಮ ಗೌರವವನ್ನು ಸಲ್ಲಿಸುತ್ತಾರೆ.

File attachments
Rating
No votes yet