ಶರಣಾಗತಿ (ಶ್ರೀ ನರಸಿಂಹ 56)

ಶರಣಾಗತಿ (ಶ್ರೀ ನರಸಿಂಹ 56)

ಆಗಿಹ,ಆಗುತಿಹ, ಆಗುವುದೆಲ್ಲ ನಿನ್ನ ಒಳ್ಳೆಯದಕೆ


ನಿನ್ನಂತೆ ಆಗಲಿಲ್ಲವೆನುತಲಿ ನೀ ಕೊರಗುವುದೇತಕೆ


ಇಂದಾಗಿಹ ಘಟನೆಯಿಂದಲಿ  ದುಃಖ ನಿನಗಾದರು


ಮುಂದೊಮ್ಮೆ ಸುಖವೆನಿಸುವುದದರಿಂದ ಅರಿತಿರು


 


ನೀ ಬಯಸಿದುದನು ಬಯಸಿದಾಗಲೆ ನೀಡನವನು


ಬೇಡವೆನಿಸುವುದನೆ ನೀಡಿ ನಿನ್ನನವನು ಪರಿಕಿಪನು


ಶರಣಾಗು ಶ್ರೀಹರಿಗೆ  ಬಯಕೆಗಳ ತ್ಯಜಿಸಿ ಮನದಿ


ರಕ್ಷಿಪನು ನಿನ್ನ ಮಾರ್ಜಾಲ ಮರಿಯ ರಕ್ಷಿಪ ತೆರದಿ


 


ನಿನ್ನ ಕರದಿ ದೇವನ ಕರ ಹಿಡಿದಿರಲು ಇಹುದು ಭಯವು


ಇಡೆ ಕರವನು ಶ್ರೀನರಸಿಂಹನ ಕರದೊಳಾಗ ಅಭಯವು

Rating
No votes yet

Comments

Submitted by venkatb83 Tue, 12/04/2012 - 17:55

ಸತೀಶ್ ಅವ್ರೆ ಒಳ್ಳೆ ಬರಹ.
ಈ ಸಾಲುಗಳು ನನಗೆ ಅಣ್ಣಾವ್ರ ಹಾಡು- ಬಾನಿದೊಂದು ಎಲ್ಲೇ ಎಲ್ಲಿದೆ ..... ಸಾಲು ಹಾಡು ದೃಶ್ಯ ನೆನಪಿಸಿತು..
ಹಿರಿಯರಾದ ಕವಿ ನಾಗರಾಜ ಅವರ ಬರಹಗಳ ಮಾಲೆ ಒಟ್ಟಾಗಿ ಪುಸ್ತಕದ ರೂಪದಲ್ಲಿ ಹೊರ ಬಂದ ಹಾಗೆ ನಿಮ್ಮ ಈ ಬರಹಗಳೂ ಪುಸ್ತಕ ರೂಪದಲ್ಲಿ ಸಿಗಲಿ.

ಶುಭವಾಗಲಿ.

\|/

Submitted by Prakash Narasimhaiya Wed, 12/05/2012 - 10:19

In reply to by venkatb83

ಆತ್ಮೀಯ‌ ಸತಿಷರೇ,
ಆದದ್ದಲ್ಲಾ ಒಳಿತೇ ಆಯಿತು, ಎನ್ನುವ‌ ಸೈರಣೆ ಇದ್ದರೆ ಸಾಕು ಮಹತ್ತರವಾದುದನ್ನು ಸಾಧಿಸಬಹುದು. ಉತ್ತಮ‌ ಪ್ರಸ್ತುತಿ.

Submitted by kavinagaraj Wed, 12/05/2012 - 11:08

<<ನೀ ಬಯಸಿದುದನು ಬಯಸಿದಾಗಲೆ ನೀಡನವನು

ಬೇಡವೆನಿಸುವುದನೆ ನೀಡಿ ನಿನ್ನನವನು ಪರಿಕಿಪ>>
ಅನುಭವದ ಮಾತುಗಳು!!