ಮಾನವ ಜನ್ಮ (ಶ್ರೀ ನರಸಿಂಹ 61)

ಮಾನವ ಜನ್ಮ (ಶ್ರೀ ನರಸಿಂಹ 61)

ಇಂದ್ರಿಯಗಳ ಬಯಕೆ  ತಣಿಪುದೆ ಸುಖವೆಂದೆನುತ


ಮನವು ಹೊರಗೆ ತಿರುಗುತಿದೆ ಗುರಿಯ ಮರೆಯುತ


ತಪ್ಪಗಳಾಗುವುದದು ಸಹಜ ಸಾಧನೆಯ ಹಾದಿಯಲಿ


ತಿದ್ದಿಕೊಂಡಡಿಯನಿಡಬೇಕು ತಪ್ಪುಗಳ ತೊರೆಯುತಲಿ


 


ಜೀವನದನುಭವಗಳಿಂದಲಿ ಪಕ್ವವಾಗಬೇಕು ಮನವು


ಸಾಧನೆಯ ಹಾದಿಯಲಿ ಸಿಗುವುದಿದರಿಂದ  ಗೆಲುವು


ಮನಸ ನೀ  ಮನಸಿನಿಂದಲೆ ನಿಗ್ರಹಿಸ  ಬೇಕಿಹುದು


ಜಪ, ತಪ, ಪೂಜೆಗಳೆಂಬುವವು ಇದಕೆಂದೆ ಇಹುದು


 


ಅತಿ ದುರ್ಲಭವು ನಮಗೆ ದೊರಕಿರುವ ಈ ಮಾನವನ ಜನ್ಮವು


ಮುಕ್ತಿ ಗಳಿಸಲೋಸುಗವೆ ಶ್ರೀ ನರಸಿಂಹನೆಮಗೆ ನೀಡಿಹ ವರವು

Rating
No votes yet

Comments

Submitted by kavinagaraj Thu, 01/31/2013 - 10:07

ಸಾಧನೆಗ ಮನೋನಿಗ್ರಹವೇ ಪ್ರಮುಖವೆಂದಿದ್ದೀರಿ. ಸತ್ಯ. ಧನ್ಯವಾದಗಳು, ಸತೀಶರೆ.