ನಾಟಕ - ಅನುಭವ

ನಾಟಕ - ಅನುಭವ

ಕವನ

ನಾಟಕ - ಅನುಭವ

ಅಮೃತುರು ಹೋಬಳಿ ಸಣಬ ಗ್ರಾಮದ ಪಡ್ಡೆ ಹುಡುಗುರು

ಎಲ್ಲ ಸೇರಿ ಒಂದುಥಾಪ್ಪ  ಕುರುಕ್ಷೇತ್ರ ನಾಟಕ ಆಡೋಕ್ಕೆ ಡಿಸೈಡ್ ಮಾಡಿಬಿಟ್ಟರು ,

 

ಡಿಸೈಡ್ ಮಾಡಿ ನಾಟಕದ ಮೇಸ್ಟ್ರುನು ಸೆಟ್ ಮಾಡೇ ಬಿಟ್ಟರು ,

ಊರಿನ ತರಲೆ ನಂಜಪ್ಪ ಶಕುನಿ ಪಾಲ್ಟು ,

ಆಂಜನಪ್ಪ ಭೀಮನ ಪಾಲ್ಟು ,

ಹುಚ್ಚಪ್ಪ ಕಿಷ್ಣ ನ ಪಾಲ್ಟು ,

ದೇವಗಿರಿ ರಾಜಮ್ಮ ಪಾಂಚಾಲಿ ಪಾಲ್ಟು ಅಂತ ತಿರ್ಮಾನಿಸಿಬಿಟ್ಟರು ,

ನಾಟಕದ ದಿನವು ಡಿಸೈಡ್ ಮಾಡಿದಾಯಿತು,

 

ನಾಟಕದ ಪ್ರಾಕ್ಟಿಸ್ಉ ಶುರುವಾಯಿತು ,

ಶಕುನಿ ನಂಜಪ್ಪನಿಗೂ ನನಗೂ ಪ್ರಾಕ್ಟಿಸ್ಉ ಟೇಮ್ನಾಗೆ ಒಂದುತಪ್ಪ ಜಗಳವಾಯಿತು ,

ನಾನು ಕೋಪದಾಗೆ ನಂಜಪ್ಪನಿಗೆ " ಹೊಗೊಲೇ ಹಳ್ಳಿ ಗುಗು , ನಾಕು ಅಕ್ಷರ ಬರಾಕಿಲ್ಲ ನನ್ನಗೆ ಬುದ್ದಿ ಹೇಳೋಕೆ ಬಂದುಬಿಟ್ಟ ದೊಡ್ಡ ಮನುಷ್ಯ " ಅಂತ ರೇಗಿಬಿಟ್ಟೆ

ಅದಕ್ಕೆ ನಂಜಪ್ಪ "ಕಂಡಿದೀನಿ ಎತ್ಹಾಲ್ಲ ನಿನ್ನ ಕಂತೆಯಾ" ಅಂತ ಬೋದುಬಿಟ್ಟ",

 

ನಂಜಪ್ಪನ ಮೇಲಿನ ಕೋಪ ನನ್ನಗೆ ಕಮ್ಮಿ ಹಾಗಿರಲ್ಲಿಲ ,

ಅವನಿಗೆ ಪಾಠ ಕಲಿಸಬೇಕು ಅಂತ ಡಿಸೈಡ್ ಮಾಡೇ ಬಿಟ್ಟೆ

 

ಅಂತು ಇಂತೂ ನಾಟಕದ ದಿನ ಬಂದೇಬಿಡ್ತು ,

ಊರಿನ ಶೆಟ್ಟರ ಅಂಗಡಿನಾಗೆ  ಜಾಪಳ ಮಾತ್ರೆ ತರಿಸಿ ,

ಜ್ಯೂಸುನಾಗೆ ಮಿಕ್ಸ್ಉ ಮಾಡಿ ನಂಜಪ್ಪನಿಗೆ ಕುಡಿಸೇ ಬಿಟ್ಟೆ ,

ನಾಟಕದ ಶಕುನಿ ಪಾಲ್ಟು ಟೇಮ್ ಸರಿಯಾಗಿ ನಂಜಪ್ಪನಿಗೆ ಹೊಟ್ಟೆ ಕೆಟ್ಟು ಬರಲೆಇಲ್ಲ ,

ನಾಟಕ ನಿಂತೇ ಹೋಯಿತು ,

 

ನಾಟಕ ನಿಂತ್ಹಿದು ನೋಡಿ ಗೌಡರು ಊರು ಮರವಾದೆ ಹೋಯಿತು ಅಂತ ಪಂಚಾಯಿತಿ ಕರದೇ ಬಿಟ್ಟರು,

ನನ್ನ ತಪು ಗೌಡರಿಗೆ ತಿಳಿಯಿತು ,

ನನ್ನ ಮೇಲೆ ಅಕ್ಟ್ಸುನ್ ತಗೊಳೋಕೆ ಮುಂದಾದರು ,

ಅಷ್ಟ್ರಲ್ಲಿ ನಂಜಪ್ಪ " ಗೌಡ್ರೆ ನನ್ನಗೆ ತಮಾಷೆ ಮಾಡದೆ ಇನ್ನು ಯಾರಿಗೆ ಮಾಡುತಾನೆ ನನ್ನ ಪ್ರೆಂಡು ಬುಟ್ಟು ಬಿಡಿ " ಅಂತ ಹೇಳಿ ,

ಅವನ ಔದಾರ್ಯ ತೋರಿ ಊರ ಮುಂದೆ ದೊಡ್ಡ ಮನುಷ್ಯ ಆದ,

ಹಳ್ಳಿ ಗುಗು ಅಂತ ಕರೆದ ನಾನು ಅವನ ಮುಂದೆ , ಊರವರ ಮುಂದೆ ಸಣ್ಣ  ಮನುಷ್ಯ ಆದೆ ,

ನಾನು ಬ್ರುಅಹಸ್ಪತಿ ಅನ್ನೋ ನನ್ನ ಅಹಂಕಾರ ನೆಗೆದು ಬಿತ್ತು.

ಗೌಡರು ನನ್ನ ಕ್ಷಮಿಸಿ ಬಿಟ್ಟರು .

ನಾನು ನಾಚಿಕೆ ಇಂದ ತಲೆ ತಗಿಸಿ ಹೋರಟ್ಟು ಬಂದೇ .

 

                                                                         ಬರೆದ ಮೂಡ,

                                                                                             ಹರೀಶ್ ಎಸ್ ಕೆ