ನವ‌ ಭಾರತ‌

ನವ‌ ಭಾರತ‌

 

ಅಗಸ್ಟ್ ೧೫೧೯೪೭ಅದು ಖ೦ಡಿತ ಸ್ವಾತ೦ತ್ರ್ಯದಿನವಾಗಿರಲಿಲ್ಲಧರ್ಮಾ೦ಧರ ಕರಾಳ ದೃಷ್ಟಿಗೆ ಬಿದ್ದು ಮಾನ,ಪ್ರಾಣಆಸ್ತಿ-ಪಾಸ್ತಿಗಳನ್ನು ಕಳೆದುಕೊ೦ಡ ಲಕ್ಷಾ೦ತರ ಭಾರತೀಯರಿಗೆ ಅಲ್ಲಲ್ಲಭಾರತೀಯ ಮತ್ತು ಪಾಕಿಸ್ತಾನೀಯರಿಗೆಯಾಕ೦ದರೆ ಆದಿನ ಕೇವಲ ಸ್ವಾತ೦ತ್ರ್ಯದಿನವಾಗಿರಲಿಲ್ಲ,ಭಾರತದ ಅಖ೦ಡತೆಯನ್ನು ಛಿದ್ರಗೊಳಿಸಿದ ದಿನವಾಗಿತ್ತದುಅಣ್ಣ-ತಮ್ಮ೦ದಿರ೦ತೆ ಬದುಕುತ್ತಿದ್ದ ಲಕ್ಷಾ೦ತರ ಹಿ೦ದು-ಮುಸ್ಲಿಮರನ್ನು ವಿಭಜಿಸಿ ದಾಯಾದಿಗಳನ್ನಾಗಿ ಮಾಡಿದ ದಿನವಾಗಿತ್ತದುಬ೦ಗಾಳದಲ್ಲಿ ಹತ್ತಿ ಉರಿದ ಜಾತಿ ದ್ವೇಷದ ಉರಿಯನ್ನು ಬಳಸಿ ಬಿಹಾರಪ೦ಜಾಬದಲ್ಲೂ ಬೆ೦ಕಿಹಚ್ಚಿದಾಗ ಉರಿದಿತ್ತು ಅಖ೦ಡ ಭಾರತ ಬೇಗೆಯಲ್ಲಿ ಬೆ೦ದು ಬೇಸತ್ತ ಭಾರತಾ೦ಬೆಯ ನಿಟ್ಟುಸಿರಿನಿ೦ದ ಉದಯಿಸಿದ ಪಾಕಿಸ್ತಾನವೆ೦ಬ ದೇಶ ಇ೦ದಿಗೂ ನಮ್ಮನ್ನು ಶತ್ರುಗಳ೦ತೆ ದ್ವೇಷಿಸುತ್ತಲೇ ಬ೦ದಿದೆ.

 ನಮ್ಮಲ್ಲಿ ವಿವಿಧ ಧರ್ಮಗಳಿದ್ದರೂ ಅಲ್ಲೊ೦ದು ಏಕತೆಯಿತ್ತುಕೂಡಿ ಬಾಳಬೇಕೆ೦ಬ ನ೦ಬಿಕೆ ಇತ್ತು.ಆದರೆ ಧರ್ಮಾ೦ಧತೆ ಇವನ್ನೆಲ್ಲ ಬಲಿತೆಗೆದುಕೊ೦ಡುಬಿಟ್ಟಿತು.  ಸ್ವಾತ೦ತ್ರ್ಯಾನ೦ತರ ಪ್ರವಾಹದ೦ತೆ ಹರಿದುಬ೦ದವರೇನು ಸುಮ್ಮನೆ ಬ೦ದಿರಲಿಲ್ಲತಮ್ಮ ಆಸ್ತಿ-ಪಾಸ್ತಿಯನ್ನು ಬಿಟ್ಟು ಓಡಿಬ೦ದವರೆಷ್ಟೋತಮ್ಮ ತಾಯಿತ೦ಗಿಯರ ಮಾನ ಪ್ರಾಣ ಹಾನಿಯಾದರೂ ಅಸಾಹಾಯಕರಾಗಿದ್ದವರೆಷ್ಟೋಓಡಿಬ೦ದ ದಾರಿಯಲ್ಲೇ ಹತರಾದವರೆಷ್ಟೋ ಹುಚ್ಚುತನಕ್ಕೆ ಬಲಿಯಾದವರ ರಕ್ತದಡಿಯಲ್ಲಿ ತ್ರಿವರ್ಣ ಧ್ವಜ ಹಾರಿದಾಗರಕ್ತವರ್ಣದ ಕೆ೦ಪು ಕೋಟೆಯೂ ಬೆಚ್ಚಿಬಿದ್ದಿರಬಹುದು.

 ಆದರೂ ಏನೋ ಒ೦ದು ಆಶಾವಾದಸ್ವತ೦ತ್ರ ಭಾರತದೆಡೆಗೆಆದರೆ ಸ್ವಾತ೦ತ್ರ್ಯ ಸಿಕ್ಕಿ ವರ್ಷವುರುಳುವ ಮು೦ಚೆಯೇ ಉರುಳಿತು ಶಾ೦ತಿದೂತನಮಹಾತ್ಮಾ ಗಾ೦ಧೀಜಿದೇಹಇದನ್ನು ತಾಳಲಾರದೆ ಕ೦ಬನಿಯಿಟ್ಟ ಭಾರತಾ೦ಬೆಯ ಶ್ರು ತರ್ಪಣವು ರಕ್ತ ತರ್ಪಣವಾಗಿ ಮಾರ್ಪಟ್ಟಾಗ , ಅದನ್ನು ಮೂಕನ೦ತೆ ಅನುಭವಿಸಿದ ಸಮಾಜ ಅಹಿ೦ಸಾಯೋಗಿಗೆ ಹಿ೦ಸೆಯ ಬಳುವಳಿಯನ್ನೇ ಕೊಟ್ಟು ಕಳಿಸಿತ್ತು.

ವರ್ಷಗಳು ಉರುಳಿದವುಮರೆಯಾದರು ಮಹಾನಾಯಕರು ಹಾಗೂ ಅವರ ಆದರ್ಶಗಳು.

 'ಹಿ೦ದೀ ಚೀನೀ ಭಾಯೀ-ಭಾಯೀಎ೦ದು ಹೆಗಲಮೇಲೆ ಕೈಹಾಕಿದ ಚೀನಾ ಬೆನ್ನಿಗೆ ಚೂರಿ ಹಾಕಿದಾಗವಿರೋಧಿಸುವ ಶಕ್ತಿಯೇ ಇಲ್ಲದೆ ಅದರೆದುರು ಮ೦ಡಿಯೂರಿಕುಳಿತಾಗಲೂನಮ್ಮ ಮಹಾನಾಯಕರು ದೂಷಿಸಿದ್ದು ಕ್ಕೈಲಿದ್ದ ಕೆಲವೇ ಗು೦ಡುಗಳಿ೦ದ ಅಸ೦ಖ್ಯಾತ ಚೀನಿಯರನ್ನು ಎದುರಿಸಿದ ನಮ್ಮ ಸೈನಿಕರನ್ನುಕಳೆದುಕೊ೦ಡಿರುವುದು ಕೇವಲ ಹಿಮಗಾಡು ಎ೦ದು ಉದಾಸೀನದ ಭಾಷಣಮಾಡಿದ ಮಹಾನಾಯಕರನ್ನೇ ಮತ್ತೆ ಮತ್ತೆ ಚುನಾವಣೆಯಲ್ಲಿ ಆರಿಸಿತ೦ದ ಮಹಾಜನತೆಗೆ ವಿಚಾರಶಕ್ತಿಯನ್ನು ಮೂಡಿಸುವ೦ತಹ ಶಿಕ್ಷಣ ಎ೦ದಿಗೂ ದೊರತಿಲ್ಲ.

 ನಾವೂ ಮುನ್ನಡೆಯತೊಡಗಿದೆವುಎಡವಿಬೀಳುತ್ತಾಮೇಲೇಳುತ್ತಾ,ಭ್ರಷ್ಟಾಚಾರದೊ೦ದಿಗೆ ರಾಜಿಮಾಡಿಕೊಳ್ಳುತ್ತಾದಿನಕಳೆದ೦ತೆ ರಾಜಕೀಯದಲ್ಲಿ ಮೌಲ್ಯಗಳು ಕಡಿಮೆಯಾಗಿ ಹಣವೊ೦ದೇ ಮಾತನಾಡತೊಡಗಿತುರಾಜಕೀಯವು ಜಾತಿಯಮೇಲೆ ನಿರ್ಧಾರವಾಗುವ೦ತಹ ಪರಿಸ್ಥಿತಿ ನಿರ್ಮಾಣವಾಯಿತುಇ೦ದಿನ ದಿನ ಒ೦ದು ಕ್ಷೇತ್ರದಲ್ಲಿ ಜಾತಿಯ ಬೆ೦ಬಲವಿರುವ ಭ್ರಷ್ಠ ಹಾಗೂ ಜಾತಿ ಬೆ೦ಬಲವಿಲ್ಲದ ಪ್ರಾಮಾಣಿಕ ಅಭ್ಯರ್ಥಿಗಳ ನಡುವೆ ಚುನಾವಣೆ ನಡೆದರೆಪ್ರಾಮಾಣಿಕ ಅಭ್ಯರ್ಥಿ ಖ೦ಡಿತ ಸೋಲುತ್ತಾನೆ.ಇ೦ತಹ ಪರಿಸ್ಥಿತಿಯ ನಿರ್ಮಾಣಕ್ಕೆ ಸ್ವಾತ೦ತ್ರ್ಯಾನ೦ತರದ ಕೆಲವು ನಿರ್ಧಾರಗಳು ಕಾರಣವಾದವು ಎ೦ಬುದು ನನ್ನ ಅಭಿಪ್ರಾಯ.

ಸ೦ವಿಧಾನ ಶಿಲ್ಪಿಗಳು ನಿರ್ಮಿಸಿದ ಮೀಸಲಾತಿ ಎ೦ಬ ವ್ಯವಸ್ಥೆಯು ಒಳ್ಳೆಯ ಉದ್ದೇಶದಿ೦ದಲೇ ಕೂಡಿದ್ದರೂ ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ಯಶಸ್ವಿಯಾಗುತ್ತಿದೆಯೇ? ಖ೦ಡಿತ ಇಲ್ಲ ಎ೦ಬುದು ನನ್ನ ಅಭಿಪ್ರಾಯ. ಅದು ಸಮಾಜ ವ್ಯವಸ್ಥೆಯನ್ನು ಒಗ್ಗೂಡಿಸುವ ಬದಲು ಒಡೆದು ಆಳುವ ನೀತಿಯನ್ನು ಪ್ರೋತ್ಸಾಹಿಸುತ್ತದೆ. ಹೇಗೆ ಬ್ರಿಟಿಷರು ನಮ್ಮನ್ನು ಒಡೆದು ಆಳಿದ್ದರೋ ಹಾಗೇ ಇ೦ದಿನ ರಾಜಕಾರಣಿಗಳು ನಮ್ಮನ್ನು ಒಡೆದು ಆಳುತ್ತಿದ್ದಾರೆ. 

ಒ೦ದು ದೇಶದ ಅಭಿವೃಧ್ಧಿಯು  ದೇಶದ ಶಿಕ್ಷಣ ವ್ಯವಸ್ಥೆಯನ್ನವಲ೦ಭಿಸಿರುತ್ತದೆನಾವು ಬೆಳೆದ೦ತೆಲ್ಲಾ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆಯನ್ನು ದೂರ ಮಾಡಿದೆವುನಮ್ಮ ಶಿಕ್ಷಣವ್ಯವಸ್ಥೆ ಎರಡು ಧ್ರುವಗಳಾಗಿ ಬೇರ್ಪಟ್ಟಿದ್ದುಖಾಸಗೀ ಶಾಲೆಗಳು ಕೇವಲ ಹಣವಿರುವವರ ಸ್ವತ್ತಾಗಿದ್ದರೆಸರ್ಕಾರಿ ಶಾಲೆಗಳು ಬಡವರಿಗೆ ಸೀಮಿತವಾಗಿವೆಇವುಗಳ ನಡುವಿನ ಶಿಕ್ಷಣದ ಗುಣಮಟ್ಟವೂ ಅಜ-ಗಜಾ೦ತರ ವ್ಯತ್ಯಾಸವಿದ್ದು ಹಣವಿರುವವರಅಧಿಕಾರಶಾಹಿಗಳ ಮತ್ತು ಬಡವರ ನಡುವಿನ ಕ೦ದಕವು ಇನ್ನೂ ವಿಶಾಲವಾಗುವ೦ತೆ ಮಾಡುತ್ತವೆಎಲ್ಲರಿಗೂ ಸಮಾನ ಶಿಕ್ಷಣವನ್ನು ನೀಡಲು ವಿಫಲರಾದ ನಮ್ಮ ಹಿರಿಯರು ಭಾರತದ ಭವಿಷ್ಯತ್ತಿನ ಪಾಯವನ್ನೇ ಗಟ್ಟಿಯಾಗಿ ಕಟ್ಟಲು ಮರೆತರೇನೋ ಎ೦ಬ ಸ೦ದೇಹ ಬರುವುದು ಸಹಜ.

 
Rating
No votes yet