ಕೄಷ್ಣ ಲೀಲೆ ಅಲ್ಲಾ,,ಕಾಮದಾಟ....................

ಕೄಷ್ಣ ಲೀಲೆ ಅಲ್ಲಾ,,ಕಾಮದಾಟ....................

ಮತ್ತ ಈಗ ಸ್ವಲ್ಪ ದಿನದಿಂದ ಈ ಮಠದ ಸ್ವಾಮಿಗಳ ಕಾರ್ಯಕ್ರಮಗೊಳು ತಾಸುಗಟ್ಟಲೆ ವಾರ್ತಾ ಚಾನಲ್ ಗಳೊಳಗ ತೋರಸತಾರ. ಒಂದು ಮಾಧ್ಯಮದೊಳಗ ಅವನ ಪರವಾಗಿ ಮಾತಡಿದ್ರ ಇನ್ನೊಂದ್ರಾಗ ಅವನ ವಿರುಧ್ಧವಾಗಿ ಮತಾಡೊದನ್ನ ಹೈಲೈಟ್ ಮಾಡಿ ತೋರಸತಾರ. ನಡಿಲಿಕತ್ತ ಪ್ರಸ್ತುತ ವಿಚಾರಗಳನ್ನೆಲ್ಲಾ ನೋಡಲಿಕತ್ತರ ಎಷ್ಟ ವಿಚಿತ್ರ ಅನಿಸ್ತದ ಅಂದ್ರ ಈ ಸ್ವಾಮಿಗಳು ಅನ್ನೊ ಆಷಾಢಭೂತಿಯ ಸಮ್ಮೋಹನಕ್ಕ ಒಳಗಾದವರೆಲ್ಲಾ ಅತೀ ವಿದ್ಯಾವಂತರು ಮತ್ತ ಛೋಲೊ ಛೋಲೊ ಗೌರವಾನ್ವಿತ ಹುದ್ದೆಗಳೊಳಗ ಇರೊ ಅಂಥವರನ. ದೇಶವನ್ನ ಪ್ರಗತಿ ಪಥದೊಳಗ ನಡಸಬೇಕಾದಂಥಾ ಸುಶಿಕ್ಷಿತ ಯುವ ಜನಾಂಗಕ್ಕ ಎನಾಗೇದ ಇವತ್ತ. ಯಾಕ ಮೂಢರಂಘ ವರ್ತಿಸ್ಲಿಕತ್ತಾರ. ಇವತ್ತ ಯಾರೊ ಒಬ್ಬ ಬಂದು " ನಾ ಸಾಕ್ಷಾತ ಈಶ್ವರನ ಅವತಾರ ಕಾಳಭೈರವ ನಾನೆ " ಅಂತ ಹೇಳಿದ್ರ ನಂಬಿ ಅವನ ಹಿಂದ ಇದ್ದ ಛೊಲೊ ನೌಕರಿ, ಹೆಂಡತಿನ್ನ /ಗಂಡನ್ನ,ಮಕ್ಕಳನ್ನ ಬಿಟ್ಟು ತನಗಿದ್ದ ಸಾಮಾಜೀಕ ಕೌಟುಂಬಿಕ ಜವಾಬ್ದಾರಿ ಮತ್ತ ಕರ್ತವ್ಯಗಳನ್ನ ಕಿತ್ತಿ ಒಗದು ಒಬ್ಬ ಆಷಾಢಭೂತಿಯ ಹಿಂದ ಅಲಕೋತ ಹೋಗ್ತಾರಲ್ಲಾ ಇವರ ಬುಧ್ಧಿ ಯಾವ ಲದ್ದಿ ತಿನಲಿಕ್ಕೆ ಹೋಗಿರತದೊ ಆ ದೇವರಿಗೆ ಗೊತ್ತು. ದೇವರು ಅಂದ್ರ ಅದೊಂದ ಪವಿತ್ರ ವಿಶ್ವಾಸ. ಎಲ್ಲೆ ಸದ್ವಿಚಾರ,ಸದಾಚಾರ, ಸದ್ಭಾವನೆಗಳಿರತಾವೊ ಅಂಥಾ ಮನುಷ್ಯಾನ ಮನಸ್ಸಿನಾಗ ದೇವರ ನಿವಾಸ ಇರತದ. ಹೋರತು ನಾನೆ ದೇವರು, ನೀವೆಲ್ಲಾ ನನ್ನ ಪೂಜಿ ಮಾಡ್ರಿ, ಇಲ್ಲಂದ್ರ ನಾ ಎಲ್ಲಾರನು ನಾಶಾ ಮಾಡತೇನಿ ಅಂತ ಹೇಳಿಕೆ ಕೋಡೊ ಯಾರು ದೇವರಾಗಲಿಕ್ಕೆ ಸಾಧ್ಯ ಇಲ್ಲಾ. ತನ್ನ ಒಂದ ಪ್ರವಚನದೊಳಗ ನಿತ್ಯಾನಂದ ಹೇಳ್ತಾನ ನೋಡ್ರಿ " ನನ್ನ ಶಕ್ತಿಯ ಬಗ್ಗೆ ಯಾರಿಗೂ ಗೊತ್ತಿಲ್ಲಾ, ನನ್ನ ನಿಂದನೆ ಮಾಡಿದವರನ್ನ, ದೂಷಿಸಿದವರನ್ನ ನಾನು ಸಂಪೂರ್ಣ ನಾಶ ಮಾಡಿಬಿಡತೇನಿ, I will destroy them all. " ಅಂತ ಹೇಳಿಕೆ ಕೊಡತಾನ. ಇದನ್ನ ಕೇಳಿ ಅಲ್ಲಿಧ್ಧಂಥಾ ಸಾವಿರಾರು ವಿದ್ಯಾವಂತ ಕುರಿಗೋಳು ಚಪ್ಪಾಳಿ ಹಾಕತಾರ. ಆಂವಾ ಖರೇನು ದೇವರಾಗಿದ್ನಂದ್ರ, ನಿಂದಿಸುವವರು ,ದ್ವೇಷಿಸುವವರು, ಪ್ರೀತಿಸೊರು ಪೂಜಿಸೋರು ಎಲ್ಲಾರು ನನ್ನವರು ನನ್ನ ಅಂಶಸಂಭೂತರು, ನಾ ಎಲ್ಲಾರನ್ನು ಸರಿ ಸಮಾಸಮಾನಾಗಿ ಸ್ವಿಕಾರಾ ಮಾಡಕೋತೇನಿ ಅಂತ ಹೇಳ್ತಿದ್ದಾ. ವಿದ್ಯಾವಂತರಾದ ಅವನ ಅನುಯಾಯಿಗಳಿಗೆ ಇಂಥಾ ಸೂಕ್ಷ್ಮ ವಿಚಾರಗಳ್ಯಾಕ ತಿಳಿಯಂಗಿಲ್ಲಾ ಅಥವಾ ತಿಳಿದು ತಿಳಿದು ಸ್ವಾರ್ಥಿಗಳಾಗಿ ರೊಕ್ಕದಾಸೆಗಾಗಿ ನಿತ್ಯಾನಂದನ ಹಣಬಲಕ್ಕ ದಾಸರಾಗಿ ಹಿಂಗ ಮನಃಸಾಕ್ಷಿಗೆ ಮೊಸಾಮಾಡಕೊಳ್ಳಿತ್ತಾರೊ ಎನೊ ಅನಿಸ್ತದ.ಒಬ್ಬ ವಿದ್ಯಾವಂತ ಪ್ರಜೆ ಅಂದ್ರ ದೇಶದ ಆಸ್ತಿ ಇಧ್ಧಂಗ. ದೇಶವನ್ನ ಜ್ಞಾನಾತ್ಮಕವಾಗಿ, ತಾಂತ್ರೀಕ, ವೈಜ್ಞಾನಿಕವಾಗಿ, ಸಾಮಾಜೀಕವಾಗಿ,ಆರ್ಥಿಕವಾಗಿ, ಪ್ರಗತಿಯ ಹಾದಿಯೋಳಗ ನಡೆಸಿ ದೇಶದ ಅಭ್ಯುದಯಕ್ಕ ಸಹಾಯ ಮಾಡೊ ಅಂಥಾ ಯಶಸ್ವಿ ಇಂಜಿನೀಯರು,ಡಾಕ್ಟರು,ಶಿಕ್ಷಕರು.ವಕೀಲರು, ವ್ಯಾಪಾರಿಗಳು ಇವರೆಲ್ಲಾರು ತಮ್ಮ ಜವಾಬ್ದಾರಿಗಳನ್ನ ಮರತು ಒಬ್ಬಸಮಾಜಕಂಟಕನ ಹಿಂದ ನಾಯಿ ಹಂಗ ಅಲೆಯೋದ ನೋಡಿದ್ರ ಭಾಳ ನೋವಾಗತದ. ಇಂಥವರ ಪರವಾಗಿ ವಾದಾ ಮಾಡೊ ಅನುಯಾಯಿಗಳ ಮಾತು ಕೇಳಿದ್ರಂತು ಇಂಥಾ ಆಷಾಢಭೂತಿಗೊಳು, ವಿದ್ಯಾವಂತ, ಪ್ರಜ್ಞಾವಂತ ಜನರನ್ನ ಅದೇಷ್ಟರ ಮಟ್ಟಿಗೆ ತಲಿಕೆಡಿಸಿ ಬುಟ್ಟಿಗೆ ಹಾಕ್ಕೊಂಡಾನಂತ ಆಶ್ಚರ್ಯ ಆಗತದ. ಇಂಥವರ ಮಾಡಿದ ಪಾಪ ಕೄತ್ಯಗಲಿಗೆ ಸಾಕ್ಷಿ ಆಧಾರ ಸಿಕ್ಕ ಮ್ಯಾಲು ಇವರನ್ನ ಬೆಂಬಲಿಸೊ ಜನಾ ಇದ್ದಾರಂದ್ರ ನಮ್ಮ ಜನರ ಮೂಢತನಕ್ಕ ಹೇಸಿಕಿ ಅನಿಸ್ತದ. ನಮ್ಮ ದೇಶ ಬರೆ ಟೆಕ್ನಾಲಜಿಕಲ್ ಆಗಿ ಮಾತ್ರ ಮುಂದವರಿಲಿಕತ್ತದ. ಆದರ ಜನರ ಮೂಢನಂಬಿಕಿ, ಗೊಡ್ಡುವಿಚಾರಗೊಳು, ಜನರು ವಿಚಾರ ಮಾಡೊ ರೀತಿ ಇನ್ನು ಅನಾಗರಿಕವಾಗಿನಾ ಅದ. ವಿದ್ಯಾವಂತ ಮಂದಿ ಕಳ್ಳ ಸ್ವಾಮಿಗಳ ಬೆನ್ನ ಹತ್ತಿ ತಿರಗಲಿಕತ್ತಿದ್ದಾ ಇದಕ್ಕ ಸಾಕ್ಷಿ. ತಾವು ಮಾಡಿದ ಕುಕೄತ್ಯಗಳನ್ನ ಮರಿಮಾಚಲಿಕ್ಕೆ ತಮ್ಮ ಬೆಂಬಲಿಗರನ್ನ ತನ್ನ ಗುರಾಣಿಯಹಂಗ ಉಪಯೋಗಿಸಿಕೊಳ್ಳಿಕತ್ತಿದ್ರು ಗೊತ್ತಾಗಲಾರಧಂಥಾ ಸುಶಿಕ್ಷಿತ ಹುಚ್ಚಬರಿಗಿಗೊಳ ನಮ್ಮ ದೇಶದಾಗ ತುಂಬ್ಯಾರ.


ಧರ್ಮ ಭ್ರಷ್ಠರಾದ ಕೇಲವು ಕಾಮುಕ ಸ್ವಾಮಿಗಳು ತಮ್ಮನ್ನ ತಾವು ವಿವೇಕಾನಂದರಿಗೆ,ಪರಮಹಂಸರಂಥಹ ಸಾತ್ವೀಕರಿಗೆ ಹೋಲಿಸ್ಕೊತಾರಂದ್ರ ಎಷ್ಟ ಅಸಹ್ಯ ಅನಿಸ್ತದ. ಒಬ್ಬ ಅಧರ್ಮಿ ತನ್ನನ್ನ ತಾನು ಪೂಣ್ಯ ಪುರುಷರ ಸಾಲಿಗೆ ಸೇರಿಸಿಕೊಳ್ಳ್ತಾನ ಅಂದ್ರ ಎಲ್ಲಾರು ಹೌದ ಹೌದ ಅಂತ ಗೊಣಹಾಕೊ ಇವರಿಗೆ " ಭಾರತದ ಪೂಣ್ಯಭೂಮಿಯೋಳಗ ಬಂದುಹೋದ ಈ ಮಹಾನ ಸಾಧಕರ ಮ್ಯಾಲೆ ಅನೈತಿಕತೆಯ,ಅನಾಚಾರದ ಆಪಾದನೆ ಇದ್ದಿಲ್ಲಾ ಅನ್ನೊದ ಹೆಂಗ ಗೊತ್ತಾಗವಲ್ಲತು.ಅಥವಾ ಗೊತ್ತಿದ್ದು ಇಲ್ಲಧಂಗ ನಾಟಕ ಮಾಡತಿರಬಹುದು ಅನಿಸ್ತದ. ಯಾಕ ಜನಾ ಬಾಯಿ ಮುಚ್ಕೊಂಡ ಸುಮ್ನಿದ್ದಾರ.ಕ್ಷುಲ್ಲಕ ಕಾರಣಕ್ಕ ವಿರೋಧ ವ್ಯಕ್ತಪಡಿಸೊ ಜನಾ, ಒಬ್ಬ ಧರ್ಮಭ್ರಷ್ಠನ ಈ ಕೄತಿಗೆ ಯಾಕ ಕಣ್ಣು ಕಿವಿ ಮುಚ್ಕೊಂಡ ಕೂತಾರ?.. ವೀವೆಕಾನಂದರ ಜೋಡಿ ನೀವೆದಿತಾ ಇದ್ಲು, ಪರಮಹಂಸರ ಜೋಡಿ ಶಾರದಾದೇವಿ ಇದ್ರು ಅದಕ್ಕ ನನ್ನ ಜೋಡಿ ಇಷ್ಟ ಮಂದಿ ಹೆಣ್ಣಮಕ್ಕಳಿದ್ದಾರ ಅಂತ ಹೇಳೊದನ್ನ ಕೇಳಿದ್ರ ನೈತಿಕವಾಗಿ ಅಧೋಗತಿಗೆ ಇಳಧಂತಾ ಇಂಥಾ ಮನಶ್ಯಾರನ ಜನಾ ಹೇಂಗ ಜ್ಞಾನಿ, ಮಹಾಪುರುಷ ಅಂತ ಹೋಗಳಾತಾರೊ ಅವರಿಗೆ ಗೊತ್ತು. ಸ್ವಾಮಿ ವಿವೇಕಾನಂದರದಾಗಲಿ, ಪರಮಹಂಸರದಾಗಲಿ,ಶ್ರೀ ಶಂಕರಚಾರ್ಯರದಾಗಲಿ ಸಾತ್ವೀಕವಾದಂತಹ ನಿರ್ಮಲವಾದ ಜೀವನಶೈಲಿ ಇತ್ತು. ಜನಸಾಮಾನ್ಯರಿಗೆ,ನೊಂದವರಿಗೆ, ಅವರನ್ನ ಭೇಟ್ಟಿಯಾಗಲಿಕ್ಕೆ ಮುಕ್ತ ಅವಕಾಶಗಳಿದ್ವು.ಯಾವ ಐಷಾರಾಮದ ಸೊಗಡಿಲ್ಲದ ಸಿದಾ ಸರಳ ಜೀವನಾ ನಡಸತಿದ್ದ್ರು. ಸರ್ವ ಭೋಗಗಳನ್ನ ತ್ಯಾಗಾ ಮಾಡಿ ಧರ್ಮ ಭೋದನೆ, ಮತ್ತ ಲೋಕ ಕಲ್ಯಾಣದ ಸಲುವಾಗಿ ಶ್ರಧ್ಧೆಯಿಂದ ದುಡಿತಿದ್ದರು. ಸನ್ಯಾಸಿ ಅಂದ್ರ ಸರ್ವಸಂಗ ಪರಿತ್ಯಾಗಿಯಾಗಿ,ನಿರ್ಮೋಹಿಯಾಗಿರೊದು.ಒಬ್ಬ ನಿಜವಾದ ಸನ್ಯಾಸಿಯ ಜೀವನಾ ಯಾವ ಮುಚ್ಚುಮರಿ ಇಲ್ಲದ ಪಾರದರ್ಶಕ ಆಗಿರತದ. ಧರ್ಮಮಾರ್ಗದೊಳಗ ಜೀವನ ನಡಸಿ, ದೈವಭಕ್ತಿಯ ಮಹಿಮಾ ಜಗತ್ತಿಗೆ ಸಾರಿಧಂಥಾ ಶ್ರೀ ಶಿರಡಿ ಸಾಯಿಬಾಬಾ ಊರಹೊರಗ ಒಂದ ಗುಡಸಲದಾಗ ಇರತಿದ್ದರು. ಈಡಿ ಜಗತ್ತಿನ ಮಂದಿ ಬಾಬಾ ಅವರ ಭಕ್ತರಿದ್ದಾರ. ಜೀವನ್ಮರಣದ ಹೆದರಿಕಿ ಗೆದ್ದಾಂವನಿಗೆ ಯಾವ ರಕ್ಷಣೆಯ ಅವಶ್ಯಕತೆ ಇರಂಗಿಲ್ಲಾ. ಆದರ ರೇಷ್ಮಿ ಕಾವಿ ಹಾಕ್ಕೊಂಡು ತನ್ನಷ್ಟಕ್ಕ ತಾ ದೊಡ್ಡ ಜ್ಞಾನಿ, ದೇವರ ಅವತಾರಾ ಅಂತ ಹೇಳ್ಕೊಂಡು ಆರು ಗೇಟಿನ ಹಿಂದ ಎಲ್ಲಾ ರಕ್ಷಣಾ ವ್ಯವಸ್ಥಾ ಇಧ್ಧಂಥಾ ಐಷಾರಾಮದ ಎಲ್ಲಾ ಅನುಕೂಲ ಇರೊ ಖೊಲಿಯೋಳಗ ವಾಸಾ ಮಾಡೊದ್ಯಾಕ. ಖರೇನ ದೇವರಾಗಿದ್ರ ರಕ್ಷಣೆಯ ಅವಶ್ಯನಾ ಇರಂಗಿಲ್ಲಾ. ತಪ್ಪ ಮಾಡಲಾರದ ಮನಷ್ಯಾಗ ಯಾವತ್ತು ಹೆದ್ರಿಕಿ ಇರಂಗಿಲ್ಲಾ. ತಲಿಮ್ಯಾಲೆ ಕಿರಿಟಾ, ರುದ್ರಾಕ್ಷಿ ಸರಾ ಅಥವಾ ಪೇಟಾ. ಕೊಳ್ಳಾಗ ಥಂಡಾಥಂಡದ ಗುಂಡಿನ ಸರಾ, ಫಳಾ ಫಳಾ ಹೋಳಿಯೊ ರೆಷ್ಮಿ ಅರವಿ,ಹಣಿಮ್ಯಾಲೆ ಕುಂಕಮಾ ಇಷ್ಟ ಹಾಕ್ಕೊಂಡ ಕೈಯ್ಯಾಗ ಒಂದ ತ್ರೀಶೂಲಾ ಹಿಡಕೊಂಡ ಮೈಮ್ಯಾಲೆ ದೇವರ ಬಂಧಂಗ ಕುಣಿಲಿಕತ್ತರ ಕೈ ಮುಗಿಯೋ ಮಂದಿನ್ನ ನೋಡಿದ್ರ ಅಯ್ಯೊ ಅನಿಸ್ತದ. ಇಂಥವರು ಇರೋದಕ್ಕನ ಸಮಾಜ ಕಂಟಕರಾದಂಥಾ ಕಳ್ಳ ಸ್ವಾಮಿಗೊಳು ಶಿಕ್ಷಾ ಇಲ್ಲದ ಬಿಂದಾಸ ಹೋರಗ ಅಡ್ಡ್ಯಾಡತಾರ.ಒಂದ ಸಭೆಯೋಳಗ ನಿತ್ಯಾನಂದ ಹೇಳ್ಕೊತಾನಂತ" ನಾ ಹೇಳಿದ್ರ ಹೆಣ್ಣಮಕ್ಕಳು ತಮ್ಮ ಕೊರಳಾಗಿನ ತಾಳಿ ಸುದ್ಧಾ ತಗಿತಾರಂತ" ಒಬ್ಬ ಗುರುವಿನ ಬಾಯೊಳಗ ಬರೊ ಮಾತರ ಮಾತಾ ಇವು. ದೀರ್ಘಸುಮಂಗಲಿಭವ ಅಂತ ಆಶಿರ್ವಾದಾ ಮಾಡೊ ಬಾಯಿಂದ ಅಮಂಗಲದ ಮಾತಾಡೊ ಇಂವಾ ಯಾಮೂಲ್ಯಾಗಿನ ಗುರು ಆಗ್ಲಿಕ್ಕೆ ಸಾಧ್ಯ ಅದ. ಇಂವನ ರೊಕ್ಕದ ಬಲಕ್ಕ ಆಶೆಪಟ್ಟು ಮಾಧ್ಯಾಮಗಳೊಳಗ ಇಂಥಾವನ ಪರವಾಗಿ ವಾದಾಮಾಡೊ ಮಂದಿನ್ನ ನೋಡಿದ್ರ" ಖರೇನು ಹೆಸಿಗಿ ಅನಿಸ್ತದ. ಈ ಸನ್ಯಾಸಿ ಅಥವಾ ಧರ್ಮಗುರುಗಳು ಸ್ವಾಮಿಗಳು ಅಂತ ಏನ್ ಹೇಳ್ಕೊತಿರ್ತಾರ ಅಂಥವರಿಗೆ ಈ ರಾಗ ಭಾವ ದ್ವೇಷಗೋಳ ವಿಚಾರನು ತಲ್ಯಾಗ ಬರಬಾರದು ಅಂಥಾದ್ದು, ಈ ಧರ್ಮಗುರುಗಳು ಅಂತ ಅನ್ನಿಸ್ಕೊಂಡವರ ಮ್ಯಾಲೆ ಲೈಂಗಿಕ ಅತ್ಯಾಚಾರದ ಆರೋಪ ಇರತಾವ, ಮತ್ತ ಮ್ಯಾಲೆ ವೈದ್ಯಕೀಯ ಪರಿಕ್ಷೆ ಬ್ಯಾರೆ. ಅಂದ್ರ ಎಷ್ಟರಮಟ್ಟಿಗೆ ಆಂವಾ ಸಾಚಾ ಮತ್ತ ಧರ್ಮನಿಷ್ಠ ಅಂತ ವಿಚಾರ ಮಾಡಬೇಕಾದ ಸಂಗತಿನ. .


ಇನ್ನೊಂದು ಮುಖ್ಯ ವಿಚಾರಂದ್ರ ಈ ಮಾಧ್ಯಮದವರು ಇಂಥಾ ಭಂಡ ಸ್ವಾಮಿಗಳ ಕಾಮದಾಟವನ್ನ ಕೄಷ್ಣಲೀಲೆ, ರಾಸಲೀಲೆ ಅಂತ ಮ್ಯಾಲಿಂದ ಮ್ಯಾಲೆ ಪ್ರಸಾರ ಮಾಡತಾರ. ಇವರೆಲ್ಲಾ ಕೄಷ್ಣನ ಹುಟ್ಟಿನಿಂದ ಕೊನೆಯ ಘಳಿಗಿ ತನಕಾ ಪುರಾಣ ಅಧ್ಯಯನ ಮಾಡಬೇಕು ಅನ್ನೊದು ನನ್ನ ಅಭಿಪ್ರಾಯ. ಒಬ್ಬ ಕಳ್ಳ ಸ್ವಾಮಿಯ ಕಾಮದಾಟವನ್ನ ಪೂಣ್ಯ ಪುರುಷನಾದ ಶ್ರೀಕೄಷ್ಣನ ಭಕ್ತಿ ಲೀಲೆಗಳಿಗೆ ಹೋಲಿಸಿ ಭಾರತದ ಸನಾತನ ಹಿಂದು ಧರ್ಮದ ಪುರಾಣಗಳಿಗೆ ಅವಮಾನ ಮಾಡಲಿಕತ್ತಾರ.ಹೌದು ಶ್ರೀಕೄಷ್ಣಗ ಅಷ್ಟ ಮಹಿಷಿಯರಲ್ಲದ ಹದಿನಾರುಸಾವಿರಮಂದಿ ಗೋಪಿಕಾಸ್ತ್ರಿಯರು ಇದ್ದರು. ಆದರ ಅವರೆಲ್ಲಾರು ಶ್ರೀಕೄಷ್ಣನ ನಿಷ್ಕಾಮದಿಂದ ಭಾವದಿಂದ ಪ್ರೀತಿಸತಿದ್ದರು. ಜಿವನ್ಮರಣದ ಬಂಧನದಿಂದ ಮುಕ್ತಿಯನ್ನ ಪಡಿಲಿಕ್ಕೆ ಆ ಪರಮಾತ್ಮನಲ್ಲೆ ಭಕ್ತಿಯಿಂದ ತಮ್ಮನ್ನ ತಾವು ಶ್ರೀಕೄಷ್ಣಗ ಸಮರ್ಪಣಾ ಮಾಡಿಕೊಂಡಿದ್ದರು. ಶುಧ್ಧವಾದ ಭಕ್ತಿ ವಿನಃ ಅಲ್ಲೆ ಬ್ಯಾರೆ ಯಾವ ವಾಸನಾ ಭಾವ ಇರಲಿಲ್ಲಾ ಅನ್ನೊದು ಪುರಾಣಗಳಿಂದ ತಿಳಿದು ಬರತದ. ಅಲ್ಲೆ ಯಾವುದೇ ಕಾಮವಾಂಛೆಯ ನೆರಳಿತ್ತು ಅನ್ನೊದನ್ನ ಯಾವ ಗ್ರಂಥಗಳೊಳಗು ಉಲ್ಲೇಖಿಸಿಲ್ಲಾ. ಕೄಷ್ಣ ಯಾವ ಗೋಪಿಕೆಯ ಜೋಡಿ ಫ್ಲರ್ಟ್ ನು ಮಾಡಿದ್ದಿಲ್ಲಾ ಮತ್ತ ಯಾವ ಗೋಪಿಕಾ ಆಂವನ್ನ ಮ್ಯಾಲೆ ಲೈಂಗಿಕ ಅತ್ಯಾಚಾರದ ಕಂಪ್ಲೇಂಟ್ ನು ಕೊಟ್ಟಿದ್ದಿಲ್ಲಾ. ದೇಶದ ಆಗು-ಹೊಗುಗಳ ಬಗ್ಗೆ , ಸತ್ಯ ನ್ಯಾಯಗಳ ಧ್ವನಿ ಜನಸಾಮಾನ್ಯರ ತನಕಾ ಮುಟ್ಟಿಸೊ ಅಂಥಾ ಜವಬ್ದಾರಿ ಇರೊ ಈ ಮಾಧ್ಯಮದವರಿಗೆ ಯಾವದಕ್ಕ ಎನ ಉದಾಹರಣೆ ಕೊಡಬೇಕನ್ನೊ ಅಷ್ಟು ಸಾಮಾನ್ಯ ಪರಿಜ್ಞಾನ ಇಲ್ಲಂದ್ರ ಆಶ್ಚರ್ಯದ ಸಂಗತಿ. ನಿಜವಾದ ಭಕ್ತಿ ರಸದ ಮಹತ್ವ ಸಾರುವಂಥಾ, ದುಷ್ಟರನ್ನ ಶಿಕ್ಷಿಸಿ,ಶಿಷ್ಟರ ರಕ್ಷಣಾಮಾಡಿ ಧರ್ಮ ಸಂಸ್ಥಾಪನಾರ್ಥಕ್ಕಾಗಿ ಸೄಷ್ಟಿಸಿದ ಶ್ರೀಕೄಷ್ಣನ ಲೀಲೆಗಳನ್ನ , ಭಂಡ ಸ್ವಾಮಿಯ ಕಾಮದಾಟಕ್ಕ ಹೋಲಿಸ್ತಾರಂದ್ರ ಖರೇನು ಆಕ್ಷೇಪಣಾರ್ಹ ಸಂಗತಿ ಅದ.


"ರಾಸ" ಅನ್ನೊದು ಒಂದು ಸನಾತನ ನೄತ್ಯ ಪ್ರಾಕಾರ. ಹಿಂದಕ ದ್ವಾಪಾರಯುಗದಾಗ ಗೋಪಿಕಾಸ್ತ್ರಿ ,ಪುರುಷ, ೠಷಿಮುನಿಯಾದಿಯಾಗಿ ಎಲ್ಲಾರು ಶ್ರೀಕೄಷ್ಣನ ಆರಾಧನೆಯೋಳಗ ಮೈಮರೆತು, ನಾಮಸ್ಮರಣೆಯೋಳಗ ಮತ್ತರಾಗಿ ನೄತ್ಯ ಮಾಡೊದನ್ನ "ರಾಸ ನೄತ್ಯ " ಅಂತಿದ್ರು.ನಿರ್ಮಲ ಭಕ್ತಿ ಪ್ರದರ್ಶನಾ ಮಾಡೊ ಅಂಥಾ ಒಂದು ಪಧ್ಧತಿ. ಅಂಥಾದ್ದನ್ನ ಒಯ್ದು ದುರಾಚಾರಿಗೊಳು ಮಾಡೊ ಅಶ್ಲೀಲ ಕೆಲಸಕ್ಕ ಹೋಲೊಸೊದಂದ್ರ ಅಜ್ಞಾನದ ಪರಮಾವಧಿನ ಸರಿ.ಈಗನು ಇಂಥಾ ಒಂದು ಪಧ್ಧತಿನ ಶ್ರೀಕೄಷ್ಣ ಜನ್ಮಾಷ್ಠಮಿ ಮತ್ತ ನವರಾತ್ರಿಗಳೊಳಗ ಆಚರಸತಾರ.ಕೄಷ್ಣನ ಮಹಿಮೆಯ ಛಂದ ಛಂದ ಹಾಡುಗಳನ್ನ ಹಾಡಕೋತ ಆಂವನ ಭಕ್ತಿ ಲೀಲೆಗಳನ್ನ ಸ್ಮರಿಸಿಕೋತ ಕೋಲಾಟಾ ಆಡಕೋತ ನೄತ್ಯ ಮಾಡತಾರ.ಇಂಥಾ ಒಂದು ಪಾರಂಪರಿಕ ಪಧ್ಧತಿನ ಯಾವ ಯಾವದಕ್ಕೊ ಒಯ್ದ ಹೋಲಿಸತಾರಂದ್ರ ಎಲ್ಲೆ ಹೋಗಿ ಉರಲಹಕ್ಕೊಳ್ಳೊದ ಅಂತ??...


ನಮ್ಮ ದೇಶ ಸನಾತನ ಧರ್ಮ, ಸಂಸ್ಕೄತಿ ಮತ್ತ ಅದರ ಸಲವಾಗಿ ದುಡಿದ ಮಹಾಪುರುಷರ ಜೀವನದ ಆದರ್ಶಗಳ ತಳಹದಿ ಮ್ಯಾಲೆ ನಿಂತದ. ಧರ್ಮ ಭ್ರಷ್ಠ ಜನಾ ಮಾಡೊ ಹೆಸಿಗಿ ಕೆಲಸಕ್ಕೆಲ್ಲಾ ಕೄಷ್ಣ ಲೀಲೆ, ರಾಮ ಲೀಲೆ ಅನಕೋತ ಹೋದ್ರ, ನಾಳೆ ಜನರ ಮನಸ್ಸಿನ್ಯಾಗ " ದೇವರು ಅನ್ನಿಸ್ಕೊಂಡವರಲ್ಲೆ ಇಂಥಾವೆಲ್ಲಾ ನಡಿತಾವ ಇನ್ನ ನಾವು ಮಾಡೊದ್ರಾಗ ತಪ್ಪೇನದ ಅಂತ ಹಾದಿ ತಪ್ಪೊ ಸಾಧ್ಯತೆನು ಇರತದ.ರಾಮ ಕೄಷ್ಣರು ಎನೇನ ಮಾಡ್ಯಾರ ಅಂತ ಎನ ಇವರೆಲ್ಲಾರು ನೋಡಲಿಕ್ಕೆಹೋಗಿದ್ರೇನ್? ಕಣ್ಣೀಗೆ ಕಾಣೊ ಅನಾಚಾರಕ್ಕ, ಎಂದು ಕಾಣದ, ಸಮಂಜಸ ಅಲ್ಲದ ಉಪಮೇಯ್ ಕೋಡೊದು ಎಷ್ಟರ ಮಟ್ಟಿಗೆ ಸರಿ? ನಮ್ಮ ಆರಾಧ್ಯ ದೈವದ ಬಗ್ಗೆ ಆಗಲಿ ಅಥವಾ ಮಹಿಮೆ ಲೀಲೆಗಳ ಬಗ್ಗೆ, ಪೂರಾಣ ಧರ್ಮಗಳ ಬಗ್ಗೆ ಹಿಂಗ ತಪ್ಪು ಕಲ್ಪನಾ ಮುಂದಿನ ಪೀಳಿಗೆಯವರೊಳಗ ಹುಟ್ಟಸಲಿಕತ್ರ ದೇಶದ, ಧರ್ಮದ ಪಾವಿತ್ರತೆಯ ಗತಿ ಎನು? ಸ್ವಂತ ಮನಿ ಮಕ್ಕಳನ ನಡು ಹಾದ್ಯಾಗ ನಿಂತು ಮನಿ ಮರ್ಯಾದಿ ಹರಾಜ ಹಾಕಿಧಂಗ ಪರಿಸ್ಥಿತಿ ಆಗತದ.ಇಗೀಗ ಕಾವಿಯನ್ನ ಅಸ್ತ್ರ ಮಾಡಕೊಂಡು ತಮ್ಮ ವಿಕೄತ ಬಯಕೆಗಳನ್ನ ತಿರಿಸ್ಕೊಳ್ಳೊದು ಒಂದ ರೀತಿ ಫ್ಯಾಶನ್ ಆಗಿಬಿಟ್ಟದ. ಇದೊಂದು ಸಾಮಾಜಿಕ ಪಿಡಗು ಅಂದ್ರು ಅಡ್ಡಿ ಎನಿಲ್ಲಾ. ಇದರಿಂದ ಗುರು ಅನ್ನೊ ಸ್ಥಾನಕ್ಕ ಪಾವಿತ್ರತೆ ಕಡಮಿ ಆಕ್ಕೊತ ಬರಲಿಕತ್ತದ. ಧರ್ಮದ ಹಾದಿಯೊಳಗ ನೈತಿಕತೆ ಅನ್ನೊ ಹೆಜ್ಜಿ ಇಡಲಿಕ್ಕೆ ಹೇಳಿಕೊಡೊ ಅಂಥಾ ಗುರುನ ಇವತ್ತ ಅನೈತಿಕತೆಯ ಹಾದಿಯೊಳಗ ಕುಣ್ಕೋತ ಹೊಂಟ್ರ, ಯಾರ ಮ್ಯಾಲೆ ವಿಶ್ವಾಸಾ ನಂಬಿಕಿ ಇಡೊದು. ಎಲ್ಲಿ ತನಕಾ ಜನರಲ್ಲೆ ಮೂಢನಂಬಿಕಿ ಮತ್ತ ಅಜ್ಞಾನ ತುಂಬಿರತದ ಅಲ್ಲಿತನಕಾ ಇಂಥಾ ಭಂಡ ಕಳ್ಳಸ್ವಾಮಿಗೊಳ ಹುಟ್ಟಕೊತನ ಇರತಾರ. ನಮ್ಮ ದೇಶದ ವ್ಯವಸ್ಥೆಯ ಬಗ್ಗೆ ವಿಚಾರ ಮಾಡಿದ್ರ ಒಳಗಿಂದ ಗೆದ್ದಲ ಹತಿದ್ದ ಗಿಡಾ ನೆನಪಾಗತದ.


ಇಂಥಾ ಕಳ್ಳಾಟಾ ಬಯಲಾಗಿದ್ರು ಸಾಕ್ಷಿಗೋಳ ಇದ್ರುನು, ಯಾಕ ಸರ್ಕಾರ ಕಣ್ಣಮುಚಕೊಂಡ ಕೂತದ. ವರ್ಷಾನಗಟ್ಟಲೇ ಕೇಸ ನಡಿಸ್ಕೋತ,ಆಂವನ್ನ ಸ್ವತಂತ್ರ್ಯವಾಗಿ ಮಜಾ ಮಾಡಲಿಕ್ಕೆ ಬಿಡೊದಕ್ಕಿಂತಾ, ಜನರ ವಶಕ್ಕಒಪ್ಪಸಲಿ, ಜನರ ಭಾವನೆ,ನಂಬಿಕಿ, ವಿಶ್ವಾಸದ ಜೋಡಿ ಆಟಾ ಆಡಿದ ಆ ಭಂಡ ಸ್ವಾಮಿಗೊಳನ್ನ ದಂಡಿಸೊ ಹಕ್ಕು ಸಾಮಾನ್ಯ ಜನರಿಗೆ ಮಾತ್ರ ಅದ.