ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02 : ನಡುಭಾಗ)
(ಹಿನ್ನಲೆ: ಗುಬ್ಬಣ್ಣ ಏನೆಲ್ಲಾ ಪಾಡುಪಟ್ಟು ಕೊನೆಗೂ ನೆಂಟರಿಗಾಗಿ ಯುನಿವರ್ಸಲ್ ಟಿಕೆಟ್ಟುಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗುತ್ತಾನೆ, ಕನ್ನಡ ಸಂಘದ ಕಾರ್ಯಕ್ರಮದ ಸ್ವಯಂಸೇವಾಕರ್ತನಾಗಿ ಶ್ರಮದಾನ ಮಾಡುವುದರ ಮೂಲಕ. ಮುಂದೇನಾಯ್ತೆಂದು ಈ ಎರಡನೆ ಭಾಗದಲ್ಲಿ ಓದಿ
ಕನ್ನಡ ಸಂಘದ ಕಾರ್ಯಕ್ರಮ ಅದ್ದೂರಿಯಾಗಿ ನಡೆದು 'ನ ಭೂತೊ, ನ ಭವಿಷ್ಯತೆ..'ಯೆನ್ನುವಷ್ಟರ ಮಟ್ಟಿಗೆ ಯಶಸ್ವಿಯಾದರೂ, ಯಾಕೊ ಆ ನಂತರ ವಾರಗಟ್ಟಲೆ ಗುಬ್ಬಣ್ಣ ನಾಪತ್ತೆ...ಸುದ್ದಿಯು ಇಲ್ಲಾ, ಸುಳಿವೂ ಇಲ್ಲ. ಸಾಧಾರಣ ಫೋನಾದರು ಮಾಡಿರುತಿದ್ದ, ಈ ಬಾರಿ ಅದೂ ಖೋತ. ಪ್ರಯಾಣದಲ್ಲಿದ್ದಾನೆನ್ನಲು ಪ್ರಾಜೆಕ್ಟೆಲ್ಲಾ ಸದ್ಯಕ್ಕೆ ಸಿಂಗಾಪುರದಲ್ಲೆ ನಡೆಯುತ್ತಿರುವುದರಿಂದ ಆ ಸಾಧ್ಯತೆಯೂ ಕಮ್ಮಿ - ರಜೆ ಹಾಕಿ ಊರಿಗ್ಹೋಗುವುದನ್ನು ಬಿಟ್ಟರೆ; ಹಾಗಿದ್ದರೆ ಹೇಳಿಯೆ ಹೋಗುತ್ತಿದ್ದ - ಸಾಧಾರಣ ಒಂದು ಜತೆ ಬೀಗದ ಕೈ ನಮ್ಮ ಮನೆಯಲ್ಲೆ ಇಟ್ಟುಬಿಟ್ಟು. ಯಾಕೊ ಇವತ್ತು ತುಂಬಾನೆ ಕಾಡ್ತಾ ಇದಾನಲ್ಲ ಅನಿಸಿ ಮೊಬೈಲಿಗೆ ಪೋನಾಯಿಸಿದೆ. ನೊ ರೆಸ್ಪಾನ್ಸ್..! ಸರಿ, ಮೊಬೈಲಿಂದಲೆ ಒಂದು ಚುಟುಕ ಮೆಸೇಜ್ ಕಳಿಸಿದೆ -"ಡೆಡ್ ಆರ್ ಅಲೈವ್?". ಚಕ್ಕನೆ ಐದೆ ನಿಮಿಷದಲ್ಲಿ ಮಾರುತ್ತರ ಬಂತು " ಇನ್ ಬಿಟ್ವೀನ್..ಹಾಫ್ ಡೆಡ್, ರಿಮೈನಿಂಗ್ ಹಾಫ್ ವೆಸ್ಟೆಡ್ ಇಂಟರೆಸ್ಟ್ಸ್ ಮೆಕಿಂಗ್ ಶ್ಯೂರ ಟು ಕೀಪ್ ಇಟ್ ಅಲೈವ್...ಮೀಟ್ ಯೂ ಇನ್ ವೀಕ್ ಎಂಡ್ ಸಾರ್...."
[ಮೊದಲ ಭಾಗದ ಕೊಂಡಿ:
http://sampada.net/%E0%B2%97%E0%B3%81%E0%B2%AC%E0%B3%8D%E0%B2%AC%E0%B2%A3%E0%B3%8D%E0%B2%A3%E0%B2%A8-%E0%B2%AF%E0%B3%82%E0%B2%A8%E0%B2%BF%E0%B2%B5%E0%B3%86%E0%B2%B0%E0%B3%8D%E0%B2%B8%E0%B2%B2%E0%B3%8D-%E0%B2%B8%E0%B3%8D%E0%B2%9F%E0%B3%81%E0%B2%A1%E0%B2%BF%E0%B2%AF%E0%B3%8A-%E0%B2%A6%E0%B2%82%E0%B2%A1%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86-%C2%A0]
ಸದ್ಯ ಬದುಕಿದ್ದಾನೆ ಅಂತ ಖಾತ್ರಿಯಾದರೂ ಮತ್ತೊಂದೇನೊ ಸಸ್ಪೆನ್ಸ್ ಥ್ರಿಲ್ಲರ ಸ್ಟೋರಿ ತರ ಇನ್ನೊಂದೇನೊ ಹೊಸ ಕೊಕ್ಕೆ ತಗಲಿಸ್ತಾ ಇದಾನಲ್ಲ ಅನಿಸ್ತು. ನಾವು ಹೋದ ಬಾರಿ ಮುರುಗನ್ನಲ್ಲಿ ಭೇಟಿಯಾದ ಮೇಲೆ ನೆಂಟರ ಕಥೆ ಏನಾಯ್ತೊ ಗೊತ್ತಾಗಿರಲಿಲ್ಲ. ಯುನಿವರ್ಸಲ್ ಟಿಕೆಟ್ಟು ಸಿಕ್ಕಿದ ಮೇಲೆ ಎಲ್ಲಾ ಸುಗಮವಾಗಿ ಮುಕ್ತಾಯವಾಗಿರಬೇಕಿತ್ತು..ಇವನ ಹಳವಂಡ ನೋಡಿದರೆ ಇನ್ನೇನೊ ಹೊಸ ಕಥೆ ಇರುವಾ ಹಾಗಿದೆಯಲ್ಲ ಅಂದುಕೊಂಡೆ ಕೆಲಸದತ್ತ ಗಮನ ಹರಿಸಿದೆ; ಹೇಗೂ ವಾರದಕೊನೆ ಭೇಟಿಯಲ್ಲಿ ಗೊತ್ತಾಗಲಿದೆಯಲ್ಲ ಎಂಬ ನಿರಾಳದೊಂದಿಗೆ.
ಎರಡು ದಿನ ಕಳೆದ ಮೇಲೆ ಅಚಾನಕ್ಕಾಗಿ ಗುಬ್ಬಣ್ಣನಿಂದ ಪೋನ್ ಬಂತು. ದನಿಯಲ್ಲಿದ್ದ ಆಯಾಸ, ಸುಸ್ತು ಗಮನಿಸಿ, " ಏನು ಗುಬ್ಬಣ್ಣ, ಮೈ ಆರಾಮಿದಿಯೊ ಇಲ್ಲವೊ? ಸೌಂಡುಬಾಕ್ಸ್ ಪೂರ್ತ ಕೂತು ಹೋಗಿರೊ ಹಾಗಿದೆ? ಅಷ್ಟು ದಿನದಿಂದ ಫೋನ್ ಬೇರೆ ಇಲ್ಲಾ..ಸಿಕ್ಕಲು ಇಲ್ಲ...ನಾನು ಫೋನ್ ಮಾಡಿದ್ರೂ ಮೊಬೈಲ್ ಎತ್ತಲಿಲ್ಲ..? ಸದ್ಯ ಮೆಸೇಜ್ ಆದ್ರೂ ರಿಪ್ಲೈ ಮಾಡಿದ್ಯಲ್ಲ....ನಂಗೇನೊ ಬದುಕಿದ್ದಿಯೋ, ಸತ್ತಿದ್ದಿಯೊ ಅಂತಾನೆ ಅನುಮಾನ ಬಂದ್ಬಿಟ್ಟಿತ್ತಲ್ಲಪ್ಪಾ ದೊರೆ....." ಎಂದೆ ಅವನಿಗೆ ಉತ್ತರಿಸಲೂ ಅನುವು ಕೊಡದೆ.
ನನ್ನ ಪ್ರಶ್ನಾವಳಿಯಿಂದ ಕೊಂಚ ಗಡಿಬಿಡಿಗೊಂಡರೂ ಸಿಡಿಮಿಡಿಗೊಳ್ಳದ ಶಾಂತ ನರಸಿಂಹನಂತೆ ಗುಬ್ಬಣ್ಣ ಸಾವಕಾಶವಾಗಿಯೆ ಉತ್ತರಿಸಿದ..."ಏನು ಆರಾಮೊ..ಸಾರ್..ಮೊಂಡಾ ಮೊಗುಚ್ತು...ಯಾಕೊ ನನ್ನ ಟೈಮೆ ಸರಿಯಿಲ್ಲಾ. ಕಷ್ಟಗಳು ಬಂದ್ರೆ ಒಂದರ ಹಿಂದೆ ಒಂದು ಬರುತ್ವೆ ಅಂತ ಗಾದೆ ಮಾತು ಕೇಳ್ತಿದ್ದಾಗ ಅದರ ಬಿರುಸು ಅರ್ಥವಾಗಿರಲಿಲ್ಲ...ಈಗ ಅದರ ನಿಜವಾದ ಅರ್ಥ ಗೊತ್ತಾಗ್ತಾ ಇದೆ.."
"ಯಾಕೊ ಗುಬ್ಬಣ್ಣ ಈಚೆಗೆ ನೀನು ಒಗಟಲ್ಲಿ ಮಾತಾಡೋದು ಜಾಸ್ತಿಯಾಯ್ತು...ನೋಡಪ್ಪ ನಾನು ನಿನ್ನ ಕ್ಲೈಂಟ್ ಅಲ್ಲಾ, ಹೇಳಿದ್ದನೆ ಹೇಳ್ತಾ, ವಿಷಯಕ್ಕೆ ಬರದೆ ಸುತ್ತಮುತ್ತ ಗಿರಕಿ ಹೊಡೆಸ್ತಾ ಇರೋಕೆ....ಪಟ ಪಟ ನೇರಾ ಹೇಳಿಬಿಡೋದು ತಾನೆ?" ಅವನ ಪೀಠಿಕೆ ಬೆಳೆದು ಉದ್ದವಾಗುವ ಮೊದಲೆ ಮುನ್ನೆಚ್ಚರಿಕೆ ಕ್ರಮವಾಗಿ ನಾನೆ ವಾಗ್ಧಾಳಿಯಿಟ್ಟರೂ ನನ್ನಂತಹ ನೂರಾರು ಕುರಿಗಳನ್ನು ಪಳಗಿಸಿರೊ ಗುರು ಅವನು. ವಿಚಲಿತನಾಗದೆ ಸಾವಕಾಶದಿಂದ, " ನಾನು ಡಿಟೈಲಾಗಿ ಹೇಳದಿದ್ದರೆ ನಿಮಗೆ ವಿಷ್ಯ ಎಲ್ಲ ತಿಳಿಯೊದ್ ಹೆಂಗೆ ಸಾರ್? ಅದೂ ಅಲ್ದೆ ಒಂದೆ ಸಾರಿ ಅಷ್ಟೊಂದು ಪ್ರಶ್ನೆ ಕೇಳ್ದೋರು ನೀವೆ , ಈಗ ಉತ್ತರ ಹೇಳೋಕೆ ಹೊರಟರೆ ಬೇಡಾ ಅಂತಿರಲ್ಲಾ? ನಿಮ್ಮ ಮೊಬೈಲು ಬಂದಾಗ ಆಸ್ಪತ್ರೆಯಲ್ಲಿದ್ದೆ, ಅಲ್ಲಿ ಪೋನಲ್ಲಿ ಮಾತಾಡೋಂಗಿಲ್ಲ..ಅದಕ್ಕೆ ಬರಿ ಮೆಸೇಜ್ ಮಾಡಿದ್ದು..."
"ನಾನು ಅದೆ ಅನ್ಕೊಂಡೆ ನೋಡು, ಏನೊ ಹೆಚ್ಚು ಕಮ್ಮಿ ಆಗಿ ಆಸ್ಪತ್ರೆ ಸೇರಿದ್ದಿಯಾ ಅಂತ...ಏನು ಎರಡು ವಾರಕ್ಕೆ ನಿನ್ನ ಜಾಲಾಡಿಸಿ ಆಸ್ಪತ್ರೆ ಮೆಟ್ಲು ಹತ್ತೊ ಹಂಗೆ ಮಾಡಿಬಿಟ್ಟರಲ್ಲಯ್ಯಾ ಜನ...ಏನಾಗಿತ್ತಯ್ಯ ಮನೇಲಿ ಔಷಧಿ ತೊಗೊಳ್ದೆ ಅಡ್ಮಿಟ್ಟು ಮಾಡಿಸ್ಕೊಳ್ಳೊ ಅಂತಾದ್ದು....?"
"ಅಯ್ಯೊ..ಅಡ್ಮಿಟ್ಟು ಆಗಿದ್ದು ನಾನಲ್ಲಾ ಸಾರ್...ಈಗ ನಡೀತಾ ಇರೋದೆಲ್ಲಾ ನೋಡಿದ್ರೆ ಸದ್ಯಕ್ಕೆ ಅದೂ ಆಗಿಬಿಡೊ ಹಂಗೆ ಕಾಣುತ್ತೆ....ನಾನು ಆಸ್ಪತ್ರೆಲಿದ್ದಿದ್ದೂ ಗೇಟ್ ಕೀಪರು ತರ ಪೇಷೆಂಟು ಕಾಯೋಕೆ....?"
" ನೀನಲ್ಲಾ ಅಂದ್ರೆ ಇನ್ಯಾರಪ್ಪ ಆಸ್ಪತ್ರೆ ಸೇರಿದ್ದು? ನಿನ್ನ ಹೆಂಡ್ತಿ ಮಗಳಿಬ್ಬರು ಕ್ಷೇಮ ತಾನೆ?"
" ಅವರಿಬ್ಬರೂ ಓಕೆ ಸಾರ್...ಅದೆ ನಮ್ಮ ನೆಂಟರುಗಳು ಬಂದು ಅಟ್ಯಾಕ್ ಮಾಡಿದ್ದ ವಿಷಯ ಹೇಳಿದ್ನಲ್ಲ ...? ಯುನಿವರ್ಸಲ್ಲೂ, ಕನ್ನಡ ಸಂಘ? ಜ್ಞಾಪಕವಿದೆಯಾ?"
"ಇಲ್ದೇ ಏನು ಮತ್ತೆ? ನನ್ನ ಒಂದಿನ ಪೂರ ವೇಸ್ಟು ಮಾಡ್ಸಿ ಆ ಪ್ರೋಗ್ರಾಮಲ್ಲಿ ಗಳ ನೆಟ್ಟು ಕೂರೊ ಹಾಗೆ ಮಾಡ್ಬಿಟ್ಟೆ ಅವತ್ತು..ಅದು ಸಾಲ್ದೂಂತ ಪ್ರೋಗ್ರಾಮ್ ನೋಡೊ ಗಡಿಬಿಡಿಯಲ್ಲಿ ಊಟ ತಿಂಡೀನೂ ತಿನ್ನೋಕಾಗ್ದೆ ರಾತ್ರಿಯೆಲ್ಲ ಖಾಲಿ ಹೊಟ್ಟೆಲಿ ಮಲಗೊ ಹಾಗೆ ಮಾಡ್ದೆ...."..
ಅವತ್ತು ಪ್ರೋಗ್ರಾಮ್ ಕವರ ಮಾಡೊ ಗಡಿಬಿಡಿಯಲ್ಲಿ ಊಟಕ್ಕೆ ಹೋಗೊ ಹೊತ್ತಿಗೆ ಕ್ಯಾಟರಿಂಗಿನವರು ಗಂಟು ಮೂಟೆ ಕಟ್ಟುತ್ತಿದ್ದರು. ಗುಬ್ಬಣ್ಣನ ಕಥೆಯು ಹೆಚ್ಚು ಕಡಿಮೆ ಅದೆ ಅಗಿದ್ದರಿಂದ ಅವನನ್ನೂ ಬೈಯುವಂತಿರಲಿಲ್ಲ..." ಆ ಪಾರ್ಟಿಗಳೆಲ್ಲಾ ಆಗ್ಲೆ ಹೋಗಾಗಿರ್ಬೇಕಲ್ಲಾ? ಯುನಿವರ್ಸಲ್ಲೂ ಅವತ್ತೆ ಆಗೋಯ್ತಲ್ಲ..? ಅದೆಲ್ಲ ಮುಗಿದ ಕಥೆ ಅನ್ಕೊಂಡಿದ್ದೆನಲ್ಲಾ ಗುರುವೆ?" ಎಂದೆ
"ಎಲ್ಲಾ ಸರಿಯಾಗಿ ನಡೆದಿದ್ರೆ ಅದರ ಮುಂದಿನ ದಿನಾನೆ ಅವರೆಲ್ಲ ಪ್ಲೇನು ಹತ್ತಿರಬೇಕಾಗಿತ್ತು ಸಾರ್..."
ನಾನು ಬೆಚ್ಚಿ ಬಿದ್ದವನಂತೆ, "ಏನಯ್ಯಾ ಹಾಗಂದ್ರೆ?ಅವರೆಲ್ಲಾ ಇನ್ನೂ ಇಲ್ಲೆ ಟೆಂಟು ಹಾಕ್ಕೊಂಡು ಕೂತಿದ್ದಾರಾ ಏನು ಕಥೆ?"
"ಎಲ್ಲಾ ನನ್ನ ಕರ್ಮಕಾಂಡ ಸಾರ್...ಎಲ್ಲಾ ಮುಗೀತು ಅನ್ಕೋತಾ ಇರೋದ್ರಲ್ಲೆ, ನಮ್ಮ ಒಬ್ಬ ಕೊ ಬ್ರದರಿಗೆ ಇದ್ದಕ್ಕಿದ್ದಂತೆ ಸೀರಿಯಸ್ಸಾಗಿ ಹೋಗಿ ಬಂದಂಗೆ ಆಗೋಯ್ತು ಸಾರ್...ಸರಿ ಇದ್ದ ಬದ್ದ ಕೆಲಸವೆಲ್ಲ ಕೈ ಬಿಟ್ಟು ಈ ಆಸ್ಪತ್ರೆ ಸೇವೆ ನಡೆಸ್ತಾ ಇದೀನಿ ...ನಿನ್ನೆ ತಾನೆ ಆಸ್ಪತ್ರೆಯಿಂದ ಡಿಸ್ಚಾರ್ಜು ಆಯ್ತು...ಅದಕ್ಕೆ ಈವಾಗ ಪೋನು ಮಾಡೋಕೆ ಪುರುಸೊತ್ತಾಯ್ತು ನೋಡಿ ಸಾರ್..."
"ಶಿವ..ಶಿವಾ..ಏನಪ್ಪಾ ನಿನ್ನ ಅವಸ್ತೆ? ನೀನು ಹೇಳ್ತಾ ಇರೋದು ನೋಡಿದ್ರೆ ಡಜನ್ ಸೀಟೂ ಹಂಗೆ ಜಾಂಡಾ ಊರಿರೊ ಹಂಗೆ ಕಾಣುತ್ತೆ......"
"ಅದೂ ಆಗಿ ಹೋಗ್ತಿತ್ತೊ ಏನೊ..ನಾನು ಹುಷಾರಾಗಿಬಿಟ್ಟು ಮೊದಲು ಉಳಿದೆಲ್ಲಾ ಫ್ಯಾಮಿಲಿಗಳನ್ನೆಲ್ಲಾ ಹೊರಗ್ಹಾಕೋಕೆ ನೋಡ್ದೆ ಸಾರ್...ಆದರೂ ಎಲ್ಲಾರೂ ಕಾಯಿಲೆ, ಸೀರಿಯಸ್ಸು ಮಲಗಿರೊ ಸಮಯ, ಬಿಟ್ಟು ಹೋದ್ರೆ ಜನ ಏನು ಅನ್ಕೋತಾರೆ ಹಂಗೆ, ಹಿಂಗೆ ಅಂತೇನೇನೊ ಹೇಳಿ ಎಲ್ಲಾರ ಟಿಕೆಟ್ಟು ಒಂದು ವಾರ ಲೇಟ್ ಮಾಡಿಸಿಬಿಟ್ರು....ಹೋದ ವಾರ ಹಂಗೂ ಹಿಂಗೂ ಮಾಡಿ ಅವರನ್ನೆಲ್ಲಾ ದಬ್ಬಿದ್ದಾಯ್ತು..ಇನ್ನುಳಿದಿರೊ ನಾಲ್ಕು ಜನ ಕಾಲೆತ್ತಿದರೆಂದ್ರೆ ಧರ್ಮಸ್ಥಳಕ್ಕೊ, ತಿರುಪತಿಗೊ ಒಂದು ವಿಸಿಟ್ ಕೊಟ್ಟು ತಲೆ ಮುಡಿ ಕೊಟ್ಟು ಬುರುಡೆ ಹೊಡೆಸ್ಕೊಂಡು ಬರ್ತಿನಿಂತ ಹರಕೆ ಕಟ್ಕೊಂಡಿದ್ದೀನಿ ಸಾರ್..."
ನಾನು ಕನಿಕರದಿಂದ ಲೊಚಗುಟ್ಟುತ್ತಾ "ಕೊಡಬೇಕಾದ್ದೆ , ಕೊಡಬೇಕಾದ್ದೆ....ಇನ್ನು ಬೋಳಿಸಿಕೊಳ್ಳದೆ ಹಾಗೆ ಉಳ್ಕೊಂಡಿದ್ರೆ...ಪಾಪ, ಪಾಪ..."ಎಂದೆ.
" ಹಾಳಾಗ್ಲಿ ಆ ವಿಷಯ...ನನಗೆ ಮೈಯೆಲ್ಲಾ ಜಡ್ಡು ಹಿಡಿದಂತಾಗಿ ಹೋಗಿದೆ ಸಾರ್..ಐ ರಿಯಲಿ ನೀಡ್ ಏ ಬ್ರೇಕ್....ಇ ವೀಕೆಂಡಲ್ಲಾದರೂ ಮೀಟ್ ಮಾಡೋಣ್ವ ಅಂತ ಕೇಳೋಕೆ ಪೋನ್ ಮಾಡಿದೆ ಸಾರ್...."
"ಈಟು ಮೀಟು ಅಂದ್ರೆ ಇನ್ನೇನ್ ಮಾಮೂಲಿ ಲಿಟಲ್ ಇಂಡಿಯಾದಲ್ಲಿ ತಾನೆ?" ಎಂದೆ
" ಬೇಡಾ ಸಾರ್..ಈ ಜಡ್ಡಿಗೆ ಆ ಮಾಮೂಲಿ ಜಾಗ ಸರಿ ಹೋಗಲ್ಲಾ...ಎಲ್ಲಾದ್ರು ಬೇರೆ ಕಡೆ ಸ್ವಲ್ಪ ರಿಲ್ಯಾಕ್ಸಿಂಗ್ ಆಗಿರೊ ಜಾಗ ಹೇಳಿ ಸಾರ್..."
" ರಿಲ್ಯಾಕ್ಸಿಂಗ್ ಬೇಕೂಂದ್ರೆ - 'ಸರ್ವಿಸ್ ಇಂಡಸ್ಟ್ರಿನೆ' ಹುಡುಕ್ಕೋಂಡು ಹೋಗ್ಬೇಕಾಗುತ್ತೆ...ಹೌ ಅಬೌಟ್ ಥಾಯ್ ಮಸಾಜ್ ಫಾಲೊಡ್ ಬೈ ಊಟಾ?" ಅಂತ ಅಣಕಿಸಿದೆ.
"ಸಾರ್..ನಿಮಗ್ಯಾವಾಗ್ಲೂ ಜೋಕೆ...ಮಸಾಜು ಅದೂ ಇದೂ ಅಂತ ಹೋದ್ರೆ ಅಲ್ಲೆ ಟೈಮ್ ಹೋಗ್ಬಿಡುತ್ತೆ...ಮಾತಾಡೋಕೆ ಟೈಮು ಸಿಗಲ್ಲ...ಅದೂ ಅಲ್ದೆ ಇದು ಸಿಂಗಾಪುರ ಸಾರ್...ಥಾಯ್ ಗರ್ಲ್ಸ್ ಮಸಾಜು ಮಾಡುದ್ರು, ರೇಟು ಸಿಂಗಾಪುರಾನೆ ಇರುತ್ತೆ.......ಅದರ ಬದ್ಲು ಬೇರೆ ಏನಾದ್ರೂ ಐಡಿಯಾ ಇದ್ರೆ ಹೇಳಿ, ಸದ್ದು ಗದ್ದಲ ಇಲ್ದೆ ನೆಮ್ಮದಿಯಾಗಿರೊ ಅಂತದ್ದು...."
" ಸರಿ ಗುಬ್ಬಣ್ಣ ಒಂದು ಕೆಲಸ ಮಾಡಿಬಿಡೋಣ.....ಸ್ವಲ್ಪ ಬೆಳಿಗ್ಗೆ ಬೇಗ ಹೊರಟು ಬಾ..ಆರ್ಚಡ್ ಕಂಟ್ರಿ ಕ್ಲಬ್ಬಿಗೆ ಹೋಗೋಣ..ನಾನು ಹೇಗೂ ಅಲ್ಲೆ ಮೆಂಬರು...ಬೆಳಿಗ್ಗೆ ಯಾರೂ ಇರಲ್ಲ..ಆರಾಮಾವಾಗಿ 'ತಂಪು ಬೀರು' ಹಾಕ್ತಾ ಮಾತಾಡ್ಬೋದು...ಪರಮಾತ್ಮ ಜತೆ ಇದ್ರೆ ಮಾತಿಗೂ ಸರಾಗ "
ಗುಬ್ಬಣ್ಣ ಆಗಲೆ ಕಿಕ್ ಹೊಡೆದವನಂತೆ," ಅದು ಗ್ರೇಟ್ ಐಡಿಯಾ ಸಾರ್....ನನಗೂ ಬಾಯೆಲ್ಲ ಒಣಗಿ, ನಾಲಿಗೆ ಕೆಟ್ಟು ಕೆರ ಆದ ಹಾಗೆ ಆಗ್ಬಿಟ್ಟಿದೆ....ಸ್ವಲ್ಪ 'ಬೀರ್ನೀರೆ' ಹರಿದರೆ ಸರಿ ಹೋಗ್ಬಹುದೊ ಏನೊ...ಆ ಕ್ಲಬ್ಬು ಇರೋದು ಯಿಶೂನ್ ಹತ್ರ ಅಲ್ವಾ..."
" ಹೌದು...ಎನಿವೆ, ನೀನು ರೆಡಿಯಾಗಿ ನಮ್ಮ ಮನೆಗೆ ಬಾ...ಅಲ್ಲಿಂದ ಒಟ್ಟಿಗೆ ಹೋಗೋಣ..ಹುಡುಕಾಡೊ ತಾಪತ್ರಯ ಇರೊಲ್ಲ"
"ಸರಿ ಸಾರ್..ನಿಮ್ಮ ಹತ್ರ ಪೋನಲ್ಲಿ ಮಾತಾಡೆ ಎಷ್ಟೊ ನಿರಾಳವಾಯ್ತು....ಒಂದು ಒಳ್ಳೆ ಬ್ರೇಕ್ ಮಾಡಿಕೊಂಡು ಬ್ಯಾಚಲರ ಪಾರ್ಟಿ ಮಾಡಿಕೊಂಡುಬಿಡೋಣ...ನನಗೂ ನಿಮಗೆ ಹೇಳೋಕೆ ಸುಮಾರು ವಿಷಯ ಇದೆ... ವಿಶೇಷವಾಗಿ ನಮ್ಮ ನೆಂಟರ ಯುನಿವಸಲ್ ಗಂಡಾಗುಂಡಿ ಹಾವಳಿ..."
"ಏನು ದೊಡ್ಡ ದಾಂಧಲೇನೆ ಮಾಡಿರೊ ಹಾಗಿದೆ...ಸರಿ ಎಲ್ಲಾ ಮಾತಾಡುವ...ಯಾರಿಗ್ಗೊತ್ತು..ನನ್ನ ಮುಂದಿನ ಕಥೆಗೆ ಅವೆ ಸ್ಪೂರ್ತಿ ಯಾಗುತ್ತೊ ಏನೊ!"ಎಂದೆ.
"ಕಥೆಯಾಗುತ್ತೊ ಬಿಡುತ್ತೊ....ಕಥೆ ಅಂದಾಗ ನೆನಪಾಯ್ತು...ನಿಮ್ಮ ಕನ್ನಡ ಸಂಘ ಪ್ರೋಗ್ರಾಮ್ ಇವೇಂಟ್ ರಿಪೋರ್ಟು ಚೆನ್ನಾಗಿ ಬಂದಿದೆ ಸಾರ್...ಆನ್ಲೈನ್ ನ್ಯೂಸಲಿ ಓದಿದೆ... ನಮ್ಮ ಫ್ರೆಂಡ್ಸು ಕೂಡ ಓದಿ ಲೈಕ್ ಮಾಡಿದ್ರು ಸಾರ್"
" ಏನು ಗುಬ್ಬಣ್ಣ ಮಸ್ಕಾ ಹೊಡಿತಿರೊ ಹಾಗಿದೆ? ಏನೂ ಅಜೆಂಡಾ ಇಲ್ಲ ತಾನೆ?"
" ಬಿಡ್ತು ಅನ್ನಿ ಸಾರ್..ಮಸ್ಕಾನೂ ಇಲ್ಲ , ಮಸ್ಕಾರನೂ ಇಲ್ಲ ..ಇರೊ ವಿಷ್ಯ ಹೇಳ್ದೆ ಅಷ್ಟೆ.....ಯಾಕ್ ಸಾರ್..ನಿಮಗೆ ಗೊತ್ತಾಗಿರಬೇಕಲ್ಲ ಅವತ್ತು ಪ್ರೊಗ್ರಮ್ ಎಷ್ಟು ಚೆನ್ನಾಗಿ ನಡೀತು ಅಂತ...ನಿಮ್ಮ ಕವನಕ್ಕೂ ಜನ ಚಪ್ಪಾಳೆ ತಟ್ಟಿದ್ರೊ ಇಲ್ವೊ..? ಅದೂ ಅಲ್ದೆ ಈ ಸಾರಿ ಯಾವ ಟಿಕೆಟ್ಟಿಗ್ಗು ಪ್ರಮೊಶನ್ನು ಇಲ್ಲಾ..ಜಿನೈನು ಫೀಡುಬ್ಯಾಕಷ್ಟೆ ಸಾರ್" ಎಂದ ಕನ್ನಡ ಸಂಘದ ಯುನಿವರ್ಸಲ್ ಟಿಕೆಟ್ಟು ಎಪಿಸೋಡ್ ನೆನಪಿಸುತ್ತ.
ನಾನು ಒಳಗೊಳಗೆ ಉಬ್ಬುತ್ತಾ, ಆದರೂ ಹೊರಗೆ ತೋರ್ಪಡಿಸಿಕೊಳ್ಳದೆ, " ಕನ್ನಡಿಗರ ಚಪ್ಪಾಳೆ ವಿಷಯ ಬಿಡೊ...ಅವರ ಹೃದಯ ವೈಶಾಲ್ಯವೆ ಅಂತದ್ದು..ಚೆನ್ನಾಗಿ ಇರಲಿ, ಇಲ್ದೆನೂ ಇರಲಿ 'ಕರ್ಟೇಸಿ'ಗಾದ್ರು ಚಪ್ಪಾಳೆ ತಟ್ಟೆ ತಟ್ತಾರೆ..."
"ಅಷ್ಟೊಂದು ಜನರಲ್ಲಿ ಕೆಲವರಾದ್ರೂ ಕವಿತೆ ಇಷ್ಟ ಪಡೋರು ಖಂಡಿತ ಎಂಜಾಯ್ ಮಾಡಿರ್ತಾರೆ ಬಿಡಿ ಸಾರ್..ನನಗಂತೂ ಇಷ್ಟವಾಯ್ತು..ಎಲ್ಲ ಸೇರಿಸಿ ಕ್ಲಬ್ಬಿನಲ್ಲೆ ಸೆಲೆಬ್ರೇಟು ಮಾಡಿಬಿಡೋಣ ಬಿಡಿ ಸಾರ್" ಎಂದವನೆ ಹೊಗಳಿಕಾ ಕಾಂಡವನ್ನು ಅಷ್ಟಕ್ಕೆ ಕತ್ತರಿಸಿ, 'ಬೈ ಬೈ' ಹೇಳಿ ಪೋನಿರಿಸಿದ - "ಮೊದಲೆ ಕ್ಲಬ್ಬಿನಲ್ಲಿ ಬುಕ್ಕಿಂಗ್ ಮಾಡಿಬಿಡಿ ಸಾರ್" ಎಂದೇಳಲು ಮರೆಯದಂತೆ ಜ್ಞಾಪಿಸಿಕೊಂಡು.
*************************************************************************************************************
ಮುಂದಿನ ವಾರದ ಕೊನೆಗೆ ಪ್ಲಾನಿಗನುಸಾರ ಗುಬ್ಬಣ್ಣ ಮನೆಯ ಹತ್ತಿರ ಬಂದ..ಪಾಪ ಕೊಂಚ ಇಳಿದು ಹೋದಂತೆ ಕಂಡ. ಗಡ್ಡ, ಮೀಸೆನೂ ತೆಗೆಸದೆ ಬಂದವನನ್ನು " ಏನಯ್ಯಾ, ಶೇವಿಂಗಿಗೂ ಟೈಮ್ ಇಲ್ವಾ...ಇಲ್ಲೆ ಮಾಡ್ಕೋತೀಯಾ, ಶೇವಿಂಗ್ ಬ್ಲೇಡ್ ಕೊಡ್ಲಾ....?" ಎಂದೆ ಛೇಡನೆಯ ದನಿಯಲ್ಲಿ. ಅದರರಿವಾದರೂ ವಿಚಲಿತನಾಗದವನಂತೆ "ಅಯ್ಯೊ..ಇನ್ನೆರಡು ದಿನ ಕಳೆಯೊವರೆಗಾದ್ರೂ ಸುಮ್ಮನಿರಿ ಸಾರ್....ಈ ಕೊನೆ ಬ್ಯಾಚು ಹೊರಡೋಕೆ ಸಿದ್ದವಾಗಿ ನಿಂತಿದ್ದಾರೆ...ಅವರು ಹೊರಟ ತಕ್ಷಣ ಇದೆ ಮೊದಲ ಕೆಲಸ..."
"ಓಹೊ...ಅಂದರೆ ಇದು ದೇವದಾಸ್ ಸೋಗು ಹಾಕಿರೋದು , ಇಂಟೆನ್ಶನಲಿ ಅನ್ನು..."
ಇಬ್ಬರೂ ಅಲ್ಲಿಂದ ಒಟ್ಟಿಗೆ ಹೊರಟು ಕ್ಲಬ್ಬಿನತ್ತ ಬಸ್ಸು ಹತ್ತಿದೆವು. ಸುಮಾರು ಅರ್ಧಗಂಟೆಯ ದಾರಿಯಾದ್ದರಿಂದ ಮಾತಾಡಿಕೊಂಡು ಹೊಗಲಿಕ್ಕೆ ಸಾಕಷ್ಟು ಸಮಯವೂ ಇತ್ತು, ಸೀಟುಗಳೂ ಖಾಲಿಯಿತ್ತು. ಅಲ್ಲಿ ಕೂತಾಗಲಿಂದಲೆ ಶುರುವಾಯ್ತು ನಮ್ಮ ಸಂಭಾಷಣೆ.
" ಹೂಂ...ಈಗ ಶುರು ಮಾಡಪ್ಪ..ನಿನ್ನ ನೆಂಟರ ಭಾಗವತ, ರಾಮಾಯಣ, ಮಹಾಭಾರತ..."
"ಇದು ಅದೆಲ್ಲಕ್ಕೂ ಮಿಕ್ಕಿದ್ದು ಸಾರ್..ಹೊಸ ಹೆಸರೆ ಕೊಟ್ಟು ಕರಿಬೇಕೊ ಏನೊ....'ಮಹಾಭಾಗವತಭಾರತಾಯಣ' ಅಂತಲೊ 'ಗುಬ್ಬಣ್ಣ ಭಾಗವತರ ಮಹಾಭಾರತಾಯಣ' ಅಂತಲೊ. ಸದ್ಯ ಅರಬಿಯನ್ ನೈಟ್ಸ್ ಅಂದ ಹಾಗೆ 'ಗುಬ್ಬಣ್ಣನ ನೈಟ್ಸ್' ಅನ್ನದಿದ್ರೆ ಸರಿ..."
" ಏನಾದರೂ ಕರ್ಕೊ...ಈ ಆಸ್ಪತ್ರೆ ಗಿಸ್ಪತ್ರೆ ಹುಚ್ಚಾಟದಲ್ಲಿ ನೀನು ಹುಚ್ಚು ಹಿಡಿದು ಹುಚ್ಚಾಸ್ಪತ್ರೆ ಸೇರದಿದ್ರೆ ಸರಿ..." ಎಂದೆ ಮತ್ತೆ ರೇಗಿಸುವ ದನಿಯಲ್ಲಿ..
" ಒಂದು ತರ ಹುಚ್ಚಲ್ಲ ಸಾರ್..ಭಯಂಕರ ಮನೋವ್ಯಾಧಿ ಅನ್ನಿ...ಅದೇನೊ ಅಂತಾರಲ್ಲ 'ಹುಚ್ಚಲ್ಲ ಬೆಪ್ಪಲ್ಲ ಎಲ್ಲಾ ಶಿವಲೀಲೆ' ಅಂಥ...ಹಾಗೇನೆ ಇದೂವೆ..."
"ಅದಿರ್ಲಿ ನಿಮ್ಮ ಕ್ರಿಕೆಟ್ಟು ಟೀಮಿನ ಯುನಿವರ್ಸಲ್ ದಂಡಯಾತ್ರೆ ಹೇಗಿತ್ತಪ್ಪಾ? ನೀನೂ ಜತೆ ಹೋಗಿ ಏಂಜಾಯ್ ಮಾಡಿರಬೇಕಲ್ಲಾ?"
" ಅಲ್ಲಿಂದ್ಲೆ ಅಲ್ವೆ ಸಾರ್..ಈ ಮಹಾನ್ ಹುಚ್ಚು ಹೆಚ್ಚಾಗೋಕೆ ಶುರುವಾಗಿದ್ದು....ಅದನ್ನ ಹೇಳೊಕೋದ್ರೆ ಅದೆ ಒಂದು ಕಾವ್ಯ ಶಾಕುಂತಲವಾಗುತ್ತೆ ಸಾರ್.."
"ಸರಿ ಹಾಗಾದ್ರೆ ಅದನ್ನೆ ಮೊದಲು ಹೇಳಿಬಿಡು....ನೋಟ್ಸ್ ಬರೆದಿಟ್ಟುಕೊಂಡುಬಿಡ್ತೀನಿ.... ಯಾರಿಗೆ ಗೊತ್ತು...ಅದೆ ಹಿಟ್ ಸ್ಟೋರಿಲೈನ್ ಆಗೋಗುತ್ತೊ ಏನೊ...ಆದ್ರೆ ಗದ್ಯದಲ್ಲೆ ಹೇಳು, ಪದ್ಯದಲ್ಲಿ ಬೇಡ...ಮುದ್ದಣ್ಣನೆ ಹೇಳಿಬಿಟ್ಟಿದ್ದಾನೆ 'ಗದ್ಯ ಹೃದ್ಯಂ..ಪದ್ಯಂ ವಧ್ಯಂ'...."
" ಏನಾದ್ರೂ ಮಾಡ್ಕೊಳ್ಳಿ ಸಾರ್..ನಾನಂತೂ ಯಾರತ್ರನಾದ್ರೂ ಹೇಳ್ಕೊಳ್ದಿದ್ರೆ ಆ ಪ್ರೆಷರಿಗೆ ಕುಕ್ಕರು ತರ ಎಲ್ಲಿ ಎಕ್ಸ್ ಪ್ಲೊಡು ಆಗಿಬಿಡ್ತೀನೋ ಅಂತ ಭಯವಾಗುತ್ತೆ ಸಾರ್...ನಮ್ಮ ಪ್ರಾಜೆಕ್ಟು ಮ್ಯಾನೇಜರು ತುಂಬಾ ಒಳ್ಳೆಯವರು, ನನ್ನ ಕಂಡ್ರೆ ಎಷ್ಟು ಗೌರವ, ಮರ್ಯಾದೆ ಕೊಡ್ತಾ ಇದ್ರೂ...ಅಂತಹವರೂ ಮೊನ್ನೆ ಪೋನಲ್ಲಿ ಕರೆದು, ಚೆನ್ನಾಗಿ ಬೈದು ಉಗಿದು ಉಪ್ಪಿನ ಕಾಯಿ ಹಾಕಿಬಿಟ್ರು ಗೊತ್ತಾ?...ಇದುವರ್ಗು ನನ್ನ ಕಡೆ ಬೆರಳೆತ್ತೂ ತೋರಿಸಿದೋರಲ್ಲಾ ಅವರು....ಅವರ ಕೈಲೂ ಬೈಸಿಕೊಳ್ಳೊ ಹಂಗಾಗೋಯ್ತು ಈ ಗುಲಾಮಗಿರಿಯಿಂದಾಗಿ....ನಾನಂತೂ ಈ ಆಸ್ಪತ್ರೆ ಓಡಾಟ, ಆಫೀಸು ಆಸ್ಪತ್ರೆ ಬೆಂಡು, ಇನ್ಶೂರೆನ್ಸಿಲ್ಲದ ಪ್ರಯಾಣ ಎಲ್ಲಾ ಸೇರ್ಕೊಂಡು ಪೂರ್ತಿ ಬರ್ಬಾದ್ ಆಗ್ಬಿಟ್ಟಿದೀನಿ ಸಾರ್..."
"ಹೋಗಲಿ ಸಮಾಧಾನ ಮಾಡಿಕೊ ಗುಬ್ಬಣ್ಣ....ಆಗಿದ್ದಾಯ್ತು. ನೀನು ಹೇಳಿದ್ದೆಲ್ಲ ಕನಿಷ್ಟ ಕೇಳಿಸ್ಕೊಳ್ಳೊಕಾದ್ರು ನಾನಿಲ್ವ...? ಬೇಕೂಂದ್ರೆ ನೀ ಹೇಳಿದ್ದೆಲ್ಲಾ ಸೇರಿಸಿ ಒಂದು ಕಥೆ ಬರಿತೀನಿ.. ಅವರೆಲ್ಲಾರ್ಗು ಒಂದೊಂದು ಕಾಪಿ ಕಳಿಸಿ ಸೇಡು ತೀರಿಸಿಕೊಳ್ಳೊವಂತೆ...."
"ಅಯ್ಯೊ...ಅವರೆಲ್ಲಾ ಮಹಾನ್ ಭಯಂಕರ ಎಮ್ಮೆ ಚರ್ಮ ಸಾರ್...ಅಷ್ಟು ಸೂಕ್ಷ್ಮ ಎಲ್ಲಾ ಎಲ್ಲಿಂದ ಬರ್ಬೇಕು? ಒಂದು ವೇಳೆ ಇದ್ರೂನು ಯಾರೂ ಕೇರು ಮಾಡಲ್ಲ....ನಾವು ಕಳಿಸಿದ್ದ ಪೇಪರ ವೇಷ್ಟಾಗಿ ಕ.ಬು. ಸೇರುತ್ತಷ್ಟೆ....."
"ಅದೆಲ್ಲ ಇರಲಪ್ಪಾ.. ಈಗ ವಿಷಯಕ್ಕೆ ಬಾರಪ್ಪ...ನಿನ್ನ ಯುನಿವರ್ಸಲ್ ಕಥಾನಕನೂ ಏನಾಯ್ತು ಅಂತ ಹಚ್ಚಿಕೊಂಡುಬಿಡು ಪುರಾಣಾನ..." ನಾನು ಮತ್ತೆ ಟ್ರಾಕಿನತ್ತ ಪೆಡಲ್ ತುಳಿದೆ..
" ಒಟ್ಟಿಗದು ಎರಡು ಪುರಾಣ ಸಾರ್...ಎಪಿಸೋಡ್ ಒಂದು 'ಯುನಿವರ್ಸಲ್ಲು', ಎಪಿಸೋಡ್ ಟೂ ಬಂದು 'ಹಾಸ್ಪಿಟಲ್ಲು'...."
" ಸರಿ ಎಪಿಸೋಡು ಒಂದರಿಂದಲೆ ಶುರುವಾಗಲಿ ಕಥಾನಕ...." ನಡುವೆ ನನ್ನ ಸೈಕಲ್ ಬೆಲ್ಲು...
" ಹಾಗೂ ಹೀಗೂ ಭಯಂಕರ ಗುದ್ದಾಡಿ ಹನ್ನೆರಡು ಟಿಕೆಟ್ಟೆನೊ ಹೊಂಚಿದ್ವಲ್ಲ ಸಾರ್...ಅದನ್ನ ತಗೊಂಡು ಹೋಗಿ ಅವರ ಕೈಗಿಟ್ಟುಬಿಟ್ಟು ಒಂದು ಸಾಷ್ಟಾಂಗ ನಮಸ್ಕಾರ ಹೊಡೆದುಬಿಟ್ಟೆ..."
"ಹೊಡಿಬೇಕಾದ್ದೆ....ಮತ್ತೆ...."
"ಅವರಿದ್ದುಕೊಂಡು, 'ಎಂತಾ ದೇವರಂಥಾ ಮನುಷ್ಯ ನೀನು ಗುಬ್ಬಣ್ಣ...ಇಂತಾ ತುಟ್ಟಿ ಕಾಲದಲ್ಲೂ ನಮ್ಮನ್ನೆಲ್ಲಾ ಇಲ್ಲಿಗೆ ಕರೆಸಿಕೊಂಡು ರಾಜೋಪಚಾರ ಮಾಡಿದ್ದು ಅಲ್ದೆ ಇಲ್ಲಿ ಎಲ್ಲಾ ನೋಡಬೇಕಾದ ಜಾಗಾನೆಲ್ಲ ತೋರಿಸಿ ನಮ್ಮನ್ನ ತುಂಬಾ ದೊಡ್ಡ ಋಣಕ್ಕೆ ಸಿಕ್ಕಿಸ್ತಿದ್ದಿಯಲ್ಲಪ್ಪ...' ಅಂತ ಬೇರೆ ರಾಗಾ ಎಳೆದರು, ಕೇಳಿಬಿಟ್ರೆ ದುಡ್ಡು ಕೊಟ್ಟೆಬಿಡ್ತಿದ್ರೇನೋ ಅನ್ನೊ ತರದಲ್ಲಿ..." ಎಂದವನೆ ಕಟಕಟನೆ ಹಲ್ಲು ಕಡಿದ ಗುಬ್ಬಣ್ಣ.
ಅಂದ ಹಾಗೆ ಮಾತು ಮಾತಿಗೂ 'ಅಯ್ಯೊ ಸಾರ್, ಅಯ್ಯೊ ಸಾರ್' ಅನ್ನೋದು ಗುಬ್ಬಣ್ಣನಿಗೆ ಚಿಕ್ಕಂದಿನಿದಲೂ ಬಂದ ಅಭ್ಯಾಸ..ಬೇಕಿರಲಿ ಬಿಡಲಿ ಎಲ್ಲಾದಕ್ಕೂ 'ಅಯ್ಯೊ' ಸೇರಿಸ್ತಾ ಇರ್ತಾನೆ ಅಂತ ಯಾರೊ ಅವನಿಗೆ 'ಅಯ್ಯೊ ಗುಬ್ಬಣ್ಣಾ.." ಅಂತಾನೆ ಅಡ್ಡ ಹೆಸರು ಇಟ್ಟುಬಿಟ್ಟಿದ್ರು ಸ್ಕೂಲ್ ಡೇಸಲ್ಲೆ. ಅದು ಹೆಚ್ಚುಕಡಿಮೆ ಶಾಶ್ವತವಾಗಿ ನಿಂತುಹೋಯ್ತು. ಸಿಂಗಪುರದಲ್ಲಿ ಆ ಸೀಕ್ರೇಟ್ ಗೊತ್ತಿರೊನು ಬಹುಶಃ ನಾನೊಬ್ನೆ ಅಂತ ಕಾಣುತ್ತೆ, ಹೀಗಾಗಿ ಗುಬ್ಬಣ್ಣ ಬಚಾವ್..! ಹಾಗೆ ಅವನ ಮತ್ತೊಂದು ಅಭ್ಯಾಸ - ಕಟ ಕಟ ಹಲ್ಲು ಕಡಿಯೋದು..! ಇದು 'ಅಯ್ಯೊ' ಅನ್ನೊಷ್ಟೂ ಇಲ್ದೆ ಇದ್ರೂ, ತಮಾಷೆಗೆ ನಾವೆಲ್ಲ 'ಹಲ್ಕಟ್ ಹಲ್ಕಟ್ ಗುಬ್ಬಣ್ಣ ' ಅಂತ ರೇಗಿಸಿ ಗೋಳು ಹುಯ್ಕೋತಾ ಇದ್ವಿ...ಈಗದೆಲ್ಲ ಹಳೆ ಕತೆ ಬಿಡಿ.
ಗುಬ್ಬಣ್ಣ ಆವತ್ತು ಯುನಿವರ್ಸಲ್ನಲ್ಲಿ ನಡೆದ ಸಂಭ್ರಮವನ್ನು ವರ್ಣಿಸುತ್ತಾ ಇದ್ದರೆ ಕೇಳೋಕೇನೊ ಮನೋಹರವಾಗಿ, ಉಲ್ಲಾಸದಾಯಕವಾಗಿ ಇದ್ರು, ಅದೆಲ್ಲ ಸಂಭಾಳಿಸೋಕೆ ಅವನು ಪಟ್ಟ ಪಾಡಿಗೆ 'ಅಯ್ಯೊ ಪಾಪ! ಬಡಪಾಯಿ ಗುಬ್ಬಣ್ಣ' ಅಂಥ ಕನಿಕರವೂ ಆಯ್ತು. ಪಾಪ ಚೆನ್ನಾಗಿ ಅಲ್ಲಾಡಿಸಿ, ಚೆಲ್ಲಾಡಿಸಿಬಿಟ್ಟಿದ್ದರು ಅವನನ್ನ - ಮೇಲಿಂದ ಕೆಳಗಿನ ತನಕ. ಸದ್ಯ ಟಿಕೆಟ್ಟು ಸಿಕ್ಕಿತಲ್ಲ ಅನ್ನೊ ಖುಷಿಯಲ್ಲಿ ಗುಬ್ಬಣ್ಣನೇನೊ ಡಜನ್ ಟಿಕೆಟ್ಟಿನ ಜತೆಲಿ ಫ್ರೀಯಾಗಿ ಸಿಕ್ಕಿದ್ದ ಹತ್ತತ್ತು ಡಾಲರು 'ಪುಡ್ ಕೂಪನ್ನನ್ನು' ಸೇರಿಸಿಯೆ ಹಂಚಿದ್ದ - ಅದರ ನಿಜವಾಗಿ ತೆತ್ತ ಬೆಲೆಯನ್ನು ಅವರಿಗೆಲ್ಲಾ ಹೇಳದೆಯೆ. ಅವರೆಲ್ಲ ಅದರ ಮುಖಬೆಲೆ ಎಪ್ಪತೈದೆಪ್ಪತೈದು ಡಾಲರು ಅಂದಾಗ, " ಏನೂ, ಎರಡು ಬೆರಳಗಲಾನೂ ಇಲ್ಲದ ಚೀಟಿಗೆ ಮೂರುವರೆ ಸಾವಿರ ರೂಪಾಯಿನಾ.... ರಾಮ್ರಾಮಾ! ಬಿಡಿಬಿಡಿ ನಾವೆ ಹೋಗೋದಾಗಿದ್ರೆ ಜಪ್ಪಯ್ಯ ಅಂದ್ರು ಇಷ್ಟೊಂದು ದುಡ್ಡು ಕೊಟ್ಟು ಹೋಗ್ತಾ ಇರಲಿಲ್ಲ..." ಅಂದ್ರಂತೆ. "..'ಹೌದಲ್ವೆ ಮತ್ತೆ ? ಯಾರದೊ ರೊಕ್ಕ ಎಲ್ಲಮ್ಮನ ಜಾತ್ರೆ...ಕಾಸು ಕೊಡೋನು ನಾನು, ಮಜಾ ಮಾಡೋಕೆ ಪಾಪ! ಕಷ್ಟಾನ ನಿಮಗೆ?' - ಅಂತ ಮನಸ್ನಲ್ಲೆ ಬೈಕೊಂಡೆ ಸಾರ್ "- ಅಂದ ಗುಬ್ಬಣ್ಣ.
"ಸದ್ಯ ಡಿಸ್ಕೌಂಟೆಡ್ ಟಿಕೆಟ್ಟು ಅಂತ ಹೇಳ್ದೆ ಒಳ್ಳೇದೆ ಮಾಡ್ದೆ ಬಿಡು...ಇಲ್ಲಾಂದ್ರೆ, ಯಾವ್ದೊ ಧರ್ಮದ ಟಿಕೆಟ್ ತಂದುಕೊಟ್ಟುಬಿಟ್ಟಿದಾರೆ, ಅಂತ ಅದಕ್ಕು ಒಂದು ಕೊಂಕು ಹಾಕಿರ್ತಿದ್ರೊ ಏನೊ..."
"ಅವರ ಕೊಂಕಿನ ಮನೆ ಹಾಳಾಯ್ತು ಸಾರ್..ಟಿಕೆಟ್ಟು ಜತೆಗೆ ಕವಳಕ್ಕೂ ಸೇರಿಸಿ ಕೊಟ್ಟ ಮೇಲೆ ಬಾಯ್ಮುಚ್ಕೊಂಡು ತೆಪ್ಪಗೆ ಹೋಗ್ಬೇಕು ತಾನೆ? "
" ಮತ್ತೇನಂತೆ ಕಥೆ? ಜತೆಗೆ ಎಸ್ಕಾರ್ಟೊಬ್ಬರು ಬರಬೇಕೂಂದ್ರಾ...?"
" ನೋಡಿದ್ರಾ ಸಾರ್.. ಅವರ ಕ್ರಿಮಿನಲ್ ಮೈಂಡ್ನ ಎಷ್ಟು ಚೆನ್ನಾಗಿ ತಿಳ್ಕೊಂಡ್ಬಿಟ್ಟಿದ್ದಿರಾ...ಒಬ್ಬಾ ಕ್ರಿಮಿನಲ್ಗೆ ಇನ್ನೊಬ್ಬ ಕ್ರಿಮಿನಲ್ನ ಮೈಂಡು ಗೊತ್ತಾಗೋದು ಸಾರ್...ನಾನೊ ಇಲ್ಲಾ ನನ್ನ ಹೆಂಡ್ತಿನೊ ಜತೆಗೋಗ್ಲೆ ಬೇಕಂತೆ ಸಾರ್...ಅವರಿಗೆ ಇಲ್ಲೆಲ್ಲಾ ಭಾಳ ಭಯವಾಗುತ್ತಂತೆ ಇಲ್ಲಿಯವರ ಜತೆಯಿಲ್ದೆ ಓಡಾಡಕೆ...!"
ಗುಬ್ಬಣ್ಣ ಏನು ನನ್ನ ಗೆಸ್ಸಿಂಗನ್ನ ಹೊಗಳ್ತಾ ಇದಾನೊ, ಇಲ್ಲಾ ಕ್ರಿಮಿನಲ್ ಅಂತಾ ಬೈಯ್ತಾ ಇದಾನೊ ಗೊತ್ತಾಗಲಿಲ್ಲ....ಸರಿ ಹಾಳಾಗಲಿ ಜೋಶಿನಲ್ಲಿದಾನೆ, ತಡೆಯೋದು ಬೇಡಾ ಅನಿಸಿ,"ಸರಿ..ಸರಿ.. ಕಥೆ ಗೊತ್ತಾಯ್ತು ಬಿಡು...ಬೇರೆ ದಾರಿಯಿಲ್ದೆ ನಿನ್ನ ಹೆಂಡ್ತೀನೂ ಅವ್ರ ಜತೆ ಗಂಟಾಕಿ ಕಳ್ಸೊ ಸ್ಥಿತಿ ಬಂತೂನ್ನು..?"
"ಅಷ್ಟು ಮಾತ್ರ ಅಲ್ಲಾ ಸಾರ್....ಈಗ ತಾನೆ ಪರೀಕ್ಷೆ ಮುಗ್ಸಿ ರಜೆದಲ್ಲಿರೊ ನನ್ನ ಮಗಳೂ ಮೂಲೆಲಿ ಮುಖ ಊದಿಸಿಕೊಂಡು ನಿಂತಿದ್ಲು...."
"ಯಾಕಂತೆ...? ಅವ್ಳ್ ಹೋಗ್ಬೇಕಂತಲಾ? ಸರಿ, ಅವಳ್ನೆ ಜತೆ ಹಾಕಿ ಕಳಿಸಿದ್ರಾಗಿತ್ತಲ್ಲಾ?"
" ಅವಳೂ ಆರು ತಿಂಗಳಿಂದ್ಲೆ ಯುನಿವರ್ಸಲ್ಲಿಗೆ ಕರ್ಕೊಂಡೋಗಪ್ಪ, ಕರ್ಕೊಂಡೋಗಪ್ಪ ..ನನ್ನ ಫ್ರೆಂಡ್ಸೆಲ್ಲಾ ಆಗ್ಲೆ ಎರಡೆರಡು ಮೂರ್ಮೂರು ಸಾರಿ ನೋಡ್ಬಿಟ್ಟಿದ್ದಾರೆ...ನಾನೊಬ್ಳೆ ಇನ್ನೂ ನೋಡ್ದೆ ಇರೋ ಪ್ರಾಣಿ ಆ ಗುಂಪಲ್ಲಿ ...ಎಲ್ಲಾ ರೇಗಿಸ್ತಾರೆ" ಅಂತ ಒಂದೆ ಕಣ್ಣಲ್ಲಿ ನೀರು ಹಾಕ್ತಾನೆ ಇದ್ಲು...ನಾನೂನು, ಬಿಜಿಯಿದ್ದೀನಿ ಬಂಗಾರಾ, ಪ್ರಾಜೆಕ್ಟಿದೆ ಈಗ, ಮುಂದಿನ ರಜೆಗ್ಹೋಗೋಣ " ಅಂತ ತಳ್ತಾನೆ ಬಂದಿದ್ದೆ. ಈಗ ನೋಡಿದ್ರೆ 'ದಾನ ಶೂರ ಕರ್ಣನ' ಹಾಗೆ ಚೀಪಾಗಿ ಸಿಕ್ಕಿದ ಟಿಕೆಟ್ಟಿನಲ್ಲೂ ಹೆಂಡ್ತಿ, ಮಕ್ಕಳ್ನ ಕರ್ಕೊಂಡು ಹೋಗ್ದೆ, ಯಾರ್ಯಾರ್ಗೊ ದಾನ ಮಾಡಿ, 'ಮನೆಗೆ ಮಾರಿ, ಪರರಿಗೆ ಉಪಕಾರಿ'ಆಗ್ತಾ ಇದಾನೆ ನಮಪ್ಪ...ಅಂತ ಅವರಮ್ಮನ ಹತ್ರ ಗೋಳಾಡಿದ್ಲಂತೆ ಸಾರ್..."
" ಅವಳು ಹೇಳೋದು ನ್ಯಾಯವಾಗೆ ಇದೆಯಲ್ಲಯ್ಯ...ಅದೇನೆ ಇರ್ಲಿ..ಒಂದು ವಿಷಯಕ್ಕೆ ನೀನು ಖುಷಿ ಪಡ್ಬೇಕು ನೋಡು...ಇಂಥಾ ಊರಲ್ಲಿ ಹುಟ್ಟಿ ಬೆಳೆದ್ರೂ, ಎಷ್ಟು ಚೆನ್ನಾಗಿ ಗಾದೆ ಮಾತು ಕಲ್ತ್ಕೊಂಡು ಅರ್ಥ ಮಾಡ್ಕೊಂಡು ಸರಿಯಾಗಿ ಉಪಯೋಗಿಸಿದಾಳೆ ನೋಡು...ಕನ್ನಡಕ್ಕೆ ಇದು ಹೆಮ್ಮೆ ಪಡೊ ವಿಷ್ಯ ಅಲ್ವೇನಯ್ಯಾ?" ಅಂಥ ನಾನು ನಯವಾಗೆ ಕ್ರಿಮಿನಲ್ ಪದಕ್ಕೆ ಸೇಡು ತೀರಿಸಿಕೊಳ್ಳುವ ಹಾಗೆ , ಸಣ್ಣ ತಿರುಗೇಟು ಕೊಟ್ಟೆ!
ಅದನ್ನು ಗಮನಿಸಿಯೂ ಗಮನಿಸದವನಂತೆ ಗುಬ್ಬಣ್ಣ, " ನ್ಯಾಯವೊ, ಅನ್ಯಾಯವೊ ಬಿಡಿ ಸಾರ್...ಇನ್ನು ಅಮ್ಮ ಹೊರಡ್ತಾಳೆ ಅಂದ್ಮೇಲೆ ಮಗಳನ್ನ ಕಳಿಸ್ದೆ ಇರೋಕಾಗುತ್ಯೆ - ಅದೂ ಸ್ಕೂಲ್ ರಜೆ ಇದ್ದಾಗ?..ಹನ್ನೆರಡಕ್ಕೆ ಇನ್ನೆರಡು ಅಂತ ಈ ಕಪಿಗಳನ್ನು ಸೇರಿಸ್ಬೇಕಾಯ್ತು, ಆ ಕಪಿ ಸೈನ್ಯದ ಜತೆಗೆ..."
" ಹೆಂಡ್ತಿ ಮಗಳ್ನ ಕಪಿ ಗೀಪಿ ಅಂತ ಯಾಕಯ್ಯ ಬೈಯ್ತೀಯಾ? ಮೊದಲೆ ಕಾಲ ಕೆಟ್ದು..ಈಗೀಗಂತೂ ಬಸ್ಸುಗಳ್ಗೂ ಕಿವಿಗಳಿರ್ತಾವಂತೆ..." ಎನ್ನುತ್ತಾ ಕೂತಿದ್ದ ಜಾಗದಿಂದಲೆ ಬಸ್ಸಿನ ಸುತ್ತಾ ಕಣ್ಣಾಡಿಸಿದೆ, ಯಾರಾದರೂ ಸಿಐಡಿಗಳಿದ್ದರಾ - ಅನ್ನುವಂತೆ. ಗುಬ್ಬಣ್ಣನೂ ತಟ್ಟನೆ ವಾಸ್ತವಕ್ಕೆ ಬಂದವನಂತೆ ಸುತ್ತಲೂ ಯಾರೊ ಹೊಂಚು ಹಾಕಿ ಕಾಯುತ್ತಿದ್ದಾರೊ ಎಂಬಂತೆ ತಲೆ ಬಗ್ಗಿಸಿ, ಕುಗ್ಗಿದ ದನಿಯಲಿ ಪಿಸುಗುಡತೊಡಗಿದ - ಇಡಿ ಬಸ್ಸಿನಲ್ಲೆ ನಾವಿಬ್ಬರೆ ಇರುವುದೆಂದು ಗೊತ್ತಿದ್ದರೂ! ನಾವು ಮಾತು ಮಾತಾಡುತ್ತಲೆ ಆಗಲೆ ಅರ್ಧಧಾರಿ ಕ್ರಮಿಸಿಬಿಟ್ಟಿದ್ದೆವಾದರೂ ಮಾತಿನ ಭರದಲ್ಲಿ ಕಾಲ ಉರುಳಿದ್ದೆ ಅರಿವಾಗದಂತಾಗಿಹೋಗಿತ್ತು. ಗುಬ್ಬಣ್ಣ ತಗ್ಗಿದ ದನಿಯಲ್ಲೆ,
" ಕಪಿಗಳೆನ್ನದೆ ಇನ್ನೇನನ್ನಬೇಕು?...ಆಗ್ಲೆ ಸಾವಿರಾರುಗಟ್ಲೆ ಬೋಳಿಸ್ಕೊಂಡಾಗಿದೆ..ಈಗ ಈವರಿಬ್ಬರು ಹೊರಟ್ರೆ ಇವರಿಗೆಲ್ಲಿಂದ ಡಿಸ್ಕೌಂಟು ಟಿಕೆಟ್ಟು ತರಲಿ ಹೇಳಿ ಸಾರ್..?..ಕೊನೆಗೆ ಇವರನ್ನು ಜತೆಗೆ ಕಳಿಸದಿದ್ರೆ ಇನ್ನು ವರ್ಷವೆಲ್ಲಾ ನನ್ನ ಜನ್ಮ ಜಾಲಾಡಿಬಿಡ್ತಾರಲ್ಲ ಅಂತ ಹೆದರಿ ಮಾಮೂಲಿ ರೇಟಿನಲ್ಲೆ ಎಪ್ಪತ್ತೈದು-ಎಪ್ಪತ್ತೈದು ಡಾಲರು ಕೊಟ್ಟು ಇನ್ನೆರಡು ಟಿಕೆಟ್ಟು ತರಿಸಿಕೊಟ್ಟೆ ಸಾರ್...."
ನನಗೊ ನಗು ತಡೆಯಲಾಗದೆ ಬಿದ್ದು ಬಿದ್ದೂ ನಗಲಾರಂಭಿಸಿದೆ, "ಅಲ್ಲಯ್ಯ ಬಂದವರಿಗೆಲ್ಲ ಚೀಪಾಗಿ ಟಿಕೆಟ್ಟು ಕೊಡಿಸಿ ಎಂಟರ್ಟೈನ್ ಮಾಡಿಸಿಬಿಟ್ಟು, ನಿನ್ಹೆಂಡ್ತಿ ಮಗಳಿಗೆ ಪುಲ್ ಚಾರ್ಜು ಕೊಟ್ಟು ಟಿಕೆಟ್ ತೊಗೊಂಡ್ಯಾ....ಚೆನ್ನಾಗಿದೆ ಕಣಯ್ಯ ತಮಾಷೆ...." ಎನ್ನುತ್ತ ಹೊಟ್ಟೆ ಹಿಡಿದುಕೊಂಡೆ..
" ನೀವು ನಗಿ ಸಾರ್..ನಿಮಗೆಲ್ಲಾ ತಮಾಷೆನೆ...ಬಂದವರೇನೊ ಮೂರು ದಿನ ಇದ್ದು ಖಾಲಿ ಮಾಡ್ತಾರೆ...ಬೆಳಗಾಗೆದ್ದು ಮುಖಕ್ಕೆ ಮೂರು ಕಾಫಿ ನೀರು ತೋರ್ಸಕೊ, ಇಲ್ಲಾ ಬಿಸ್ಲಲ್ಲಿ ಓಡಾಡಿ ಬಂದಾಗ ತಂಪಾಗೊಂದು ಲೋಟ ತಣ್ಣೀರೊ, ಎಳನೀರೊ ಕೊಡೋಕು ಕೂಗ್ಬೇಕೂಂದ್ರೂ, ಇರೋವ್ರೆ ಇವರಿಬ್ರು. ಅವರ ಜತೆ ಎಡಬಿಡಂಗಿ ಮಾಡ್ಕೊಂಡು ನಾನು ಎಲ್ಲಿಗೆ ಬದುಕಕೆ ಹೋಗ್ಲಿ?... ಹೇಗಿದ್ದರೂ ಖರ್ಚು ಮೇಲೊಂದು ಖರ್ಚು ಶಿವಾ ಅಂತ ಅಲ್ಲೂ ತಲೆ ಕೊಟ್ಬಿಟ್ಟೆ ಸಾರ್...."
"ನಿಜಾ ಗುಬ್ಬಣ್ಣ..ಹೊರಗಡೆ ಗೊತ್ತಿರೊ ಶತ್ರುಗಳ ಜತೆ ಯುದ್ಧ ಮಾಡ್ಬೋದು ಆದರೆ ಮನೇಲೇನಾದರೂ ಹಿತಶತ್ರುಗಳನ್ನು ಹುಟ್ಟಿಸ್ಕೊಂಡ್ರೆ ಬದ್ಕೋದು ಕಷ್ಟ..ಅದರಲ್ಲೂ ತಲೆ ಮೇಲೆ ತಲೆ ಬೀಳ್ಲಿ, ಮನೆ ದೇವ್ರುಗಳನ್ನ ಮಾತ್ರ ಸರಿಯಾಗಿಟ್ಕೊಂಡು ಬಿಡಬೇಕಪ್ಪ..ಯಾವ ಹರಕೆ, ಬೇಡಿಕೆ ಏನೂ ಬಾಕಿ ಇಟ್ಕೋಬಾರ್ದು.."
"ಹೌದು ಸಾರ್.. ಅದಕ್ಕೆ ಗಾದೆನೆ ಇದೆಯಲ್ಲಾ ಸಾರ್..'ಮನೆದೇವರುಗಳ ಮೆಚ್ಚಿಸದೆ ಸತ್ರೆ, ಮಸಣದಲೂ ಇಲ್ಲ ಪಾಪಿಗೆ ನಿದ್ರೆ..' ಅಂತ"
"ಅದ್ಯಾವುದೊ ಗುಬ್ಬಣ್ಣಾ ಹೊಸಾ ಗಾದೆ...ಎಲ್ಲೂ ಕೇಳ್ದಂಗೆ ಇಲ್ವಲ್ಲೊ"
" ಎಲ್ಲೂ ಕೇಳಿಲ್ವಾ ಸಾರ್...ನಾನು ಹಾಗಂತ ಗಾದೆನೆ ಇರ್ಬೋದೇನೊ ಅನ್ಕೊಂಡ್ ಹೇಳ್ದೆ...ನೀವು ಕೇಳಿಲ್ಲಾಂದ್ರೆ ಆ ತರ ಗಾದೆನೆ ಇಲ್ಲಾಂತ ಕಾಣುತ್ತೆ... "
"ಹಾಳಾಗ್ಲಿ ಇದ್ಯೊ ಇಲ್ವೊ...ಇಲ್ಲಂದ್ರೆ ನಾವೆ ಹೊಸ್ದಾಗಿ ಹುಟ್ಸುದ್ರಾಯ್ತು ..ಮುಂದಕ್ಕೇನಾಯ್ತು ಹೇಳು ..ಎಲ್ಲಿಗೆ ಬಂತು ಬಯಲಾಟದ ಪ್ರಸಂಗ....?"
"ಪ್ರಸಂಗವೆಲ್ಲಿ ಬರೋದು ಇನ್ನು ಭಾಗವತರ ಪೀಠಿಕೆ ಹಾಡೆ ಆಗಿಲ್ಲಾ..."
" ಏನೊ ಹಾಗಂದ್ರೆ ಗುಬ್ಬಣ್ಣ ..ಇನ್ನು ಪ್ರಸಂಗ ಶುರೂನೆ ಇಲ್ಲಾಂತ ಬಾಂಬು ಹಾಕ್ತಾ ಇದೀಯಾ..ಒಳಗಿನ್ನು ಏನೇನೊ ಮುಂಗಾರು ಮಳೆ ತರ ಕಥೆ ಇನ್ನು ಉಳ್ಕೊಂಡಿರೊ ಹಾಗಿದೆ...?"
" ಆ ಪ್ರಸಂಗ ಕೇಳ್ಬೇಕೂಂದ್ರೆ 'ಬ್ರೇಕ್ ಕೆ ಬಾದ್' ಸಾರ್..ನೋಡಿ ನಮ್ಮ ಸ್ಟಾಪು ಬಂದ್ಬಿಡ್ತು...ನಿಮ್ಮ ತಂಪಾದ ಕ್ಲಬ್ಬಿನಲ್ಲಿ ಸೊಂಪಾಗಿ ಕೂತ್ಕೊಂಡು ಬೀರಾಡ್ತಾ ಹಾರಾಡ್ತ ಮಾತಾಡೋಣ..."
ಘಾಟಿ ಗುಬ್ಬಣ್ಣ..ಮಾತಿನ ಮಧ್ಯೆನೂ ಸ್ಟಾಪಿನ ಪರದೆ ಮೇಲೆ ನಿಗಾ ಹಾಗೆ ಇಟ್ಟಿದ್ದಾ; ನಾನು ನಿಗಾ ಇಟ್ರೂ ಅದು ಹೆಂಗೊ ಮಧ್ಯದಲ್ಲಿ ಮರೆತುಹೋಗಿದೆ ಅಂತ ಗೊತ್ತಾಗ್ತಾ ಇದ್ದಿದ್ದೆ ಇಳಿಬೇಕಾದ ಸ್ಟಾಪು ಕಳೆದು ಎರಡು ಸ್ಟಾಪು ಬಂದ್ಮೇಲೆ..ಮುಂದಿನ ಸ್ಟಾಪಲ್ಲಿ ಬಸ್ಸು ನಿಲ್ಲಿಸಲ್ಲು ಕೋರು ಗುಂಡಿಯೊತ್ತುತ್ತ ಇಬ್ಬರೂ ಬಾಗಿಲಿನತ್ತ ನಡೆದೆವು. ಇನ್ನೂ ಯಾರೂ ಅಷ್ಟಾಗಿ ಜನರಿರದ ಕ್ಲಬ್ಬು ಸೇರಿದ ತಕ್ಷಣ ಗುಬ್ಬಣ್ಣ ಮೊದಲು ಮಾಡಿದ ಕೆಲಸ, ಸೊಗಸಾದ 'ದೇವ ಮೂಲೆ'ಯೊಂದನ್ನು ಹಿಡಿದು ಆಸೀನನಾಗಿ ಬೇರರನ್ನು ಕರೆದು ' ಎರಡು ಟೈಗರು' ಅಂದಿದ್ದು!
------------------------------------------------------------------------------------------------------------------------------
(ಮೂರನೆ ಹಾಗು ಅಂತಿಮ ಭಾಗದಲ್ಲಿ ಮುಕ್ತಾಯ - ಈಗಾಗಲೆ ಜತೆಯಲ್ಲೆ ಪ್ರಕಟಿಸುತ್ತಿದ್ದೇನೆ. ಲೇಖನದ ಉದ್ದದ ದೃಷ್ಟಿಯಿಂದ ಮೂರನೆ ಭಾಗವಾಗಿ ಹಾಕಿದ್ದೇನೆ - ನಾಗೇಶ ಮೈಸೂರು, ಸಿಂಗಾಪುರ)
ಸದ್ಯ ಬದುಕಿದ್ದಾನೆ ಅಂತ ಖಾತ್ರಿಯಾದರೂ ಮತ್ತೊಂದೇನೊ ಸಸ್ಪೆನ್ಸ್ ಥ್ರಿಲ್ಲರ ಸ್ಟೋರಿ ತರ ಇನ್ನೊಂದೇನೊ ಹೊಸ ಕೊಕ್ಕೆ ತಗಲಿಸ್ತಾ ಇದಾನಲ್ಲ ಅನಿಸ್ತು. ನಾವು ಹೋದ ಬಾರಿ ಮುರುಗನ್ನಲ್ಲಿ ಭೇಟಿಯಾದ ಮೇಲೆ ನೆಂಟರ ಕಥೆ ಏನಾಯ್ತೊ ಗೊತ್ತಾಗಿರಲಿಲ್ಲ. ಯುನಿವರ್ಸಲ್ ಟಿಕೆಟ್ಟು ಸಿಕ್ಕಿದ ಮೇಲೆ ಎಲ್ಲಾ ಸುಗಮವಾಗಿ ಮುಕ್ತಾಯವಾಗಿರಬೇಕಿತ್ತು..ಇವನ ಹಳವಂಡ ನೋಡಿದರೆ ಇನ್ನೇನೊ ಹೊಸ ಕಥೆ ಇರುವಾ ಹಾಗಿದೆಯಲ್ಲ ಅಂದುಕೊಂಡೆ ಕೆಲಸದತ್ತ ಗಮನ ಹರಿಸಿದೆ; ಹೇಗೂ ವಾರದಕೊನೆ ಭೇಟಿಯಲ್ಲಿ ಗೊತ್ತಾಗಲಿದೆಯಲ್ಲ ಎಂಬ ನಿರಾಳದೊಂದಿಗೆ.
ಎರಡು ದಿನ ಕಳೆದ ಮೇಲೆ ಅಚಾನಕ್ಕಾಗಿ ಗುಬ್ಬಣ್ಣನಿಂದ ಪೋನ್ ಬಂತು. ದನಿಯಲ್ಲಿದ್ದ ಆಯಾಸ, ಸುಸ್ತು ಗಮನಿಸಿ, " ಏನು ಗುಬ್ಬಣ್ಣ, ಮೈ ಆರಾಮಿದಿಯೊ ಇಲ್ಲವೊ? ಸೌಂಡುಬಾಕ್ಸ್ ಪೂರ್ತ ಕೂತು ಹೋಗಿರೊ ಹಾಗಿದೆ? ಅಷ್ಟು ದಿನದಿಂದ ಫೋನ್ ಬೇರೆ ಇಲ್ಲಾ..ಸಿಕ್ಕಲು ಇಲ್ಲ...ನಾನು ಫೋನ್ ಮಾಡಿದ್ರೂ ಮೊಬೈಲ್ ಎತ್ತಲಿಲ್ಲ..? ಸದ್ಯ ಮೆಸೇಜ್ ಆದ್ರೂ ರಿಪ್ಲೈ ಮಾಡಿದ್ಯಲ್ಲ....ನಂಗೇನೊ ಬದುಕಿದ್ದಿಯೋ, ಸತ್ತಿದ್ದಿಯೊ ಅಂತಾನೆ ಅನುಮಾನ ಬಂದ್ಬಿಟ್ಟಿತ್ತಲ್ಲಪ್ಪಾ ದೊರೆ....." ಎಂದೆ ಅವನಿಗೆ ಉತ್ತರಿಸಲೂ ಅನುವು ಕೊಡದೆ.
ನನ್ನ ಪ್ರಶ್ನಾವಳಿಯಿಂದ ಕೊಂಚ ಗಡಿಬಿಡಿಗೊಂಡರೂ ಸಿಡಿಮಿಡಿಗೊಳ್ಳದ ಶಾಂತ ನರಸಿಂಹನಂತೆ ಗುಬ್ಬಣ್ಣ ಸಾವಕಾಶವಾಗಿಯೆ ಉತ್ತರಿಸಿದ..."ಏನು ಆರಾಮೊ..ಸಾರ್..ಮೊಂಡಾ ಮೊಗುಚ್ತು...ಯಾಕೊ ನನ್ನ ಟೈಮೆ ಸರಿಯಿಲ್ಲಾ. ಕಷ್ಟಗಳು ಬಂದ್ರೆ ಒಂದರ ಹಿಂದೆ ಒಂದು ಬರುತ್ವೆ ಅಂತ ಗಾದೆ ಮಾತು ಕೇಳ್ತಿದ್ದಾಗ ಅದರ ಬಿರುಸು ಅರ್ಥವಾಗಿರಲಿಲ್ಲ...ಈಗ ಅದರ ನಿಜವಾದ ಅರ್ಥ ಗೊತ್ತಾಗ್ತಾ ಇದೆ.."
"ಯಾಕೊ ಗುಬ್ಬಣ್ಣ ಈಚೆಗೆ ನೀನು ಒಗಟಲ್ಲಿ ಮಾತಾಡೋದು ಜಾಸ್ತಿಯಾಯ್ತು...ನೋಡಪ್ಪ ನಾನು ನಿನ್ನ ಕ್ಲೈಂಟ್ ಅಲ್ಲಾ, ಹೇಳಿದ್ದನೆ ಹೇಳ್ತಾ, ವಿಷಯಕ್ಕೆ ಬರದೆ ಸುತ್ತಮುತ್ತ ಗಿರಕಿ ಹೊಡೆಸ್ತಾ ಇರೋಕೆ....ಪಟ ಪಟ ನೇರಾ ಹೇಳಿಬಿಡೋದು ತಾನೆ?" ಅವನ ಪೀಠಿಕೆ ಬೆಳೆದು ಉದ್ದವಾಗುವ ಮೊದಲೆ ಮುನ್ನೆಚ್ಚರಿಕೆ ಕ್ರಮವಾಗಿ ನಾನೆ ವಾಗ್ಧಾಳಿಯಿಟ್ಟರೂ ನನ್ನಂತಹ ನೂರಾರು ಕುರಿಗಳನ್ನು ಪಳಗಿಸಿರೊ ಗುರು ಅವನು. ವಿಚಲಿತನಾಗದೆ ಸಾವಕಾಶದಿಂದ, " ನಾನು ಡಿಟೈಲಾಗಿ ಹೇಳದಿದ್ದರೆ ನಿಮಗೆ ವಿಷ್ಯ ಎಲ್ಲ ತಿಳಿಯೊದ್ ಹೆಂಗೆ ಸಾರ್? ಅದೂ ಅಲ್ದೆ ಒಂದೆ ಸಾರಿ ಅಷ್ಟೊಂದು ಪ್ರಶ್ನೆ ಕೇಳ್ದೋರು ನೀವೆ , ಈಗ ಉತ್ತರ ಹೇಳೋಕೆ ಹೊರಟರೆ ಬೇಡಾ ಅಂತಿರಲ್ಲಾ? ನಿಮ್ಮ ಮೊಬೈಲು ಬಂದಾಗ ಆಸ್ಪತ್ರೆಯಲ್ಲಿದ್ದೆ, ಅಲ್ಲಿ ಪೋನಲ್ಲಿ ಮಾತಾಡೋಂಗಿಲ್ಲ..ಅದಕ್ಕೆ ಬರಿ ಮೆಸೇಜ್ ಮಾಡಿದ್ದು..."
"ನಾನು ಅದೆ ಅನ್ಕೊಂಡೆ ನೋಡು, ಏನೊ ಹೆಚ್ಚು ಕಮ್ಮಿ ಆಗಿ ಆಸ್ಪತ್ರೆ ಸೇರಿದ್ದಿಯಾ ಅಂತ...ಏನು ಎರಡು ವಾರಕ್ಕೆ ನಿನ್ನ ಜಾಲಾಡಿಸಿ ಆಸ್ಪತ್ರೆ ಮೆಟ್ಲು ಹತ್ತೊ ಹಂಗೆ ಮಾಡಿಬಿಟ್ಟರಲ್ಲಯ್ಯಾ ಜನ...ಏನಾಗಿತ್ತಯ್ಯ ಮನೇಲಿ ಔಷಧಿ ತೊಗೊಳ್ದೆ ಅಡ್ಮಿಟ್ಟು ಮಾಡಿಸ್ಕೊಳ್ಳೊ ಅಂತಾದ್ದು....?"
"ಅಯ್ಯೊ..ಅಡ್ಮಿಟ್ಟು ಆಗಿದ್ದು ನಾನಲ್ಲಾ ಸಾರ್...ಈಗ ನಡೀತಾ ಇರೋದೆಲ್ಲಾ ನೋಡಿದ್ರೆ ಸದ್ಯಕ್ಕೆ ಅದೂ ಆಗಿಬಿಡೊ ಹಂಗೆ ಕಾಣುತ್ತೆ....ನಾನು ಆಸ್ಪತ್ರೆಲಿದ್ದಿದ್ದೂ ಗೇಟ್ ಕೀಪರು ತರ ಪೇಷೆಂಟು ಕಾಯೋಕೆ....?"
" ನೀನಲ್ಲಾ ಅಂದ್ರೆ ಇನ್ಯಾರಪ್ಪ ಆಸ್ಪತ್ರೆ ಸೇರಿದ್ದು? ನಿನ್ನ ಹೆಂಡ್ತಿ ಮಗಳಿಬ್ಬರು ಕ್ಷೇಮ ತಾನೆ?"
" ಅವರಿಬ್ಬರೂ ಓಕೆ ಸಾರ್...ಅದೆ ನಮ್ಮ ನೆಂಟರುಗಳು ಬಂದು ಅಟ್ಯಾಕ್ ಮಾಡಿದ್ದ ವಿಷಯ ಹೇಳಿದ್ನಲ್ಲ ...? ಯುನಿವರ್ಸಲ್ಲೂ, ಕನ್ನಡ ಸಂಘ? ಜ್ಞಾಪಕವಿದೆಯಾ?"
"ಇಲ್ದೇ ಏನು ಮತ್ತೆ? ನನ್ನ ಒಂದಿನ ಪೂರ ವೇಸ್ಟು ಮಾಡ್ಸಿ ಆ ಪ್ರೋಗ್ರಾಮಲ್ಲಿ ಗಳ ನೆಟ್ಟು ಕೂರೊ ಹಾಗೆ ಮಾಡ್ಬಿಟ್ಟೆ ಅವತ್ತು..ಅದು ಸಾಲ್ದೂಂತ ಪ್ರೋಗ್ರಾಮ್ ನೋಡೊ ಗಡಿಬಿಡಿಯಲ್ಲಿ ಊಟ ತಿಂಡೀನೂ ತಿನ್ನೋಕಾಗ್ದೆ ರಾತ್ರಿಯೆಲ್ಲ ಖಾಲಿ ಹೊಟ್ಟೆಲಿ ಮಲಗೊ ಹಾಗೆ ಮಾಡ್ದೆ...."..
ಅವತ್ತು ಪ್ರೋಗ್ರಾಮ್ ಕವರ ಮಾಡೊ ಗಡಿಬಿಡಿಯಲ್ಲಿ ಊಟಕ್ಕೆ ಹೋಗೊ ಹೊತ್ತಿಗೆ ಕ್ಯಾಟರಿಂಗಿನವರು ಗಂಟು ಮೂಟೆ ಕಟ್ಟುತ್ತಿದ್ದರು. ಗುಬ್ಬಣ್ಣನ ಕಥೆಯು ಹೆಚ್ಚು ಕಡಿಮೆ ಅದೆ ಅಗಿದ್ದರಿಂದ ಅವನನ್ನೂ ಬೈಯುವಂತಿರಲಿಲ್ಲ..." ಆ ಪಾರ್ಟಿಗಳೆಲ್ಲಾ ಆಗ್ಲೆ ಹೋಗಾಗಿರ್ಬೇಕಲ್ಲಾ? ಯುನಿವರ್ಸಲ್ಲೂ ಅವತ್ತೆ ಆಗೋಯ್ತಲ್ಲ..? ಅದೆಲ್ಲ ಮುಗಿದ ಕಥೆ ಅನ್ಕೊಂಡಿದ್ದೆನಲ್ಲಾ ಗುರುವೆ?" ಎಂದೆ
"ಎಲ್ಲಾ ಸರಿಯಾಗಿ ನಡೆದಿದ್ರೆ ಅದರ ಮುಂದಿನ ದಿನಾನೆ ಅವರೆಲ್ಲ ಪ್ಲೇನು ಹತ್ತಿರಬೇಕಾಗಿತ್ತು ಸಾರ್..."
ನಾನು ಬೆಚ್ಚಿ ಬಿದ್ದವನಂತೆ, "ಏನಯ್ಯಾ ಹಾಗಂದ್ರೆ?ಅವರೆಲ್ಲಾ ಇನ್ನೂ ಇಲ್ಲೆ ಟೆಂಟು ಹಾಕ್ಕೊಂಡು ಕೂತಿದ್ದಾರಾ ಏನು ಕಥೆ?"
"ಎಲ್ಲಾ ನನ್ನ ಕರ್ಮಕಾಂಡ ಸಾರ್...ಎಲ್ಲಾ ಮುಗೀತು ಅನ್ಕೋತಾ ಇರೋದ್ರಲ್ಲೆ, ನಮ್ಮ ಒಬ್ಬ ಕೊ ಬ್ರದರಿಗೆ ಇದ್ದಕ್ಕಿದ್ದಂತೆ ಸೀರಿಯಸ್ಸಾಗಿ ಹೋಗಿ ಬಂದಂಗೆ ಆಗೋಯ್ತು ಸಾರ್...ಸರಿ ಇದ್ದ ಬದ್ದ ಕೆಲಸವೆಲ್ಲ ಕೈ ಬಿಟ್ಟು ಈ ಆಸ್ಪತ್ರೆ ಸೇವೆ ನಡೆಸ್ತಾ ಇದೀನಿ ...ನಿನ್ನೆ ತಾನೆ ಆಸ್ಪತ್ರೆಯಿಂದ ಡಿಸ್ಚಾರ್ಜು ಆಯ್ತು...ಅದಕ್ಕೆ ಈವಾಗ ಪೋನು ಮಾಡೋಕೆ ಪುರುಸೊತ್ತಾಯ್ತು ನೋಡಿ ಸಾರ್..."
"ಶಿವ..ಶಿವಾ..ಏನಪ್ಪಾ ನಿನ್ನ ಅವಸ್ತೆ? ನೀನು ಹೇಳ್ತಾ ಇರೋದು ನೋಡಿದ್ರೆ ಡಜನ್ ಸೀಟೂ ಹಂಗೆ ಜಾಂಡಾ ಊರಿರೊ ಹಂಗೆ ಕಾಣುತ್ತೆ......"
"ಅದೂ ಆಗಿ ಹೋಗ್ತಿತ್ತೊ ಏನೊ..ನಾನು ಹುಷಾರಾಗಿಬಿಟ್ಟು ಮೊದಲು ಉಳಿದೆಲ್ಲಾ ಫ್ಯಾಮಿಲಿಗಳನ್ನೆಲ್ಲಾ ಹೊರಗ್ಹಾಕೋಕೆ ನೋಡ್ದೆ ಸಾರ್...ಆದರೂ ಎಲ್ಲಾರೂ ಕಾಯಿಲೆ, ಸೀರಿಯಸ್ಸು ಮಲಗಿರೊ ಸಮಯ, ಬಿಟ್ಟು ಹೋದ್ರೆ ಜನ ಏನು ಅನ್ಕೋತಾರೆ ಹಂಗೆ, ಹಿಂಗೆ ಅಂತೇನೇನೊ ಹೇಳಿ ಎಲ್ಲಾರ ಟಿಕೆಟ್ಟು ಒಂದು ವಾರ ಲೇಟ್ ಮಾಡಿಸಿಬಿಟ್ರು....ಹೋದ ವಾರ ಹಂಗೂ ಹಿಂಗೂ ಮಾಡಿ ಅವರನ್ನೆಲ್ಲಾ ದಬ್ಬಿದ್ದಾಯ್ತು..ಇನ್ನುಳಿದಿರೊ ನಾಲ್ಕು ಜನ ಕಾಲೆತ್ತಿದರೆಂದ್ರೆ ಧರ್ಮಸ್ಥಳಕ್ಕೊ, ತಿರುಪತಿಗೊ ಒಂದು ವಿಸಿಟ್ ಕೊಟ್ಟು ತಲೆ ಮುಡಿ ಕೊಟ್ಟು ಬುರುಡೆ ಹೊಡೆಸ್ಕೊಂಡು ಬರ್ತಿನಿಂತ ಹರಕೆ ಕಟ್ಕೊಂಡಿದ್ದೀನಿ ಸಾರ್..."
ನಾನು ಕನಿಕರದಿಂದ ಲೊಚಗುಟ್ಟುತ್ತಾ "ಕೊಡಬೇಕಾದ್ದೆ , ಕೊಡಬೇಕಾದ್ದೆ....ಇನ್ನು ಬೋಳಿಸಿಕೊಳ್ಳದೆ ಹಾಗೆ ಉಳ್ಕೊಂಡಿದ್ರೆ...ಪಾಪ, ಪಾಪ..."ಎಂದೆ.
" ಹಾಳಾಗ್ಲಿ ಆ ವಿಷಯ...ನನಗೆ ಮೈಯೆಲ್ಲಾ ಜಡ್ಡು ಹಿಡಿದಂತಾಗಿ ಹೋಗಿದೆ ಸಾರ್..ಐ ರಿಯಲಿ ನೀಡ್ ಏ ಬ್ರೇಕ್....ಇ ವೀಕೆಂಡಲ್ಲಾದರೂ ಮೀಟ್ ಮಾಡೋಣ್ವ ಅಂತ ಕೇಳೋಕೆ ಪೋನ್ ಮಾಡಿದೆ ಸಾರ್...."
"ಈಟು ಮೀಟು ಅಂದ್ರೆ ಇನ್ನೇನ್ ಮಾಮೂಲಿ ಲಿಟಲ್ ಇಂಡಿಯಾದಲ್ಲಿ ತಾನೆ?" ಎಂದೆ
" ಬೇಡಾ ಸಾರ್..ಈ ಜಡ್ಡಿಗೆ ಆ ಮಾಮೂಲಿ ಜಾಗ ಸರಿ ಹೋಗಲ್ಲಾ...ಎಲ್ಲಾದ್ರು ಬೇರೆ ಕಡೆ ಸ್ವಲ್ಪ ರಿಲ್ಯಾಕ್ಸಿಂಗ್ ಆಗಿರೊ ಜಾಗ ಹೇಳಿ ಸಾರ್..."
" ರಿಲ್ಯಾಕ್ಸಿಂಗ್ ಬೇಕೂಂದ್ರೆ - 'ಸರ್ವಿಸ್ ಇಂಡಸ್ಟ್ರಿನೆ' ಹುಡುಕ್ಕೋಂಡು ಹೋಗ್ಬೇಕಾಗುತ್ತೆ...ಹೌ ಅಬೌಟ್ ಥಾಯ್ ಮಸಾಜ್ ಫಾಲೊಡ್ ಬೈ ಊಟಾ?" ಅಂತ ಅಣಕಿಸಿದೆ.
"ಸಾರ್..ನಿಮಗ್ಯಾವಾಗ್ಲೂ ಜೋಕೆ...ಮಸಾಜು ಅದೂ ಇದೂ ಅಂತ ಹೋದ್ರೆ ಅಲ್ಲೆ ಟೈಮ್ ಹೋಗ್ಬಿಡುತ್ತೆ...ಮಾತಾಡೋಕೆ ಟೈಮು ಸಿಗಲ್ಲ...ಅದೂ ಅಲ್ದೆ ಇದು ಸಿಂಗಾಪುರ ಸಾರ್...ಥಾಯ್ ಗರ್ಲ್ಸ್ ಮಸಾಜು ಮಾಡುದ್ರು, ರೇಟು ಸಿಂಗಾಪುರಾನೆ ಇರುತ್ತೆ.......ಅದರ ಬದ್ಲು ಬೇರೆ ಏನಾದ್ರೂ ಐಡಿಯಾ ಇದ್ರೆ ಹೇಳಿ, ಸದ್ದು ಗದ್ದಲ ಇಲ್ದೆ ನೆಮ್ಮದಿಯಾಗಿರೊ ಅಂತದ್ದು...."
" ಸರಿ ಗುಬ್ಬಣ್ಣ ಒಂದು ಕೆಲಸ ಮಾಡಿಬಿಡೋಣ.....ಸ್ವಲ್ಪ ಬೆಳಿಗ್ಗೆ ಬೇಗ ಹೊರಟು ಬಾ..ಆರ್ಚಡ್ ಕಂಟ್ರಿ ಕ್ಲಬ್ಬಿಗೆ ಹೋಗೋಣ..ನಾನು ಹೇಗೂ ಅಲ್ಲೆ ಮೆಂಬರು...ಬೆಳಿಗ್ಗೆ ಯಾರೂ ಇರಲ್ಲ..ಆರಾಮಾವಾಗಿ 'ತಂಪು ಬೀರು' ಹಾಕ್ತಾ ಮಾತಾಡ್ಬೋದು...ಪರಮಾತ್ಮ ಜತೆ ಇದ್ರೆ ಮಾತಿಗೂ ಸರಾಗ "
ಗುಬ್ಬಣ್ಣ ಆಗಲೆ ಕಿಕ್ ಹೊಡೆದವನಂತೆ," ಅದು ಗ್ರೇಟ್ ಐಡಿಯಾ ಸಾರ್....ನನಗೂ ಬಾಯೆಲ್ಲ ಒಣಗಿ, ನಾಲಿಗೆ ಕೆಟ್ಟು ಕೆರ ಆದ ಹಾಗೆ ಆಗ್ಬಿಟ್ಟಿದೆ....ಸ್ವಲ್ಪ 'ಬೀರ್ನೀರೆ' ಹರಿದರೆ ಸರಿ ಹೋಗ್ಬಹುದೊ ಏನೊ...ಆ ಕ್ಲಬ್ಬು ಇರೋದು ಯಿಶೂನ್ ಹತ್ರ ಅಲ್ವಾ..."
" ಹೌದು...ಎನಿವೆ, ನೀನು ರೆಡಿಯಾಗಿ ನಮ್ಮ ಮನೆಗೆ ಬಾ...ಅಲ್ಲಿಂದ ಒಟ್ಟಿಗೆ ಹೋಗೋಣ..ಹುಡುಕಾಡೊ ತಾಪತ್ರಯ ಇರೊಲ್ಲ"
"ಸರಿ ಸಾರ್..ನಿಮ್ಮ ಹತ್ರ ಪೋನಲ್ಲಿ ಮಾತಾಡೆ ಎಷ್ಟೊ ನಿರಾಳವಾಯ್ತು....ಒಂದು ಒಳ್ಳೆ ಬ್ರೇಕ್ ಮಾಡಿಕೊಂಡು ಬ್ಯಾಚಲರ ಪಾರ್ಟಿ ಮಾಡಿಕೊಂಡುಬಿಡೋಣ...ನನಗೂ ನಿಮಗೆ ಹೇಳೋಕೆ ಸುಮಾರು ವಿಷಯ ಇದೆ... ವಿಶೇಷವಾಗಿ ನಮ್ಮ ನೆಂಟರ ಯುನಿವಸಲ್ ಗಂಡಾಗುಂಡಿ ಹಾವಳಿ..."
"ಏನು ದೊಡ್ಡ ದಾಂಧಲೇನೆ ಮಾಡಿರೊ ಹಾಗಿದೆ...ಸರಿ ಎಲ್ಲಾ ಮಾತಾಡುವ...ಯಾರಿಗ್ಗೊತ್ತು..ನನ್ನ ಮುಂದಿನ ಕಥೆಗೆ ಅವೆ ಸ್ಪೂರ್ತಿ ಯಾಗುತ್ತೊ ಏನೊ!"ಎಂದೆ.
"ಕಥೆಯಾಗುತ್ತೊ ಬಿಡುತ್ತೊ....ಕಥೆ ಅಂದಾಗ ನೆನಪಾಯ್ತು...ನಿಮ್ಮ ಕನ್ನಡ ಸಂಘ ಪ್ರೋಗ್ರಾಮ್ ಇವೇಂಟ್ ರಿಪೋರ್ಟು ಚೆನ್ನಾಗಿ ಬಂದಿದೆ ಸಾರ್...ಆನ್ಲೈನ್ ನ್ಯೂಸಲಿ ಓದಿದೆ... ನಮ್ಮ ಫ್ರೆಂಡ್ಸು ಕೂಡ ಓದಿ ಲೈಕ್ ಮಾಡಿದ್ರು ಸಾರ್"
" ಏನು ಗುಬ್ಬಣ್ಣ ಮಸ್ಕಾ ಹೊಡಿತಿರೊ ಹಾಗಿದೆ? ಏನೂ ಅಜೆಂಡಾ ಇಲ್ಲ ತಾನೆ?"
" ಬಿಡ್ತು ಅನ್ನಿ ಸಾರ್..ಮಸ್ಕಾನೂ ಇಲ್ಲ , ಮಸ್ಕಾರನೂ ಇಲ್ಲ ..ಇರೊ ವಿಷ್ಯ ಹೇಳ್ದೆ ಅಷ್ಟೆ.....ಯಾಕ್ ಸಾರ್..ನಿಮಗೆ ಗೊತ್ತಾಗಿರಬೇಕಲ್ಲ ಅವತ್ತು ಪ್ರೊಗ್ರಮ್ ಎಷ್ಟು ಚೆನ್ನಾಗಿ ನಡೀತು ಅಂತ...ನಿಮ್ಮ ಕವನಕ್ಕೂ ಜನ ಚಪ್ಪಾಳೆ ತಟ್ಟಿದ್ರೊ ಇಲ್ವೊ..? ಅದೂ ಅಲ್ದೆ ಈ ಸಾರಿ ಯಾವ ಟಿಕೆಟ್ಟಿಗ್ಗು ಪ್ರಮೊಶನ್ನು ಇಲ್ಲಾ..ಜಿನೈನು ಫೀಡುಬ್ಯಾಕಷ್ಟೆ ಸಾರ್" ಎಂದ ಕನ್ನಡ ಸಂಘದ ಯುನಿವರ್ಸಲ್ ಟಿಕೆಟ್ಟು ಎಪಿಸೋಡ್ ನೆನಪಿಸುತ್ತ.
ನಾನು ಒಳಗೊಳಗೆ ಉಬ್ಬುತ್ತಾ, ಆದರೂ ಹೊರಗೆ ತೋರ್ಪಡಿಸಿಕೊಳ್ಳದೆ, " ಕನ್ನಡಿಗರ ಚಪ್ಪಾಳೆ ವಿಷಯ ಬಿಡೊ...ಅವರ ಹೃದಯ ವೈಶಾಲ್ಯವೆ ಅಂತದ್ದು..ಚೆನ್ನಾಗಿ ಇರಲಿ, ಇಲ್ದೆನೂ ಇರಲಿ 'ಕರ್ಟೇಸಿ'ಗಾದ್ರು ಚಪ್ಪಾಳೆ ತಟ್ಟೆ ತಟ್ತಾರೆ..."
"ಅಷ್ಟೊಂದು ಜನರಲ್ಲಿ ಕೆಲವರಾದ್ರೂ ಕವಿತೆ ಇಷ್ಟ ಪಡೋರು ಖಂಡಿತ ಎಂಜಾಯ್ ಮಾಡಿರ್ತಾರೆ ಬಿಡಿ ಸಾರ್..ನನಗಂತೂ ಇಷ್ಟವಾಯ್ತು..ಎಲ್ಲ ಸೇರಿಸಿ ಕ್ಲಬ್ಬಿನಲ್ಲೆ ಸೆಲೆಬ್ರೇಟು ಮಾಡಿಬಿಡೋಣ ಬಿಡಿ ಸಾರ್" ಎಂದವನೆ ಹೊಗಳಿಕಾ ಕಾಂಡವನ್ನು ಅಷ್ಟಕ್ಕೆ ಕತ್ತರಿಸಿ, 'ಬೈ ಬೈ' ಹೇಳಿ ಪೋನಿರಿಸಿದ - "ಮೊದಲೆ ಕ್ಲಬ್ಬಿನಲ್ಲಿ ಬುಕ್ಕಿಂಗ್ ಮಾಡಿಬಿಡಿ ಸಾರ್" ಎಂದೇಳಲು ಮರೆಯದಂತೆ ಜ್ಞಾಪಿಸಿಕೊಂಡು.
*************************************************************************************************************
ಮುಂದಿನ ವಾರದ ಕೊನೆಗೆ ಪ್ಲಾನಿಗನುಸಾರ ಗುಬ್ಬಣ್ಣ ಮನೆಯ ಹತ್ತಿರ ಬಂದ..ಪಾಪ ಕೊಂಚ ಇಳಿದು ಹೋದಂತೆ ಕಂಡ. ಗಡ್ಡ, ಮೀಸೆನೂ ತೆಗೆಸದೆ ಬಂದವನನ್ನು " ಏನಯ್ಯಾ, ಶೇವಿಂಗಿಗೂ ಟೈಮ್ ಇಲ್ವಾ...ಇಲ್ಲೆ ಮಾಡ್ಕೋತೀಯಾ, ಶೇವಿಂಗ್ ಬ್ಲೇಡ್ ಕೊಡ್ಲಾ....?" ಎಂದೆ ಛೇಡನೆಯ ದನಿಯಲ್ಲಿ. ಅದರರಿವಾದರೂ ವಿಚಲಿತನಾಗದವನಂತೆ "ಅಯ್ಯೊ..ಇನ್ನೆರಡು ದಿನ ಕಳೆಯೊವರೆಗಾದ್ರೂ ಸುಮ್ಮನಿರಿ ಸಾರ್....ಈ ಕೊನೆ ಬ್ಯಾಚು ಹೊರಡೋಕೆ ಸಿದ್ದವಾಗಿ ನಿಂತಿದ್ದಾರೆ...ಅವರು ಹೊರಟ ತಕ್ಷಣ ಇದೆ ಮೊದಲ ಕೆಲಸ..."
"ಓಹೊ...ಅಂದರೆ ಇದು ದೇವದಾಸ್ ಸೋಗು ಹಾಕಿರೋದು , ಇಂಟೆನ್ಶನಲಿ ಅನ್ನು..."
ಇಬ್ಬರೂ ಅಲ್ಲಿಂದ ಒಟ್ಟಿಗೆ ಹೊರಟು ಕ್ಲಬ್ಬಿನತ್ತ ಬಸ್ಸು ಹತ್ತಿದೆವು. ಸುಮಾರು ಅರ್ಧಗಂಟೆಯ ದಾರಿಯಾದ್ದರಿಂದ ಮಾತಾಡಿಕೊಂಡು ಹೊಗಲಿಕ್ಕೆ ಸಾಕಷ್ಟು ಸಮಯವೂ ಇತ್ತು, ಸೀಟುಗಳೂ ಖಾಲಿಯಿತ್ತು. ಅಲ್ಲಿ ಕೂತಾಗಲಿಂದಲೆ ಶುರುವಾಯ್ತು ನಮ್ಮ ಸಂಭಾಷಣೆ.
" ಹೂಂ...ಈಗ ಶುರು ಮಾಡಪ್ಪ..ನಿನ್ನ ನೆಂಟರ ಭಾಗವತ, ರಾಮಾಯಣ, ಮಹಾಭಾರತ..."
"ಇದು ಅದೆಲ್ಲಕ್ಕೂ ಮಿಕ್ಕಿದ್ದು ಸಾರ್..ಹೊಸ ಹೆಸರೆ ಕೊಟ್ಟು ಕರಿಬೇಕೊ ಏನೊ....'ಮಹಾಭಾಗವತಭಾರತಾಯಣ' ಅಂತಲೊ 'ಗುಬ್ಬಣ್ಣ ಭಾಗವತರ ಮಹಾಭಾರತಾಯಣ' ಅಂತಲೊ. ಸದ್ಯ ಅರಬಿಯನ್ ನೈಟ್ಸ್ ಅಂದ ಹಾಗೆ 'ಗುಬ್ಬಣ್ಣನ ನೈಟ್ಸ್' ಅನ್ನದಿದ್ರೆ ಸರಿ..."
" ಏನಾದರೂ ಕರ್ಕೊ...ಈ ಆಸ್ಪತ್ರೆ ಗಿಸ್ಪತ್ರೆ ಹುಚ್ಚಾಟದಲ್ಲಿ ನೀನು ಹುಚ್ಚು ಹಿಡಿದು ಹುಚ್ಚಾಸ್ಪತ್ರೆ ಸೇರದಿದ್ರೆ ಸರಿ..." ಎಂದೆ ಮತ್ತೆ ರೇಗಿಸುವ ದನಿಯಲ್ಲಿ..
" ಒಂದು ತರ ಹುಚ್ಚಲ್ಲ ಸಾರ್..ಭಯಂಕರ ಮನೋವ್ಯಾಧಿ ಅನ್ನಿ...ಅದೇನೊ ಅಂತಾರಲ್ಲ 'ಹುಚ್ಚಲ್ಲ ಬೆಪ್ಪಲ್ಲ ಎಲ್ಲಾ ಶಿವಲೀಲೆ' ಅಂಥ...ಹಾಗೇನೆ ಇದೂವೆ..."
"ಅದಿರ್ಲಿ ನಿಮ್ಮ ಕ್ರಿಕೆಟ್ಟು ಟೀಮಿನ ಯುನಿವರ್ಸಲ್ ದಂಡಯಾತ್ರೆ ಹೇಗಿತ್ತಪ್ಪಾ? ನೀನೂ ಜತೆ ಹೋಗಿ ಏಂಜಾಯ್ ಮಾಡಿರಬೇಕಲ್ಲಾ?"
" ಅಲ್ಲಿಂದ್ಲೆ ಅಲ್ವೆ ಸಾರ್..ಈ ಮಹಾನ್ ಹುಚ್ಚು ಹೆಚ್ಚಾಗೋಕೆ ಶುರುವಾಗಿದ್ದು....ಅದನ್ನ ಹೇಳೊಕೋದ್ರೆ ಅದೆ ಒಂದು ಕಾವ್ಯ ಶಾಕುಂತಲವಾಗುತ್ತೆ ಸಾರ್.."
"ಸರಿ ಹಾಗಾದ್ರೆ ಅದನ್ನೆ ಮೊದಲು ಹೇಳಿಬಿಡು....ನೋಟ್ಸ್ ಬರೆದಿಟ್ಟುಕೊಂಡುಬಿಡ್ತೀನಿ.... ಯಾರಿಗೆ ಗೊತ್ತು...ಅದೆ ಹಿಟ್ ಸ್ಟೋರಿಲೈನ್ ಆಗೋಗುತ್ತೊ ಏನೊ...ಆದ್ರೆ ಗದ್ಯದಲ್ಲೆ ಹೇಳು, ಪದ್ಯದಲ್ಲಿ ಬೇಡ...ಮುದ್ದಣ್ಣನೆ ಹೇಳಿಬಿಟ್ಟಿದ್ದಾನೆ 'ಗದ್ಯ ಹೃದ್ಯಂ..ಪದ್ಯಂ ವಧ್ಯಂ'...."
" ಏನಾದ್ರೂ ಮಾಡ್ಕೊಳ್ಳಿ ಸಾರ್..ನಾನಂತೂ ಯಾರತ್ರನಾದ್ರೂ ಹೇಳ್ಕೊಳ್ದಿದ್ರೆ ಆ ಪ್ರೆಷರಿಗೆ ಕುಕ್ಕರು ತರ ಎಲ್ಲಿ ಎಕ್ಸ್ ಪ್ಲೊಡು ಆಗಿಬಿಡ್ತೀನೋ ಅಂತ ಭಯವಾಗುತ್ತೆ ಸಾರ್...ನಮ್ಮ ಪ್ರಾಜೆಕ್ಟು ಮ್ಯಾನೇಜರು ತುಂಬಾ ಒಳ್ಳೆಯವರು, ನನ್ನ ಕಂಡ್ರೆ ಎಷ್ಟು ಗೌರವ, ಮರ್ಯಾದೆ ಕೊಡ್ತಾ ಇದ್ರೂ...ಅಂತಹವರೂ ಮೊನ್ನೆ ಪೋನಲ್ಲಿ ಕರೆದು, ಚೆನ್ನಾಗಿ ಬೈದು ಉಗಿದು ಉಪ್ಪಿನ ಕಾಯಿ ಹಾಕಿಬಿಟ್ರು ಗೊತ್ತಾ?...ಇದುವರ್ಗು ನನ್ನ ಕಡೆ ಬೆರಳೆತ್ತೂ ತೋರಿಸಿದೋರಲ್ಲಾ ಅವರು....ಅವರ ಕೈಲೂ ಬೈಸಿಕೊಳ್ಳೊ ಹಂಗಾಗೋಯ್ತು ಈ ಗುಲಾಮಗಿರಿಯಿಂದಾಗಿ....ನಾನಂತೂ ಈ ಆಸ್ಪತ್ರೆ ಓಡಾಟ, ಆಫೀಸು ಆಸ್ಪತ್ರೆ ಬೆಂಡು, ಇನ್ಶೂರೆನ್ಸಿಲ್ಲದ ಪ್ರಯಾಣ ಎಲ್ಲಾ ಸೇರ್ಕೊಂಡು ಪೂರ್ತಿ ಬರ್ಬಾದ್ ಆಗ್ಬಿಟ್ಟಿದೀನಿ ಸಾರ್..."
"ಹೋಗಲಿ ಸಮಾಧಾನ ಮಾಡಿಕೊ ಗುಬ್ಬಣ್ಣ....ಆಗಿದ್ದಾಯ್ತು. ನೀನು ಹೇಳಿದ್ದೆಲ್ಲ ಕನಿಷ್ಟ ಕೇಳಿಸ್ಕೊಳ್ಳೊಕಾದ್ರು ನಾನಿಲ್ವ...? ಬೇಕೂಂದ್ರೆ ನೀ ಹೇಳಿದ್ದೆಲ್ಲಾ ಸೇರಿಸಿ ಒಂದು ಕಥೆ ಬರಿತೀನಿ.. ಅವರೆಲ್ಲಾರ್ಗು ಒಂದೊಂದು ಕಾಪಿ ಕಳಿಸಿ ಸೇಡು ತೀರಿಸಿಕೊಳ್ಳೊವಂತೆ...."
"ಅಯ್ಯೊ...ಅವರೆಲ್ಲಾ ಮಹಾನ್ ಭಯಂಕರ ಎಮ್ಮೆ ಚರ್ಮ ಸಾರ್...ಅಷ್ಟು ಸೂಕ್ಷ್ಮ ಎಲ್ಲಾ ಎಲ್ಲಿಂದ ಬರ್ಬೇಕು? ಒಂದು ವೇಳೆ ಇದ್ರೂನು ಯಾರೂ ಕೇರು ಮಾಡಲ್ಲ....ನಾವು ಕಳಿಸಿದ್ದ ಪೇಪರ ವೇಷ್ಟಾಗಿ ಕ.ಬು. ಸೇರುತ್ತಷ್ಟೆ....."
"ಅದೆಲ್ಲ ಇರಲಪ್ಪಾ.. ಈಗ ವಿಷಯಕ್ಕೆ ಬಾರಪ್ಪ...ನಿನ್ನ ಯುನಿವರ್ಸಲ್ ಕಥಾನಕನೂ ಏನಾಯ್ತು ಅಂತ ಹಚ್ಚಿಕೊಂಡುಬಿಡು ಪುರಾಣಾನ..." ನಾನು ಮತ್ತೆ ಟ್ರಾಕಿನತ್ತ ಪೆಡಲ್ ತುಳಿದೆ..
" ಒಟ್ಟಿಗದು ಎರಡು ಪುರಾಣ ಸಾರ್...ಎಪಿಸೋಡ್ ಒಂದು 'ಯುನಿವರ್ಸಲ್ಲು', ಎಪಿಸೋಡ್ ಟೂ ಬಂದು 'ಹಾಸ್ಪಿಟಲ್ಲು'...."
" ಸರಿ ಎಪಿಸೋಡು ಒಂದರಿಂದಲೆ ಶುರುವಾಗಲಿ ಕಥಾನಕ...." ನಡುವೆ ನನ್ನ ಸೈಕಲ್ ಬೆಲ್ಲು...
" ಹಾಗೂ ಹೀಗೂ ಭಯಂಕರ ಗುದ್ದಾಡಿ ಹನ್ನೆರಡು ಟಿಕೆಟ್ಟೆನೊ ಹೊಂಚಿದ್ವಲ್ಲ ಸಾರ್...ಅದನ್ನ ತಗೊಂಡು ಹೋಗಿ ಅವರ ಕೈಗಿಟ್ಟುಬಿಟ್ಟು ಒಂದು ಸಾಷ್ಟಾಂಗ ನಮಸ್ಕಾರ ಹೊಡೆದುಬಿಟ್ಟೆ..."
"ಹೊಡಿಬೇಕಾದ್ದೆ....ಮತ್ತೆ...."
"ಅವರಿದ್ದುಕೊಂಡು, 'ಎಂತಾ ದೇವರಂಥಾ ಮನುಷ್ಯ ನೀನು ಗುಬ್ಬಣ್ಣ...ಇಂತಾ ತುಟ್ಟಿ ಕಾಲದಲ್ಲೂ ನಮ್ಮನ್ನೆಲ್ಲಾ ಇಲ್ಲಿಗೆ ಕರೆಸಿಕೊಂಡು ರಾಜೋಪಚಾರ ಮಾಡಿದ್ದು ಅಲ್ದೆ ಇಲ್ಲಿ ಎಲ್ಲಾ ನೋಡಬೇಕಾದ ಜಾಗಾನೆಲ್ಲ ತೋರಿಸಿ ನಮ್ಮನ್ನ ತುಂಬಾ ದೊಡ್ಡ ಋಣಕ್ಕೆ ಸಿಕ್ಕಿಸ್ತಿದ್ದಿಯಲ್ಲಪ್ಪ...' ಅಂತ ಬೇರೆ ರಾಗಾ ಎಳೆದರು, ಕೇಳಿಬಿಟ್ರೆ ದುಡ್ಡು ಕೊಟ್ಟೆಬಿಡ್ತಿದ್ರೇನೋ ಅನ್ನೊ ತರದಲ್ಲಿ..." ಎಂದವನೆ ಕಟಕಟನೆ ಹಲ್ಲು ಕಡಿದ ಗುಬ್ಬಣ್ಣ.
ಅಂದ ಹಾಗೆ ಮಾತು ಮಾತಿಗೂ 'ಅಯ್ಯೊ ಸಾರ್, ಅಯ್ಯೊ ಸಾರ್' ಅನ್ನೋದು ಗುಬ್ಬಣ್ಣನಿಗೆ ಚಿಕ್ಕಂದಿನಿದಲೂ ಬಂದ ಅಭ್ಯಾಸ..ಬೇಕಿರಲಿ ಬಿಡಲಿ ಎಲ್ಲಾದಕ್ಕೂ 'ಅಯ್ಯೊ' ಸೇರಿಸ್ತಾ ಇರ್ತಾನೆ ಅಂತ ಯಾರೊ ಅವನಿಗೆ 'ಅಯ್ಯೊ ಗುಬ್ಬಣ್ಣಾ.." ಅಂತಾನೆ ಅಡ್ಡ ಹೆಸರು ಇಟ್ಟುಬಿಟ್ಟಿದ್ರು ಸ್ಕೂಲ್ ಡೇಸಲ್ಲೆ. ಅದು ಹೆಚ್ಚುಕಡಿಮೆ ಶಾಶ್ವತವಾಗಿ ನಿಂತುಹೋಯ್ತು. ಸಿಂಗಪುರದಲ್ಲಿ ಆ ಸೀಕ್ರೇಟ್ ಗೊತ್ತಿರೊನು ಬಹುಶಃ ನಾನೊಬ್ನೆ ಅಂತ ಕಾಣುತ್ತೆ, ಹೀಗಾಗಿ ಗುಬ್ಬಣ್ಣ ಬಚಾವ್..! ಹಾಗೆ ಅವನ ಮತ್ತೊಂದು ಅಭ್ಯಾಸ - ಕಟ ಕಟ ಹಲ್ಲು ಕಡಿಯೋದು..! ಇದು 'ಅಯ್ಯೊ' ಅನ್ನೊಷ್ಟೂ ಇಲ್ದೆ ಇದ್ರೂ, ತಮಾಷೆಗೆ ನಾವೆಲ್ಲ 'ಹಲ್ಕಟ್ ಹಲ್ಕಟ್ ಗುಬ್ಬಣ್ಣ ' ಅಂತ ರೇಗಿಸಿ ಗೋಳು ಹುಯ್ಕೋತಾ ಇದ್ವಿ...ಈಗದೆಲ್ಲ ಹಳೆ ಕತೆ ಬಿಡಿ.
ಗುಬ್ಬಣ್ಣ ಆವತ್ತು ಯುನಿವರ್ಸಲ್ನಲ್ಲಿ ನಡೆದ ಸಂಭ್ರಮವನ್ನು ವರ್ಣಿಸುತ್ತಾ ಇದ್ದರೆ ಕೇಳೋಕೇನೊ ಮನೋಹರವಾಗಿ, ಉಲ್ಲಾಸದಾಯಕವಾಗಿ ಇದ್ರು, ಅದೆಲ್ಲ ಸಂಭಾಳಿಸೋಕೆ ಅವನು ಪಟ್ಟ ಪಾಡಿಗೆ 'ಅಯ್ಯೊ ಪಾಪ! ಬಡಪಾಯಿ ಗುಬ್ಬಣ್ಣ' ಅಂಥ ಕನಿಕರವೂ ಆಯ್ತು. ಪಾಪ ಚೆನ್ನಾಗಿ ಅಲ್ಲಾಡಿಸಿ, ಚೆಲ್ಲಾಡಿಸಿಬಿಟ್ಟಿದ್ದರು ಅವನನ್ನ - ಮೇಲಿಂದ ಕೆಳಗಿನ ತನಕ. ಸದ್ಯ ಟಿಕೆಟ್ಟು ಸಿಕ್ಕಿತಲ್ಲ ಅನ್ನೊ ಖುಷಿಯಲ್ಲಿ ಗುಬ್ಬಣ್ಣನೇನೊ ಡಜನ್ ಟಿಕೆಟ್ಟಿನ ಜತೆಲಿ ಫ್ರೀಯಾಗಿ ಸಿಕ್ಕಿದ್ದ ಹತ್ತತ್ತು ಡಾಲರು 'ಪುಡ್ ಕೂಪನ್ನನ್ನು' ಸೇರಿಸಿಯೆ ಹಂಚಿದ್ದ - ಅದರ ನಿಜವಾಗಿ ತೆತ್ತ ಬೆಲೆಯನ್ನು ಅವರಿಗೆಲ್ಲಾ ಹೇಳದೆಯೆ. ಅವರೆಲ್ಲ ಅದರ ಮುಖಬೆಲೆ ಎಪ್ಪತೈದೆಪ್ಪತೈದು ಡಾಲರು ಅಂದಾಗ, " ಏನೂ, ಎರಡು ಬೆರಳಗಲಾನೂ ಇಲ್ಲದ ಚೀಟಿಗೆ ಮೂರುವರೆ ಸಾವಿರ ರೂಪಾಯಿನಾ.... ರಾಮ್ರಾಮಾ! ಬಿಡಿಬಿಡಿ ನಾವೆ ಹೋಗೋದಾಗಿದ್ರೆ ಜಪ್ಪಯ್ಯ ಅಂದ್ರು ಇಷ್ಟೊಂದು ದುಡ್ಡು ಕೊಟ್ಟು ಹೋಗ್ತಾ ಇರಲಿಲ್ಲ..." ಅಂದ್ರಂತೆ. "..'ಹೌದಲ್ವೆ ಮತ್ತೆ ? ಯಾರದೊ ರೊಕ್ಕ ಎಲ್ಲಮ್ಮನ ಜಾತ್ರೆ...ಕಾಸು ಕೊಡೋನು ನಾನು, ಮಜಾ ಮಾಡೋಕೆ ಪಾಪ! ಕಷ್ಟಾನ ನಿಮಗೆ?' - ಅಂತ ಮನಸ್ನಲ್ಲೆ ಬೈಕೊಂಡೆ ಸಾರ್ "- ಅಂದ ಗುಬ್ಬಣ್ಣ.
"ಸದ್ಯ ಡಿಸ್ಕೌಂಟೆಡ್ ಟಿಕೆಟ್ಟು ಅಂತ ಹೇಳ್ದೆ ಒಳ್ಳೇದೆ ಮಾಡ್ದೆ ಬಿಡು...ಇಲ್ಲಾಂದ್ರೆ, ಯಾವ್ದೊ ಧರ್ಮದ ಟಿಕೆಟ್ ತಂದುಕೊಟ್ಟುಬಿಟ್ಟಿದಾರೆ, ಅಂತ ಅದಕ್ಕು ಒಂದು ಕೊಂಕು ಹಾಕಿರ್ತಿದ್ರೊ ಏನೊ..."
"ಅವರ ಕೊಂಕಿನ ಮನೆ ಹಾಳಾಯ್ತು ಸಾರ್..ಟಿಕೆಟ್ಟು ಜತೆಗೆ ಕವಳಕ್ಕೂ ಸೇರಿಸಿ ಕೊಟ್ಟ ಮೇಲೆ ಬಾಯ್ಮುಚ್ಕೊಂಡು ತೆಪ್ಪಗೆ ಹೋಗ್ಬೇಕು ತಾನೆ? "
" ಮತ್ತೇನಂತೆ ಕಥೆ? ಜತೆಗೆ ಎಸ್ಕಾರ್ಟೊಬ್ಬರು ಬರಬೇಕೂಂದ್ರಾ...?"
" ನೋಡಿದ್ರಾ ಸಾರ್.. ಅವರ ಕ್ರಿಮಿನಲ್ ಮೈಂಡ್ನ ಎಷ್ಟು ಚೆನ್ನಾಗಿ ತಿಳ್ಕೊಂಡ್ಬಿಟ್ಟಿದ್ದಿರಾ...ಒಬ್ಬಾ ಕ್ರಿಮಿನಲ್ಗೆ ಇನ್ನೊಬ್ಬ ಕ್ರಿಮಿನಲ್ನ ಮೈಂಡು ಗೊತ್ತಾಗೋದು ಸಾರ್...ನಾನೊ ಇಲ್ಲಾ ನನ್ನ ಹೆಂಡ್ತಿನೊ ಜತೆಗೋಗ್ಲೆ ಬೇಕಂತೆ ಸಾರ್...ಅವರಿಗೆ ಇಲ್ಲೆಲ್ಲಾ ಭಾಳ ಭಯವಾಗುತ್ತಂತೆ ಇಲ್ಲಿಯವರ ಜತೆಯಿಲ್ದೆ ಓಡಾಡಕೆ...!"
ಗುಬ್ಬಣ್ಣ ಏನು ನನ್ನ ಗೆಸ್ಸಿಂಗನ್ನ ಹೊಗಳ್ತಾ ಇದಾನೊ, ಇಲ್ಲಾ ಕ್ರಿಮಿನಲ್ ಅಂತಾ ಬೈಯ್ತಾ ಇದಾನೊ ಗೊತ್ತಾಗಲಿಲ್ಲ....ಸರಿ ಹಾಳಾಗಲಿ ಜೋಶಿನಲ್ಲಿದಾನೆ, ತಡೆಯೋದು ಬೇಡಾ ಅನಿಸಿ,"ಸರಿ..ಸರಿ.. ಕಥೆ ಗೊತ್ತಾಯ್ತು ಬಿಡು...ಬೇರೆ ದಾರಿಯಿಲ್ದೆ ನಿನ್ನ ಹೆಂಡ್ತೀನೂ ಅವ್ರ ಜತೆ ಗಂಟಾಕಿ ಕಳ್ಸೊ ಸ್ಥಿತಿ ಬಂತೂನ್ನು..?"
"ಅಷ್ಟು ಮಾತ್ರ ಅಲ್ಲಾ ಸಾರ್....ಈಗ ತಾನೆ ಪರೀಕ್ಷೆ ಮುಗ್ಸಿ ರಜೆದಲ್ಲಿರೊ ನನ್ನ ಮಗಳೂ ಮೂಲೆಲಿ ಮುಖ ಊದಿಸಿಕೊಂಡು ನಿಂತಿದ್ಲು...."
"ಯಾಕಂತೆ...? ಅವ್ಳ್ ಹೋಗ್ಬೇಕಂತಲಾ? ಸರಿ, ಅವಳ್ನೆ ಜತೆ ಹಾಕಿ ಕಳಿಸಿದ್ರಾಗಿತ್ತಲ್ಲಾ?"
" ಅವಳೂ ಆರು ತಿಂಗಳಿಂದ್ಲೆ ಯುನಿವರ್ಸಲ್ಲಿಗೆ ಕರ್ಕೊಂಡೋಗಪ್ಪ, ಕರ್ಕೊಂಡೋಗಪ್ಪ ..ನನ್ನ ಫ್ರೆಂಡ್ಸೆಲ್ಲಾ ಆಗ್ಲೆ ಎರಡೆರಡು ಮೂರ್ಮೂರು ಸಾರಿ ನೋಡ್ಬಿಟ್ಟಿದ್ದಾರೆ...ನಾನೊಬ್ಳೆ ಇನ್ನೂ ನೋಡ್ದೆ ಇರೋ ಪ್ರಾಣಿ ಆ ಗುಂಪಲ್ಲಿ ...ಎಲ್ಲಾ ರೇಗಿಸ್ತಾರೆ" ಅಂತ ಒಂದೆ ಕಣ್ಣಲ್ಲಿ ನೀರು ಹಾಕ್ತಾನೆ ಇದ್ಲು...ನಾನೂನು, ಬಿಜಿಯಿದ್ದೀನಿ ಬಂಗಾರಾ, ಪ್ರಾಜೆಕ್ಟಿದೆ ಈಗ, ಮುಂದಿನ ರಜೆಗ್ಹೋಗೋಣ " ಅಂತ ತಳ್ತಾನೆ ಬಂದಿದ್ದೆ. ಈಗ ನೋಡಿದ್ರೆ 'ದಾನ ಶೂರ ಕರ್ಣನ' ಹಾಗೆ ಚೀಪಾಗಿ ಸಿಕ್ಕಿದ ಟಿಕೆಟ್ಟಿನಲ್ಲೂ ಹೆಂಡ್ತಿ, ಮಕ್ಕಳ್ನ ಕರ್ಕೊಂಡು ಹೋಗ್ದೆ, ಯಾರ್ಯಾರ್ಗೊ ದಾನ ಮಾಡಿ, 'ಮನೆಗೆ ಮಾರಿ, ಪರರಿಗೆ ಉಪಕಾರಿ'ಆಗ್ತಾ ಇದಾನೆ ನಮಪ್ಪ...ಅಂತ ಅವರಮ್ಮನ ಹತ್ರ ಗೋಳಾಡಿದ್ಲಂತೆ ಸಾರ್..."
" ಅವಳು ಹೇಳೋದು ನ್ಯಾಯವಾಗೆ ಇದೆಯಲ್ಲಯ್ಯ...ಅದೇನೆ ಇರ್ಲಿ..ಒಂದು ವಿಷಯಕ್ಕೆ ನೀನು ಖುಷಿ ಪಡ್ಬೇಕು ನೋಡು...ಇಂಥಾ ಊರಲ್ಲಿ ಹುಟ್ಟಿ ಬೆಳೆದ್ರೂ, ಎಷ್ಟು ಚೆನ್ನಾಗಿ ಗಾದೆ ಮಾತು ಕಲ್ತ್ಕೊಂಡು ಅರ್ಥ ಮಾಡ್ಕೊಂಡು ಸರಿಯಾಗಿ ಉಪಯೋಗಿಸಿದಾಳೆ ನೋಡು...ಕನ್ನಡಕ್ಕೆ ಇದು ಹೆಮ್ಮೆ ಪಡೊ ವಿಷ್ಯ ಅಲ್ವೇನಯ್ಯಾ?" ಅಂಥ ನಾನು ನಯವಾಗೆ ಕ್ರಿಮಿನಲ್ ಪದಕ್ಕೆ ಸೇಡು ತೀರಿಸಿಕೊಳ್ಳುವ ಹಾಗೆ , ಸಣ್ಣ ತಿರುಗೇಟು ಕೊಟ್ಟೆ!
ಅದನ್ನು ಗಮನಿಸಿಯೂ ಗಮನಿಸದವನಂತೆ ಗುಬ್ಬಣ್ಣ, " ನ್ಯಾಯವೊ, ಅನ್ಯಾಯವೊ ಬಿಡಿ ಸಾರ್...ಇನ್ನು ಅಮ್ಮ ಹೊರಡ್ತಾಳೆ ಅಂದ್ಮೇಲೆ ಮಗಳನ್ನ ಕಳಿಸ್ದೆ ಇರೋಕಾಗುತ್ಯೆ - ಅದೂ ಸ್ಕೂಲ್ ರಜೆ ಇದ್ದಾಗ?..ಹನ್ನೆರಡಕ್ಕೆ ಇನ್ನೆರಡು ಅಂತ ಈ ಕಪಿಗಳನ್ನು ಸೇರಿಸ್ಬೇಕಾಯ್ತು, ಆ ಕಪಿ ಸೈನ್ಯದ ಜತೆಗೆ..."
" ಹೆಂಡ್ತಿ ಮಗಳ್ನ ಕಪಿ ಗೀಪಿ ಅಂತ ಯಾಕಯ್ಯ ಬೈಯ್ತೀಯಾ? ಮೊದಲೆ ಕಾಲ ಕೆಟ್ದು..ಈಗೀಗಂತೂ ಬಸ್ಸುಗಳ್ಗೂ ಕಿವಿಗಳಿರ್ತಾವಂತೆ..." ಎನ್ನುತ್ತಾ ಕೂತಿದ್ದ ಜಾಗದಿಂದಲೆ ಬಸ್ಸಿನ ಸುತ್ತಾ ಕಣ್ಣಾಡಿಸಿದೆ, ಯಾರಾದರೂ ಸಿಐಡಿಗಳಿದ್ದರಾ - ಅನ್ನುವಂತೆ. ಗುಬ್ಬಣ್ಣನೂ ತಟ್ಟನೆ ವಾಸ್ತವಕ್ಕೆ ಬಂದವನಂತೆ ಸುತ್ತಲೂ ಯಾರೊ ಹೊಂಚು ಹಾಕಿ ಕಾಯುತ್ತಿದ್ದಾರೊ ಎಂಬಂತೆ ತಲೆ ಬಗ್ಗಿಸಿ, ಕುಗ್ಗಿದ ದನಿಯಲಿ ಪಿಸುಗುಡತೊಡಗಿದ - ಇಡಿ ಬಸ್ಸಿನಲ್ಲೆ ನಾವಿಬ್ಬರೆ ಇರುವುದೆಂದು ಗೊತ್ತಿದ್ದರೂ! ನಾವು ಮಾತು ಮಾತಾಡುತ್ತಲೆ ಆಗಲೆ ಅರ್ಧಧಾರಿ ಕ್ರಮಿಸಿಬಿಟ್ಟಿದ್ದೆವಾದರೂ ಮಾತಿನ ಭರದಲ್ಲಿ ಕಾಲ ಉರುಳಿದ್ದೆ ಅರಿವಾಗದಂತಾಗಿಹೋಗಿತ್ತು. ಗುಬ್ಬಣ್ಣ ತಗ್ಗಿದ ದನಿಯಲ್ಲೆ,
" ಕಪಿಗಳೆನ್ನದೆ ಇನ್ನೇನನ್ನಬೇಕು?...ಆಗ್ಲೆ ಸಾವಿರಾರುಗಟ್ಲೆ ಬೋಳಿಸ್ಕೊಂಡಾಗಿದೆ..ಈಗ ಈವರಿಬ್ಬರು ಹೊರಟ್ರೆ ಇವರಿಗೆಲ್ಲಿಂದ ಡಿಸ್ಕೌಂಟು ಟಿಕೆಟ್ಟು ತರಲಿ ಹೇಳಿ ಸಾರ್..?..ಕೊನೆಗೆ ಇವರನ್ನು ಜತೆಗೆ ಕಳಿಸದಿದ್ರೆ ಇನ್ನು ವರ್ಷವೆಲ್ಲಾ ನನ್ನ ಜನ್ಮ ಜಾಲಾಡಿಬಿಡ್ತಾರಲ್ಲ ಅಂತ ಹೆದರಿ ಮಾಮೂಲಿ ರೇಟಿನಲ್ಲೆ ಎಪ್ಪತ್ತೈದು-ಎಪ್ಪತ್ತೈದು ಡಾಲರು ಕೊಟ್ಟು ಇನ್ನೆರಡು ಟಿಕೆಟ್ಟು ತರಿಸಿಕೊಟ್ಟೆ ಸಾರ್...."
ನನಗೊ ನಗು ತಡೆಯಲಾಗದೆ ಬಿದ್ದು ಬಿದ್ದೂ ನಗಲಾರಂಭಿಸಿದೆ, "ಅಲ್ಲಯ್ಯ ಬಂದವರಿಗೆಲ್ಲ ಚೀಪಾಗಿ ಟಿಕೆಟ್ಟು ಕೊಡಿಸಿ ಎಂಟರ್ಟೈನ್ ಮಾಡಿಸಿಬಿಟ್ಟು, ನಿನ್ಹೆಂಡ್ತಿ ಮಗಳಿಗೆ ಪುಲ್ ಚಾರ್ಜು ಕೊಟ್ಟು ಟಿಕೆಟ್ ತೊಗೊಂಡ್ಯಾ....ಚೆನ್ನಾಗಿದೆ ಕಣಯ್ಯ ತಮಾಷೆ...." ಎನ್ನುತ್ತ ಹೊಟ್ಟೆ ಹಿಡಿದುಕೊಂಡೆ..
" ನೀವು ನಗಿ ಸಾರ್..ನಿಮಗೆಲ್ಲಾ ತಮಾಷೆನೆ...ಬಂದವರೇನೊ ಮೂರು ದಿನ ಇದ್ದು ಖಾಲಿ ಮಾಡ್ತಾರೆ...ಬೆಳಗಾಗೆದ್ದು ಮುಖಕ್ಕೆ ಮೂರು ಕಾಫಿ ನೀರು ತೋರ್ಸಕೊ, ಇಲ್ಲಾ ಬಿಸ್ಲಲ್ಲಿ ಓಡಾಡಿ ಬಂದಾಗ ತಂಪಾಗೊಂದು ಲೋಟ ತಣ್ಣೀರೊ, ಎಳನೀರೊ ಕೊಡೋಕು ಕೂಗ್ಬೇಕೂಂದ್ರೂ, ಇರೋವ್ರೆ ಇವರಿಬ್ರು. ಅವರ ಜತೆ ಎಡಬಿಡಂಗಿ ಮಾಡ್ಕೊಂಡು ನಾನು ಎಲ್ಲಿಗೆ ಬದುಕಕೆ ಹೋಗ್ಲಿ?... ಹೇಗಿದ್ದರೂ ಖರ್ಚು ಮೇಲೊಂದು ಖರ್ಚು ಶಿವಾ ಅಂತ ಅಲ್ಲೂ ತಲೆ ಕೊಟ್ಬಿಟ್ಟೆ ಸಾರ್...."
"ನಿಜಾ ಗುಬ್ಬಣ್ಣ..ಹೊರಗಡೆ ಗೊತ್ತಿರೊ ಶತ್ರುಗಳ ಜತೆ ಯುದ್ಧ ಮಾಡ್ಬೋದು ಆದರೆ ಮನೇಲೇನಾದರೂ ಹಿತಶತ್ರುಗಳನ್ನು ಹುಟ್ಟಿಸ್ಕೊಂಡ್ರೆ ಬದ್ಕೋದು ಕಷ್ಟ..ಅದರಲ್ಲೂ ತಲೆ ಮೇಲೆ ತಲೆ ಬೀಳ್ಲಿ, ಮನೆ ದೇವ್ರುಗಳನ್ನ ಮಾತ್ರ ಸರಿಯಾಗಿಟ್ಕೊಂಡು ಬಿಡಬೇಕಪ್ಪ..ಯಾವ ಹರಕೆ, ಬೇಡಿಕೆ ಏನೂ ಬಾಕಿ ಇಟ್ಕೋಬಾರ್ದು.."
"ಹೌದು ಸಾರ್.. ಅದಕ್ಕೆ ಗಾದೆನೆ ಇದೆಯಲ್ಲಾ ಸಾರ್..'ಮನೆದೇವರುಗಳ ಮೆಚ್ಚಿಸದೆ ಸತ್ರೆ, ಮಸಣದಲೂ ಇಲ್ಲ ಪಾಪಿಗೆ ನಿದ್ರೆ..' ಅಂತ"
"ಅದ್ಯಾವುದೊ ಗುಬ್ಬಣ್ಣಾ ಹೊಸಾ ಗಾದೆ...ಎಲ್ಲೂ ಕೇಳ್ದಂಗೆ ಇಲ್ವಲ್ಲೊ"
" ಎಲ್ಲೂ ಕೇಳಿಲ್ವಾ ಸಾರ್...ನಾನು ಹಾಗಂತ ಗಾದೆನೆ ಇರ್ಬೋದೇನೊ ಅನ್ಕೊಂಡ್ ಹೇಳ್ದೆ...ನೀವು ಕೇಳಿಲ್ಲಾಂದ್ರೆ ಆ ತರ ಗಾದೆನೆ ಇಲ್ಲಾಂತ ಕಾಣುತ್ತೆ... "
"ಹಾಳಾಗ್ಲಿ ಇದ್ಯೊ ಇಲ್ವೊ...ಇಲ್ಲಂದ್ರೆ ನಾವೆ ಹೊಸ್ದಾಗಿ ಹುಟ್ಸುದ್ರಾಯ್ತು ..ಮುಂದಕ್ಕೇನಾಯ್ತು ಹೇಳು ..ಎಲ್ಲಿಗೆ ಬಂತು ಬಯಲಾಟದ ಪ್ರಸಂಗ....?"
"ಪ್ರಸಂಗವೆಲ್ಲಿ ಬರೋದು ಇನ್ನು ಭಾಗವತರ ಪೀಠಿಕೆ ಹಾಡೆ ಆಗಿಲ್ಲಾ..."
" ಏನೊ ಹಾಗಂದ್ರೆ ಗುಬ್ಬಣ್ಣ ..ಇನ್ನು ಪ್ರಸಂಗ ಶುರೂನೆ ಇಲ್ಲಾಂತ ಬಾಂಬು ಹಾಕ್ತಾ ಇದೀಯಾ..ಒಳಗಿನ್ನು ಏನೇನೊ ಮುಂಗಾರು ಮಳೆ ತರ ಕಥೆ ಇನ್ನು ಉಳ್ಕೊಂಡಿರೊ ಹಾಗಿದೆ...?"
" ಆ ಪ್ರಸಂಗ ಕೇಳ್ಬೇಕೂಂದ್ರೆ 'ಬ್ರೇಕ್ ಕೆ ಬಾದ್' ಸಾರ್..ನೋಡಿ ನಮ್ಮ ಸ್ಟಾಪು ಬಂದ್ಬಿಡ್ತು...ನಿಮ್ಮ ತಂಪಾದ ಕ್ಲಬ್ಬಿನಲ್ಲಿ ಸೊಂಪಾಗಿ ಕೂತ್ಕೊಂಡು ಬೀರಾಡ್ತಾ ಹಾರಾಡ್ತ ಮಾತಾಡೋಣ..."
ಘಾಟಿ ಗುಬ್ಬಣ್ಣ..ಮಾತಿನ ಮಧ್ಯೆನೂ ಸ್ಟಾಪಿನ ಪರದೆ ಮೇಲೆ ನಿಗಾ ಹಾಗೆ ಇಟ್ಟಿದ್ದಾ; ನಾನು ನಿಗಾ ಇಟ್ರೂ ಅದು ಹೆಂಗೊ ಮಧ್ಯದಲ್ಲಿ ಮರೆತುಹೋಗಿದೆ ಅಂತ ಗೊತ್ತಾಗ್ತಾ ಇದ್ದಿದ್ದೆ ಇಳಿಬೇಕಾದ ಸ್ಟಾಪು ಕಳೆದು ಎರಡು ಸ್ಟಾಪು ಬಂದ್ಮೇಲೆ..ಮುಂದಿನ ಸ್ಟಾಪಲ್ಲಿ ಬಸ್ಸು ನಿಲ್ಲಿಸಲ್ಲು ಕೋರು ಗುಂಡಿಯೊತ್ತುತ್ತ ಇಬ್ಬರೂ ಬಾಗಿಲಿನತ್ತ ನಡೆದೆವು. ಇನ್ನೂ ಯಾರೂ ಅಷ್ಟಾಗಿ ಜನರಿರದ ಕ್ಲಬ್ಬು ಸೇರಿದ ತಕ್ಷಣ ಗುಬ್ಬಣ್ಣ ಮೊದಲು ಮಾಡಿದ ಕೆಲಸ, ಸೊಗಸಾದ 'ದೇವ ಮೂಲೆ'ಯೊಂದನ್ನು ಹಿಡಿದು ಆಸೀನನಾಗಿ ಬೇರರನ್ನು ಕರೆದು ' ಎರಡು ಟೈಗರು' ಅಂದಿದ್ದು!
------------------------------------------------------------------------------------------------------------------------------
(ಮೂರನೆ ಹಾಗು ಅಂತಿಮ ಭಾಗದಲ್ಲಿ ಮುಕ್ತಾಯ - ಈಗಾಗಲೆ ಜತೆಯಲ್ಲೆ ಪ್ರಕಟಿಸುತ್ತಿದ್ದೇನೆ. ಲೇಖನದ ಉದ್ದದ ದೃಷ್ಟಿಯಿಂದ ಮೂರನೆ ಭಾಗವಾಗಿ ಹಾಕಿದ್ದೇನೆ - ನಾಗೇಶ ಮೈಸೂರು, ಸಿಂಗಾಪುರ)
------------------------------------------------------------------------------------------------------------------------------