`ನಾರಾಯಣನ ನಗಕ್ಕೆ ಕೈ ಹಾಕಿದರೆ ನಾಶವಾದೀರಿ ಜೋಕೆ!!’

`ನಾರಾಯಣನ ನಗಕ್ಕೆ ಕೈ ಹಾಕಿದರೆ ನಾಶವಾದೀರಿ ಜೋಕೆ!!’

    ರಾಜಾ ಸಮುದ್ರಗುಪ್ತ      

    ಮಹಾ ಸಾಮ್ರಾಟ್ ಹರ್ಷವರ್ಧನ

    ದಕ್ಷಿಣಾ ಪಥೆಶ್ವರ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ

    ರಾಜ ರಾಜ ಚೋಳ

    ರಾಜಾ ಆರನೇ ವಿಕ್ರಮಾದಿತ್ಯ

    ಪ್ರಥ್ವಿರಾಜ ಚೌಹಾಣ್

    ವಿಜಯನಗರ ಸಾಮ್ರಾಟ್ ಶೀ ಕೃಷ್ಣದೇವರಾಯ

    ಬಿಟ್ಟಿದೇವ ಅಥವಾ ವಿಷ್ಣುವರ್ಧನ

    ಕಂಠೀರವ ನರಸರಾಜ ಒಡೆಯರ್

    ಮುಮ್ಮಡಿ ಕೃಷ್ಣರಾಜ ಒಡೆಯರ್………………..

    ಪಟ್ಟಿ ಹೀಗೇ ಬೆಳೆಯುತ್ತಾ ಹೋಗುತ್ತದೆ. ಇಲ್ಲಿರುವುದು ಹಿಂದೆ ಭರತವರ್ಷವನ್ನಾಳಿದ ನೂರಾರು ರಾಜರುಗಳಲ್ಲಿ ಕೆಲವೇ ಕೆಲವರ ಹೆಸರುಗಳು. ಆದರೆ ಇಲ್ಲಿ ಹೆಸರಿಸದ ಪ್ರತಿಯೊಬ್ಬರಾಜರೂ ತಮ್ಮ ಆಳ್ವಿಕೆಯ ಕಾಲದಲ್ಲಿ ತಮ್ಮ ನಾಡಿನಲ್ಲಿ ಒಂದಿಲ್ಲೊಂದು ದೇವಾಲಯವನ್ನು ನಿರ್ಮಿಸಿದ್ದಾರೆ, ದೇವಾಲಯಗಳಿಗೆ ಅಗಾಧ ಪ್ರಮಾಣದ ದಾನ ದತ್ತಿಗಳನ್ನು ಹಿಡುವಳಿ ಜಮೀನುಗಳನ್ನು ಚಿನ್ನಾಭರಣಗಳನ್ನು ನೀಡಿದ್ದಾರೆ. ಈ ಎಲ್ಲಾ ರಾಜ ಮಹಾರಜರುಗಳಷ್ಟೇ ಅಲ್ಲದೆ ಅಂದಿನ ಕಾಲದಲ್ಲಿ ಅಧಿಕಾರದಲ್ಲಿದ್ದ ಅಧಿಕಾರಿ ವರ್ಗ, ಜಮೀನ್ದಾರರುಗಳು, ಶೀಮಂತ ವ್ಯಾಪಾರಿಗಳು ಸಹ ತಮ್ಮ ಕ್ಷೇತ್ರಗಳಲ್ಲಿ ಬರುವ ಮುಖ್ಯ ದೇವಾಲಯ, ಗ್ರಾಮ ದೇವತೆಗಳ ಗುಡಿಗಳನ್ನು ಜೀರ್ಣೋದ್ದಾರ ಮಾಡಿಸಿದ್ದಾರೆ, ದೇವಾಲಯಗಳಿಗೆ ತಮ್ಮ ಕಾಣಿಕೆಗಳನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದ್ದಾರೆ. ಇಷ್ಟಾಗಿ ಮುಸ್ಲಿಮರ ಧಾಳಿ, ಬ್ರಿಟೀಷರ ಆಳ್ವಿಕೆಗಳ ಕಾಲದಲ್ಲಿ ತಮ್ಮ ದೇವಾಲಯಗಳ ರಕ್ಷಣೆಗೆ, ಅಲ್ಲಿನ ದೇವರ ಸಂಪತ್ತಾದ ನಗ-ನಗದುಗಳ ರಕ್ಷಣೆಗೆ ಅದೆಷ್ಟೋ ಜನರು ಟೊಂಕ ಕಟ್ಟಿ ಹೋರಾಟವನ್ನು ನಡೆಸಿದ್ದರು. ತಮ್ಮ ದೇವರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟವರೆಷ್ಟೋ? ತಮ್ಮ ದೇವರ ಚಿನ್ನಾಭರಣಗಳು ಪರರ ಪಾಲಾಗದಿರಲೆಂದು ದೇವಾಲಯದಲ್ಲಿಯೇ ನೆಲಮಾಳಿಗೆಯನ್ನು ರಚಿಸಿ ಅಲ್ಲಿ ಸುರಕ್ಷಿತವಾಗಿಡುತ್ತಿದ್ದ ರಾಜ ಮಹಾರಾಜರುಗಳು ನಮ್ಮಲ್ಲಿದ್ದರು. (ಕೇರಳದ ಅನಂತಪದ್ಮನಾಭ ದೇವಾಲಯ ಅದಕ್ಕೊಂದು ನಿದರ್ಶನ)

    ಆದರೆ ಇಂದು? ಇಂದು ಆಗುತ್ತಿರುವುದೇನು?

    ನಮ್ಮದೇ ಸರ್ಕಾರ ತಾವೇ ಮಾಡಿಕೊಂಡ ಹಗರಣಾಗಳು, ತಾವೇ ಸೃಷ್ಟಿಸಿದ ಭ್ರಷ್ಠಾಚಾರಗಳಿಂದ ಉಂಟಾದ ಆರ್ಥಿಕ ಅಧಃಪತನವನ್ನು ತಡೆಯಲು ದೇವರ ಚಿನ್ನವನ್ನು ಕೇಳುತ್ತಿದೆ!

    ಸ್ನೇಹಿತರೆ,  ನಿಮಗೆ ಗೊತ್ತಿರಲಿ ನಮ್ಮ ಕೇಂದ್ರ ಸರ್ಕಾರ ಈ ಒಂಭತ್ತು ವರ್ಷಗಳಲ್ಲಿ ಮಾಡಿದ ಹಗರಣ, ಭ್ರಷ್ಠಾಚಾರಗಳಲ್ಲಿ ಒಂದಂಶದಷ್ಟನ್ನು ಕಡಿಮೆ ಮಾಡಿದ್ದರೂ ಇಂದು ದೇಶಕ್ಕೆ ಇಂತಹಾಆರ್ಥಿಕ ದುಃಸ್ಥಿತಿ ಬರುತ್ತಿರಲಿಲ್ಲ. ನಮ್ಮ ಕೇಂದ್ರ ಸರ್ಕಾರದವರು ಎಸಗಿದ 2ಜಿ ಹಗರಣ, ಕಾಪ್ಟರ್ ಹಗರಣ, ಕಲ್ಲಿದ್ದಲು ಹಗರಣಗಳೇನು ಕಡಿಮೆ ಮೌಲ್ಯದವೇ? ಒಂದೊಂದೂ ಲಕ್ಷಕೋಟಿಗಳ ಲೆಕ್ಕದಲ್ಲಿ ಇರುವಂತಹವು. ಇವುಗಳಲ್ಲಿ ಒಂದನ್ನು ಮಾಡದಿದ್ದರೂ ಇಂದು ಈ ಆರ್ಥಿಕ ಕುಸಿತ ಸಂಭವಿಸುತ್ತಿರಲಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರತಕ್ಕ ಸಂಗತಿ. ಇಷ್ಟೆಲ್ಲಾ ಹಗರಣಾಗಳನ್ನು ಮಾಡಿ ತಾವು ದೇಶದ, ಜನರ ದುಡ್ದನ್ನು ದೋಚಿ ಇದೀಗ ದೇಶ ಎದುರಿಸುತ್ತಿರುವ ಆರ್ಥಿಕ ಸಮಸ್ಯೆ ನಿವಾರಣೆಗಾಗಿ ದೇವಾಲಯಗಳಲ್ಲಿನ ಚಿನ್ನವನ್ನು ಕೊಡಬೇಕೆಂದರೆ ಇದಕ್ಕೇನೆನ್ನೋಣ? ಅಷ್ಟಾಗಿ ಹೋಗಲಿ, ದೇವಾಲಯದ ಚಿನ್ನವನ್ನು ಕೊಟ್ತು ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರೋಣವೆನ್ನಿ, ಆದರೆ ನಮ್ಮ ದೇವಾಲಯದ ಚಿನ್ನವನ್ನು ಸರ್ಕಾರಕ್ಕೆ ಲೊಟ್ತರೆ ಅದನ್ನು ಅವರುಗಳು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿದ್ದಾರೆಂದು ಹೇಗೆ ನಂಬುತೀರಿ? ಕಳೆದ ಒಂಭತ್ತೂ ಕಾಲು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರಗಳನ್ನೆಲ್ಲಾ ನೋಡಿದರೆ ಯಾರಿಗಾದರೂ ಈ ಪ್ರಶ್ನೆ ಏಳದಿರುತ್ತದೆಯೆ?

    ಇಲ್ಲಿ ನಾವು ಇನ್ನೂ ಒಂದು ಅಂಶ ಗಮನಿಸಬೇಕು ಅದೆಂದರೆ, ಭಾರತವೊಂದು ಜಾತ್ಯಾತೀತ ರಾಷ್ಟ್ರ. ಈಗ ನಮ್ಮನ್ನಾಳುತ್ತಿರುವ ಪಕ್ಷವೂ ಸಹ ಅದೇ ಜಾತ್ಯಾತೀತ ನೆಲೆಗಟ್ಟಿನದು. ಅಂದಮೇಲೆ ದೇಶದ ಆರ್ಥಿಕತೆ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ದೇಶದಲ್ಲಿರುವ ಹಿಂದೂ ದೇವಾಲಯಗಳ ಚಿನ್ನವನ್ನಷ್ಟೇ ಏಕೆ ಕೇಳಬೇಕು, ಜತೆಗೆ ಈ ದೇಶದಲ್ಲಿರುವ ಚರ್ಚ್, ಮಸೀದಿಗಳ ಒಡೆತನದಲ್ಲಿರುವ ಸಂಪತ್ತನ್ನೂ ಏಕೆ ಈ ಸರ್ಕಾರ ತನ್ನ ವಶಕ್ಕೆ ಪಡೆಯಲು ಮುಂದಾಗುತ್ತಿಲ್ಲ? ನಿಮ್ಗೆ ಗೊತ್ತಿರಲಿ ಸ್ನೇಹಿತರೆ, ದೇಶದ ಜನಸಂಖ್ಯೆಯ ಶೇಕಡಾ ಮೂರಕ್ಕಿಂತಲೂ ಕಡಿಮೆ ಇರುವ ಕ್ರೈಸ್ತ ಸಮುದಾಯದ ಚರ್ಚ್ ಗಳಿಗೆ ವಿದೇಶಗಳಿಂದ ಬರುತ್ತಿರುವಂತಹಾ ಹಣಾದ ಪ್ರಮಾಣ ನಮ್ಮಲ್ಲಿನ ನೌಕಾಪಡೆಯ ಬಜೆಟ್ ಗೆ ಸರಿಹೊಂದುತ್ತದೆ! ಇನ್ನು ಚರ್ಚುಗಳ ಸ್ವಾಧೀನದಲ್ಲ್ಲಿರುವ ಭೂಮಿಯ ಮೇಲೆ ಸರ್ಕಾರಕ್ಕೆ ಯಾಯುದೇ ಅಧಿಕಾರವಿರುವುದಿಲ್ಲ! ಇನ್ನು ಪ್ರತಿವರ್ಷ ಹಜ್ ಯಾತ್ರಿಕರಿಗಾಗಿ ಸಾವಿರಾರು ರೂಪಾಯಿ ಸಬ್ಸಿಡಿ ಕೊಡುವ ಸರ್ಕಾರ ದೇಶಕ್ಕೊದಗಿದ ಇಂತಹಾ ಸಂಕಟದ ಸಂದರ್ಭದಲ್ಲಿಯೂ ಮಸೀದಿಯಲ್ಲಿನ ಹಣದ ಕುರಿತಾಗಿಯಾಗಲಿ, ವಖ್ತ್ ಮಂಡಳಿಯ ವಶದಲ್ಲಿನ ಆಸ್ತಿಯ ಕುರಿತಾಗಲಿ ಮಾತನಾಡುವುದಿಲ್ಲ!! ಇದೆಲ್ಲವೂ ಏನನ್ನು ತೋರಿಸುತ್ತಿದೆ? ನಮ್ಮ ಕೇಂದ್ರ ಸರ್ಕಾರಕ್ಕೆ ದೇಶದ ಆರ್ಥಿಕತೆಯ ಸುಧಾರಣೆಯ ಬಗ್ಗೆಯಾಗಲಿ, ದೇಶದ ಜನರ ನಿಜವಾದ ಸಮಸ್ಯೆಗಳ ಬಗ್ಗೆಯಾಗಲಿ ಕಾಳಜಿಯಿಲ್ಲ, ಬದಲಾಗಿ ದೇಶದಲ್ಲಿನ ಹಿಂದೂ ಸಂಸ್ಕೃತಿಯ ಹೆಗ್ಗುರುತುಗಳಾದ ದೇವಾಲಯಗಳಲ್ಲಿನ ಸಂಪತ್ತನ್ನು ತನ್ನದಾಗಿಸಿಕೊಳ್ಳುವ ಹುನ್ನಾರವಷ್ಟೆ ಎಂದಾಯಿತಲ್ಲವೆ? ಇನ್ನು ತಮ್ಮದೇ ಸರ್ಕಾರದ ಸಹವರ್ತಿಗಳು, ಮತ್ತಿತರರು ಇಟ್ಟಿರುವ ಲಕ್ಷಾಂತರ ಕೋಟಿ ಕಪ್ಪು ಹಣವು ಇಂದಿಗೂ ಸ್ವಿಸ್ ಬ್ಯಾಂಕಿನ ಖಾತೆಗಳಲ್ಲಿ ಕೊಂಡವಒಳೆಯುತ್ತಿದೆ. ನಮ್ಮ ನಾಯಕರು ಎನ್ನಿಸಿಕೊಂಡವರಾಅರಿಗೂ ಆ ಕಪ್ಪು ಹಣವನ್ನು ದೇಶಕ್ಕೆ ವಾಪಾಸು ತರುವ ಇರಾದೆ ಇಲ್ಲ. (ಒಂದು ವೇಳೆ ಆ ಕಪ್ಪು ಹಣವೇನಾದರೂ ದೇಶಕ್ಕೆ ಮರಳಿ ಬಂದರೆ ದೇಶದ ಈವರೆಗಿನ ವಿದೇಶೀ ಸಾಲಗಳನ್ನೆಲ್ಲಾ ತೀರಿಸಿ ಉಳಿದ ಹಣಾದಲ್ಲಿ ದೇಶದಲ್ಲಿನ ೧.೨ ಬಿಲಿಯನ್ ಜನರಿಗೆ ಒಂದರಂತೆ ಮನೆ ಕಟ್ಟಿಸಿಕೊಡಬಹುದು ಎನ್ನುತ್ತದೆ ಒಂದು ವರದಿ!) ಈಗ ಮಾತ್ರ ಆರ್ಥಿಕ ಸುಧಾರಣೆಗಾಗಿ ದೇವಾಲಯದ ಸಂಪತ್ತಿಗೆ ಕಣ್ಣಿಟ್ಟಿರುವ ನಮ್ಮ ನಾಯಕರುಗಳನ್ನು ಏನೆನ್ನಬೇಕು?

    ಸ್ನೇಹಿತರೆ,  ಇಷ್ಟಕ್ಕೂ ನಮ್ಮ ಹಿರಿಯರು ದೇವಾಲಯಗಳನ್ನು, ಅದರಲ್ಲಿನ ಸಂಪತ್ತನ್ನೂ ಹೇಗೆ ನಿರ್ವಹಣೆ ಮಾಡುತ್ತಿದ್ದರೆಂದುಕೊಂಡಿರಿ?

    ಈ ಮೊದಲೇ ಹೇಳಿದಂತೆ ದೇವಾಲಯಗಳನ್ನು ನಿರ್ಮಿಸಿದವರು ಅಂದಿನ ನಮ್ಮ ರಾಜರುಗಳು, ಅಧಿಕಾರಿ ವರ್ಗ ಹಾಗೂ ಕೆಲ ಬಲಿಷ್ಠ ಸಮುದಾಯಗಳು. ಇಲ್ಲಿ ರಾಜರು ಕಟ್ಟಿದ ದೇವಾಲಯದ ಆಡಳಿತವು ರಾಜನ ಕೈಯಲ್ಲಿಯೂ,, ಆ ರಾಜನು ಅಧಿಕಾರಕ್ಕೆ ಬರುವ ಮೊದಲೇ ಇದ್ದ ದೇವಾಲಯಗಳ ಆಡಳಿತವು ಅಲ್ಲಿನ ವ್ಯವಸ್ಥಾಪಕರ ಕೈಯಲ್ಲಿಯೂ ಇರುತ್ತಿದ್ದವು. ಅಂದಿನ ವ್ಯವಸ್ಥಾಪಕರೆಂದರೆ ಇಂದಿನ ಟ್ರಸ್ಟಿಗಳಿಗೆ ಸಮ. ಅವರನ್ನು ಸ್ಥಾನಿಕರು(ಎಂದರೆ ಅಲ್ಲಿನ ಸ್ಥಳೀಯರು) ಎನ್ನುತ್ತಿದ್ದರು. ರಾಜ ಮಹಾರಾಜರುಗಳು ಅಂಥಹಾ ವ್ಯವಸ್ಥಾಪಕ ವರ್ಗಗಳಿರುವ ದೇವಾಲಯಗಳನ್ನು ಎಂದಿಗೂ ತಮ್ಮ ವಶಕ್ಕೆ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿರಲಿಲ್ಲ, ಬದಲಾಗಿ ಅಂತಹಾ ದೇವಾಲಯಗಳಿಗೆ ಕೆಲ ವಿಶೇಷ ಸಂದರ್ಭಗಳಲ್ಲಿ ತಾನೇ ಹೊಲ ಭೂಮಿಗಳನ್ನು ದಾನ ಮಾಡುತ್ತಿದ್ದ. ಜತೆಗೆ ರಾಜ ಮಹಾರಾಜರಾದಿಯಾಗಿ ಸಾಮಾನ್ಯ ಜನರು ತಮ್ಮ ಶಕ್ತ್ಯಾನುಸಾರ ದೇವರಿಗೆ ಕಾಣಿಕೆಗಳನ್ನು ಅರ್ಪಿಸುತ್ತಿದ್ದರು. ಎಲ್ಲಿಯವರೆಗೆಂದರೆ ಸರ್ಕಾರಕ್ಕೆ ತೆರಿಗೆ ಕಟ್ಟುವುದಕ್ಕಿಂತ ಹೆಚ್ಚಿನ ಪ್ರಮಾಣದ ಕಾಣಿಕೆಗಳನ್ನು ದೇವರಿಗೆ ಅರ್ಪಿತವಾಗುತ್ತಿದ್ದವು. ಇದಕ್ಕೆಲ್ಲಾ ಕಾರಣ ದೇವರ ಮೇಲಿನ ಭಕ್ತಿ ಹಾಗೂ ದೇವಾಲಯದ ಆಡಳಿತ ನಿರ್ವಹಣೆಯವರಲ್ಲಿ ಜನರಿಗಿದ್ದ ವಿಶ್ವಾಸ. ಎಂದರೆ ದೇವಾಲಯಗಳಿಗೆ ಕೊಟ್ಟ ಹಣ, ಕಾಣಿಕೆಗಳು ಎಂದಿಗೂ ದುರುಪಯೋಗವಾಗುವುದಿಲ್ಲ, ಬದಲಾಗಿ ಸದ್ವಿನಿಯೋಗವಾಗುತ್ತವೆ ಎನ್ನುವ ನಂಬಿಕೆ ಜನರಲ್ಲಿದ್ದುದು. (ಈ ಬಗೆಯ ನಂಬಿಕೆಯನ್ನು ರಾಜರ ಆಡಳಿತದಂತೆಯೇ ಇಂದಿನ ಜನರಲ್ಲಿಯೂ ಕಾಣಬಹುದು.) ಅಂತೆಯೇ ಅಂದು ದೇವಾಲಯಗಳು ತಮ್ಮನ್ನು ನಂಬಿದ ಜನರನ್ನು ಎಂದಿಗೂ ಕೈ ಬಿಡಲಿಲ್ಲ. ದೇವಾಲಯದಲ್ಲಿ ನಿತ್ಯಪೂಜೆಯ ಹೊರತಾಗಿ ಹಲವಾರು ಸಂದರ್ಭಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಅಂತಹಾ ವಿಶೇಷ ಪೂಜೆಗಳಿಗೆ ನಾನಾ ನಮೂನೆಯ ವಸ್ತುಗಳ ಅಗತ್ಯ ಬೀಳುತ್ತವೆ. ಆ ಎಲ್ಲಾ ವಸ್ತುಗಳ ತಯಾರಿಕೆ, ಪೂರೈಕೆಗಳನ್ನು ನಾನಾ ವರ್ಗದ ಜನರು ಮಾಡುತ್ತಾ ಬಂದಿದ್ದಾರೆ. ಆ ಮುಖೇನ ದೇವಾಲದಿಂದಲೇ ತಮ್ಮ ಬದುಕು ಕಟ್ಟಿಕೊಳ್ಳುವ ಸಾವಿರಾರು ಕುಟುಂಬಗಳು ನಮ್ಮ ಸುತ್ತ ಮುತ್ತ ಇಂದಿಗೂ ಇರುವುದನ್ನು ನಾವು ಕಾಣುತ್ತೇವೆ.     

    ಇನ್ನು ದೇವಾಲಯಗಳಲ್ಲಿ ಸಂಗ್ರಹವಾದ ಸಂಪತ್ತು ಎಂದಿಗೂ ಯಾವೊಬ್ಬ ವ್ಯಕ್ತಿಗೆ ಸೇರಿದ್ದಲ್ಲ, ಬದಲಾಗಿ ಅದು ಭಗವಂತನಿಗೆ ಸೇರಿದ ಸಂಪತ್ತು. ಅದನ್ನು ದೇವಾಲಯಗಳು ಸಮಾಜಮುಖೀ ಕಾರ್ಯಗಳಿಗೆ ಬಳಸಿಕೊಳ್ಳುತ್ತಾ ಬಂದಿವೆ. ಪ್ರತಿಯೊಂದು ದೇವಾಲಯಗಳು, ಮಠ-ಮಾನ್ಯಗಳು ತಮ್ಮದೇ ವ್ಯಾಪ್ತಿಯಲ್ಲಿ ಅನ್ನದಾನ, ವಿದ್ಯಾದಾನಗಳನ್ನು ನಡೆಸುತ್ತವೆ. ಜತೆಗೆ ಇತ್ತೀಚಿಗೆ ಕೆಲ ಮಠಗಳು ಆಸ್ಪತ್ರೆಗಳನ್ನು ತೆರೆಯುವ ಮೂಲಕ ಬಡರೋಗಿಗಳ ಶುಶ್ರೂಷೆಗೂ ನೆರವಾಗುತ್ತಿವೆ. ಅಷ್ಟೇ ಅಲ್ಲದೆ ಹಿಂದಿನ ಕಾಲದಲ್ಲಿ ಭಗವಂತನನ್ನೇ ಸಾಕ್ಷಿಯಾಗಿರಿಸಿಕೊಂಡು ಜನರು ತಮ್ಮ ನಡುವಿನ ವ್ಯಾಜ್ಯಗಳನ್ನು ನಿವಾರಿಸಿಕೊಳ್ಳುತ್ತಿದ್ದರು. (ಈಗಲೂ ಧರ್ಮಸ್ಥಳದಂತಹಾ ಕ್ಷೇತ್ರದಲ್ಲಿ ನಾವು ಹೆಗ್ಗಡೆಯವರ ಸಮ್ಮುಖದಲ್ಲಿ ನ್ಯಾಯ ತೀರ್ಮಾನವಾಗುವುದನ್ನು ನೋಡುತ್ತೇವೆ.) ಹೀಗೆ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗದೆ ಹಸಿದು ಬಂದವರಿಗೆ ಅನ್ನವನ್ನೂ, ವಿದ್ಯಾಕಾಂಕ್ಷಿಗಳಿಗೆ ವಿದ್ಯೆಯನ್ನೂ, ನ್ಯಾಯಾಕಾಂಕ್ಷಿಗಳಿಗೆ ನ್ಯಾಯದಾನವನ್ನೂ ಮಾಡುವ ಸ್ಥಳವಾಗಿದ್ದವು.

    ಹೀಗಿದ್ದ ನಮ್ಮ ಸಾಮಾಜಿಕ ವ್ಯವಸ್ಥೆಯ ಪರಿಚಯವಿಲ್ಲದ ಮುಸ್ಲಿಮ್ ದೊರೆಗಳು ನಮ್ಮ ದೇವಾಲಯದ ಸಂಪತ್ತನ್ನು ದೋಚಿದರು, ನಮ್ಮವರನ್ನು ಬಲಾತ್ಕಾರದಿಂದ ಮತಾಂತರಗೊಳಿಸಿದರು.. ಬ್ರಿಟೀಷರಂತೂ ಈ ಭಾರತೀಯರೆಲ್ಲರೂ ಅಜ್ಞಾನಿಗಳು ಇವರನ್ನು ಸರಿಯಾದ ಶಿಕ್ಷಣ ನೀಡಿ ಉದ್ದರಿಸುವುದು ನಮ್ಮ ಕರ್ತವ್ಯವೆಂಬಂತೆ ಭಾವಿಸಿ ಶಿಕ್ಷಣ ವ್ಯವಸ್ಥೆಯನ್ನೇ ತಮ್ಮ ಸುಪರ್ದಿಗೆ ತೆಗೆದುಕೊಂಡರು. ಹಾಗೆಯೇ ನ್ಯಾಯಾಂಗ ವ್ಯವಸ್ಥೆಯೂ ತಮ್ಮ ಕೈಕೆಳಗಿರುವಂತೆ ನೋಡಿಕೊಂಡರು. ಇದಾದ ನಂತರವೇ ನಾವು ಪರಕೀಯರ ದಾಸ್ಯಕ್ಕೆ ಸಿಲುಕಿದ್ದು, ನಮ್ಮ ಸಮಾಜ ವ್ಯವಸ್ಥೆಯೊಳಗೆ ಭ್ರಷ್ಠಾಚಾರ ತಲೆಹಾಕಿದ್ದು! ಮತ್ತೀಗ ನಮ್ಮದೇ ಸರ್ಕಾರ ತಾನೇ ಮಾಡಿಕೊಂಡ ಎಡವಟ್ಟುಗಳಿಂದುಂಟಾದ ದುರ್ಗತಿಗೆ ದೇವಾಲಯದ ಚಿನ್ನಕ್ಕೆ ಬೇಡಿಕೆ ಇಟ್ಟಿದೆ!

    ಇಷ್ಟಕ್ಕೂ ನಮ್ಮ ದೇವಾಲಯಗಳಲ್ಲಿರುವ ಚಿನ್ನದ ನಿಜವಾದ ಮೌಲ್ಯವನ್ನೂ ಎಂದಿಗೂ ಸರಿಯಾಗಿ ಲೆಖ್ಖ ಹಾಕಲು ಬರುವುದಿಲ್ಲ. ಕಾರಣ ದೇವಾಲಯದಲ್ಲಿರುವ ಚಿನ್ನ, ಅದು ಇಂದು ನಿನ್ನೆಯದಲ್ಲ. ನೂರಾರು, ಸಾವಿರಾರು ವರ್ಷಗಳ ಕೆಳಗೆ ನಮ್ಮ ರಾಜ ಮಹಾರಾಜರುಗಳು ನೀಡಿದ ಚಿನ್ನಾಭರಣಗಳು ಅಲ್ಲಿವೆ. ಅವ್ಯಾವುದಕ್ಕೂ ಇಂದಿನ ಮಾರುಕಟ್ಟೆ ಮೌಲ್ಯದಲ್ಲಿ ಬೆಲೆಗಟ್ಟಲಿಕ್ಕೆ ಸಾಧ್ಯವಿಲ್ಲ. ಇದು ಕೇವಲ ಚಿನ್ನಾಭರಣ ಮಾತ್ರವಲ್ಲ, ನಮ್ಮ ದೇಶದ ಇತಿಹಾಸ, ಪರಂಪರೆಯೂ ಇದರೊಂದಿಗೆ ಬೆಸೆದುಕೊಂಡಿದೆ. ಪ್ರಪಂಚದೆಲ್ಲೆಡೆ ಈ ನಮೂನೆಯ ಪುರಾತನ ಚಿನ್ನ ಮತ್ತಿತರೇ ಲೋಹದ ವಸ್ತುಗಳಿಗೆ ಹಲವು ಹತ್ತು ಪಟ್ಟು ಬೇಡಿಕೆ ಇದೆ.

    ಇಂತಹಾ ಚಿನ್ನಾಭರಣಗಳನ್ನು ನಮ್ಮ ಸರ್ಕಾರವೇನಾದರೂ ಅರ್ಥವ್ಯವಸ್ಥೆಯ ಸುಧಾರಣೆಯ ಹೆಸರು ಹೇಳಿಕೊಂಡು ಕರಗಿಸಿ ಮಾರಿ ಹಾಕಿದ್ದಾದರೆ ನಮ್ಮ ದೇಶದಲ್ಲಿನ ಹಿಂದೂ ಪರಂಪರೆಗೆ ಸಂಸ್ಕೃತಿಗೆ ದೊಡ್ಡ ಹೊಡೆತ ಬೀಳುತ್ತದೆ. ಇದರೊಂದಿಗೆ ಜನರ ಧಾರ್ಮಿಕ ಭಾವನೆಗೂ ಘಾಸಿಯಾಗುತ್ತದೆ. ಮತ್ತೆ ಮುಂಬರುವ ದಿನಗಳಲ್ಲಿ ಜನರು ದೇವಾಲಯಗಳಿಗೆ ಕಾಣಿಕೆ ಹಾಕುವುದನ್ನೂ, ಚಿನ್ನ, ವಜ್ರಾಭರಣಗಳನ್ನು ದಾನ ಮಾಡುವುದನ್ನೂ ಕಡಿಮೆ ಮಾಡುತ್ತಾರೆ. ಆ ಪ್ರಕಾರ ಹಿಂದೂ ಸಂಸ್ಕೃತಿಯ ಹೆಗ್ಗುರುತುಗಳಾದ ದೇವಾಲಯ ಸಂಸ್ಕೃತಿಯು ನಾಶಹೊಂದುತ್ತದೆ ಎನ್ನುವುದು ಇದರ ಹಿಂದಿರುವ ಉದ್ದೇಶ!

    ಸ್ನೇಹಿತರೇ, ಇದೊಂದು ಸಂಧಿಕಾಲ. ನಮ್ಮಲ್ಲಿ ಈ ಹಿಂದೆ ದೇವಾಲಯದ ವಿಚಾರವೆತ್ತಿದಾಗಲೆಲ್ಲಾ ಜನರು ದಂಗೆ ಎದ್ದಿದ್ದಾರೆ. ಇದೀಗ ಮತ್ತೆ ನಮ್ಮ ಸರ್ಕಾರ ದೇವಾಲಗಳಲ್ಲಿನ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ. ಇನ್ನು ನಾವು ನೀವು ಕೈಕಟ್ಟಿ ಕೂರುವಂತಿಲ್ಲ! ಎದ್ದು ನಿಲ್ಲಬೇಕಿದೆ, ನಮ್ಮ ನಾಯಕರನ್ನು ಪ್ರಶ್ನಿಸಬೇಕಿದೆ, ದೇವಾಲಯದ ಚಿನ್ನ ಮುಟ್ಟುವ ಮೊದಲು ಭ್ರಷ್ಠಾಚಾರ ಮಾಡಿ ನೀವು ಕೂಡಿಟ್ಟ ಕಪ್ಪು ಹಣವನ್ನು ವಾಪಾಸು ತನ್ನಿರೆಂದು ಆಗ್ರಹಿಸಬೇಕಿದೆ! ಇನ್ನೂ ಸುಮ್ಮನಿದ್ದರೆ ಇಂದು ದೇವಾಲಯದ ಚಿನ್ನ ಕೇಳುವವರು ನಾಳೆ ನಮ್ಮ ಮನೆಯಲ್ಲಿನ ಚಿನ್ನವನ್ನೂ ಕೇಳುವುದಿಲ್ಲವೆನ್ನಲು ಸಾಧ್ಯವೆ? ಸ್ವಲ್ಪ ಯೋಚಿಸಿ.

    ಬನ್ನಿ ಒಕ್ಕೊರಲಿಂದ ಹೇಳೋಣ, ‘ನಾರಾಯಣನ ನಗಕ್ಕೆ ಕೈ ಹಾಕಿದರೆ ನಾಶವಾದೀರಿ ಜೋಕೆ!!’

    ನಮಸ್ಕಾರ. 

Comments