ಆನೆ ಬಂತು ಆನೆ - 2

ಆನೆ ಬಂತು ಆನೆ - 2

ಛೇರ್ಮನ್ರು ಬರುತೀದನ ಗಮನಿಸಿದ ಒಬ್ಬರು ರಿಪೋರ್ಟರ್ ಇವರತ್ತಾ ತಮ್ಮ ಮೈಕ್ ಮತ್ತು ಕ್ಯಾಮರಾಮನ್ ಜೊತೆ ಓಡಿ ಓಡಿ ಬಂದರು. ಇವರು ಬರುವುದನ ಕಂಡ ಛೇರ್ಮನ್ರು ಕ್ಯಾಮೆರಾ ಕಂಡಾಗ ಮಾನವ ಸಹಜ ಕ್ರಿಯೆ ಅಂತೆ ತಮ್ಮ ಹೆಗಲ ಮೇಲಿನ ಟವೆಲ್ ಸರಿಮಾಡಿಕೊಳುತ್ತಾ , ತಮ್ಮ ಹಳದಿ ದಂತ ಪಂಕ್ತೀಗಳ ದರ್ಶನ ಮಾಡಿಸುತ್ತ ಅವರನ ನೋಡಿದರು.

ದುಂಡನೆಯ ಮುಖವುಳ್ಳ , ಸಂಜೆ ಸೂರ್ಯನ ಬಣ್ಣದಂತೆ ಬಣ್ಣವುಳ್ಳ  , ಎಡದಿಂದ ಬಲಗಡೆಗೆ ಕ್ರಾಫ್ ಮಾಡಿಕೊಂಡು , ತನ್ನ ಬಲ ಹೆಗಲ ಮೇಲೆ ತನ್ನ ಕೂದಲನ ಹರಡಿಸಿಕೊಂಡು , ಸ್ಲಿವ್ಲೆಸ್ ರೆಡ್ ಟಾಪ್ , ಬ್ಲೂ ಜೀನ್ಸ್ ಹಾಕ್ಕಿದ , ರೋಸ್ ಕಲರ್ ಲಿಪ್ಸ್ಟಿಕ್ ಹಚ್ಚಿದ ಸುಂದರ್ ಹುಡುಗಿಯೊಬ್ಬಳು ಮೈಕ್ ಹಿಡಿದು ಕೊಂಡು ಛೇರ್ಮನ್ರ ಹತ್ತಿರ ಬಂದಳು. ಛೇರ್ಮನ್ರನ ಒಮ್ಮೆ ನೋಡಿ ಏನೋ ಅನ್ನಿಸಿದವಳಂತೆ ಸ್ವಲ್ಪ ಹಿಂದಕ್ಕೆ ತಿರುಗಿ "ರೀ ಶಾಮಣ್ಣ , ಛೇರ್ಮನ್ ಸಾಹೇಬರ ಮುಖ ಬಿಸಿಲಿಗೆ ಬಾಡಿದೆ , ಸ್ವಲ್ಪ ಅವರನ ರೆಡಿ ಮಾಡಿ ಪ್ಲೀಸ್" ಅಂತ ಯಾರಿಗೋ ಕೈ ಸನ್ನೆ ಮಾಡುತ್ತಾ ಹೇಳಿದಳು. ಶಾಮಣ್ಣ ತಾನು ತಂದಿದ ದೊಡ್ಡ ಬೇಗ ಇಂದ ಒಂದು ಬಿಳಿ ಬಟ್ಟೆ , ರೋಸ್ ವಾಟರ್ ಇದ ಬಾಟಲಿ ತೆಗೆದು ಕೊಂಡು ಛೇರ್ಮನ್ರತ್ತ ದಾವಿಸಿದ. ಛೇರ್ಮನ್ ಸಾಹೇಬರು ಮುಖವನ ವರಿಸಿ , ರೋಸ್ ವಾಟರ್ ಹಾಕಿ ರೆಡಿ ಮಾಡಿದ, " ಮೇಡಂ , ಛೇರ್ಮನ್ರನ ರೆಡಿ ಮಾಡಿದೀನಿ ನೋಡಿ" ಅಂತ ಹೇಳಿ ಹೊರಟ್ಟು ಹೋದ.

ಮತ್ತೆ ಅ ರಿಪೋರ್ಟರ್ ಹುಡುಗಿ ತನ್ನ ಕ್ಯಾಮರಾಮನ್ಗೆ ಕೈ ಸನ್ನೆ ಮಾಡಿ ಕರೆದಳು. ಲೈಟ್ಸ್ ಆನ್ ಆಯಿತು. "ಛೇರ್ಮನ್ರೆ , ನಿಮ್ಮ ಊರಿಗೆ ಆನೆ ಬಂದಿದು ನಿಮ್ಮಗೆ ಯಾವಾಗ ತಿಳಿಯಿತು " , " ಬೆಳ್ಳಿಗೆ ನಮ್ಮ ಆಳು ಚೆನ್ನ ಹೇಳಿದ, ನಾನು.." , "ಇದರ ಬಗೆ ನೀವು ಏನು ಹೇಳುತ್ತೀರ ಛೇರ್ಮನ್ರೆ " , " ಎಲ್ಲ ನಮ್ಮ ಹಳ್ಳಿಗೆ ಬಂದಿರೋ ಗ್ರಹಚಾರ , ಮೂರು ವರ್ಷದಿಂದ ಸರಿಯಾಗಿ ಮಳೆ ಬೆಳೆ ಹಾಗಿಲ್ಲ , ಈ ಬಾರಿ ಆದರು ಏನೋ ವಸಿ ಮಳೆ ಆಗಿತ್ತು , ಬೆಳೆನು ಕೈ ಸೇರೋ ಟೇಮ್ ಆಗಿತ್ತು , ಅಷ್ಟರಲ್ಲಿ ಹೀಗೆ ಆಗಿ ಹೋಯಿತು , ಏನು ಮಾಡೋಕ್ಕೆ ಆಯಿತದೆ .."

ಹೀಗೆ ಛೇರ್ಮನ್ರ ಇಂಟರ್ವ್ಯೂ ನಡೀತ್ತಾ ಇತ್ತು , ಜನ ಸಂದುಳಿ ಜಾಸ್ತಿ ಆಗಿ ಚೆನ್ನ ಗುಂಪ್ನಿಂದ ಹೊರ ಬಂದ. ಅವನ ಕಣ್ಣಿಗೆ ಯಾರೋ ಒಂದು ದೊಡ್ಡ ಮರದ ಹತ್ತೀರ ಅನ್ಯ ಮನಸ್ಕರಾಗಿ ಕೂತಿರುವಂತೆ ಕಾಣಿಸಿತ್ತು. ಯಾರೋ ನೋಡೋಣ ಅಂತ ಸ್ವಲ್ಪ ಮುಂದೆ ಸಾಗಿದ , ಅವನು ಮರಕ್ಕೆ ಹತ್ತೀರ ಆದಂತೆ ಅವನಿಗೆ ಮರದ ಕೆಳಗೆ ಇರುವ ವ್ಯಕ್ತಿ ಶೇಷಪ್ಪ ಅಣ್ಣ ಅಂತ ಕಾಣಿಸಿತ್ತು. ಶೇಷಪ್ಪ ಯಾವುದೊ ಹೇಳಲಾಗದ ಸಂಕಷ್ಟವನು , ದುಃಖವನು ಅನುಭವಿಸುತಿರುವಂತೆ ಚೆನ್ನನಿಗೆ ಕಂಡಿತು. ಶೇಷಪ್ಪ ಅಣ್ಣನ ಕಷ್ಟ ಚೆನ್ನನಿಗೆ ಅರ್ಥವಾಯಿತು. ಇಂಗ್ಲಿಷ್ನಲ್ಲಿ ಒಂದು ಮಾತು ಇದೆ " ಡೋಂಟ್ ಶೇರ್ ಯುವರ್ ಸರೋಸ್ , ಇಟ್ ಡೋಂಟ್ ಹ್ಯಾವ್ ಎನಿ ಮಾರ್ಕೆಟ್ " ಅಂತ ಹಾಗೆ ಇತ್ತು ಶೇಷಪ್ಪನ ಸ್ಥಿತಿ . ಕೈ ಬಂದ ಬೆಳೆ ಬೇರೆ ಅವರ ಪಾಲಾದಾಗ ಮನಸ್ಸಿಗೆ ಆಗುವ ನೋವು ಹೇಳಲಾಗದನ್ತಹದು. ಶೇಷಪ್ಪನ ದುಃಖ ಯಾರಿಗೂ ಬೇಡವಾದ ವಿಷಯವಾಗಿತು . ಮೀಡಿಯಾದವರಿಗೆ ಆನೆ ಮೇಲೆ ಶೂಟಿಂಗ್ ಮಾಡಿದರೆ trp ಜಾಸ್ತಿ ಆಗುತ್ತೆ ಅನೋ ನಮ್ಭಿಕೆ. ಇನ್ನು ಛೇರ್ಮನ್ ಅವರಿಗೆ ತಮ್ಮ ದೊಡ್ಡ ಅಸ್ತಿಕೆ ಮೆರೆಯೋ ಹಂಬಲ , ಇವೆಲದರ ಮಧ್ಯ ಶೇಷಪ್ಪನ ನೋವಿಗೆ ಮಾರ್ಕೆಟ್ ಇರಲ್ಲಿಲ.

ಚೆನ್ನ ಮರದ ಪಕ್ಕಕೆ ಬಂದನು , ಅಷ್ಟ್ರಲ್ಲಿ ಯಾವುದೊ ಜೀಪಿನ ಶಬ್ದ ಕೇಳಿಸಿತು. ಚೆನ್ನ ಯಾರೆಂದು ಹಿಂದೆ ತಿರುಗಿ ನೋಡಿದನು.

ನೀಲಿ ಬಣ್ಣದ ಜೀಪು ಛೇರ್ಮನ್ರ ಇಂಟರ್ವ್ಯೂ ನಡಿತ್ತಾ ಇದ ಜಾಕ್ಕೆ ಬಂದು ನಿಂತ್ತಿತು. ಅದರಿಂದ ಖಾಕಿ ಬಟ್ಟೆ ದರಿಸಿದ ನಾಲ್ಕು ಜನ ಹಿಳಿದರು. ಅದರಲ್ಲಿ ಒಬ್ಬರ ಸೊಂಟ್ಟದ ಬೆಲ್ಟ್ ಗೆ ಬಂದೂಕು ಸಿಕ್ಕಿಸಿದರು. ಇವರನ ನೋಡುತ್ತಾ ಇದ ಚೆನ್ನ ಪೋಲಿಸ್ ಬಂದರು ಅಂದು ಕೊಳುತ್ತ ಮತ್ತೆ ಶೇಷಪ್ಪನ ಕಡೆಗೆ ತಿರುಗಿದ. ಆದರೆ ಬಂದವರು ಪೋಲಿಸ್ ಅಲ್ಲದೆ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಆಗಿದರು.

ಆರು ಅಡಿ ಎತ್ತರದ ಸದೃಡ ಕಾಯ ವೊಂದಿದ್ದ ರೇಂಜ್ ಆಫೀಸರ್ ಪ್ರೆಸ್ನವರ ಪ್ರಶ್ನೆಗಳಿಗೆ ಉತ್ತರಿಸದೆ ನೇರವಾಗಿ ಶೇಷಪ್ಪ ಕೂತ್ತಿದ ಮರದ ಹತ್ತಿರಕ್ಕೆ ನಡೆದರೂ. ಮರದ ಕೆಳಗೆ ಕೂತ್ತಿದ ಬಡಕಲು , ಕುಳ್ಳನೆಯ ಗಡ್ದದಾರಿ ಶೇಷಪ್ಪನ ದಿಟ್ಟಿಸಿ ನೋಡುತ್ತಾ ಹಾಗೆ ಮುಂದೆ ಸಾಗಿದರು. ಶೇಷಪ್ಪನ ತೊಟ್ಟದ ಬೇಲಿ ಹತ್ತಿರ ಬಂದು , ಹಿಂದಕ್ಕೆ ತಿರುಗಿ ಕೈ ಸನ್ನೆ ಮಾಡುತ್ತಾ ಚೆನ್ನನ ಕರೆದರೂ. ಅವರ ಹಿಂದೆ ಅವರ ಕಾನ್ಸ್ಟೇಬಲ್ಗಳು ಬಂದರು. ರೇಂಜ್ ಆಫೀಸರ್ ತಮ್ಮ ಕಾನ್ಸ್ಟೇಬಲ್ಗಳಿಗೆ ಪ್ರೆಸ್ನವರನ ಅಲ್ಲಿಂದ ದೂರ ಕಳಿಸುವಂತೆ ಹೇಳಿ ಚೆನ್ನನ ಕಡೆ ನೋಡುತ್ತಾ " ಏನಯ್ಯ ನಿನ್ನ ಹೆಸರು " , " ಚೆನ್ನ ಬುದ್ದಿ " , "ಏನ್ ಕೆಲಸ ಮಾಡಿಕೊಂಡು ಇದಿಯಾ " , " ನಾನ ಬುದ್ದಿ ,  ಈ ಊರಿನ ಛೇರ್ಮನ್ರ ಮನೆ ಅಲ್ಲಿ ಕೂಲಿ ಮಾಡಿಕೊಂಡು ಇದೀನಿ ಬುದ್ದಿ " , " ಸರಿ ಈ ತೊಟ್ಟ ಯಾರಿಗೆ ಸೇರಿದಯ್ಯ " , " ಈ ತೊವಟ್ಟ , ಆ ಮರದ ಕೆಳಗೆ ಕುಂತವರಲ್ಲ ಶೇಷಪ್ಪ  ಅಣ್ಣನವರಿಗೆ ಸೇರಿದು ಸಾಮಿ " ಅಂತ ಶೇಷಪ್ಪನ ಕಡೆ ಕೈ ತೋರಿಸುತ್ತ ಹೇಳಿದನು ಚೆನ್ನ. " ಸರಿ ಆ ತೊಟ್ಟದ ಮುಳ್ಳಿನ ಬಾಗಿಲನ ಸ್ವಲ್ಪ ತೆಗಿಯಪ್ಪ " , ಚೆನ್ನ ನಿಧಾನವಾಗಿ ಮುಳ್ಳಿನ ಬಾಗಿಲನು ತೆಗೆದನು.

ರೇಂಜ್ ಆಫೀಸರ್ ಕಾನ್ಸ್ಟೇಬಲ್ ಗಳಿಗೆ ಕೈ ಸನ್ನೆ ಮಾಡಿ ಕರೆಯುತ್ತ  ತೊಟ್ಟದ ಒಳ್ಳಗೆ ಹೋದರು. ಅವರ ಹಿಂದೆ ಚೆನ್ನ ಕೂಡ ಒಳ್ಳಗೆ ಹೋದನು. ಆಫೀಸರ್ ಸಾಹೇಬರು ತೊಟ್ಟದ ಸುತ್ತ ಮುತ್ತ ನೋಡುತ್ತಾ ನಡೆದರೂ. ಉರುಳಿದ ಬಾಳೇ ಮರ , ಎಲ್ಲೆಂದರಲ್ಲಿ ಚೆಲ್ಲ ಪಿಲ್ಲಿ ಆಗಿದ ಸಪ್ಪೋಟ , ಆನೆಯ ಕಾಲು ತುಳಿತಕ್ಕೆ ಹಾಳಾಗಿದ ತರಕಾರಿ ಗಿಡಗಳು ಎಲ್ಲವನು ಗಮನಿಸುತ್ತ ಆಫೀಸರ್ ಮುಂದೆ ನಡೀತ್ತಾ " ರೀ ಮುರಳಿ ಬನ್ರಿ ಇಲ್ಲಿ " ಅಂತ ಕಾನ್ಸ್ಟೇಬಲ್ ಒಬ್ಬರನ ಕರೆದರೂ. ಅಲ್ಲಿ ನೋಡ್ರಿ ಆನೆ ಪೈಕಾನೆ , ಊರಿನ ಜನ ಹೇಳಿದ ಹಾಗೆ ರಾತ್ರಿ ಆನೆ ಬಂದಿರೋದು ಗ್ಯಾರಂಟೀ , ನೋಡಿ ಆಚ್ಚ್ಚೆ ಕಡೆ ಮರದ ಹತ್ತೀರ ಒಬ್ಬರು ಕೂತ್ತಿದರಲ್ಲ ಅವರೇ ಈ ತೊಟ್ಟದ ಮಾಲೀಕರು , ಅವರ ಹತ್ತೀರ ಹೋಗಿ ತೊಟ್ಟದ ವಿಸ್ತಿರಣ , ಹಾಗೆ ಈ ತೊಟ್ಟ ಬಿಟ್ಟು ಮತ್ತೆ ಅಕ್ಕ ಪಕ್ಕದ ತೊಟ್ಟದಲ್ಲಿ ಹಾನಿ ಆಗಿದ್ರೆ ಅದನ್ನೆಲ್ಲಾ ನೋಟ್ ಮಾಡಿಕೊಂಡು , ತೊಟ್ಟದ ಮಾಲೀಕರ  ಹತ್ತೀರ ಸೈನ್ ತಗೊಂಡು  , ರೆಕಾರ್ಡ್ ಬುಕ್ ಜೊತೆ ಸ್ಟೇಷನ್ ಗೆ ನೇರವಾಗಿ ಬಂದು ಬಿಡಿ ಆಯ್ತಾ " ಅಂತ ಮುರಳಿಗೆ ಹೇಳುತ್ತಾ ತೊಟ್ಟದ ಬಾಗಿಲ ಹತ್ತೀರ ಬಂದು ನಿಂತರು.

ಆಫೀಸರ್ ಶರ್ಟ್ ಜೇಬ್ಬಿನಲ್ಲಿ ಇದ್ದ ವಾಕಿ ಟಾಕಿ ನಲ್ಲಿ " ಗೇಣಿ ಕೊಪ್ಪಲಿಂದ ಆರು ಕಿಲೋಮೀಟರು ದೂರದ ಕಾಡಿನೊಳಗೆ ಆನೆ ಕಾಣಿಸಿಕೊಂಡು ಇದೆ " ಅಂತ ಮೆಸೇಜ್ ಬಂತು. ಇದನ ಕೇಳಿದ ಆಫೀಸರ್ ಮುರಳಿಗೆ ಕೈ ಸನ್ನೆ ಮಾಡಿ ಎಲ್ಲ ಮುಗಿಸಿಕೊಂಡು ಬರುವಂತೆ ತಿಳಿಸುತ್ತ ,  " ಎ ಬಂದರಯ್ಯ ಆನೆ ಕಾಣಿಸಿಕೊಂಡು ಇದೆಯಂತೆ ನಾವು ಅಲ್ಲಿಗೆ ಹೋಗೋಣ " ಅಂತ ಕಾನ್ಸ್ಟೇಬಲ್ ಗಳನ ಕರೆಯುತ್ತ ಜೀಪಿನ ಕಡೆಗೆ ಬಿರು ಬಿರನೆ ಹೆಜ್ಜೆ ಹಾಕಿದರು. ಪ್ರೆಸ್ಸ್ನವರ ಯಾವ ಪ್ರಶ್ನೆ ಗಳಿಗೂ ಉತ್ತರಿಸದೆ ಆಫೀಸರ್ ಮತ್ತು ಉಳಿದ ಇಬ್ಬರು ಕಾನ್ಸ್ಟೇಬಲ್ಗಳು ಜೀಪ್ ಹತ್ತಿ ಹೋರಟು ಹೋದರು.

 

"ಸ್ನೇಹಿತರೆ ಇಂತಿ ನಿಮ್ಮ ಟಿವಿ ವಿನೋದ್ x ಇಂದ  ಸ್ವಾಗತ ಈ ಆನೆ ಬಂತು ಆನೆ ವಿಶೇಷ ಕಾರ್ಯ ಕ್ರಮಕ್ಕೆ , ಈ ಕಾರ್ಯ ಕ್ರಮಕ್ಕೆ ಅಥಿತಿ ಆಗಿ ಬಂದಿರೋ ಇಕೋಲಾಜಿಕಲ್ ಎಕ್ಸ್ಪರ್ಟ್ ಸುರೇಶ ಕುಮಾರ್ ಮತ್ತು ರಿಟೈರ್ಡ್ ಫಾರೆಸ್ಟ್ ಆಫೀಸರ್ ಶ್ರೀಕಾಂತ್ ಅವರಿಗೆ ನಮ್ಮ ಟಿವಿ x ಚಾನೆಲ್ ಇಂದ ಹೃತ್ಪೂರಕ ಸ್ವಾಗತ ಕೋರುತ್ತ ಈ ಕಾರ್ಯ ಕ್ರಮ ಶುರು ಮಾಡೋಣ " ಅಂತ ಟಿವಿ ಚಾನೆಲ್ x ನಲ್ಲಿ ಕಾರ್ಯ ಕ್ರಮ ಒಂದು ಶುರುವಾಯಿತು.

" ಮೊದಲಿಗೆ ಸುರೇಶ ಅವರಿಗೆ ನನ್ನ ಪ್ರಶ್ನೆ , ಸುರೇಶ ನೀವು ನೋಡುತ್ತಾ ಇದ್ದೀರಾ ಗೇಣಿಕೊಪ್ಪಳಕ್ಕೆ ಆನೆ ಬಂದಿತು ಅಂತ , ಈ ಮನುಷ ಮತ್ತು ಪ್ರಾಣಿಗಳ ನಡುವೆ ನಡೆಯುತ್ತಿರುವ ಸಂಗರ್ಷಕ್ಕೆ ಏನು ಕಾರಣ ಇರಬಹುದು "

"ನೋಡಿ ಮೊದಲನೇದಾಗಿ ಕಾಡು ನಾಶ ಆಗುತ ಇರೋದೇ ಇದಕೆಲ್ಲ ಮುಖ್ಯ ಕಾರಣ , ಆನೆ ಅಂತ ದೊಡ್ಡ ಜೀವಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ದೊರೆಯುತ್ತಿಲ್ಲ , ಅದಕ್ಕೆ ಅವು ಆಹಾರ ಹುಡುಕುತ್ತ ಮನುಷ್ಯನ ಕಡೆ ಬರತ್ತಾ ಇವೆ "

"ಕೇವಲ ಆಹಾರ ಮಾತ್ರ ಕಾರಣನೋ ಇಲ್ಲ ಇನ್ನು ಏನಾದರು ಕಾರಣಗಳು ಇರಬಹುದ "

"ನೋಡಿ ಆನೆ ಒಂದು ಗುಂಪಿನೊಂದಿಗೆ ಬದುಕುವ ಪ್ರಾಣಿ , ಮತ್ತೆ ಪ್ರಾಯಕ್ಕೆ ಬಂದ ಅಂತ ಸಲಗಗಳು ತಮ್ಮ ವಂಶವನ ಬೆಳಿಸೋದಕ್ಕೆ ಪಕ್ಕದ ಕಾಡಿಗೆ ಹೋಗುತ್ತವೆ , ಇವು ಬಳಸೋ ದಾರಿನೇ ಆನೆ ಕಾರಿಡಾರ್ ಅಂತ ಕರೆಯಲಾಗುತ್ತೆ , ಆದರೆ ಇವತ್ತಿನ ದಿನಗಳಲ್ಲಿ ಆನೆ ಕಾರಿಡಾರ್ ಜಾಗ ಕೃಷಿ ಭೂಮಿಗಳಾಗಿ ಪರಿವರ್ತನೆ ಆಗಿವೆ , ಹಾಗಾಗಿ ಆನೆಗಳ ದಾಳಿ ನಿರಂತರವಾಗಿ ಮುಂದು ವರೆದಿದೆ "

"ಶ್ರೀಕಾಂತ ಸರ್ , ಆನೆ ಕಾರಿಡಾರ್ಗಳು ಕೃಷಿ ಭೂಮಿಗಳಾಗಿ ಬದಲಾಗಿವೆ ಅಂತ ಸುರೇಶ ಅವರು ಹೇಳುತ್ತಾ ಇದ್ದಾರೆ , ಇದರ ಬಗೆ ಸರಕಾರ ಯಾವ ರೀತಿ ಕ್ರಮ ತೆಗೆದು ಕೊಂಡು ಇದೆ "

"ನೋಡಿ ಸುರೇಶ ಅವರು ಹೇಳಿದ ಹಾಗೆ ಆನೆ ಕಾರಿಡಾರ್ ಅಂತ ಗುರತಿಸಲ್ಪಟ್ಟ ಜಾಗಗಳು ಕೃಷಿ ಭೂಮಿಗಳಾಗಿ ಪರಿವರ್ತನೆ ಆಗಿವೆ ನಿಜ ಆದರೆ ಅವೆಲ್ಲ ಅಕ್ರಮವಾಗಿ ಆಗಿರುವನ್ತಹದು , ಸರಕಾರ ಇದರ ಬಗೆ ತನಿಖೆ ಮಾಡಲು ಕಮಿಟಿ ಮಾಡಿತು , ಕಮಿಟಿಯಾ ವರದಿಯಾ ಆದಾರದ ಮೇಲೆ ಅಕ್ರಮವಾಗಿ ಕೃಷಿ ಮಾಡಿದ ಜನಗಳನ ಅಲ್ಲಿಂದ ವಕಲು ಎಬ್ಬಿಸುವಂತ ಕ್ರಮ ಜಾರಿಗೆ ತಂದಿದೆ "

"ಆದರೆ ಇಲ್ಲಿವರೆಗೂ ಯಾರನು ಅಲ್ಲಿಂದ ವಕಲು ಎಬ್ಬಿಸಿದಂತ ಉದಾರಣೆಗಳೇ ಇಲ್ಲ "

"ನೋಡಿ ಜನರನ ವಕಲು ಎಬ್ಬಿಸುವುದ್ ಅಷ್ಟು ಸುಲಭದ ಕೆಲಸ ಅಲ್ಲ , ಅವರಿಗೆ ಹೊಟ್ಟೆ ಪಾಡಿಗೆ ಬೇರೆಯ ಜಾಗವನ ಕೋಡಬೇಕಾಗುತೆ , ಮತ್ತೆ ಈ ಜನರಿಗೆ ಮೂಲಭೂತ ಸೌಕರ್ಯ ಗಳನ ಸರಕಾರ ಒದಗಿಸಬೇಕಾಗುತ್ತೆ , ಇವೆಲ್ಲ ಒಂದೇ ದಿನದಲ್ಲಿ ಆಗೋ ಕೆಲಸ ಅಲ್ಲ , ಇದರ ಜೊತೆಗೆ ಈ ಆನೆ ಕಾರಿಡಾರ್ ಅಂತ ಗುರುತಿಸಲ್ಪಟ್ಟ ಕೆಲವು ಜಾಗಗಳು ಸ್ಪೆಷಲ್ ಎಕನಾಮಿಕ್ ಜೋನ್ ಎಂದು ಕೂಡ ಗುರುತಿಸಲ್ಪಟ್ಟಿರುತ್ತೆ ಹಾಗಾಗಿ ಕೆಲವಂದು ಸಮಸ್ಯೆ ಬಗೆ ಹರಿಯದೆ ಹಾಗೆ ಉಳಿದಿದೆ , ಮತ್ತೆ ನಿಮ್ಮಗೆ ಒಂದು ಉದಾರಣೆ ಹೇಳುತ್ತೀನಿ ಕೇಳಿ , ನಮ್ಮ ಬನೆರುಗಟ್ಟ ದಿಂದ ತಮಿಳ್ ನಾಡಿನ ಕಾಡಿಗೆ ಒಂದು ಕಿಲೋಮೀಟರು ಉದ್ದದ ಆನೆ ಕಾರಿಡಾರ್ ಮಾಡೋದಕ್ಕೆ ಸರ್ಕಾರ ಡಿಸೈಡ್ ಮಾಡಿದೆ , ಆದರೆ ಅಲ್ಲಿ ಅಕ್ರಮವಾಗಿ ನಡಿತ್ತ ಇರೋ ಗ್ರಾನೈಟ್ ಬುಸ್ಸಿನೆಸ್ಸ್ ಇಂದ ತೀವ್ರ ತೊಂದರೆ ಆಗಿದೆ , ಹೀಗೆ ಅನೇಕ ಸಮಸ್ಯೆಗಳು ಇದೆ "

"ಸ್ಪೆಷಲ್ ಎಕನಾಮಿಕ್ ಜೋನ್ ಇದರಿಂದ ಯಾವ ತರಹ ತೊಂದರೆಗಳು ಆಗಿವೆ , ಮತ್ತೆ ಸರ್ಕಾರ ಈ ಜಾಗಗಳನ ಸ್ಪೆಷಲ್ ಎಕನಾಮಿಕ್ ಜೋನ್ ಅಂತ ಯಾಕೆ ಗುರುತಿಸಿದೆ "

"ಸ್ಪೆಷಲ್ ಎಕನಾಮಿಕ್ ಜೋನ್ ಅಂದರೆ ಪ್ರಗತಿಗೆ ಹೇಳಿ ಮಾಡಿಸಿದ ಜಾಗಗಳು ಅಂತ , ಅಲ್ಲಿಗೆ ರೈಲ್ವೆ ಹಳಿಗಳು ಬರುತ್ತೆ , ಮತ್ತೆ ಎಲೆಕ್ಟ್ರಿಕಲ್ ಕಂಬಗಳು ಅಂದರೆ ಟವರ್ಗಳು ಬರುತ್ತೆ , ಇವೆಲ್ಲ ನಡಿ ಬೇಕ್ಕಾದರೆ ರಸ್ತೆ ಆಗಬೇಕಾಗುತ್ತೆ , ರಸ್ತೆ ಆಗಬೇಕು ಅಂದರೆ ಕಾಡು ನಾಶ ಆಗಬೇಕಾಗುತ್ತೆ , ಕಾಡು ನಾಶ ಆದರೆ ಸುರೇಶ ಅವರು ಹೇಳಿದ ಹಾಗೆ ಪ್ರಾಣಿಗಳಿಗೆ ತೊಂದರೆ ಆಗುತ್ತೆ , ಈ ಬಗೆ ಸರಕಾರ ಒಂದು ಮಹತರವಾದ ನಿರ್ಧಾರ ಕೈ ಗೊಳಬೇಕಾಗುತ್ತೆ "

"ಸುರೇಶ ಸರ್ ಈ ಆನೆ ದಾಳಿಗಳನ ವೈಜ್ಞಾನನಿಕ್ಕವಾಗಿ ತಡಿಯೋದಕ್ಕೆ ಸಾಧ್ಯ ಇದೆಯಾ ಹೆಂಗೆ "

"ನೋಡಿ ಇದ್ದನ ತಡಿಯೋಕ್ಕೆ ಯಾವ ರೀತಿಯ ದಾರಿಗಳು ಇಲ್ಲ , ಆದರೆ ಆನೆ ಅಂತ ಪ್ರಾಣಿ ಕೃಷಿ ಭೂಮಿ ಒಳ್ಳಗೆ ಬರದಂತೆ  ಮಾಡಬೇಕು ಅಷ್ಟೇ "

 

"ಹೀಗೆ ಚರ್ಚ್ಚೆ ಮುಂದುವರೆಯುತ್ತೆ ಒಂದು ಸಣ್ಣ ಬ್ರೇಕ್ ನಂತರ , ಡೋಂಟ್ ಗೋ ಅವೇ "

 

ಶೇಷಪ್ಪನ ತೊಟ್ಟ ದಿಂದ ಹೊರಟ್ಟ ಫಾರೆಸ್ಟ್ ಡಿಪಾರ್ಟ್ಮೆಂಟ್ ಜೀಪ್ ಒಂದು ಕಿಲೋಮೀಟರು ಮುಂದೆ ಬಂದಿತು. ಜೀಪ್ನ ಎಡಗಡೆ ಸೀಟ್ಗೆ ಒರಗಿ ಕುಳಿತ್ತಿದ್ದ ರೇಂಜ್ ಆಫೀಸರ್ ತಮ್ಮ ಸೈಡ್ನಲ್ಲಿ ಇದ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳುತ್ತ ಜೀಪ್ ಡ್ರೈವ್ ಮಾಡುತ್ತಾ ಇದ ಶಂಕರಪನಿಗೆ "ರೀ ಶಂಕರಪ್ಪ ಸ್ವಲ್ಪ ಹಾಗೆ ಆ ರಹಿಮನ ಮನೆ ಹತ್ತಿರ ನಡೀರಿ , ಅವನಿಗೆ ಬೇಕಾದ ಎಲ್ಲ ಅರೇಂಜ್ಮೆಂಟ್ ಮಾಡಿಕೊಳ್ಳೋಕ್ಕೆ ಹೇಳೋಣ ".

ಜೀಪ್ ಒಂದು ಸಣ್ಣ ಗುಡಿಸಲುಗಳು ಇದ ಜಾಗಕ್ಕೆ ಬಂದು ನಿಂತಿತ್ತು . ಕೆಳಗೆ ಇಳಿದ ಆಫೀಸರ್ ಒಂದು ಗುಡುಸಲಿನ ಮುಂದೆ ಬಂದು ನಿಂತ್ತರು. ಅಲ್ಲೇ ಹಾಕಿದ ಒಂದು ಬೆಂಚ್ ಕಲ್ಲಿನ ಮೇಲೆ ಕೂತ್ತಿಕೊಂಡರು.ಕಣ್ಣಿಗೆ ಹಾಕಿದ ಕೂಲಿಂಗ್ ಗ್ಲಾಸ್ ತೆಗೆಯುತ್ತ ತಲೆ ಮೇಲೆ ಎತ್ತಿ  ಶಂಕರಪ್ಪನ ಕಡೆ ನೋಡುತ್ತಾ "ರೀ ಶಂಕರಪ್ಪ ಆ ಸಾಬಿನ ಕರಿ ರೀ ಆಚೆಗೆ " , ಶಂಕರಪ್ಪ ಮನೆಯ ಬಾಗಿಲ ಹತ್ತಿರ ಹೋಗಿ "ಅಯ್ಯೋ ರಹಿಮಾ ಬಾರೋ ಹೊರಗೆ ಸಾಹೇಬರು ಬಂದವರೇ " ಅಂತ ಕೂಗಿ ಕರೆದನು. ಒಂದು ಕಬ್ಬಿಣದ ಕೊಂಡಿಯೇ ಚಿಲಕವಾಗಿದ ಮರದ ಬಾಗಿಲನ ತೆಗೆಯುತ್ತ " ಯಾರದು " ಅಂತ ಕೆಂಪು ಲುಂಗಿ , ಬಿಳಿ ಬನಿಯನ್ ದರಿಸಿದ ರಹಿಮ್ ಆಚೆ ಬಂದನು . ಬಾಗಿಲ ಬಳಿ ನಿಂತ್ತಿದ ಶಂಕರಪ್ಪನ ನೋಡಿ ನಗೆ ಬಿರಿಯುತ್ತ " ಏನ್ ಶಂಕರಪ್ಪಣ್ಣ " ಅಂತ ಮಾತು ಮುಂದುವರಿಸುವಷ್ಟ್ರಲ್ಲಿ ಶಂಕರಪ್ಪ ಕೈ ಬೆರಳನ ಸಾಹೇಬರ ಕಡೆ ತೋರಿಸುತ್ತ "ಎ ಅಲ್ಲಿ ನೋಡೋ ಸಾಹೇಬರು ಬಂದವರೇ" ಅಂತ ಹೇಳಿದನು.

ರೇಂಜ್ ಆಫೀಸರ್ನ ನೋಡಿ ಮುಗುಳ ನಗೆ ನಗುತ್ತ ರಹಿಮ "ಏನ್ ಸಾಬ್ ಹೆಂಗಿದೀರ , ನಮ್ಮದು ಅಕ್ಕ ನಿಮ್ಮದು ಹೆಂಡತಿ ಹೆಂಗಿದರೆ " , ಕೈ ಅಲ್ಲಿ ಹಿಡಿದಿದ ಕೂಲಿಂಗ್ ಗ್ಲಾಸ್ನ ಕಣ್ಣಿಗೆ ಹಾಕುತ್ತ ರಹಿಮನ ದಿಟ್ಟಿಸಿ ನೋಡುತ್ತಾ ಆಫೀಸರ್ "ಲೇ ರಹಿಮ ನಿನ್ನ ಅಕ್ಕನ ನಾನು ಯಾವಾಗ ಮದುವೆ ಆಗಿದಿನೋ , ಇದನ ನನ್ನ ಹೆಂಡತಿ ಕೇಳಿಸಿಕೊಂಡರೆ ನನ್ನ ಕತೆ ಮುಗಿತ್ತು " ಅಂತ ನಗುತ್ತ ಹೇಳಿದರು. ಇದನ ಕೇಳಿದ ಎಲ್ಲರು ಗೊಳ್ ಎಂದು ನಕ್ಕಿದರು . ರಹಿಮ ಬಲ ಕೈನ ತನ್ನ ತೊಡೆಗೆ ವರೆಸುತ್ತ " ಅರೆ ಸಾಬ್ ನಾನು ಹೇಳಿದು ಹಂಗಲ್ಲ , ನಿಮ್ಮ ಹೆಂಡತಿ ನನಗೆ ಅಕ್ಕ ಇದ ಹಾಗೆ , ಅದಕ್ಕೆ ನಾನು ನಮ್ಮದು ಅಕ್ಕ" ಅಂತ ಮಾತು ಮುಂದು ವರೆಸುವದನ ನಿಲ್ಲಿಸಿ ರೇಂಜ್ ಆಫೀಸರ್ ಕೂತ್ತಿದ ಬೆಂಚ್ ಕಲ್ಲಿನ ಕಡೆ ನಡೆಯುತ್ತಾ " ಅರೆ ಇಸ್ಕಿ ಮಾದರ್ ಚೋದ್ " ಅಂತ ಹೇಳುತ್ತಾ ಬಾಗಿ ಕಲ್ಲನ ಎತ್ತಿ ಕೊಂಡನು . ಇದನ ಗಮನಿಸಿದ ಆಫೀಸರ್ " ಲೇ ರಹಿಮ ಯಾಕೋ ಕಲ್ಲು ಎತ್ತಿ ಕೊಳುತ್ತ ಇದಿಯ" ಅಂತ ಹೇಳುತ್ತಾ ಹಿಂದಕ್ಕೆ ತಿರುಗಿ ನೋಡಿದರು , ಅಲ್ಲಿ ಒಂದು ಹಂದಿ ಏನನೋ ತಿನುತ್ತ ನಿಂತಿತ್ತು . ಮತ್ತೆ ಆಫೀಸರ್ ರಹಿಮನ ಕಡೆ ತಿರುಗಿ " ಲೇ ಸಾಬಿ ಬಿಸಕ್ಕೋ ಕಲ್ಲನ , ಅದರ ಪಾಡಿಗೆ ಅದು ಇದೆ " ಅಂತ ಆಜ್ಞಾ ಧ್ವನಿಲ್ಲಿ ಹೇಳಿದರು . ರಹಿಮ ಕೈ ಅಲ್ಲಿ ಹಿಡಿದಿದ ಕಲ್ಲನ ಬಿಸಾಕುತ್ತ " ನಿಮ್ಮಗೆ ಗೊತ್ತಿಲ ಸಾಬ್ , ನಮ್ಮ ಜಾತಿ ಅವರನ ಕಂಡರೆ ಆಗದ ಆ ಸೂರ್ಯ ನ ಕೆಲಸ ಇದು , ನಮ್ಮ ಜಾತಿ ಹಾಳು ಆಗಲ್ಲಿ ಅಂತ ಅವನೇ ಈ ಸುವರನ ಇಲ್ಲಿ ಸಾಕಿ ಕೊಂಡು ಇರೋದು " ಅಂತ ಹೇಳಿದನು . ಇದನ ಕೇಳಿದ ಆಫೀಸರ್ ಬೆಂಚ್ ಕಲ್ ಇಂದ ಮೇಲೆ ಏಳುತ್ತಾ ಕೋಪದಿಂದ  " ಲೇ ಸಾಬಿ , ಆ ಸೂರ್ಯ ಹಂದಿ ಸಾಕೊಕ್ಕೆ ಲೈಸೆನ್ಸ್ ತಗೊಂಡು ಇದ್ದಾರೆ , ಅವರ ಹೊಟ್ಟೆ ಪಾಡಿಗೆ ಅವರು ಇದನ ಸಾಕುತ್ತಾರೆ ವಿನಃ ನಿನ್ನ ಜಾತಿ ಹಾಳು ಮಾಡೋಕ್ಕೆ ಅಲ್ಲ , ಏನೋ ಅವರು ನಿನ್ನ ಪಕ್ಕದ ಮನೆಯಲ್ಲಿ ಇದ್ದಾರೆ ಅಂದ ಮಾತಿರಕ್ಕೆ ಹೀಗೆಲ್ಲ ಹೇಳೋದು ಸರಿ ಅಲ್ಲ , ಇನ್ನೊದು ಸರಿ ಈ ಜಾತಿ ಗಿತ್ತಿ ಹಾಳು ಮಾಡೋಕ್ಕೆ ಅಂದರೆ ಅಷ್ಟೇ ಜಾಡಿಸಿ ಒದಿ ಬಿಡುತ್ತೀನಿ  ಹುಷಾರು " ಅಂತ ಹೇಳುತ್ತಾ ರಹಿಮನ ಹತ್ತಿರ ಬಂದರು .ರಹಿಮನ ಕಣ್ಣು ಗಳನೆ ನೋಡುತ್ತಾ ಆಫೀಸರ್  " ಸರಿ ನೋಡು ಆ ಜೇನಿನ ಹೊಳೆ ಹತ್ತಿರ ಆನೆ ಬಂದಿದೆ ಅಂತ ನಮ್ಮಗೆ ಮೆಸೇಜ್ ಬಂದಿದೆ , ನಾವು ಇವಾಗ ಅಲ್ಲಿಗೆ ಹೊರಟ್ಟಿದಿವಿ , ನೀನು ಬೇಕಾದ ಎಲ್ಲ ಅರೇಂಜ್ಮೆಂಟ್ ಮಾಡಿಕೊಂಡು ಸ್ವಲ್ಪ ಹೊತ್ತಿನಲ್ಲೇ ರೆಡಿ ಆಗಿ ಅಲ್ಲಿಗೆ ಬಂದು ಬಿಡು , ಅಯಿತ್ತ , ಆಮೇಲೆ ಮತ್ತೆ ನೀನು ಕಾಳ ದಂದೆಗಳ್ಳಲ್ಲಿ ಇನ್ವೊಲ್ವ್ ಆಗಿದಿಯ ಅಂತ ಕಂಪ್ಲೇಂಟ್  ಬಂದಿದೆ , ಅದರ ಬಗೆ ನಿನ್ನ ಹತ್ತಿರ ಮಾತು ಆಡ ಬೇಕು , ಬೇಗ ರೆಡಿ ಆಗಿ ಬಾ " ಅಂತ ಹೇಳಿ ಜೀಪ್ ನಿಂತ ಕಡೆ ಹೆಜ್ಜೆ ಹಾಕಿದರು . ಸಾಹೇಬರು ಜೀಪಿನ ಕಡೆ ಹೋಗುತ್ತಿರುವದನ ನೋಡಿದ ಶಂಕರಪ್ಪ ಮತ್ತೆ ಇತ್ತರೆ ಕಾನ್ಸ್ಟೇಬಲ್ಗಳು ಅವರನೇ ಹಿಂಬಾಲಿಸಿದರು .

ಆಫೀಸರ್ ಮತ್ತು ಇತ್ತರರು ಜೀಪ್ ಹತ್ತಿ ಕೊಂಡರು. ಜೀಪ್ ಜೇನಿನ ಹೊಳೆ ಕಡೆ ಹೊರಟಿತ್ತು. ಜೇನಿನ ಹೊಳೆಗೆ ಹೋಗೋ ರಸ್ತೆ ಸಂಪೂರ್ಣ ಹಾಳು ಆಗಿತು. ರಸ್ತೆ ಅಲ್ಲಿ ಗುಂಡಿ ನೋ ಇಲ್ಲ ಗುಂಡಿಗಳಲ್ಲಿ ರಸ್ತೆ ನೋ ಗೊತ್ತು ಆಗುತ್ತಾ ಇರಲ್ಲಿಲ . ಶಂಕರಪ್ಪ ಜೀಪ್ನ ನಿಧಾನವಾಗಿ ಚಲಾವಣೆ ಮಾಡುತ್ತಾ ಇದ . ಲೆಫ್ಟ್ ಸೈಡ್ ನಲ್ಲಿ ಕೂತ್ತಿದ ಆಫೀಸರ್ ಕಣ್ಣು ಮುಚ್ಚಿ ತೂಕಡಿಸುತ್ತ ಇದ್ದರು . ನಿಶಬ್ದ ವಾಗಿ ಇದ್ದ ಆ ಕಾಡಿನ ಮಧ್ಯೆ ಜೀಪ್ ಸಾಗಿತು . ರಹಿಮನ ಮನೆ ಇಂದ ಜೇನಿನ ಹೊಳೆಗೆ ಸುಮ್ಮರು ನಾಲ್ಕು ಕಿಲೋಮೀಟರು ದೂರ ಇತ್ತು , ಆ ಕೆಟ್ಟ ರಸ್ತೆ ಅಲ್ಲಿ ಅಷ್ಟು ದೂರ ಹೋಗೋಕ್ಕೆ ಸುಮ್ಮಾರು ಅರ್ಧ ಗಂಟೆ ಬೇಕಿತ್ತು . ಜೀಪ್ ಒಂದು ಎರಡು ಕಿಲೋಮೀಟರು ದೂರ ಹೋಗಿತು .

ಶಂಕರಪ್ಪ ದಾರಿಲ್ಲಿ ಎಡ ಬದಿ ಅಲ್ಲಿ ನಿಂತಿದ ಒಂದು ವೈಟ್ ಇನ್ನೋವ ಕಾರ್ ನೋಡಿ " ಸರ್ ಸರ್ , ಅಲ್ಲಿ ನೋಡಿ ಯಾವುದೊ ಒಂದು ಕಾರ್ ನಿಂತಿದೆ " ಅಂತ ಮಲಗಿದ ಆಫೀಸರ್ ನ ಕೂಗಿ ಹೇಳಿದ. ಶಂಕರಪ್ಪನ ಮಾತು ಕೇಳಿ ಆಫೀಸರ್ ಕಣ್ಣು ಬಿಟ್ಟು , ಶಂಕರಪ್ಪನ ಕಡೆ ತಿರುಗಿ ನೋಡಿದರು , ಶಂಕರಪ್ಪ ಬಲ ಕೈ ಅಲ್ಲಿ ಜೀಪಿನ ಸ್ಟೇರಿಂಗ್ ಹಿಡಿದು ತನ್ನ ಎಡ ಕೈ ಅನ್ನು ಕಾರ್ ಕಡೆ ತೋರಿಸುತ್ತ "ಅಲ್ಲಿ ನೋಡಿ ಸಾರ್ ಅಂತ ಹೇಳಿದನು . ಆಫೀಸರ್ ಶಂಕರಪ್ಪ ಕೈ ತೋರಿಸಿದ ಕಡೆ ನೋಡುತ್ತಾ " ರೀ ಗಾಡಿನ ಕಾರ್ ಮುಂದೆ ನಿಲಿಸಿ " ಅಂತ ಹೇಳಿದರು . ಶಂಕರಪ್ಪ ಕಾರ್ ಗಿಂತ ಸ್ವಲ್ಪ ಮುಂದೆ ಹೋಗಿ ಜೀಪ್ ನಿಲಿಸಿದನು. ಆಫೀಸರ್ ಜೀಪಿನ ಹಿಂದೆ ಕೂತ್ತಿದ ಕಾನ್ಸ್ಟೇಬಲ್ ಗಿರಿಶನ ನೋಡುತ್ತಾ " ರೀ ಗಿರಿ ಸ್ವಲ್ಪ ಇಳಿದು ಹೋಗಿ ಆ ಕಾರ್ನಲ್ಲಿ ಯಾರದು ಇದ್ದರ ಅಂತ ನೋಡಿ" ಅಂತ ಆರ್ಡರ್ ಮಾಡಿದರು . ಜೀಪಿನ ಹಿಂದೆ ಇಂದ ಇಳಿದು ಗಿರೀಶ್ ಕಾರ್ ನಿಂತ ಕಡೆ ನಡೆದನು . ಕಾರ್ ಹತ್ತಿರ ಹೋಗಿ ಕಾರನ ಕಿಟ್ಟಕ್ಕಿ ನಲ್ಲಿ ಇಣುಕಿ ನೋಡಿದನು . ಕಾರ್ ಅಲ್ಲಿ ಯಾರು ಇರದನ ಕಂಡು ಸ್ವಲ್ಪ ಜೋರ್ ಆಗಿ ಕೂಗುತ್ತ " ಸಾರ್ ಕಾರ್ ಅಲ್ಲಿ ಯಾರು ಇಲ್ಲ " ಅಂತ ಹೇಳಿದನು. ಇದನ ಕೇಳಿದ ಆಫೀಸರ್ ಜೀಪ್ ಇಂದ ಕೆಳಗೆ ಇಳಿದು ಕಾರ್ ಇದ ಕಡೆ ಹೆಜ್ಜೆ ಹಾಕಿದ್ದರು.

ಕಾರ್  ನಿಂತ ಸ್ವಲ್ಪ ದೂರದ ಯಾವುದೊ ಒಂದು ಪೊದೆ ಇಂದ ರಕ್ತ ಸುರಿಯುತ್ತ ಇದ್ದ ಹಣೆ ಮೇಲೆ ಕೈ ಇಟ್ಟಿಕೊಂಡು ಒಬ್ಬ ಹುಡುಗ ರಸ್ತೆ ಕಡೆ ಓಡಿ ಬಂದನು. ಅವನು ಕಾರ್ ನಿಂತ ಕಡೆಗೆ ಬರ ತೊಡಗಿದನು. ಅವನನ್ನೇ ಹಿಂಬಾಲಿಸಿಕೊಂಡು ಇನ್ನು ಮೂರು ಜನ ಹುಡುಗರು ರಸ್ತೆ ಬಳಿ ಬಂದರು. ಅವರು ಕೂಡ ಕಾರ್ ನಿಂತ ಕಡೆ ಬರ ತೊಡಗಿದರು.

 

ಕೈ ಅಲ್ಲಿ ಲಾಟಿ ಆಡಿಸುತ್ತ ಹುಡುಗರು ಬರುವದನೆ ನೋಡುತ್ತಾ ನಿಂತರು ಆಫೀಸರ್. ಹುಡುಗರು ಏದು ಉಸಿರು ಬಿಡುತ್ತ ದನಿದವರಂತೆ ಕಾರ್ ಬಳಿ ಬಂದರು. ಖಾಕಿ ದರಿಸಿದ ಆಫೀಸರ್ನ ಕಂಡು ಭಯ ಗೊಂಡರು . ಅಪರಾದಿ ಪೋಲಿಸ್ ನವರನ ಕಂಡಾಗ ಅವನಿಗೆ ಆಗೋ ಭಯ , ನಡುಕ ಎಲ್ಲವು ಆ ಹುಡುಗರು ಕಣ್ಣಿನಲ್ಲಿ ಕಾಣುತ್ತ ಇತ್ತು.

ಕೂಲಿಂಗ್ ಗ್ಲಾಸ್ ಕೆಳೆಗೆ ಇಳಿಸುತ್ತಾ ಆಫೀಸರ್ " ಏ ಯಾರೋ ನೀವು , ಏನೋ ನಿನ್ನ ಹಣೆಗೆ ಗಾಯ ಆಗಿದೆ " ಅಂತ ಗಾಯ ಗೊಂಡ ಹುಡುಗನ ನೋಡುತ್ತಾ ಕೇಳಿದರು . " ಸಾರ್ ನಾವು ... B K ಇಂಜಿನಿಯರಿಂಗ್ ಕಾಲೇಜ್ ಸ್ಟೂಡೆಂಟ್ಸ್ , ಸುಮ್ಮನೆ ಹೀಗೆ ಟ್ರಿಪ್ ಬಂದಿದಿವ್ , ಕಾಡು ಒಳ್ಳಗೆ ಹೋಗಿದಾಗ ಯಾವುದೊ ಸರ್ಪ ಬಂತು ಸಾರ್ , ಅದನ ನೋಡಿ ಭಯ ಆಗಿ ಓಡಿ ಬರುವಾಗ ಕೆಳಗೆ ಬಿದ್ದು ಅವನಿಗೆ ಗಾಯ ಆಯಿತು ಸಾರ್ " ಅಂತ ತಲೆ ಬಾಗಿಸಿ ನೆಲ ನೋಡುತ್ತಾ ಹೇಳಿದ ಒಬ್ಬ ಹುಡುಗ. ಗಿರೀಶನ ಕಡೆ ತಿರುಗಿ " ಗಿರಿ, ನೋಡ್ ರೀ ಈ ಹುಡುಗರನೆಲ್ಲ ಕರೆದು ಕೊಂಡು ಸ್ಟೇಷನ್ಗೆ ಹೋಗಿ , ನಾನು ಬರುವವರೆಗೂ ಇವರನ ಬಿಡ ಬೇಡಿ , ಹಾಗೆ ದಾರಿ ಮಧ್ಯ ಆ ಹುಡುಗನಿಗೆ ಟಿನ್ಚೆರ್ ಹಾಕಿಸಿಕೊಂಡು ಹೋಗಿ ಆಯ್ತಾ " ಅಂತ ಹೇಳಿ ಎರಡು ಹೆಜ್ಜೆ ಮುಂದೆ ಇಟ್ಟರು. ಮತ್ತೆ ಹಿಂದಕ್ಕೆ ತಿರುಗಿ ಒಬ್ಬ ಹುಡುಗನ ನೋಡುತ್ತಾ " ಏ ನೀನು ಗೆಣಿಕೊಪ್ಪಲಿನ ಛೇರ್ಮನ್ ಮಗ ಅಲ್ಲವೇನೋ " , " ಹೌದು ಸಾರ್ " ಅಂತ ಹುಡುಗ ಹೇಳಿದ .

ಆಫೀಸರ್ ಜೀಪ್ ಹತ್ತಿರಕ್ಕೆ ನಡೆದರೂ. ಗಿರೀಶ್ ಬಿಟ್ಟು ಶಂಕರಪ್ಪ ಮತು ಇನ್ನು ಒಬ್ಬ ಕಾನ್ಸ್ಟೇಬಲ್ ಜೀಪ್ ಹತ್ತಿರಕ್ಕೆ ಹೋದರು . ಸಾಹೇಬರು ಮತು ಇತ್ತರರು ಜೀಪ್ ಹತ್ತಿ ಹೊರಟ್ಟರು.

ಜೀಪ್ ಸ್ವಲ್ಪ ದೂರ ಆ ನಿಶಬ್ದದ ಕಾಡಿನ ಮಧ್ಯ ಚಲಿಸುತ್ತ ಇತ್ತು . ಆಫೀಸರ್ ಕೂತಿದ ಸೈಡ್ ನ ಕಿಟ್ಟಕಿ ಇಂದ ತಲೆ ಆಚೆ ಹಾಕಿ ಆಕಾಶವನ ನೋಡಿದರು . ಆಕಾಶದಲ್ಲಿ ಯಾವುದೊ ಪೋದ್ದೆಗಳ ಮೇಲೆ ಎತ್ತರದಲ್ಲಿ ಹದ್ದುಗಳು ಹಾರಾಡುತ್ತ ಇದ್ದವು .  " ರೀ ಶಂಕರಪ್ಪ ಜೀಪ್ ಸೈಡ್ ಗೆ ಹಾಕಿ , ಅಲ್ಲಿ ನೋಡಿ ಅಷ್ಟೊಂದು ಹದ್ದುಗಳು ಹಾರಾಡುತ್ತ ಇದೆ " ಅಂತ ಅದರತ್ತ  ಕೈ ತೋರಿಸುತ್ತ ಹೇಳಿದರು. ಶಂಕರಪ್ಪ ಜೀಪ್ ನಿಲಿಸಿದರು. ಎಲ್ಲರು ಜೀಪ್ ಇಂದ ಕೆಳಗೆ ಇಳಿದರು .

" ರೀ ಬನ್ರಿ ಏನು ಅಂತ ನೋಡೋಣ , ಯಾವನಾದರೂ ಚಿರತೆ ನೋ ಇಲ್ಲ ಹುಲಿನೊ ವಿಷ ಹಾಕಿ ಶಿವನ ಪಾದ ಸೇರಿಸಿ ಬಿಟ್ಟವನೋ ಹೆಂಗೋ " ಅಂತ ಹೇಳುತ್ತಾ ಹದ್ದುಗಳು ಹಾರಾಡುತ್ತ ಇದ ಪೋದ್ದೆಗಳ ಕಡೆ ಹೆಜ್ಜೆ ಹಾಕಿದರು. ಪೊದೆ ಸಮಿಪಿಸುತ್ತ ಇದ ಹಾಗೆ ಯಾವುದೋ ಮೃತ ದೇಹದ ಕೆಟ್ಟ ವಾಸನೆ ಬರುತ್ತಾ ಇತ್ತು , ಎಲ್ಲರು ಕರವಸ್ತ್ರ ದಿಂದ ಮೂಗು ಮುಚ್ಚಿಕೊಂಡು ನಡೆಯ ತೊಡಗಿದರು . ಲಂಟಾನದ ಜಿಗುಗಳ ಮಧ್ಯ ನಡೆಯುವಾಗ ಎಲ್ಲರಿಗು ತರಚಿದ ಗಾಯಗಳು ಆದವು.ಪೊದೆ ಹತ್ತಿರ ಭೀಕರ ದೃಶ್ಯ ಕಂಡು ಎಲ್ಲರು ಮುಖಗಳನ ಸಿಂಡರಿಸಿಕೊಂಡರು .

ಪೊದೆಯ ಮಧ್ಯದಲ್ಲಿ ಯಾರೋ ಒಬ್ಬ ಹುಡುಗನ ಮೃತ ದೇಹ ಕಾಣಿಸಿತ್ತು . ದೇಹದ ಕೆಲವು ಭಾಗಗಳನೆಲ್ಲ ಹದ್ದುಗಳು ಹೊರಗೆ ಎಳೆದು ಬಿಟ್ಟಿದವು . ಆ ಭೀಬತ್ಸ ದೃಶ್ಯ ವಾಕರಿಕೆ ಬರುವಂತೆ ಇತ್ತು . ಶಂಕರಪ್ಪ ಆ ದೇಹ ಬಿದಿದ ನಾಲ್ಕು ಅಡಿ ದೂರದಲ್ಲಿ ಯಾವುದೊ ಪ್ರಾಣಿ ಹೆಜ್ಜೆ ಗುರುತು ನೋಡಿ " ಸಾರ್ ಇಲ್ಲಿ ನೋಡಿ ಆನೆ ಹೆಜ್ಜೆ ಗುರುತು ಇದ್ದ ಹಾಗೆ ಇದೆ" ಅಂತ ಮಂಡಿ ಊರಿ ಕುಳಿತು ಕೊಳ್ಳುತ್ತಾ ಹೇಳಿದ . ಆಫೀಸರ್ ಶಂಕರಪ್ಪ ಕೂತ್ತಿದ ಕಡೆ ಬಂದರು. ಶಂಕರಪ್ಪ ತೋರಿಸಿದ ಹೆಜ್ಜೆ ಗುರುತು ನೋಡಿ " ಹೌದು ರೀ , ಪಾಪ ಯಾರೋ ಇನ್ನು ಸಣ್ಣ ಹುಡುಗ , ಏನೋ ೨೦ - ೨೫ ವಯಸಿನವನು ಇರಬೇಕು , ಇಲ್ಲಿ ಬಂದು ಹೀಗೆ ಸತ್ತವನೆ ನೋಡಿ " ಅಂತ ತಮ್ಮ ಎಡ ಕೈ ಅಲ್ಲಿ ಮೂಗು ಮುಚ್ಚಿಕೊಂಡು , ಬಲ ಕೈ ಇಂದ ತಮ್ಮ ಪ್ಯಾಂಟ್ ಜೆಬ್ಬಿನಿಂದ ಮೊಬೈಲ್ ತೆಗೆದುಕೊಂಡರು. ಯಾರಿಗೂ ಕರೆ ಮಾಡಲು ಅನುವಾದರು.

" ಹಲೋ ಪೋಲಿಸ್ ಸ್ಟೇಷನ್ , ರೀ ನಾನು ಗೆಣಿಕೊಪ್ಪಲಿನ ರೇಂಜ್ ಆಫೀಸರ್ ಮಾತು ಆಡುತ್ತ ಇರೋದು , ಇಲ್ಲಿ ಜೇನಿನ ಹೊಳೆ ಹತ್ತಿರ ಕಾಡಿನ ಒಳ್ಳಗೆ ಯಾವುದೊ ಹುಡುಗನ ದೇಹ ಸಿಕ್ಕಿದೆ , ಬೇಗ ಬನ್ನಿ " ಅಂತ ಹೇಳಿ ಮಾತು ಮುಗಿಸಿ ಫೋನ್ ತಮ್ಮ ಪ್ಯಾಂಟ್ ಜೆಬ್ಬಿಗೆ ಇಡುತ್ತ " ರೀ ಶಂಕರಪ್ಪ ಪೋಲಿಸೆನವರು ಬರೋವರೆಗೂ ಆ ದೇಹ ನ ಯಾರು ಮುಟ್ಟ ಬೇಡಿ , ಅವರು ಬರೋವರೆಗೂ ನಾವು ಇಲ್ಲೇ ಇರೋಣ . ಬನ್ನಿ ವಾಸನೆ ತಡಿಯೋಕ್ಕೆ ಆಗುತ್ತಾ ಇಲ್ಲ , ಸ್ವಲ್ಪ ದೂರ ಹೋಗಿ ನಿಂತು ಕೊಳ್ಳೋಣ " ಅಂತ ಹೇಳುತ್ತಾ ಸ್ವಲ್ಪ ಮುಂದೆ ಸಾಗಿದರು.

ದೇಹ ಇದ್ದ ಜಾಗದಿಂದ ಸ್ವಲ್ಪ ದೂರ ಬಂದು ಯಾವುದೊ ಮರದ ಕೆಳ್ಳಗೆ ನಿಂತರು ಆಫೀಸರ್ . ಶಂಕರಪ್ಪ ಮತು ಇನ್ನೊಬ್ಬ ಕಾನ್ಸ್ಟೇಬಲ್ ಅಲ್ಲಿಗೆ ಬಂದು ನಿಂತರು .

ಹದ್ದುಗಳು ತಮ್ಮ ಊಟ ಮುಂದುವರೆಸಲು ದೇಹದ ಬಳಿ ಬಂದವು . ಅದನ ಕಂಡ ಆಫೀಸರ್ " ರೀ ನಾಯಕ್ ಆ ಹದ್ದುಗಳನ ಓಡಿಸಿ , ಇಲ್ಲ ಅಂದರೆ ಆ ಹುಡುಗನ ಬಾಡಿ ಒಂದು ಚೂರು ಸಿಗದ ಹಾಗೆ ತಿಂದು ಮುಗಿಸುತಾವೆ , ಹಾಳಾದವು " ಅಂತ ಹೇಳಿದರು . ಪಕ್ಕದಲ್ಲಿ ನಿಂತಿದ ನಾಯಕ್ ಹದ್ದುಗಳಿಗೆ ಕಲ್ಲು ಹೊಡೆಯುತ್ತ ಓಡಿಸುತ್ತಾ ನಿಂತರು. ಸಾಹೇಬರ ಕಿವಿ ಹತ್ತಿರ ಯಾವುದೊ ನೊಣ ಜಾತಿಯ ಕೀಟ ಹಾರಾಡಲು ಶುರು ಮಾಡಿತು . ಆಫೀಸರ್ ತಮ್ಮ ಕೈ ಇಂದ ಅದನ ಹೊಡೆಯುತ್ತ " ರೀ ಶಂಕರಪ್ಪ , ಎಲ್ಲಿ ಇದ್ದೀರಾ " ಅಂತ ಕೂಗಿದರು . ನೋಡು ನೋಡುತ್ತಾ ಇದ ಹಾಗೆ ಜೇನಿನ ಗುಂಪೊಂದು ಮೂರ ಜನರ ಮೇಲೆ ಏಕ ಎಕಿ ದಾಳಿ ಮಾಡಿದವು . ರಪ್ ರಪ್ ಅಂತ ಕುಟ್ಟುಕಲು ಶುರು ಮಾಡಿದವು . ಎಲ್ಲರು ಆ ಜೇನಿನ ಹೊಡೆತ್ತ ತಾಳಲಾರದೆ ಅಲ್ಲಿಂದ ಓಡಿ ಹೋದರು .

ದೇಹ ಇದ್ದ ಸ್ವಲ್ಪ ದೂರದಲ್ಲಿ ಮೌ ಮೌ ಬೀ ಗಳು ಗೂಡು ಕಟ್ಟಿತು. ಮೌ ಮೌ ಬೀ ಗಳು ಮುಂಜಾಗೃತ ಕ್ರಮವಾಗಿ ಆ ಮೂವರ ಮೇಲೆ ದಾಳಿ ಮಾಡಿದವು. ಅವುಗಳ ಹೊಡೆತ್ತ ತಾಳಲಾರೆ ಮೂವರು ಅಲ್ಲಿಂದ ಕಾಲು ಕಿತ್ತಿದರು.

ಸ್ವಲ್ಪ ದೂರ ಓಡಿ ಸುಸ್ತಾಗಿ ಏದು ಉಸಿರು ಬಿಡುತ್ತ ಜೇನು ಕಚ್ಚಿದ ಜಾಗಗಳಿಗೆ ಎಂಜಲನು ವರೆಸುತ್ತ ,  ಉರಿ ತಾಳಲಾರದೆ ಉಜ್ಜಿ ಕೊಳುತ್ತ ಇದ್ದರು. ಶಂಕರಪ್ಪ ಮತು ನಾಯಕರು ಹಾಗೆ ಮಾಡುತ್ತಾ ಇದ್ದರು . ಆಫೀಸರ್ ಮುಖ ಆಂಜನೇಯನ ಮುಖದಂತೆ ಆಗಿತು . ಶಂಕರಪ್ಪನ ಕಣ್ಣು ಟಿಬೇಟಿಯಾರಂತೆ ಸಣ್ಣಗೆ ಹಾಗಿತು. ನಾಯಕರ ಹಣೆ ಬಲೂನಿನಂತೆ ಊದಿತ್ತು.

ನಾಯಕರನ ನೋಡುತ್ತಾ ಆಫೀಸರ್ " ರೀ ನಾಯಕ್ ಏನ್ ರೀ ಹದ್ದುಗಳಿಗೆ ಕಲ್ಲು ಹೊಡಿ ರೀ ಅಂದರೆ ಜೇನಿನ ಗೂಡಿಗೆ ಹೊಡೆಯೋದ , ನೋಡಿ ಮೈ ಎಲ್ಲ ಉರಿತ್ತ ಇದೆ , ಈ ಆಫೀಸರ್ ಕೆಲಸನು ಬೇಡ , ಈ ಜೇನಿನ ಸಹವಾಸನು ಬೇಡ , ಹುಶಪ್ಪ " ಅಂತ ಹುಲ್ಲು ಹಾಸಿನ ಮೇಲೆ ತಮ್ಮ ಕಾಲು ಮುಂದಕ್ಕೆ ಚಾಚುತ್ತ ಕೂತರು.

"ನಾನು ಹೊಡಿಲ್ಲಿಲ ಸಾರ್ , ಈ ಮೌ ಮೌ ಬೀ ಗಳೇ ಹಿಂಗೆ , ತಮ್ಮಗೆ ಎಲ್ಲಿ ತೊಂದರೆ ಆಗುತ್ತೋ ಅಂತ ಮೊದಲೇ ದಾಳಿ ಮಾಡಿ ಬಿಡುತ್ತವೆ , ಎಲ್ಲ ಆ ಹುಡುಗನ ಬಾಡಿ ಹತ್ತಿರ ಅದರ ಗೂಡು ಇತ್ತು ಅಂತ ಕಾಣಿಸುತ್ತೆ " ಅಂತ ಹೇಳುತ್ತಾ ಮಂಡಿ ಊರಿ ನಾಯಕರು ಆಫೀಸರ್ ಎದುರಿಗೆ ಕೂತರು .

"ನಾವು ನೋಡಿದ ಹುಡುಗ ಯಾರು ಇರಬಹುದು , ಅವನೇನು ಇಲ್ಲೇ ಬಂದು ಸತ್ತನೋ ಇಲ್ಲ ಯಾರಾದರು ಮರ್ಡರ್ ಮಾಡಿ ಇಲ್ಲಿ ತಂದು ಹಾಕಿದರೋ ಗೊತ್ತು ಆಗುತ್ತಾ ಇಲ್ಲವಲ್ಲ ಸಾರ್ "

" ನಾಯಕರೆ , ಆ ಹುಡುಗ ಮೋಸ್ಟಲಿ ಆನೆ ಕೈ ಅಲ್ಲಿ ಸಿಕ್ಕಿ ಸತ್ತಿರ ಬೇಕು , ಅವನು ನಾವು ನೋಡಿದ ಹುಡುಗರ ಗುಂಪಿನವನೇ ಇರಬೇಕು , ಆನೆ ನೋಡಿ ಗಾಬರಿ ಆಗಿ ಆ ಹುಡುಗರು ಓಡಿ ಬಂದಿರ ಬೇಕು , ಆ ವೇಳೆಗೆ ಆನೆ ಈ ಹುಡುಗನ... , ಅಂತ ಅನಿಸುತ್ತೆ , ಪೋಲಿಸೆನವರು ಬರುತ್ತಾರಲ್ಲ , ಅವರು ಅದನ ನೋಡಿ ಕೊಳುತ್ತಾರೆ ಬಿಡಿ , ಆದರು ಈ ಹುಡುಗರಿಗೆ ವಯಸಿನ ಉತ್ಸಾಹದಲ್ಲಿ ಎಂತ ಅಪಾಯಕೆ ಸಿಕ್ಕಿ ಹಾಕಿ ಕೊಳುತಿವಿ ಅಂತ ಗೊತ್ತಿರಲ್ಲೋ , ಇವಾಗ ನೋಡಿ ಎಂತ ಅವಗಡ ಸಂಭವಿಸಿದೆ . ಸುಂದರತೆ ಒಳ್ಳಗೆ ಬೀಕರತೆ ಇರುತೆ ಅನ್ನೋ ಸತ್ಯ ಇವರಿಗೆ ಗೊತ್ತಿರೋಲ್ಲ , ವಯಸಿನ ಹುಡುಗಾಟಕೆ ಕಾಡಿಗೆ ಬಂದು ಈ ರೀತಿ ಜೀವ ತೆತ್ತುತಾರೆ , ಎಲ್ಲ ಅವರ ಹಣೆ ಬರಹ , ನನಗೆ ಒಂದು ಅರ್ಥ ಆಗುತ್ತಾ ಇಲ್ಲ , ಇವರು ಕಾಡಿಗೆ ಹೇಗೆ ಬಂದರು ಅಂತ "

"ಅಯ್ಯೋ ಸಾರ್ , ಇವೆಲ್ಲ ನಮ್ಮ ಡಿಪಾರ್ಟ್ಮೆಂಟ್ ನವರ ಸಹಕಾರ , ಅದು ನಿಮ್ಮಗೂ ಗೊತ್ತು , ಎಲ್ಲರಿಗು ಗೊತ್ತು "

"ಅದು ಸರಿ ಅನ್ನಿ ನಾಯಕರೆ " ಅಂತ ಶಂಕರಪ್ಪ ಹೇಳಿದ.

"ಅದು ಸರಿ ಸಾರ್ , ಆನೆ ಆ ಹುಡುಗನ ... ಅಂತ ನೀವು ಹೇಗೆ ಹೇಳಿದಿರಿ " ಅಂತ ಜೇನು ಕಚ್ಚಿದ ಹಣೆನ  ಉಜ್ಜಿ ಕೊಳುತ್ತ ನಾಯಕರು ಕೇಳಿದರು.

" ರೀ ನಾಯಕ್ , ಅಲ್ಲೇ ಆ ಹುಡುಗನ ದೇಹದ ಪಕ್ಕ ಆನೆ ಹೆಜ್ಜೆ ಗುರುತು ಇದುದನ ಶಂಕರಪ್ಪ ತೊರಿಸಲ್ಲಿಲವೆನ್ರಿ "

"ಒಹ್ ಹಾಗೆ "

"ಆಗು ಇಲ್ಲ ಈಗೂ ಇಲ್ಲ , ನಾವು ಇವಾಗ ಎಷ್ಟು ದೂರು ಓಡಿ ಬಂದಿದಿವೋ ಏನೋ ಗೊತ್ತಿಲ " ಅಂತ ಹೇಳುತ್ತಾ ಆಕಾಶದ ಕಡೆ ಸುತ್ತ ಕಣ್ಣು ಆಡಿಸಿದರು. ಸ್ವಲ್ಪ ದೂರದಲ್ಲಿ ಹದ್ದುಗಳ ಗುಂಪು ಕಾಣಿಸಿತು. ಅದನ ನೋಡಿ ಆಫೀಸರ್ ಮೇಲೆ ಏಳುತ್ತಾ , " ರೀ ಬನ್ರಿ ಆ ಪೊದೆ ಹತ್ತಿರ ಹೋಗೋಣ , ಅಂದರೆ ಸ್ವಲ್ಪ ದೂರದಲ್ಲೇ ಇರೋಣ , ಮತ್ತೆ ಆ ಜೇನು ಬಂದರೆ ಕಷ್ಟ " ಹೇಳಿದರು . ಶಂಕರಪ್ಪ , ನಾಯಕರು , ಆಫೀಸರ್ ಎಲ್ಲರು ಹುಡುಗನ ದೇಹ ಇದ್ದ ಪೊದೆ ಕಡೆ ಹೆಜ್ಜೆ ಹಾಕಿದರು .

Comments

Submitted by ಗಣೇಶ Tue, 10/08/2013 - 00:51

ಚೆನ್ನಾಗಿದೆ. ಕುತೂಹಲಕಾರಿಯಾಗಿದೆ. ಮುಂದುವರೆಸಿ. -ಗಣೇಶ.
Submitted by nageshamysore Tue, 10/08/2013 - 08:56

ಹರೀಶರೆ, ಚೆನ್ನಾಗಿದೆ. ಆನೆ ಹೋದದ್ದೆ ದಾರಿ ಅಂತಾರೆ - ಹಾಗೆ ಮುಂದುವರೆಯಲಿ ನಿಮ್ಮ ಗಜಗಾಥೆ :-)