ಭಿಕ್ಷೆ

ಭಿಕ್ಷೆ

ಚಿತ್ರ

ದೇವ ನಿನ್ನ ಕರುಣೆಯ ಜೀವಿಗಳು ನಾವು

ನೀ ಆಡಿಸಿದ ಹಾಗೆ ಆಡುವ  ಗೊಂಬೆ  ನಾವು

 ನೀ ಕೊಡುವ ಚಾಟಿಯು ನಮಗೆ ದ:ಖವು 

ನೀ ಕೊಡುವ ಕಾಣಿಕೆಯು ಸುಖವು

ಸುಖ ಇದ್ದಾಗ ನಿನ್ನ ನೆನವು ಮರೆಯುವರು

ಕಷ್ಟ ಬಂದಾಗ ನಿನ್ನ ಮೊರೆ ಹೋಗುವರು

ಸಂಕಟ ಬಂದಾಗ ವೆಂಕಟರಮಣ  ಎನ್ನುವರು

 ನಾವೆಲ್ಲೆರು ನಿನ್ನಿಂದ ಸುಖವ ಬೇಡುವ ಭಿಕ್ಷುಕರು

  ಈ ಜಗತ್ತಿನಲ್ಲಿ ಸುಖ-ದು:ಖ  ಎಲ್ಲವೂಕ್ಷಣಿಕ

 ನಿನ್ನ ಬಿಟ್ಟು ಇಲ್ಲಿ ಯಾವುದೂ ಶಾಶ್ವತವಲ್ಲ

ನಿನ್ನಿಂದ  ಎಲ್ಲರೂ ಸುಖವನ್ನೇ ಬಯಸುವರು

ಒಟ್ಟಿನಲ್ಲಿ ನಾವೆಲ್ಲರು ಒಂದು ರೀತಿಯ ಭಿಕ್ಷುಕರು

ತಮ್ಮ ಸ್ವಾರ್ಥಕ್ಕೋಸ್ಕರ  ಏನು ಮಾಡಲು ಸಿದ್ದರಿರುವರು

ತಮ್ಮ ಸುಖಕ್ಕಾಗಿ ಬೇರೆಯವರ ಶಾಂತಿ ಹಾಳುಮಾಡುವರು

ಇದರಿಂದ ಬೇಸತ್ತು ಹುಡುಕುತ್ತಾ ಹೂರಟೆ ಮನ: ಶಂತಿ

 ಆದರೆ ಹಬ್ಬಿತ್ತು ಅಶಾಂತಿ ಎಲ್ಲ ಕಡೆ

 ಹೆತ್ತ ತಂದೆ -ತಾಯಿ ದೂರವಿಟ್ಟು

ಕಾಯಕ ಯೋಗಿ ಆಗದೆ ಬಯಸಿದೆನು ಸುಖವ

ದೇವ ನಿನ್ನ ನೆನೆಯದೆ ಮೂರ್ಖನಾದೆನು

ಕೊಡು ದೇವ ಮುಕ್ತಿ ಎಂಬ ಭಿಕ್ಷೆಯನು.

Rating
No votes yet

Comments

Submitted by H A Patil Fri, 05/30/2014 - 09:26

ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ಭಿಕ್ಷೆ ಒಂದು ಅರ್ಥಗರ್ಭಿತ ವರ್ತಮಾನದ ಸ್ಥಿತಿ ಬಿಂಬಿಸುವ ಕವನ, ಗುಣಶೇಖರ ಮೂರ್ತಿಯವರ ಪ್ರತಿಕ್ರಿಯಾತ್ಮಕ ಕವನ ನಿಮ್ಮ ಕವನದ ಗಹನತೆಯನ್ನು ಹೆಚ್ಚಿಸಿದೆ, ಹೀಗೆಯೆ ನಿಮ್ಮ ಕ್ರಿಯಾಶೀಲ ಬರವಣಿಗೆ ಮುಂದುವರಿಯಲಿ. ಧನ್ಯವಾದಗಳು.

Submitted by ravindra n angadi Fri, 05/30/2014 - 13:04

In reply to by H A Patil

ನಮಸ್ಕಾರ ಸರ್
ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.