ಖಾಸಗಿ ಶಾಲೆಗಳ ಹಿಡಿತದಲ್ಲಿ ಸರಕಾರ; ಶಿಕ್ಷಣ ಹಕ್ಕು ಕಾಯ್ದೆ ಬಲು ದೂರ

ಖಾಸಗಿ ಶಾಲೆಗಳ ಹಿಡಿತದಲ್ಲಿ ಸರಕಾರ; ಶಿಕ್ಷಣ ಹಕ್ಕು ಕಾಯ್ದೆ ಬಲು ದೂರ

ಚಿತ್ರ

ಆರ್.ಟಿ.ಇ ಕಾಯ್ದೆಯ ಮುಖ್ಯ ಆಶಯವೆಂದರೆ ಶಾಲಾ ವಯೋಗುಂಪಿನ ಯಾವುದೇ ಮಗು ಶಾಲೆಯಿಂದ ಹೊರಗುಳಿಯ ಬಾರದೆಂಬುದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೆ 25% ರಷ್ಟು ಸೀಟುಗಳನ್ನು ತಮ್ಮ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳಿಗೆ ನೀಡಬೇಕಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಈ ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ನಿರ್ಲಕ್ಷ್ಯ ಹಾಗೂ ಸರಕಾರದ ನಿರಾಸಕ್ತಿಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಕಾಯ್ದೆಯಿಂದ ವಂಚಿತರಾಗುತ್ತಿದ್ದಾರೆ.
2002 ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 21-ಎ ಅನುಚ್ಛೇದವನ್ನು ಸೇರಿಸಲಾಯಿತು. ಅದರ ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವುದು 6ರಿಂದ14 ವರ್ಷದ ಪ್ರತಿ ಮಗುವಿನ ಹಕ್ಕಾಗಿದೆ. ಸಂವಿಧಾನದಲ್ಲಿ ನೀಡಿರುವ ಶಿಕ್ಷಣದ ಹಕ್ಕನ್ನು ಅನುಷ್ಟಾನ ಗೊಳಿಸುವಂತೆ ಎಸ್.ಎಫ್.ಐ ಮತ್ತು ಪ್ರಗತಿಪರ ಸಂಘಟನೆಗಳು, ಶಿಕ್ಷಣ ತಜ್ಞರ ಒತ್ತಡದ ಮೇರೆಗೆ 2009 ರಲ್ಲಿ 'ಶಿಕ್ಷಣ ಹಕ್ಕು' ಕಾಯ್ದೆಯನ್ನು ತರಲಾಯಿತು. 2010 ರಲ್ಲಿ ಕಾಯ್ದೆಯನ್ನು ಜಾರಿಗೊಳಿಸಿದರು. ಶಿಕ್ಷಣ ಹಕ್ಕು ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದವು. ಸರ್ವೋಚ್ಚ ನ್ಯಾಯಾಲಯವು ಕಾಯ್ದೆ ಉಚಿತವೆಂದು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತು ಪಡಿಸಿ ಉಳಿದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಯ್ದೆಯನ್ನು ಜಾರಿಗೊಳಿಸುವಂತೆ ತೀರ್ಪು ನೀಡಿತು.
ಖಾಸಗಿ ಶಾಲೆಗಳ ನಿರ್ಲಕ್ಷ : ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ಮೇಲು ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಯ್ದೆಯ ಜಾರಿಗೆ ಗಂಭೀರ ಪ್ರಯತ್ನವನ್ನು ಮಾಡುತ್ತಿಲ್ಲ. ಕೇಂದ್ರ ಸರಕಾರಕ್ಕೆ ಅಂಕಿ-ಅಂಶ ನೀಡಬೇಕೆನ್ನುವ ಕಾಟಾಚಾರಕ್ಕೆ ಮುಂದಾಗಿವೆ. ಕಾಯ್ದೆಯ ಜಾರಿಗಾಗಿ ವ್ಯಾಪಕ ಪ್ರಚಾರ ಮಾಡಬೇಕು. ಲಭ್ಯ ಸೀಟುಗಳನ್ನು ಪ್ರಕಟಿಸಬೇಕು ಎಂದು ಹೀಳಿದಾಗಲೂ ಕೂಡ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರವೇಶಕ್ಕೆ ನಿರಾಕರಿಸಿವೆ. 2014-15 ನೇ ಸಾಲಿಗೆ ಆರ್.ಟಿ.ಇ ಕಾಯ್ದೆ ಅನ್ವಯ 1.08.000 ಸೀಟುಗಳು ಲಭ್ಯ ಇವೆ. ಅದಕ್ಕಾಗಿ 1.59.000 ಅರ್ಜಿಗಳು ಶಿಕ್ಷಣ ಇಲಾಖೆಗೆ ಬಂದಿವೆ. ಬೆಂಗಳೂರು ನಗರದಲ್ಲಿಯೇ 79.000 ಅರ್ಜಿಗಳು ಬಂದಿವೆ. ಇನ್ನೂ 1349 ಖಾಸಗಿ ಶಿಕ್ಷಣ ಸಂಸ್ಥೆಗಳು 'ನೆರೆಹೊರೆ' ಹೆಸರಲ್ಲಿ ಕಡಿಮೆ ಪ್ರಮಾಣದ ಅರ್ಜಿಗಳನ್ನು ಪಡೆದಿವೆ. ಇದರಿಂದಾಗಿ ಅಂದಾಜು 40.000 ಸೀಟುಗಳು ಖಾಲಿ ಉಳಿಯುವ ಸಾದ್ಯತೆಗಳಿವೆ. ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಅಜರ್ಿಗಳು ಬಂದಿರುವುದನ್ನು ನೋಡಿದರೆ, ಖಾಸಗಿ ಶಾಲೆಗಳು ಕಾಯ್ದೆಯನ್ನು ಜಾರಿ ಗೊಳಿಸುವಲ್ಲಿ ನಿಲ್ಕ್ಷತೆಯನ್ನು ತೋರಿಸುತ್ತಿರುವುದು ಎದ್ದು ಕಾಣಿಸುತ್ತಿದೆ. ಅನೇಕ ಕುಂಟು ನೆಪಗಳ ಮೂಲಕ ಕಾಯ್ದೆಯನ್ನು ಕಸದ ಬುಟ್ಟಿಗೆಸಯಲಾಗಿದೆ.
ಅಲ್ಪ ಸಂಖ್ಯಾತ ಶಾಲೆಗಳು ವ್ಯಾಪಕವಾಗಿ ಹಣ ಮಾಡುವ ದಂಧೆಯಲ್ಲಿ ನಿರತವಾಗಿವೆ. ಈ ಕಾಯ್ದೆಯಲ್ಲಿ ಅವುಗಳನ್ನು ಹೊರಗಿಟ್ಟಿರುವುದು ಸರಿಯಲ್ಲ. ಇದನ್ನೆ ನೆಪವಾಗಿಸಿಕೊಂಡು ಇತರ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದೊಟ್ಟಿಗೆ ಜಂಗಿಕುಸ್ತಿಗಿಳಿದ ಪರೀಣಾಮ ಪಾಲಕರು ಅಜರ್ಿ ಎಲ್ಲಿ ಹಾಕುವುದು ಎಂಬ ಗೊಂದಲದಲ್ಲಿ ಸಿಲುಕಿದ್ದರು. ರಾಜ್ಯದಲ್ಲಿರುವ ಅಲ್ಪ ಸಂಖ್ಯಾತ ಶಾಲೆಗಳೇನು ಉಚಿತವಾಗಿ ಶಿಕ್ಷಣ ನೀಡುತ್ತಿಲ್ಲ. ಹಾಗಾಗಿ ಈ ಕಾಯ್ದೆಯ ವ್ಯಾಪ್ತಿಗೆ ಅವುಗಳನ್ನು ತರುವ ತಿದ್ದುಪಡಿ ಆಗತ್ಯವಾಗಿ ಆಗಬೇಕಿದೆ.
ಖಾಸಗಿ ಶಾಲೆಗಳ 'ಹಿಡಿತದಲ್ಲಿ' ಸರಕಾರ : ಕಾಯ್ದೆಯನ್ನು ರಾಜ್ಯದಲ್ಲಿ ವ್ಯಾಪಕವಾಗಿ ಜಾರಿಗೊಳಿಸಬೇಕಾಗಿರುವುದು ಸರಕಾರದ ಕರ್ತವ್ಯ. ಆದರೆ ಸರಕಾರ ಖಾಸಗಿ ಶಾಲೆಗಳಿಗೆ ಶರಣಾಗಿ ಅವರ ಹಿಡಿತದಲ್ಲಿ ಅವರು ಹೇಳಿದಂತೆ ಕುಣಿಯುತ್ತಿದೆ. ಅದಕ್ಕಾಗಿಯೇ ಖಾಸಗಿ ಶಾಲೆಗಳು ಶುಲ್ಕ ದ್ವೀಗುಣಕ್ಕೆ ಪಟ್ಟು ಹಿಡಿದು ಕುಳಿತಿದ್ದವು. ಖಾಸಗಿ ಶಾಲೆಗಳನ್ನು ನಿಯಂತ್ರಿಸಬೇಕಾದ ಸರಕಾರ ಖಾಸಗಿ ಶಾಲೆಗಳ ನಿಯಂತ್ರಣದಲ್ಲಿರುವುದು ನಾಚಿಕೆಗೇಡಿನ ಸಂಗತಿ. ಸರಕಾರದ ಕುಮ್ಮಕಿಕಿನಿಂದಾಗಿ ಕಾಯ್ದೆಯನ್ನು ತಮಗಿಚ್ಚೆ ಬಂದಂತೆ ಉಲ್ಲಂಘನೆ ಮಾಡಲಾಗುತ್ತಿದೆ. ಸ್ಥಳೀಯ ಆಡಳಿತವು 6-14 ವರ್ಷದ ಮಕ್ಕಳ ವಿವರಗಳನ್ನು ಗೃಹ ಸಮೀಕ್ಷೆಯ ಮೂಲಕ ಪತ್ತೆ ಹಚ್ಚಿ, ಪರಿಷ್ಕರೀಸಿ ಅವರನ್ನು ಈ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಲು ಅವಕಾಶವಿದೆ. ಆದರೆ ಸ್ಥಳೀಯ ಆಡಳಿತ ಇಲ್ಲಿಯವರೆಗೆ ಈ ರೀತಿಯ ಪ್ರಯತ್ನಕ್ಕೆ ಮುಂದಾಗಿಲ್ಲ. ಜಾರಿ ಮಾಡಿಸಲು ಸರಕಾರ ಇಚ್ಚಾ ಶಕ್ತಿ ತೋರುತ್ತಿಲ್ಲ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾರ 2012-13 ನೇ ಸಾಲಿನಲ್ಲಿ 1,75.000 ವಿದ್ಯಾಥರ್ಿಗಳು ಶಾಲೆಯಿಂದ ಹೊರಗೊಳಿದ್ದಿದ್ದಾರೆ ಎಂಬ ಸಮೀಕ್ಷೆಯನ್ನು ಹೊರ ಹಾಕಿರುವುದು ಆತಂಕಕಾರಿ ಬೆಳವಣಿಗೆ. ಅವರನ್ನು ಕಾಯ್ದೆಗೆ ಕರೆ ತರುವ ಪ್ರಯತ್ನ ನಡೆಯುತಿಲ್ಲ ವೆಂಬುದು 2014-15 ನೇ ಸಾಲಿಗೆ ಬಂದ ಅಜರ್ಿಗಳಿಂದ ಪತ್ತೆ ಹಚ್ಚ ಬಹುದಾಗಿದೆ. ಸರಕಾರವು ಕಾಯ್ದೆಯನ್ನು ಜಾರಿಗೊಳಿಸಲು ಸ್ಥಳೀಯ ಆಡಳಿತಕ್ಕೆ ತರಬೇತಿಯನ್ನು ನೀಡಿದೆ. ಆದರೆ ವ್ಯಾಪಕ ಪ್ರಚಾರ ಮತ್ತು ಪಾಲಕರಲ್ಲಿ ಜಾಗೃತೆಯನ್ನು ಮೂಡಿಸದ ಕಾರಣ ಕಾಯ್ದೆಯು ಕನರ್ಾಟಕದಲ್ಲಿ ಹಳ್ಳ ಹಿಡದಿದೆ. ಕಾಯ್ದೆಯನ್ನು ಉಲ್ಲಂಘಿಸುತ್ತಿರುವ ಖಾಸಗಿ ಶಾಲೆಗಳಿಗೆ ಸರಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಬೇಕಿದೆ. ಬಡವ-ಬಲ್ಲಿದ ಎಂಬ ಭೇಧಭಾವವಿಲ್ಲದೆ ಸಮಾನತೆಯಿಂದ ಕಲಿಯಲು ಅವಕಾಶ ಮಾಡಿಕೊಡುವ ಶಿಕ್ಷಣ ಹಕ್ಕು ಕಾಯ್ದೆಯ ಜಾರಿಗೆ ಸರಕರ ವ್ಯಾಪಕ ಪ್ರಯತನ್ನಕ್ಕಿಳಯಬೇಕಿದೆ. ಇಲ್ಲದೆ ಹೋದರೆ ಸಂವಿಧಾಬಕ್ಕೆ ಅಪಮಾನ ಮಾಡಿದಂತಾಗುತ್ತದೆ ಎಂಬ ಎಚ್ಚರಿಕೆಯನ್ನು ಸರಕಾರ ನೆನಪಿನಲ್ಲಿಟ್ಟುಕೊಳ್ಳಬೇಕಿದೆ.
ಕಾಯ್ದೆ ಉಲ್ಲಘನೆ : ಕಾಯ್ದೆಯನ್ನು ಜಾರಿಗೊಳಿಸುವಾಗ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿವೆ. ಸಮವಸ್ತ್ರ, ಪಠ್ಯಪುಸ್ತಕ, ಕ್ರೀಡೆ, ವಾಹನ ಶುಲ್ಕ, ಗ್ರಂಥಾಲಯ ಇತ್ಯಾದಿ ಹೆಸರಲ್ಲಿ ವ್ಯಾಪಕವಾಗಿ ವಂತೆಗೆ ಪಡೆಯಲಾಗುತ್ತಿದೆ. ಸೆಕ್ಷನ್ 7(2) ರ ಪ್ರಕಾರ ಶಾಲೆಗಳಲ್ಲಿ ಏನೆಲ್ಲಾ ಸೌಲಭ್ಯ ನೀಡಲಾಗುತ್ತದಯೋ ಅದೆಲ್ಲವನ್ನು ಆರ್.ಟಿ.ಇ ಅಡಿಯಲ್ಲಿ ದಾಖಲಾದ ಮಕ್ಕಳಿಗೆ ಉಚಿತವಾಗಿ ಕೊಡಬೇಕು ಎಂದು ಹೇಳುತ್ತದೆ. ಅವಕಾಶ ವಂಚಿತ ಮತ್ತು ಮೀಸಲಾತಿ ಕೋಟಾದಲ್ಲಿ ದಾಖಲಾದ ಮಕ್ಕಳಿಂದ ಯಾವುದೇ ರೀತಿಯ ಶುಲ್ಕ ಪಡೆಯಬಾರದು ಎಂದು  ಸೆಕ್ಷನ್ 8(1) ಹೇಳುತ್ತದೆ. ಆದರೆ ಅನೇಕ ಖಾಸಗಿ ಶಾಲೆಗಳು ಮನಸೋ ಇಚ್ಚೆ ಶುಲ್ಕವನ್ನು ಪಡೆಯುತ್ತಿದ್ದಾರೆ.
ಸೆಕ್ಷನ್ 12(2) ಎ ಪ್ರಕಾರ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವಾಗ ಮಕ್ಕಳಿಂದ ಪೋಷಕರಿಂದ ಯಾವುದೇ ರೀತಿಯ ದೇಣಿಗೆ ಪಡಿಯಬಾರದು ಎಂದು ಹೇಳಲಾಗಿದೆ. ಅದರೆ 'ಬಿಲ್ಡಿಂಗ್ ಫಂಡ್' ಹೆಸರಲ್ಲಿ ಸಾವಿರಾರು ರೂ ಗಳನ್ನು ಖಾಸಗಿ ಶಾಲೆಗಳು ವಂತಿಗೆ ಪಡೆಯುತ್ತಿವೆ. ಸೆಕ್ಷನ್ 12(2) ಬಿ. ಪ್ರಕಾರ ಆಯ್ಕೆ ಪರೀಕ್ಷೆ ನಡೆಸಬಾರದು ಎಂದಿದೆ. ಆದರೆ ಬೆಂಗಳೂರು, ರಾಯಚೂರ, ಕೊಪ್ಪಳ ಸೇರಿದಂತೆ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಗೆ ಮತ್ತು ಮಗುವಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ. ವಯಸ್ಸಿನ ದಾಖಲೆ ಇಲ್ಲದ ಕಾರಣಕ್ಕಾಗಿ ಯಾವುದೇ ಕಾರಣಕ್ಕು ಮಗುವಿಗೆ ಶಾಲಾ ಪ್ರವೇಶವನ್ನು ನಿರಾಕರಿಸುವಂತಿಲ್ಲ. ಆದರೆ ಮಂಡ್ಯ, ಕೋಲಾರ, ತುಮಕೂರ, ದಕ್ಷಿಣ ಕನ್ನಡ, ಮೈಸೂರ ಸೇರಿದಂತೆ ಅನೇಕ ಜಿಲ್ಲೆಗಳ್ಲ್ಲಿ ವಯಸ್ಸಿನ ನೆಪ ಹೇಳಿ ಅಜರ್ಿಯನ್ನು ತಿರಸ್ಕರಿಸಲಾಗಿದೆ. ದಾಖಲಾತಿಗೆ ನಿಗದಿ ಪಡಿಸಿದ ಅವಧಿ ಮುಗಿದ ನಂತರವೂ ಯಾವುದೇ ಮಗುವಿಗೆ ದಾಖಲಾತಿಯನ್ನು ನಿರಾಕರಿಸುವಂತಿಲ್ಲ. ಎಂದು ಸೆಕ್ಷನ್ 15(10) ಹೇಳುತ್ತದೆ. ಆದರೆ ರಾಜ್ಯದ ಬಹುತೇಕ ಕಡೆಗಳಲ್ಲಿ ಅವಧಿ ಮುಗದಿದೆ ಎಂದು ಪ್ರವೇಶ ನಿರಾಕರಿಸಲಗಿದೆ.
ಕಾಯ್ದೆಯನ್ನು ಯೋಜನಾ ಬದ್ದವಾಗಿ ಜಾರಿ ಮಾಡಬೇಕಿರುವುದು ಸರಕಾರದ ಕೆಲಸ. ಕಾಯ್ದೆಗಳನ್ನು ಉಲ್ಲಂಘನೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನ ಕ್ರಮ ಜರುಗಿಸಲು ಸರಕಾರಕ್ಕೆ ಇಚ್ಛಾ ಶಕ್ತಿ ಕೊರತೆ ಇದೆ. ಕೂಡಲೇ ನಿಯಮ ಉಲ್ಲಂಘಿಸಿದ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲು ಸರಕಾರ ಮುಂದಾಗಬೇಕಿದೆ. ಇದರಲ್ಲಿರುವ ಹಲವಾರು ನ್ಯೂನತೆಗಳಿಗೆ ತಿದ್ದುಪಡಿ ತರುವ ಅಗತ್ಯ ವಿದೆ. ದುರ್ಬಲ ವರ್ಗದ ವಿದ್ಯಾರ್ಥಿಗಳ ಆಶಾ ಕಿರಣವಾಗಿರುವ ಶಿಕ್ಷಣ ಹಕ್ಕು ಕಾಯ್ದೆಯ ಸಮರ್ಪಕ ಜಾರಿಗಾಗಿ ಎಸ್.ಎಫ್.ಐ ವ್ಯಾಪಕವಾಗಿ ಪ್ರತಿಭಟನೆ ನಡೆಸುತ್ತಿದೆ. ಪ್ರಗತಿಪರರು, ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಶಿಕ್ಷಕ-ಪಾಲಕ ಸಮುದಾಯ ಬೆಂಬಲಕ್ಕೆ ನಿಲ್ಲ ಬೇಕಿದೆ. ಕಾಯ್ದೆಯ ಜಾರಿಗಾಗಿ ಪ್ರಭಲ ಹೋರಾಟ ರೂಪಗೊಳ್ಳಬೇಕಿರುವುದು ಅಗತ್ಯವಿದೆ.
 -     ಗುರುರಾಜ್ ದೇಸಾಯಿ
        9449260183

 
 

 

Rating
No votes yet