ಕರಿನೀರು

ಕರಿನೀರು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಲತಾ ಗುತ್ತಿ
ಪ್ರಕಾಶಕರು
ಅ0ಕಿತ‌ ಪ್ರಕಾಶನ‌,ಬೆ0ಗಳೂರು
ಪುಸ್ತಕದ ಬೆಲೆ
295

ಇದು ಶ್ರೀಮತಿ ಲತಾಗುತ್ತಿಯವರ‌ ಇತ್ತೀಚಿನ‌ ಕಾದ0ಬರಿ. ಈ ಹಿ0ದೆ ಅವರು ತಮ್ಮ‌ 'ನಾ ಕ0ಡ0ತೆ ಅರೇಬಿಯಾ'  ಹಾಗೂ 'ಯೂರೋ ನಾಡಿನಲ್ಲಿ' ಪ್ರವಾಸ‌ ಕಥನಗಳಿ0ದಲೂ, 'ಸೂಜಿಗಲ್ಲು' ಮೊದಲಾದ‌ ಕವನಸ0ಗ್ರಹಗಳಿ0ದ‌ ಹಾಗೂ ಹೆಜ್ಜೆ ಎ0ಬ‌ ಕಾದ0ಬರಿಯಿ0ದ‌ ಕನ್ನಡ‌ ಸಾಹಿತ್ಯದ‌ ಗ0ಭೀರ‌ ಓದುಗರಿಗೆ ಪರಿಚಿತರಾದವರು. 'ಪ್ರವಾಸ‌ ಸಾಹಿತ್ಯ: ವಿಶ್ಹ‌ ಸ0ಸ್ಕ್ಱುತಿ' ಎ0ಬುದು ಅವರ‌ ಮಹಾಪ್ರಬ0ಧ‌.

       ಇದೀಗ‌ ಅವರು ಹೊಸರೀತಿಯ‌ ಪ್ರಯತ್ನವೊ0ದಕ್ಕೆ ಕೈಹಾಕಿ ಗೆದ್ದಿದ್ದಾರೆ. ಬೆಳಗಾವಿ ಜಿಲ್ಲೆಯ‌  ಮಹದೇವಪುರ‌ ಎ0ಬ‌ ಹಳ್ಳಿಯನ್ನು ಪ್ರಧಾನ‌ ಕೇ0ದ್ರವಾಗಿಟ್ಟುಕೊ0ಡು, ಸ್ವಾತ0ತ್ರ್ಯ‌ ಚಳುವಳಿ ಆ ಭಾಗದಲ್ಲಿ ಹುಟ್ಟಿ ಹರಡಿದ‌ ಬಗೆಯನ್ನು, ಐದು ತಲೆಮರುಗಳ‌ ದೀರ್ಘ‌ ಕಾಲಾವಧಿಯಲ್ಲಿ ನಡೆದ‌ ಆಗುಹೋಗುಗಳನ್ನು ಈ 420 ಪುಟಗಳ‌ ಕಾದ0ಬರಿಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

     ಈ ಕಾದ0ಬರಿಯ‌ ವಿಶೇಷವೆ0ದರೆ ಆ ಗ್ರಾಮದ‌ ಯುವಕನೊಬ್ಬ‌ ಬ್ರಿಟೀಶರಿ0ದ‌  ಕರಿನೀರಿನ‌ ಶಿಕ್ಷೆಗೆ ಗುರಿಯಾಗಿ 20 ವರ್ಷಗಳು ಅಲ್ಲಿ ಯಮಯಾತನೆ ಅನುಭ‌ವಿಸಿದ್ದರ‌ ದಾರುಣ‌ ಚಿತ್ರಣ‌ ಇಲ್ಲಿರುವುದು.ಆ ವ್ಯಕ್ತಿ ಬೇರಾರೂ ಆಗಿರದೆ ಲೇಖ‌ಕಿಯ ಅಜ್ಜನೋ ಮುತ್ತಜ್ಜನೋ ಆಗಿದ್ದು , ಆತ ಅಲ್ಲಿ0ದ ಬಿಡುಗಡೆಯಗಿ ಬ0ದ ಬಳಿಕ ತನ್ನ ಅಲ್ಲಿನ ಅನುಭ‌ವಗಳನ್ನು ಮನೆಮ0ದಿಗೆ ಹೇಳಿದ್ದು, ಅದನ್ನು ಕೇಳಿದವರಿ0ದಲೇ ಲೇಖಕಿ ಅದನ್ನು ಕೇಳಿ ತಿಳಿದು ದಾಖಲಿಸಿರುವುದರಿ0ದ‌  ಇಲ್ಲಿನ ವಿವರಗಳಿಗೆ ತು0ಬಾ ಅಧಿಕ್ರುತತೆ ಪ್ರಾಪ್ತವಾಗಿದೆ.ಕನ್ನಡದ ಅನ್ಯ ಕಾದ0ಬರಿಯಲ್ಲಿ ಈ ವಿವರಗಳಿದ್ದದ್ದು ನನಗೆ ತಿಳಿದಿಲ್ಲ‌. ವೀರ ಸಾವರ್ಕರ್ ಅವರ ಜೀವನ ಚರಿತ್ರೆ 'ಆತ್ಮಾಹುತಿ' ಯಲ್ಲಿ ಆ ವಿವರಗಳಿವೆಯಾದರೂ, ರಾಜಕೀಯ ಖೈದಿಯಾಗಿದ್ದ ಅವರಿಗೆ ಕೆಲವು ಸವಲತ್ತುಗಳಾದರೂ ಇದ್ದವು. ಹಾಗಿದ್ದಿಲ್ಲದ ಇಲ್ಲಿನ ನಾಯಕ ಶಿವಲಿ0ಗೇಗೌಡನಿಗೆ ಇನ್ನೂ ಹೆಚ್ಚಿನ ಹಿ0ಸೆಯಿತ್ತು. ಆದ್ದರಿ0ದ‌ ಇಲ್ಲ್ಲಿನ‌ ವಿವರಗಳು   ಹೆಚ್ಚು ದಾರುಣವಾಗಿವೆ.ಷಿವಲಿ0ಗೇಗೌಡ‌ ವಾಪಸು ಬ0ದ‌ ಬಳಿಕವೂ ಸ್ವಾತ0ತ್ರ್ಯ‌ ಹೋರಾಟಗಾರನಾಗಿ ಮು0ದುವರೆಯುತ್ತಾನೆ. ಗ್ರಾಮದಲ್ಲಿ ನಿಧಾನವಾಗಿ ಸ್ವಾತ0ತ್ರ್ಯ‌ ಚಳುವಳಿ ಹಬ್ಬಿಕೊಳ್ಳುತ್ತದೆ. ಇವನ‌ ಮಗ‌, ಮೊಮ್ಮೊಗ‌ ಸಹ‌ ಅದರ‌ ಭಾಗವಾಗುತ್ತಾರೆ. ಈ ವಿವರಗಳ‌ ಜೊತೆಗೆ ಆ ಭಾಗದಲ್ಲಿ ಆ ಕಾಲ‌ದಲ್ಲಿ ಚಾಲ್ತಿಯಲ್ಲಿದ್ದ‌ ಅನೇಕ‌ ಹಬ್ಬ‌ ಹರಿದಿನಗಳು, ಸ0ಭ್ರಮಗಳು, ಮೊದಲಾದ‌ ಜನಪದ‌ ಆಚರಣೆಗಳ‌ ವಿವರ‌ ಕೂಡಾ ಇಲ್ಲಿ ದಾಖಲಿಸಲ್ಪಟ್ಟಿದೆ.

        ಕಟ್ಟೀಮನಿಯವರ‌ ಮಾಡಿ ಮಡಿದವರು, ಸ್ವಾತ0ತ್ರ್ಯದೆಡೆಗೆ‍  ಇವುಗಳಿಗಿ0ತ‌ ಭಿನ್ನವಾದ‌, ವಿಸ್ತಾರದ‌ ಭಿತ್ತಿಯುಳ್ಳ‌ ಕಾದ0ಬರಿ ಇದು. ಓದಬೇಕಾದ್ದು.