ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇನ್ನಿಲ್ಲ
ಕ್ಷಿಪಣಿ ಪಿತಾಮಹ, ಭಾರತ ರತ್ನ,ಭಾರತದ ೧೧ ನೇ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ರು ಇಂದು ಶಿಲ್ಲಾಂಗ್ ನ ಐಐಎಂ ನಲ್ಲಿ ಉಪನ್ಯಾಸ ಮಾಡುವಾಗ ಹೃದಯ ಅಪಘಾತದಿಂದ ಕುಸಿದು ಬಿದ್ದರು. ಅವರನ್ನು ಶಿಲ್ಲಾಂಗ್ ಬೆತಿನಿ ಆಸ್ಪತ್ರೆಗೆ ಚಿಕಿತ್ಸೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಾಯಂಕಾಲ ನಿಧನರಾದರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಅಂತ ಪ್ರಾಥಿಸೋಣ. ಕಲಾಂ ಸರ್ ಮುಂದಿನ ಜನ್ಮದಲ್ಲಿಯೂ ಭಾರತ ಮಾತೆಯ ಮಡಿಲಲ್ಲಿ ಹುಟ್ಟಿ ಬರಲಿ ಅಂತ ಆಶಿಸೋಣ. Missile Man of India. ಅವರಿಗೆ ನನ್ನದೊಂದು ಸಲಾಂ.
- Log in to post comments
Comments
ಉ: ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇನ್ನಿಲ್ಲ
ಹೃದಯತುಂಬಿದ ದುಃಖಭರಿತ ವಿದಾಯ ಭಾರತರತ್ನ ಅಬ್ದುಲ್ ಕಲಾಮರಿಗೆ.
ಮಕ್ಕಳನ್ನು ಕಂಡರೆ ತುಂಬು ಪ್ರೀತಿಯಿಂದ, ಅವರೊಂದಿಗೆ ಮಕ್ಕಳಂತೆಯೇ ಬೆರೆತು ರಾಷ್ಟ್ರಪ್ರೇಮದ ಜ್ಯೋತಿ ಬೆಳಗುತ್ತಿದ್ದ ಅವರು ನೈಜ ಭಾರತೀಯರು. ಅವರಿಗೆ ಕೋಟಿ ಕೋಟಿ ಸಲಾಮ್.
In reply to ಉ: ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇನ್ನಿಲ್ಲ by kavinagaraj
ಉ: ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇನ್ನಿಲ್ಲ
ಕವಿ ನಾಗರಾಜ ಸರ್ ಅವರಿಗೆ ಪ್ರತಿಕ್ರಿಯೆಗೆ ವಂದನೆಗಳು. ನೀವು ಹೇಳಿದು ನಿಜ ಸರ್.ಸಂಪದ ತಂಡದಿಂದ ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.ಕಲಾಂ ಅವರಿಗೆ ನಮ್ಮದೊಂದು ಸಲಾಂ.
In reply to ಉ: ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇನ್ನಿಲ್ಲ by Nagaraj Bhadra
ಉ: ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇನ್ನಿಲ್ಲ
ಕಲಾಂ...ನಿಮಗೆ ನಮ್ಮ ಸಲಾಂ.ಭಾರತ ಮಾತೆಯ ಬರಿದಾದ ಒಡಲು ತುಂಬಲು ಮತ್ತೆ ಜನಿಸಿ ಬನ್ನಿ.
In reply to ಉ: ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇನ್ನಿಲ್ಲ by Shashikant P Desai
ಉ: ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇನ್ನಿಲ್ಲ
ಪ್ರತಿಕ್ರಿಯೆಗೆ ಧನ್ಯವಾದಗಳು ಶಶಿಕಾಂತ ಸರ್.